AraliKatte ಅರಳಿಕಟ್ಟೆ

Follow AraliKatte ಅರಳಿಕಟ್ಟೆ
Share on
Copy link to clipboard

AraliKatte is a Kannada podcast series where Mukund, Supreeth and Vasuki discuss the topics they are interested in but are not totally qualified in. ಅರಳಿಕಟ್ಟೆ ಒಂದು ಕನ್ನಡ ಪಾಡ್ ಕಾಸ್ಟ್ ಸರಣಿ. ಇದರಲ್ಲಿ ಮುಕುಂದ್, ಸುಪ್ರೀತ್ ಮತ್ತು ವಾಸುಕಿ ತಾವು ಆಸಕ್ತಿ ಹೊಂದಿರುವ ಆದರೆ ಸಂಪೂರ್ಣವಾಗಿ ಅರ್ಹತೆ ಹೊಂದಿಲ್ಲದ ವಿಷಯಗಳನ್ನು ಚರ್ಚಿಸುತ್ತಾರೆ.

AraliKatte


    • Jul 2, 2023 LATEST EPISODE
    • monthly NEW EPISODES
    • 1h 2m AVG DURATION
    • 114 EPISODES


    Search for episodes from AraliKatte ಅರಳಿಕಟ್ಟೆ with a specific topic:

    Latest episodes from AraliKatte ಅರಳಿಕಟ್ಟೆ

    114 ಸಂಪಾದಕೀಯ ಹಾಗು ಪತ್ರಿಕೋದ್ಯಮ ಪ್ರಜಾವಾಣಿ ಸಂಪಾದಕರ ಜೊತೆ I Conversations with the editor of Prajavani

    Play Episode Listen Later Jul 2, 2023 65:21


    ಬಣ್ಣವಿಲ್ಲದ ಪೇಪರ್ ಒಂದು ದಿನ ಪತ್ರಿಕೆ ಬಣ್ಣವಿಲ್ಲದ ಪೇಪರ್ ಆಗ ಬೇಕೆ ಅಥ್ವಾ ಕ್ರಿಯಾಶೀಲಪಾಗಿ ರೋಚಕ ಸುದ್ದಿಗಳ ನೀಡ ಬೇಕಾ? ಬನ್ನಿ ಅರಳಿಕಟ್ಟೆಯ ಕೆಳಗೆ ನಮ್ಮ ಪ್ರಜಾವಾಣಿಯ ಸಂಪಾದಕರಾದ RAVINDRA ಭಟ್ ಕೂತಿದ್ದಾರೆ. ಅವರ ಜೊತೆ ಒಬ್ಬ ಸಂಪಾದಕನಾಗಿ ಮಾಡಬೇಕಾದ ಕರ್ತವ್ಯಗಳು, ಸಂಪಾದಕರ ಮುಂದಿರುವ ಸವಾಲುಗಳು ಇತ್ಯಾದಿಗಳ ಬಗ್ಗೆ ಮಾತಾಡೋಣ. ಈ podcast ಎರಡು ಭಾಗದಲ್ಲಿ ಮೂಡುವುದು. ಇದು ಭಾಗ (2) --- Send in a voice message: https://podcasters.spotify.com/pod/show/aralikatte/message

    Ep 113 ಸಂಪಾದಕೀಯ ಹಾಗು ಪತ್ರಿಕೋದ್ಯಮ ಪ್ರಜಾವಾಣಿ ಸಂಪಾದಕರ ಜೊತೆ I Conversations with the editor of Prajavani

    Play Episode Listen Later May 26, 2023 54:24


    ಬಣ್ಣವಿಲ್ಲದ ಪೇಪರ್ ಒಂದು ದಿನ ಪತ್ರಿಕೆ ಬಣ್ಣವಿಲ್ಲದ ಪೇಪರ್ ಆಗ ಬೇಕೆ ಅಥ್ವಾ ಕ್ರಿಯಾಶೀಲಪಾಗಿ ರೋಚಕ ಸುದ್ದಿಗಳ ನೀಡ ಬೇಕಾ? ಬನ್ನಿ ಅರಳಿಕಟ್ಟೆಯ ಕೆಳಗೆ ನಮ್ಮ ಪ್ರಜಾವಾಣಿಯ ಸಂಪಾದಕರಾದ ಪ್ರವೀಣ ಭಟ್ ಕೂತಿದ್ದಾರೆ. ಅವರ ಜೊತೆ ಒಬ್ಬ ಸಂಪಾದಕನಾಗಿ ಮಾಡಬೇಕಾದ ಕರ್ತವ್ಯಗಳು, ಸಂಪಾದಕರ ಮುಂದಿರುವ ಸವಾಲುಗಳು ಇತ್ಯಾದಿಗಳ ಬಗ್ಗೆ ಮಾತಾಡೋಣ. ಈ podcast ಎರಡು ಭಾಗದಲ್ಲಿ ಮೂಡುವುದು. ಇದು ಮೊದಲನೆಯ ಭಾಗ Episodes on nuclear physics https://open.spotify.com/episode/0uAS9FukG44crq54WIEUDA 0:00 Introduction. Why did a physics graduate take up journalism? ಭೌತಶಾಸ್ತ್ರದ ಪದವೀಧರರಾಗಿದ್ದರೂ ಪತ್ರಿಕೋದ್ಯಮ ಆಯ್ದುಕೊಂಡಿದ್ದು ಯಾಕೆ? 00:3 Dare Devil Mustafa Ad 00:04 What does an editor do? ಸಂಪಾದಕರ ಕೆಲಸ ಏನು? 10:27 Does the editor have to read every word of his publication ಒಬ್ಬ ಸಂಪಾದಕರು ಪ್ರತಿಯೊಂದು ಪದವನ್ನೂ ಓದಬೇಕಾ? 18:18 Do rules hamper style? ನಿಯಮಗಳು ವೈಯಕ್ತಿಕ ಶೈಲಿಯನ್ನು ನಿರ್ಬಂಧಿಸುತ್ತವೆಯೇ? 26:00 Newspaper business is competitive. In the end revenue matters, How do you handle pressure to ensure you are competitive ಪತ್ರಿಕೋದ್ಯಮದ ವ್ಯಾಪಾರದಲ್ಲಿರುವ ಗೆಲ್ಲಲೇಬೇಕೆಂಬ ಒತ್ತಡವನ್ನು ಹೇಗೆ ನಿಭಾಯಿಸುತ್ತೀರ? 33.10 : How did the policy orginate ಪಾಲಿಸಿ ಹುಟ್ಟಿದ್ದು ಹೇಗೆ? 37.30 Difference between activist and journalist ಹೋರಾಟಗಾರರಿಗೂ ಪತ್ರಿಕೋದ್ಯಮಿಗಳಿಗೂ ಇರುವ ವ್ಯತ್ಯಾಸ 43:38 Arrival of new media ಹೊಸ ಮಾಧ್ಯಮಗಳ ಆಗಮನ 48:53 Is news paper restricted to middle classes only ದಿನಪತ್ರಿಕೆಗಳು ಕೇವಲ ಮಧ್ಯಮವರ್ಗಕ್ಕೆ ಮಾತ್ರ ಸೀಮಿತವಾಗಿವೆಯಾ? --- Send in a voice message: https://podcasters.spotify.com/pod/show/aralikatte/message

    112 ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಯಾಕೆ ತಿಳಿದುಕೊಳ್ಳಬೇಕುI RTI Act Kannada Podcast Aralikatte P2

    Play Episode Listen Later Mar 21, 2023 69:28


    In continuation of the episode 1 on RTI we present Murlidharan to talk about RTI and its impact. 00:00 Boundries of RTI- Distinction between personal and official matters 7.35 Are there penalities for giving information that is not to be given 9.20 Do government officials get incentives for implementing RTI properly ( fine amount reel) 17.20 Record retention schedule 23:53 Structure versus interests 28:03 Why do villages get more RTI applications 33:21 What about private public projects? Or schools for examples 41:07 How does one get educated about RTI 43:43 Death and killing of RTI activities. How are they protected 50.07 Which government brought RTI? Who contributed 55:22 Examples of how RTI changed things? His message to people --- Send in a voice message: https://podcasters.spotify.com/pod/show/aralikatte/message

    Episode 111 ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಶ್ರೀ ಸಾಮಾನ್ಯ ಯಾಕೆ ತಿಳಿದುಕೊಳ್ಳಬೇಕು I RTI Act --- Kannada Podcast Aralikatte

    Play Episode Listen Later Mar 9, 2023 61:33


    The right to information act was conceived in 2005 and is perhaps the most essential tool in our democratic process. How well do you know the act? Check out the super cool Kannada Podcast for more details. ಮಾಹಿತಿ ಹಕ್ಕು ಕಾಯ್ದೆ ನಮ್ಮ ಪ್ರಜಾತಂತ್ರಕ್ಕೆ ಬಹುಮುಖ್ಯ. ಇದರ ಬಗ್ಗೆ ನೀವು ಏನು ಅರಿತು ಕೊಂಡಿದ್ದೀರಿ. ಬನ್ನಿ ಕನ್ನಡ podcast ಅರಳಿಕಟ್ಟೆಗೆ Topics of discussion 09:15 ಪತ್ರಿಕೋದ್ಯಮ ನೀವು ಬರೆಯುವ ರೀತಿಯನ್ನು ಪ್ರಭಾವಿಸಿತೇ? Did journalism change the way you wrote 18:11 ಭಾರತವನ್ನು ಬದಲಿಸಿದ ೨೫ ಜಡ್ಜ್ಮೆಂಟುಗಳು 25 judgements that changed India 24:48 ಈ ಆಕ್ಟಿನ ಪರಿಕಲ್ಪನೆ ಹೇಗಾಯಿತು? Why was the act concived 28:48 ಆರ್ ಟಿ ಐ ಎಲ್ಲೆಲ್ಲಿ ಅನ್ವಯಿಸುತ್ತದೆ? Where is RTI applicable 35:44 Was RTI a inspired act? Was it copied from other countries ? How is it in other countries I ಆರ್ ಟಿ ಐ ಬೇರೆ ದೇಶಗಳಿಂದ ಸ್ಫೂರ್ತಿ ಪಡೆದದ್ದಾ? ಬೇರೆ ದೇಶಗಳಲ್ಲಿ ಇದು ಯಾವ ಸ್ವರೂಪದಲ್ಲಿ ಇದೆ? 41:00 Has RTI strenghtened democracy? Are there details? I ಆರ್ ಟಿ ಐ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆಯಾ? 43:30 Do international body need approvals look for acts like RTI before giving funds 47:22 How do I file an RTI 58:03 RTI and PM's education? I ಆರ್ ಟಿ ಐ ಮತ್ತು ಪ್ರಧಾನಿಯವರ ವಿದ್ಯಾರ್ಹತೆ 59:54 RTI and no of gas cylinder in PM's house I ಆರ್ ಟಿ ಐ ಮತ್ತು ಪ್ರಧಾನಿಯವರ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಮಾಹಿತಿ --- Send in a voice message: https://podcasters.spotify.com/pod/show/aralikatte/message

    Episode 110 ನಮ್ಮ ಜೀವನ ಶೈಲಿಯನ್ನು ಬದಲಿಸ ಬಹುದಾದ ತಂತ್ರಜ್ಞಾನಗಳು -NFT, W3.0 & Metaverse . ಕನ್ನಡ podcast

    Play Episode Listen Later Feb 15, 2023 100:28


    ಹೊಸ ತಂತ್ರಜ್ಞಾನಗಳು ಗಳು ಬಂದು ನಮ್ಮ ಜೀವನವನ್ನು ಸರಳಗೊಳಿಸುವ ಮುನ್ನ ಅದರ ಬಗ್ಗೆ ಹಲವಾರು ಕಲ್ಪನೆಗಳು ಹಾಗು ತಪ್ಪು ಕಲ್ಪನೆಗಳು ಇರುತ್ತೆ. ಅರಳಿಕಟ್ಟೆಯ ಈ ಕಂತಿನಲ್ಲಿ ನಾವು NFT, W3.0 ಹಾಗು metaverse ಬಗ್ಗೆ ಮಾತಾಡುತ್ತೇವೆ ವಿಷಯ ತಜ್ಞ ವಿಜಯ ಶೆಣೈ ಜೊತೆ! #kannadapodcast #kannadacontentcreator --- Send in a voice message: https://podcasters.spotify.com/pod/show/aralikatte/message

    Ep109: ವನ್ಯ ಮೃಗ ವೈದ್ಯರ ಜೊತೆಗೊಂದು ಸ್ವಚ್ಛಂದ ಚರ್ಚೆ-A wild ranging talk with a wildlife veterinarian 2/2

    Play Episode Listen Later Feb 5, 2023 60:25


    ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/ ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್. ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ೧೦೯ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. 00:00 - ಪರ್ ಫ್ಯೂಮ್ ಬಳಸಿ ಚಿರತೆ ಹಿಡಿದದ್ದು 15:51 - ಫೆರಮೋನ್ ಗಳು 18:34 - ಮೃಗಾಲಯಗಳ ಅಗತ್ಯ 25:47 - ವನ್ಯಮೃಗಗಳ ಕುರಿತ ಆಸಕ್ತಿ 30:33 - ಸಂಶೋಧನೆಗಳ ಪ್ರಯೋಜನ 33:33 - ಶೇರನೀ ಸಿನೆಮಾ ಕುರಿತು 41:34 - ವೈಜ್ಞಾನಿಕ ಪದ್ಧತಿ 54:21 - ವನ್ಯಜೀವಿಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ Recording date: ೦6 November 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://podcasters.spotify.com/pod/show/aralikatte/message

    Ep108: ವನ್ಯ ಮೃಗ ವೈದ್ಯರ ಜೊತೆಗೊಂದು ಸ್ವಚ್ಛಂದ ಚರ್ಚೆ-A wild ranging talk with a wildlife veterinarian ½

    Play Episode Listen Later Jan 27, 2023 59:59


    ಸಂಚಿಕೆ ಪ್ರಾಯೋಜಕರು ಮೈ ಲ್ಯಾಂಗ್ ಬುಕ್ಸ್: https://mylang.in/ ಪರಿಸರ ಸಂರಕ್ಷಣೆ, ಆದಿವಾಸಿಗಳ ಹಕ್ಕುಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಇವೆಲ್ಲ ನಗರವಾಸಿಗಳು ಯೋಚಿಸಿದಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ಒಂದಕ್ಕೊಂದು ಹೊಂದಿಕೊಂಡ ಈ ವ್ಯವಸ್ಥೆಯ ಜಟಿಲ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನದಲ್ಲಿ ನಮ್ಮ ಜತೆಗಿರುವವರು ವನ್ಯ ಮೃಗ ವೈದ್ಯರಾದ ಡಾ. ಪ್ರಯಾಗ್ ಎಚ್ ಎಸ್. ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ೧೦೮ನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. 00:00 - ಪರಿಚಯ 08:37 - ಪ್ರಾಣಿಗಳನ್ನು ಪಳಗಿಸುವ ಆಸಕ್ತಿ ಸಂರಕ್ಷಣೆಯತ್ತ ತಿರುಗಿತು 18:40 - ಕಾಡುಪ್ರಾಣಿ ಹಾಗೂ ಮನುಷ್ಯರ ನಡುವಿನ ಸಂಘರ್ಷ 27:20 - ಹೊಸೂರಿನಲ್ಲಿ ಕಂಡ ಪರ್ಯಾಯ 35:23 - ಕಾಡಿನೊಂದಿಗೆ ಬುಡಕಟ್ಟು ಜನಾಂಗಗಳ ಸಂಬಂಧ 50:45 - ಕಾಡಿನಲ್ಲಿ ರೆಸಾರ್ಟ್, ಹೋಂ ಸ್ಟೇ Recording date: ೦6 November 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://podcasters.spotify.com/pod/show/aralikatte/message

    Ep107: ಕಲಾವಿದರ ಅತಿಮಾನುಷ ಶಕ್ತಿ ಹಾಗೂ ಸಾಮನ್ಯತೆ- Duality of a performer: Super human & mundane- Raghu Dixit 2/2

    Play Episode Listen Later Jan 14, 2023 58:46


    ಈ ಸಂಚಿಕೆಯ ಪ್ರಾಯೋಜಕರು ಕೇಳಿ ಕಥೆಯ ಆಡಿಯೋ ಬುಕ್ಸ್. ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ, ದೇಶ ವಿದೇಶಗಳಲ್ಲಿ ನಡೆದ ಲೈವ್ ಕಾನ್ಸರ್ಟ್ ಗಳಲ್ಲಿ ತಮ್ಮದೇ ವಿಶೇಷತೆಯನ್ನು ಮೆರೆದಿದ್ದಾರೆ. ಅರಳಿಕಟ್ಟೆಯಲ್ಲಿ ಮಾತಾಡುತ್ತಾ ಅವರು ತಮ್ಮ ಬೆಳೆದುಬಂದ ರೀತಿಯ ಬಗ್ಗೆ, ನೃತ್ಯದಲ್ಲಿನ ತರಬೇತಿ ಹೇಗೆ ತಮ್ಮ ಸಂಗೀತಕ್ಕೆ ಪೂರಕವಾಯಿತು, ತಮ್ಮ ಸೃಜನಶೀಲತೆಯ ಬಗ್ಗೆ, ಯಶಸ್ಸಿನ ಹಿಂದಿನ ಸಂತಸ ದುಃಖಗಳ ಬಗ್ಗೆ ನಿರರ್ಗಳವಾಗಿ, ಮನಬಿಚ್ಚಿ ಮಾತಾಡಿದ್ದಾರೆ ಈ ಚರ್ಚೆ ಅರಳಿಕಟ್ಟೆಯ ಎರಡು ಸಂಚಿಕೆಗಳಲ್ಲಿ ಮೂಡಿ ಬರಲಿದೆ. ಎರಡೆನಯ ಹಾಗೂ ಅಂತಿಮ ಭಾಗ ಈ ವಾರದ ಸಂಚಿಕೆಯಲ್ಲಿ. 00:00 - ಸಂಗೀತದಲ್ಲಿ ಧ್ವನಿಯ ಏರಿಳಿತ 05:22 - ಫೀಡ್ ಬ್ಯಾಕ್ 11:43 - ಜನಪ್ರಿಯತೆಯ ಅಪಾಯ 20:18 - ಕ್ಷಣಭಂಗುರ ಜನಪ್ರಿಯತೆ 29:37 - ಕೋವಿಡ್ ಕಾಲದ ಕೆಲಸ 36:36 - ಸಂಗೀತದ ಉದ್ದೀಪನಾ ಶಕ್ತಿ 46:00 - ಉತ್ಸಾಹ ಉಳಿದಿರಲು ಕಾರಣ 49:15 - ಹೊಸಬರಿಗೆ ಬುದ್ಧಿಮಾತು Recording date: 05 January 2023 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://podcasters.spotify.com/pod/show/aralikatte/message

    Ep106: ಕಲಾವಿದರ ಅತಿಮಾನುಷ ಶಕ್ತಿ ಹಾಗೂ ಸಾಮನ್ಯತೆ- Duality of a performer: Super human & mundane- Raghu Dixit 1/2

    Play Episode Listen Later Jan 8, 2023 65:55


    ಈ ಸಂಚಿಕೆಯ ಪ್ರಾಯೋಜಕರು ಕೇಳಿ ಕಥೆಯ ಆಡಿಯೋ ಬುಕ್ಸ್. ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ, ದೇಶ ವಿದೇಶಗಳಲ್ಲಿ ನಡೆದ ಲೈವ್ ಕಾನ್ಸರ್ಟ್ ಗಳಲ್ಲಿ ತಮ್ಮದೇ ವಿಶೇಷತೆಯನ್ನು ಮೆರೆದಿದ್ದಾರೆ. ಅರಳಿಕಟ್ಟೆಯಲ್ಲಿ ಮಾತಾಡುತ್ತಾ ಅವರು ತಮ್ಮ ಬೆಳೆದುಬಂದ ರೀತಿಯ ಬಗ್ಗೆ, ನೃತ್ಯದಲ್ಲಿನ ತರಬೇತಿ ಹೇಗೆ ತಮ್ಮ ಸಂಗೀತಕ್ಕೆ ಪೂರಕವಾಯಿತು, ತಮ್ಮ ಸೃಜನಶೀಲತೆಯ ಬಗ್ಗೆ, ಯಶಸ್ಸಿನ ಹಿಂದಿನ ಸಂತಸ ದುಃಖಗಳ ಬಗ್ಗೆ ನಿರರ್ಗಳವಾಗಿ, ಮನಬಿಚ್ಚಿ ಮಾತಾಡಿದ್ದಾರೆ ಈ ಚರ್ಚೆ ಅರಳಿಕಟ್ಟೆಯ ಎರಡು ಸಂಚಿಕೆಗಳಲ್ಲಿ ಮೂಡಿ ಬರಲಿದೆ. ಮೊದಲ ಸಂಚಿಕೆ ನಿಮ್ಮ ಮುಂದಿದೆ. 00:00 - ಇಂಟ್ರೋ 01:24 - ಒಬ್ಬ ಸಿನಿಮಾ ನಿರ್ಮಾಪಕನಾಗಿ ರಘು 06:27 - ಸಂಗೀತಕ್ಕೆ ಕಾಲಿಟ್ಟ ಕಥೆ 10:51 - ಬಾಲ್ಯದ ಪ್ರಭಾವಗಳು 17:13 - ಲಾಸ್ಟ್ ಬೆಂಚ್ ಸ್ಟೂಡೆಂಟು ಆದ್ರೆ ಒಳ್ಳೆ ಹುಡುಗ 18:26 - ಟೇಪ್ ರೇಕಾರ್ಡರ್ ಇಲ್ಲದ ಮನೆ 23:03 - ಕಾಸ್ಟೂಮ್ 30:46 - ಸಂಗೀತದ ಶೈಲಿ ಹಾಗೂ ಕೇಳುಗರು 39:55 - ತನ್ಮಯತೆ ಹಾಗೂ ಪರಕಾಯ ಪ್ರವೇಶ 48:04 - ಪ್ರೇಕ್ಷಕರನ್ನು ನಿರ್ದೇಶಿಸುವ ಅಗತ್ಯ 56:59 - ತನ್ಮಯತೆಗೆ ಸಿದ್ಧ ಆಚರಣೆಗಳ ಅಗತ್ಯ 58:55 - ಸಂಗೀತ ಸಂಯೋಜನೆ Recording date: ೦5 January 2023 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep105: ಭಾರತದ ಕಾನೂನುಗಳು ಬೆಳೆದು ಬಂದ ದಾರಿ 2/2 - How did Indian law evolve?

    Play Episode Listen Later Jan 6, 2023 49:51


    ಈ ಸಂಚಿಕೆಯ ಪ್ರಾಯೋಜಕರು ಚೀವ್ಡ ಕಾಫಿ. ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅನಂತರ ಹೈಕೋರ್ಟಿನ ಕಂಪ್ಯೂಟರೀಕರಣದಲ್ಲಿ ಕೆಲಸ ಮಾಡಿದ ಡಾ. ಪ್ರಕಾಶ್ ಸೆತ್ಲೂರ್ ರೊಂದಿಗಿನ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆ ಸಂಚಿಕೆ ೧೦೫ರ ರೂಪದಲ್ಲಿ ನಿಮ್ಮ ಮುಂದಿದೆ. ಪ್ರಜೆಗಳಿಗೆ ಸಂವಿಧಾನ ನೀಡಿರುವ ಬದುಕುವ ಹಕ್ಕಿನಲ್ಲಿ ತಮ್ಮ ಜೀವ ತ್ಯಜಿಸುವ ಹಕ್ಕೂ ಸೇರಿದೆಯೇ? ಕೆಲವು ಪಾಶ್ಚಾತ್ಯ ದೇಶಗಳಲ್ಲಿ ದಯಾ ಮರಣ (ಯುಥನೇಶಿಯಾ)ಕ್ಕೆ ಅನುಮತಿ ಇರುವಂತೆ ಭಾರತದ ಕಾನೂನಿನಲ್ಲಿ ಯಾವ ರೀತಿಯ ಚರ್ಚೆಗಳು ನಡೆದವು? ಭಾರತದಲ್ಲಿ ಕಾನೂನು ಈ ಬಗೆಯ ಹೊಸ ಚರ್ಚೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ? ಭಾರತದಲ್ಲಿ ಮದುವೆಯಾದ ದಂಪತಿಗಳು ಅಮೇರಿಕಾದ ಕೋರ್ಟಿನ ಎದುರು ವಿಚ್ಛೇದನ ಪಡೆಯಲು ಸಾಧ್ಯವೇ? ಸಂವಿಧಾನ ಆ ದೇಶದ ಪ್ರಜೆಗಳಿಗೆ ಕೊಡುವ ಹಕ್ಕುಗಳಿಗೂ ಅಂತರಾಷ್ಟ್ರೀಯ ಒಡಂಬಡಿಕೆಗಳಿಗೂ ಯಾವ ರೀತಿಯ ಸಂಬಂಧವಿದೆ? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಎರಡನೆಯ ಭಾಗದಲ್ಲಿದೆ. 00:00 - ಭಾರತದಲ್ಲಿ ಹೊಸ ಕಾನೂನುಗಳು 10:36 - ಬಹುರೂಪಿ ಸಮಾಜಕ್ಕೆ ಬಹುರೂಪಿ ಕಾನೂನುಗಳು ಬೇಕೆ? 14:44 - ಅಂತರಾಷ್ಟ್ರೀಯ ಕಾನೂನುಗಳ ಚೌಕಟ್ಟು 30:49 - ಭಯಹುಟ್ಟಿಸುವಲ್ಲಿ ಶಿಕ್ಷೆಯ ಪಾತ್ರ 36:51 - ಅಪರಾಧ ಕೇಂದ್ರಿತ - ಅಪರಾಧಿ ಕೇಂದ್ರಿತ ಕಾನೂನು 40:06 - ನ್ಯಾಯಾಧೀಶರು ಪಕ್ಷಾತೀತರಾಗಿ ತೀರ್ಪು ಕೊಡುವುದು ಹೇಗೆ? Recording date: 30 October 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep104: ಭಾರತದ ಕಾನೂನುಗಳು ಬೆಳೆದು ಬಂದ ದಾರಿ 1/2 - How did Indian law evolve?

    Play Episode Listen Later Dec 19, 2022 50:42


    ಈ ಸಂಚಿಕೆಯ ಪ್ರಾಯೋಜಕರು ಚೀವ್ಡ ಕಾಫಿ. ಅರಳಿಕಟ್ಟೆಯ ೧೦೪ನೆಯ ಸಂಚಿಕಯಲ್ಲಿ ನಮ್ಮ ಜೊತೆಗಿರುವವರು ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅನಂತರ ಹೈಕೋರ್ಟಿನ ಕಂಪ್ಯೂಟರೀಕರಣದಲ್ಲಿ ಕೆಲಸ ಮಾಡಿದ ಡಾ. ಪ್ರಕಾಶ್ ಸೆತ್ಲೂರ್. ವ್ಯಕ್ತಿಯೊಬ್ಬನ ಜನ್ಮದಿಂದ ಶುರುವಾಗಿ ಮರಣದವರೆಗೆ ಅನ್ವಯವಾಗುವ ಕಾನೂನುಗಳು ಭಾರತದಲ್ಲಿ ಬೆಳೆದು ಬಂದ ದಾರಿ ಯಾವುದು? ಧರ್ಮಕ್ಕೂ ಕಾನೂನಿಗೂ ಇರುವ ವ್ಯತ್ಯಾಸವೇನು? ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಇಸ್ಮಾಮಿಕ್ ಷರಿಯಾ ಮೊದಲಾದ ನ್ಯಾಯಪದ್ಧತಿಗಳನ್ನು ದಾಟಿ ಭಾರತ ತನ್ನದೇ ಆದ ಸಂವಿಧಾನವನ್ನು ಕಟ್ಟಿಕೊಂಡಿದ್ದು ಹೇಗೆ? ಹಳೆಯ ಯುಗಾಸ್ಲಾವಿಯಾ ದೇಶದ ಸಂವಿಧಾನ ಹೊರತು ಪಡಿಸಿದರೆ ಭಾರತದ ಸಂವಿಧಾನವೇ ಜಗತ್ತಿನಲ್ಲಿ ಅತಿ ದೀರ್ಘವಾದ ಸಂವಿಧಾನ ಎನ್ನುವುದು ನಿಮಗೆ ತಿಳಿದಿದೆಯೇ? ೧೭೯೧ರಲ್ಲಿ ಜಾರಿಎ ಬಂದ ಅಮೇರಿಕಾದ ಸಂವಿಧಾನಕ್ಕೆ ಇದುವರೆಗೆ ೨೭ ತಿದ್ದು ಪಡಿಗಳಾಗಿದ್ದರೆ ೧೯೫೦ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನಕ್ಕೆ ಇದುವರೆಗೆ ೧೦೫ ತಿದ್ದುಪಡಿಗಳಾಗಿವೆ ಎನ್ನುವುದು ಗೊತ್ತೆ? 00:00 - ಇಂಟ್ರೋ 01:52 - ಅತಿಥಿ ಪರಿಚಯ 15:12 - ಕಾನೂನು ಏನು, ಏಕೆ? 20:49 - ಬ್ರಿಟೀಷರ ಆಳ್ವಿಕೆಯ ಹಿನ್ನೆಲೆ 28:34 - ಕಾನೂನುಗಳಲ್ಲಿ ಸನಾತನ ಧರ್ಮದ ಛಾಯೆ 45:32 - ಕಾನೂನು, ಸಮಾಜದ ನಡುವಿನ ಅಂತರ Recording date: 30 October 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep103: ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯ (2/2) - Delimitation of constituencies

    Play Episode Listen Later Nov 28, 2022 40:48


    ಈ ಸಂಚಿಕೆಯ ಅತಿಥಿ ಶೃತಿ ಮರುಳಪ್ಪನವರನ್ನು ಟ್ವಿಟರ್ನಲ್ಲಿ ಫಾಲೋ ಮಾಡಬಹುದು. ಅರಳಿಕಟ್ಟೆಯ ೧೦೨ನೆಯ ಸಂಚಿಕೆಯ ಪ್ರಾಯೋಜಕರು "ಕೇಳಿ ಕಥೆಯ" ಆಡಿಯೋ ಪುಸ್ತಕ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ. ನಮ್ಮ ದೇಶ ಗಣತಂತ್ರವಾಗಿ ರಾಜ್ಯಗಳ ನಿರ್ಮಾಣವಾದಂದಿನಿಂದ ಕೆಲವು ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಿ ಮುನ್ನಡೆಯುತ್ತಿದ್ದರೆ, ಇನ್ನು ಕೆಲವು ರಾಜ್ಯಗಳು ಅಭಿವೃದ್ಧಿಯ ಎಲ್ಲಾ ಕ್ರಮಾಂಕಗಳಲ್ಲಿ ಹಿಂದುಳಿದಿವೆ. ಈ ಇಬ್ಬಗೆಯ ಬೆಳವಣಿಗೆಯನ್ನು ಜನಸಂಖ್ಯೆ ನಿಯಂತ್ರಣದ ಕ್ರಮಾಂಕದಲ್ಲಿ ಸ್ಪಷ್ಟವಾಗಿ ಕಾಣಬಹುದು. ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತಂದವು ಇದರ ಪರಿಣಾಮವಾಗಿ ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಜನಸಂಖ್ಯೆ ಕುಂಠಿತವಾಯಿತು. ಜನಸಂಖ್ಯೆಯ ಆಧಾರದಲ್ಲಿ ಸೀಮಾ ನಿರ್ಣಯ ಜಾರಿಗೆ ಬಂದರೆ ಈಗಾಗಲೇ ದುರ್ಬಲವಾಗಿರುವ ರಾಜಕೀಯ ಪ್ರಾತಿನಿಧ್ಯ ಇನ್ನಷ್ಟು ಕ್ಷೀಣಿಸುವ ಅಪಾಯ ಸೃಷ್ಠಿಯಾಯಿತು. ೧೯೭೧ರ ಜನಗಣತಿಯ ಆಧಾರದಲ್ಲಿ ಇಂದಿಗೂ ದೇಶದ ಸಂಸತ್ತಿನಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ ದೊರೆಯುತ್ತದೆ. ಹೊಸ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡ ಸೀಮಾ ನಿರ್ಣಯ ಯೋಜನೆ ಈಗ ಜಾರಿಗೆ ಬಂದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಎದುರಾಗುವ ಸವಾಲುಗಳೇನು? ನಮ್ಮ ಜನಪ್ರತಿನಿಧಿಗಳಿಗೆ ಈ ಸವಾಲುಗಳ ಅರಿವು ಇದೆಯೇ? ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಮಾನ್ಯ ಪ್ರಜೆಗಳಿಗೆ ಲಭ್ಯವಿರುವ ಅವಕಾಶಗಳೇನು? ಈ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಶೃತಿ ಮರುಳಪ್ಪ. ಬೆಂಗಳೂರಿನ ಖಾಸಗಿ ಐಟಿ ಕಂಪೆನಿಯೊಂದರಲ್ಲಿ ವೃತ್ತಿ ನಿರತರಾದ ಶೃತಿ ತಮ್ಮ ಬಿಡುವಿನಲ್ಲಿ ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳ ಕುರಿತ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾರೆ. ಅಮೇರಿಕಾದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನೆಗೆ ಪ್ರೇರಣಾ ಸಿಂಗ್ ಸಿದ್ಧ ಪಡಿಸಿದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಋತುಮಾನ ಪ್ರಕಾಶನ ಪ್ರಕಟಿಸಿರುವ "ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ" ಪುಸ್ತಕ ನಿಮ್ಮ ನೆಚ್ಚಿನ ಪುಸ್ತಕದ ಅಂಗಡಿಗಳಲ್ಲಿ ಹಾಗೂ ಋತುಮಾನ ಅಂತರ್ಜಾದಲದ ಅಂಗಡಿಯಲ್ಲಿ ಸಹ ಲಭ್ಯವಿದೆ. 00:15 - ದಕ್ಷಿಣ ಭಾರತದಲ್ಲಿ ರಾಜಕೀಯ ಸಾಕ್ಷರತೆ 11:01 - ಆಯೋಗ ಕೆಲಸ ಮಾಡುವುದು ಹೇಗೆ? 14:44 - ರಾಜಕೀಯ ಲೆಕ್ಕಾಚಾರ 16:28 - ಪರಿಣಾಮಗಳು 22:12 - ಅರಿವಿರುವ ರಾಜಕಾರಣಿಗಳು 27:56 - ದಕ್ಷಿಣದ ರಾಜ್ಯಗಳ ಒಗ್ಗಟ್ಟು 31:14 - ಹೋರಾಟದ ಗುರಿ 34:21 - ಪ್ರಾದೇಶಿಕ ಪಕ್ಷದ ಕನಸು 36:27 - ಹಕ್ಕೊತ್ತಾಯದ ಪ್ರೇರಣೆ Recording date: 18 September 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep102: ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯ (1/2) - Delimitation of constituencies

    Play Episode Listen Later Nov 19, 2022 53:05


    ಅರಳಿಕಟ್ಟೆಯ ೧೦೨ನೆಯ ಸಂಚಿಕೆಯ ಪ್ರಾಯೋಜಕರು "ಕೇಳಿ ಕಥೆಯ" ಆಡಿಯೋ ಪುಸ್ತಕ. ಹೆಚ್ಚಿನ ಮಾಹಿತಿಗೆ ಇಲ್ಲಿ ಭೇಟಿ ನೀಡಿ. ನಮ್ಮ ದೇಶ ಗಣತಂತ್ರವಾಗಿ ರಾಜ್ಯಗಳ ನಿರ್ಮಾಣವಾದಂದಿನಿಂದ ಕೆಲವು ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಿ ಮುನ್ನಡೆಯುತ್ತಿದ್ದರೆ, ಇನ್ನು ಕೆಲವು ರಾಜ್ಯಗಳು ಅಭಿವೃದ್ಧಿಯ ಎಲ್ಲಾ ಕ್ರಮಾಂಕಗಳಲ್ಲಿ ಹಿಂದುಳಿದಿವೆ. ಈ ಇಬ್ಬಗೆಯ ಬೆಳವಣಿಗೆಯನ್ನು ಜನಸಂಖ್ಯೆ ನಿಯಂತ್ರಣದ ಕ್ರಮಾಂಕದಲ್ಲಿ ಸ್ಪಷ್ಟವಾಗಿ ಕಾಣಬಹುದು. ದಕ್ಷಿಣ ಭಾರತದ ರಾಜ್ಯಗಳು ಕುಟುಂಬ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತಂದವು ಇದರ ಪರಿಣಾಮವಾಗಿ ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಜನಸಂಖ್ಯೆ ಕುಂಠಿತವಾಯಿತು. ಜನಸಂಖ್ಯೆಯ ಆಧಾರದಲ್ಲಿ ಸೀಮಾ ನಿರ್ಣಯ ಜಾರಿಗೆ ಬಂದರೆ ಈಗಾಗಲೇ ದುರ್ಬಲವಾಗಿರುವ ರಾಜಕೀಯ ಪ್ರಾತಿನಿಧ್ಯ ಇನ್ನಷ್ಟು ಕ್ಷೀಣಿಸುವ ಅಪಾಯ ಸೃಷ್ಠಿಯಾಯಿತು. ೧೯೭೧ರ ಜನಗಣತಿಯ ಆಧಾರದಲ್ಲಿ ಇಂದಿಗೂ ದೇಶದ ಸಂಸತ್ತಿನಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ ದೊರೆಯುತ್ತದೆ. ಹೊಸ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡ ಸೀಮಾ ನಿರ್ಣಯ ಯೋಜನೆ ಈಗ ಜಾರಿಗೆ ಬಂದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಎದುರಾಗುವ ಸವಾಲುಗಳೇನು? ನಮ್ಮ ಜನಪ್ರತಿನಿಧಿಗಳಿಗೆ ಈ ಸವಾಲುಗಳ ಅರಿವು ಇದೆಯೇ? ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಾಮಾನ್ಯ ಪ್ರಜೆಗಳಿಗೆ ಲಭ್ಯವಿರುವ ಅವಕಾಶಗಳೇನು? ಈ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಶೃತಿ ಮರುಳಪ್ಪ. ಬೆಂಗಳೂರಿನ ಖಾಸಗಿ ಐಟಿ ಕಂಪೆನಿಯೊಂದರಲ್ಲಿ ವೃತ್ತಿ ನಿರತರಾದ ಶೃತಿ ತಮ್ಮ ಬಿಡುವಿನಲ್ಲಿ ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳ ಕುರಿತ ಹೋರಾಟಗಳಲ್ಲಿ ಪಾಲ್ಗೋಳ್ಳುತ್ತಾರೆ. ಅಮೇರಿಕಾದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಸಂಶೋಧನೆಗೆ ಪ್ರೇರಣಾ ಸಿಂಗ್ ಸಿದ್ಧ ಪಡಿಸಿದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಋತುಮಾನ ಪ್ರಕಾಶನ ಪ್ರಕಟಿಸಿರುವ "ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ" ಪುಸ್ತಕ ನಿಮ್ಮ ನೆಚ್ಚಿನ ಪುಸ್ತಕದ ಅಂಗಡಿಗಳಲ್ಲಿ ಹಾಗೂ ಋತುಮಾನ ಅಂತರ್ಜಾದಲದ ಅಂಗಡಿಯಲ್ಲಿ ಸಹ ಲಭ್ಯವಿದೆ. 00:00 - ಆರಂಭ 01:04 - ಅತಿಥಿಯ ಪರಿಚಯ 07:15 - ಸೀಮಾ ನಿರ್ಣಯ ಆಯೋಗ 18:24 - ಟಿ ಎಫ್ ಆರ್ (ಹೆರುವೆಣಿಕೆ) 21:38 - ಪ್ರಾತಿನಿಧಿಕ ಜನತಂತ್ರ 26:04 - ಭಾರತದ ವಿಶಿಷ್ಟ ಸನ್ನಿವೇಶ 32:23 - ಜನಾಂಗಸ್ಥಿತಿಯ ಚರ್ಚೆಯಲ್ಲಿನ ಅಪಾಯಗಳು 43:28 - ಹಕ್ಕೊತ್ತಾಯ ಹೇಗೆ? Recording date: 18 September 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep101: ಸಮಾನಾಂತರ ಸಿನಿಮಾಗಳ ಕುರಿತು ಗಿರೀಶ್ ಕಾಸರವಳ್ಳಿ ಜತೆ (ಭಾಗ ೨) - On parallel films with Girish Kasaravalli (Part 2)

    Play Episode Listen Later Apr 18, 2022 89:16


    ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಹತ್ತು ಹಲವು ವಿಷಯಗಳ ಕುರಿತ ಕುತೂಹಲಕಾರಿ ಚರ್ಚೆಯನ್ನು ಅಬ್ಬರವಿಲ್ಲದ ಮೆಲು ಧ್ವನಿಯಲ್ಲಿ ಪ್ರತಿ ವಾರ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲವನ್ನು ನೆಚ್ಚಿ ನಾವು ನೂರನೆಯ ಸಂಚಿಕೆಗೆ ತಲುಪಿದ್ದೇವೆ. ಈ ಶತಮಾನದ ಸಂಚಿಕೆಯಲ್ಲಿ ನಮ್ಮ ಜೊತೆಯಾಗಿರುವವರು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಜಾಗತಿಕ ಸಿನಿಮಾ ಭೂಪಟದಲ್ಲಿ ಕರ್ನಾಟಕ ತಲೆ ಎತ್ತಿನಿಲ್ಲುವಂತಹ ಚಿತ್ರಗಳನ್ನು ನಿರ್ಮಿಸಿದ ಗಿರೀಶ್ ಕಾಸರವಳ್ಳಿಯವರ ಕುರಿತ ಪರಿಚಯ ಕನ್ನಡಿಗರಿಗೆ ಅಗತ್ಯವಿರಲಾರದು. ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಫಾರ್ಮಸಿಯಲ್ಲಿ ಪದವಿ ಓದಿ ಆಕಸ್ಮಿಕವಾಗಿ ಚಲನಚಿತ್ರ ಜಗತ್ತಿಗೆ ಕಾಲಿರಿಸಿದವರು. ಘಟಶ್ರಾದ್ಧ, ದ್ವೀಪ, ಕನಸೆಂಬೋ ಕುದುರೆಯನ್ನೇರಿ, ನಾಯಿ ನೆರಳು, ಹಸೀನಾ, ಗುಲಾಬಿ ಟಾಕೀಸ್ - ಕಾಸರವಳ್ಳಿಯವರ ಸಿನಿಮಾಗಳ ಪಟ್ಟಿ ದೊಡ್ಡದು. ಗಿರೀಶ್ ರೊಂದಿಗಿನ ನಮ್ಮ ಚರ್ಚೆಯ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಭಾಗದಲ್ಲಿ ನಲವತ್ತು ವರ್ಷಗಳ ಕಾಸರವಳ್ಳಿಯವರ ವೃತ್ತಿಜೀವನದಲ್ಲಿ ತಂತ್ರಜ್ಞಾನದಿಂದಾದ ಬದಲಾವಣೆಗಳು, “ಕೋಪ ಬಂದಾಗ ಹತ್ತರವರೆಗೆ ಎಣಿಸು" ಎಂಬ ತಾತನ ಬುದ್ಧಿ ಮಾತು ಕಾಸರವಳ್ಳಿಯವರ ಪ್ರತಿಕ್ರಿಯೆಗಳಲ್ಲಿ ಹಾಸುಹೊಕ್ಕಾಗಿರುವುದು, ಎಂಭತ್ತು ತೊಂಭತ್ತರ ದಶದಕದಲ್ಲಿ ದೇಶದಲ್ಲೇ ಅತ್ಯಂತ ಉಚ್ಛ್ರಾಯ ಸ್ಥಾನದಲ್ಲಿದ್ದ ಕನ್ನಡದ ಚಿತ್ರರಂಗದ ಬೆಳವಣಿಗೆ ಇಳಿಮುಖವಾಗಲು ಕಾರಣಗಳೇನು ಇವೇ ಮೊದಲಾದ ವಿಷಯಗಳನ್ನು ಕುರಿತು ಚರ್ಚಿಸಿದ್ದೇವೆ. ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ನಮ್ಮ ಯುಟ್ಯೂಬ್ ಚಾನೆಲ್ಗೆ ಚಂದಾದಾರಾಗಿ, ನಿಮ್ಮ ಗೆಳೆಯರಿಗೆ ನಮ್ಮ ಬಗ್ಗೆ ತಿಳಿಸಿ. ನಿಮ್ಮಂತಹ ಇನ್ನಷ್ಟು ಸಹೃದಯರನ್ನು ತಲುಪಲು ನೆರವಾಗಿ. Recording date: 06 February 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep100: ಸಮಾನಾಂತರ ಸಿನಿಮಾಗಳ ಕುರಿತು ಗಿರೀಶ್ ಕಾಸರವಳ್ಳಿ ಜತೆ - On parallel films with Girish Kasaravalli

    Play Episode Listen Later Apr 4, 2022 72:03


    ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಹತ್ತು ಹಲವು ವಿಷಯಗಳ ಕುರಿತ ಕುತೂಹಲಕಾರಿ ಚರ್ಚೆಯನ್ನು ಅಬ್ಬರವಿಲ್ಲದ ಮೆಲು ಧ್ವನಿಯಲ್ಲಿ ಪ್ರತಿ ವಾರ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲವನ್ನು ನೆಚ್ಚಿ ನಾವು ನೂರನೆಯ ಸಂಚಿಕೆಗೆ ತಲುಪಿದ್ದೇವೆ. ಈ ಶತಮಾನದ ಸಂಚಿಕೆಯಲ್ಲಿ ನಮ್ಮ ಜೊತೆಯಾಗಿರುವವರು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಜಾಗತಿಕ ಸಿನಿಮಾ ಭೂಪಟದಲ್ಲಿ ಕರ್ನಾಟಕ ತಲೆ ಎತ್ತಿನಿಲ್ಲುವಂತಹ ಚಿತ್ರಗಳನ್ನು ನಿರ್ಮಿಸಿದ ಗಿರೀಶ್ ಕಾಸರವಳ್ಳಿಯವರ ಕುರಿತ ಪರಿಚಯ ಕನ್ನಡಿಗರಿಗೆ ಅಗತ್ಯವಿರಲಾರದು. ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕಾಸರವಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಫಾರ್ಮಸಿಯಲ್ಲಿ ಪದವಿ ಓದಿ ಆಕಸ್ಮಿಕವಾಗಿ ಚಲನಚಿತ್ರ ಜಗತ್ತಿಗೆ ಕಾಲಿರಿಸಿದವರು. ಘಟಶ್ರಾದ್ಧ, ದ್ವೀಪ, ಕನಸೆಂಬೋ ಕುದುರೆಯನ್ನೇರಿ, ನಾಯಿ ನೆರಳು, ಹಸೀನಾ, ಗುಲಾಬಿ ಟಾಕೀಸ್ - ಕಾಸರವಳ್ಳಿಯವರ ಸಿನಿಮಾಗಳ ಪಟ್ಟಿ ದೊಡ್ಡದು. ಗಿರೀಶ್ ರೊಂದಿಗಿನ ನಮ್ಮ ಚರ್ಚೆಯ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗದಲ್ಲಿ ನಾವು ಕಾಸರವಳ್ಳಿಯಲ್ಲಿನ ಗಿರೀಶರ ಬಾಲ್ಯ, ಎತ್ತಿನ ಗಾಡಿಯಲ್ಲಿ ಮನೆಮಂದಿ ಸಿನೆಮಾ ನೋಡಲು ಹೋಗುತ್ತಿದ್ದ ನೆನಪು, ಮೊದಲ ಬಾರಿಗೆ ಜಾಗತಿಕ ಸಿನೆಮಾಗೆ ತೆರೆದುಕೊಂಡ ಅನುಭವ, ಪುಣೆಯ ಸಿನೆಮಾ ಸಂಸ್ಥೆಯಲ್ಲಿನ ಓದು, ತರಬೇತಿ, ಅನಂತಮೂರ್ತಿಯವರೊಂದಿಗಿನ ಒಡನಾಟ, ಅಡ್ಡೂರು ಗೋಪಾಲಕೃಷ್ಣ, ಯು.ಆರ್.ಅನಂತಮೂರ್ತಿಯವರ ಕುರಿತ ಸಾಕ್ಷ್ಯಚಿತ್ರಗಳು ಹೀಗೆ ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ. ಎಂದಿನಂತೆ ನಿಮ್ಮ ಬೆಂಬಲ, ಪ್ರೀತಿ ನಮ್ಮೊಂದಿಗಿರಲಿ. ನಮ್ಮ ಯುಟ್ಯೂಬ್ ಚಾನೆಲ್ಗೆ ಚಂದಾದಾರಾಗಿ, ನಿಮ್ಮ ಗೆಳೆಯರಿಗೆ ನಮ್ಮ ಬಗ್ಗೆ ತಿಳಿಸಿ. ನಿಮ್ಮಂತಹ ಇನ್ನಷ್ಟು ಸಹೃದಯರನ್ನು ತಲುಪಲು ನೆರವಾಗಿ. Recording date: 06 February 2022 Credits: Music: Crescents by Ketsa Licensed under creative commons. Icon made by Freepik from www.flaticon.com Show Notes Professor Satish Bahadur https://surendarchawdhary.wordpress.com/2015/09/29/professor-satish-bahadur-one-and-the-only/ --- Send in a voice message: https://anchor.fm/aralikatte/message

    Ep99: ಕನ್ನಡಿಗರ ಅಸ್ಮಿತೆ - ಅರಳಿಕಟ್ಟೆ ಸಂಚಿಕೆಗಳ ಹಿನ್ನೋಟ - Kanndiga Identity - Glimpses from the past episodes

    Play Episode Listen Later Mar 27, 2022 70:28


    ಹತ್ತಾರು ಪಾಡ್ ಕಾಸ್ಟ್ ಗಳನ್ನು ನಿಯಮಿತವಾಗಿ ಕೇಳುವ ನಾವು ಅದೊಂದು ದಿನ "ಕನ್ನಡದಲ್ಲೇಕೆ ಪಾಡ್ಕಾಸ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ" ಎಂದು ಕೇಳಿಕೊಂಡೆವು. ನಾವೇನು ವೃತ್ತಿಪರರಲ್ಲದಿದ್ದರೂ ಕೈಲಾದ ಮಟ್ಟಿಗೆ ಕನ್ನಡದಲ್ಲಿ ವಿಶಿಷ್ಟ ಚರ್ಚೆಗಳನ್ನು ನಡೆಸೋಣ ಎಂದು ಶುರು ಮಾಡಿದ ಪ್ರಯತ್ನವೇ “ಅರಳಿಕಟ್ಟೆ". ಈ ವಾರದ ೯೯ ನೇ ಸಂಚಿಕೆ ವಿಶಿಷ್ಟವಾದದ್ದು. ನೂರು ಸಂಚಿಕೆಗಳ ಮೈಲಿಗಲ್ಲನ್ನು ಸಂಭ್ರಮಿಸಲು ನಾವು ಇದುವರೆಗೆ ಪ್ರಕಟವಾದ ಸಂಚಿಕೆಗಳಲ್ಲಿ ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯನ್ನು ಕುರಿತು ವಿವಿಧ ಹಿನ್ನೆಲೆಯ ಅತಿಥಿಗಳೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ತುಣುಕುಗಳನ್ನು ಪೋಣಿಸಿದ್ದೇವೆ. ನೂರನೆಯ ಸಂಚಿಕೆಯಲ್ಲಿ ಬಹು ವಿಶಿಷ್ಟವಾದ ಅತಿಥಿಯೊಬ್ಬರು ನಮಗೆ ಜೊತೆಯಾಗಲಿದ್ದಾರೆ. 00:00 - Intro 02:53 - From episode 92 with Chidananda rajaghatta 18:35 - Sponsored Ad: Kempu Kannada stories 20:07 - From episode 48 with Vinay Kumar 29:47 - From episode 49 with Vinay Kumar 38:40 - From episode 93 with Rajiv Raghunandan 48:24 - From episode 76 with Vasudhendhra 51:59 - From episode 80 with Mahesh Bhat 56:45 - From episode 26 with Vasant Shetty Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep98: ಪರಮಾಣು ಶಕ್ತಿ ಲೋಕದಲ್ಲೊಂದು ಸುತ್ತು (ಭಾಗ ೨) - The world of nuclear energy (Part 2)

    Play Episode Listen Later Mar 17, 2022 45:22


    ತಮಗೆ ತಿಳಿಯದ ತಂತ್ರಜ್ಞಾನ, ವಿಜ್ಞಾನದ ಕುರಿತು ಎಲ್ಲರಿಗೂ ಆತಂಕ ಸಹಜ.ಅಣು ವಿಜ್ಞಾನ ಎಂದರೆ ಬಹುತೇಕರಿಗೆ ಕಣ್ಣ ಮುಂದೆ ಬರುವುದು ಅಣು ಬಾಂಬ್, ಇಲ್ಲವೇ ಉಕ್ರೇನಿನ ಚರ್ನೋಬಿಲ್ ಸ್ಥಾವರದ ಅವಘಡ. ಈ ಚಿತ್ರಿಕೆಗಳನ್ನು ಮೀರಿದ ವಾಸ್ತವ ಅಣು ವಿಜ್ಞಾನಕ್ಕಿದೆ. ಮುರಿದ ಮೂಳೆಯ ಎಕ್ಸ್ ರೇ ಮುದ್ರಿಕೆ, ಕ್ಯಾನ್ಸರ್ ಚಿಕಿತ್ಸೆ, ಬೀಜ ಸಂಸ್ಕರಣೆ, ವೈದ್ಯಕೀಯ ಉಪಕರಣಗಳ ಸೋಂಕು ತೆಗೆಯುವಿಕೆ, ಕೈಗಾರಿಕೆಗಳಲ್ಲಿ ದ್ರಾವಣಗಳ ಕಲೆಸುವಿಕೆಯನ್ನು ಅಳೆಯುವುದು, ಲೋಹದಲ್ಲಿನ ಸೂಕ್ಷ್ಮ ಸೀಳುಗಳನ್ನು, ವೆಲ್ಡಿಂಗ್ ಗುಣಮಟ್ಟವನ್ನು ಅಳೆಯುವುದು ಹೀಗೆ ಅಸಂಖ್ಯಾತ ಬಳಕೆಗಳನ್ನು ಅಣು ವಿಜ್ಞಾನ ಹೊಂದಿದೆ. ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವಲ್ಲಿಯೂ ಪರಮಾಣು ಶಕ್ತಿಯ ಪಾತ್ರ ಬಗ್ಗೆ ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಮಹತ್ವದ್ದಾಗಿದೆ. ಒಂದು ಕಡೆ ಫ್ರಾನ್ಸ್ ತನ್ನ ಶೇ. ೭೦ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಉತ್ಪಾದಿಸಿದರೆ ಪಕ್ಕದ ಜರ್ಮನಿ ತನ್ನೆಲ್ಲ ಅಣು ಸ್ಥಾವರಗಳನ್ನು ಮುಚ್ಚುವ ತಯಾರಿಯಲ್ಲಿದೆ. ರಷ್ಯಾದ ತೈಲ, ಅನಿಲದ ಮೇಲಿನ ಅವಲಂಬನೆ ಕೈಕಚ್ಚಿರುವಾಗ ತಮ್ಮ ನಿರ್ಧಾರವನ್ನು ಪುನರ್ವಿಮರ್ಶೆಗೆ ಒಡ್ಡಿದ್ದಾರೆ. ಭಾರತದಲ್ಲಿ ಕೇವಲ ಶೇ ೩ ರಷ್ಟು ವಿದ್ಯುಚ್ಛಕ್ತಿ ಅಣು ಸ್ಥಾವರಗಳಿಂದ ಲಭ್ಯವಾಗುತ್ತಿದೆ. ಅಣು ವಿಜ್ಞಾನದ ಕುರಿತ ಇವೆಲ್ಲ ಮಗ್ಗುಲುಗಳ ಚರ್ಚೆಯನ್ನು ಅರಳಿಕಟ್ಟೆ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ವಿಜ್ಞಾನಿ ಡಾ ಎಂ ಎಸ್ ಶ್ರೀನಿವಾಸ ಮೂರ್ತಿಯವರೊಂದಿಗೆ ನಡೆಸಿದೆ. ಚರ್ಚೆಯು ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 20 February 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep97: ಪರಮಾಣು ಶಕ್ತಿ ಲೋಕದಲ್ಲೊಂದು ಸುತ್ತು - The world of nuclear energy

    Play Episode Listen Later Mar 11, 2022 50:53


    ತಮಗೆ ತಿಳಿಯದ ತಂತ್ರಜ್ಞಾನ, ವಿಜ್ಞಾನದ ಕುರಿತು ಎಲ್ಲರಿಗೂ ಆತಂಕ ಸಹಜ.ಅಣು ವಿಜ್ಞಾನ ಎಂದರೆ ಬಹುತೇಕರಿಗೆ ಕಣ್ಣ ಮುಂದೆ ಬರುವುದು ಅಣು ಬಾಂಬ್, ಇಲ್ಲವೇ ಉಕ್ರೇನಿನ ಚರ್ನೋಬಿಲ್ ಸ್ಥಾವರದ ಅವಘಡ. ಈ ಚಿತ್ರಿಕೆಗಳನ್ನು ಮೀರಿದ ವಾಸ್ತವ ಅಣು ವಿಜ್ಞಾನಕ್ಕಿದೆ. ಮುರಿದ ಮೂಳೆಯ ಎಕ್ಸ್ ರೇ ಮುದ್ರಿಕೆ, ಕ್ಯಾನ್ಸರ್ ಚಿಕಿತ್ಸೆ, ಬೀಜ ಸಂಸ್ಕರಣೆ, ವೈದ್ಯಕೀಯ ಉಪಕರಣಗಳ ಸೋಂಕು ತೆಗೆಯುವಿಕೆ, ಕೈಗಾರಿಕೆಗಳಲ್ಲಿ ದ್ರಾವಣಗಳ ಕಲೆಸುವಿಕೆಯನ್ನು ಅಳೆಯುವುದು, ಲೋಹದಲ್ಲಿನ ಸೂಕ್ಷ್ಮ ಸೀಳುಗಳನ್ನು, ವೆಲ್ಡಿಂಗ್ ಗುಣಮಟ್ಟವನ್ನು ಅಳೆಯುವುದು ಹೀಗೆ ಅಸಂಖ್ಯಾತ ಬಳಕೆಗಳನ್ನು ಅಣು ವಿಜ್ಞಾನ ಹೊಂದಿದೆ. ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವಲ್ಲಿಯೂ ಪರಮಾಣು ಶಕ್ತಿಯ ಪಾತ್ರ ಬಗ್ಗೆ ಜಾಗತಿಕ ತಾಪಮಾನ ಏರಿಕೆಯ ಸಂದರ್ಭದಲ್ಲಿ ಮಹತ್ವದ್ದಾಗಿದೆ. ಒಂದು ಕಡೆ ಫ್ರಾನ್ಸ್ ತನ್ನ ಶೇ. ೭೦ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಉತ್ಪಾದಿಸಿದರೆ ಪಕ್ಕದ ಜರ್ಮನಿ ತನ್ನೆಲ್ಲ ಅಣು ಸ್ಥಾವರಗಳನ್ನು ಮುಚ್ಚುವ ತಯಾರಿಯಲ್ಲಿದೆ. ರಷ್ಯಾದ ತೈಲ, ಅನಿಲದ ಮೇಲಿನ ಅವಲಂಬನೆ ಕೈಕಚ್ಚಿರುವಾಗ ತಮ್ಮ ನಿರ್ಧಾರವನ್ನು ಪುನರ್ವಿಮರ್ಶೆಗೆ ಒಡ್ಡಿದ್ದಾರೆ. ಭಾರತದಲ್ಲಿ ಕೇವಲ ಶೇ ೩ ರಷ್ಟು ವಿದ್ಯುಚ್ಛಕ್ತಿ ಅಣು ಸ್ಥಾವರಗಳಿಂದ ಲಭ್ಯವಾಗುತ್ತಿದೆ. ಅಣು ವಿಜ್ಞಾನದ ಕುರಿತ ಇವೆಲ್ಲ ಮಗ್ಗುಲುಗಳ ಚರ್ಚೆಯನ್ನು ಅರಳಿಕಟ್ಟೆ ಬಾಬಾ ಅಣುವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ವಿಜ್ಞಾನಿ ಡಾ ಎಂ ಎಸ್ ಶ್ರೀನಿವಾಸ ಮೂರ್ತಿಯವರೊಂದಿಗೆ ನಡೆಸಿದೆ. ಚರ್ಚೆಯು ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಮೊದಲನೆಯ ಭಾಗ ತೊಂಭತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 20 February 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep96: ಕನ್ನಡ ರಂಗಭೂಮಿ ನಡೆದು ಬಂದ ದಾರಿ (ಭಾಗ ೨) - Evolution of Kannada theatre (Part 2)

    Play Episode Listen Later Feb 28, 2022 52:33


    ಭರತ ಮುನಿಯ ನಾಟ್ಯಶಾಸ್ತ್ರದಿಂದ ಹಿಡಿದು, ಇಂದಿನ ಆಧುನಿಕ ರಂಗಭೂಮಿಯವರೆಗೆ ನಾಟಕ ರಂಗ ನಡೆದು ಬಂದ ದಾರಿ ನೇರವಾದುದಲ್ಲ. ಲಿಖಿತ ಇತಿಹಾಸದ ದಾಖಲೆಗಳ ಕೊರತೆಯಿಂದಾಗಿ ನಾವು ರಂಗಭೂಮಿಯ ಉಗಮವನ್ನು ತಿಳಿಯುವುದು ಕಷ್ಟ. ಕರ್ನಾಟಕದಲ್ಲಿ ಜನಿಸಿದ ಯಕ್ಷಗಾನ ದೊಡ್ಡಾಟ, ಸಣ್ಣಾಟಗಳು ಮುಂಬಯಿಯ ಫಾರ್ಸಿ ರಂಗಭೂಮಿಯನ್ನು ಪ್ರಭಾವಿಸಿದ್ದು, ತದನಂತರ ಇಲ್ಲಿನ ಕಂಪೆನಿ ನಾಟಕಗಳು ಫಾರ್ಸಿ ನಾಟಕಗಳ ಪ್ರಭಾವಕ್ಕೆ ಒಳಗಾಗಿದ್ದು, ಆಧುನಿಕ ರಂಗಭೂಮಿ ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದಿದ್ದು ಹೀಗೆ ಅನೇಕ ಒಳಸುಳಿಗಳಿರುವ ಚರ್ಚೆಗೆ ಜೊತೆಯಾದವರು ಧಾರವಾಡದ ಗೊಂಬೆಮನೆ (ಗೊಂಬೆಯಾಟ ಮತ್ತು ರಂಗ ತರಬೇತಿ ಕೇಂದ್ರ)ಯ ಸ್ಥಾಪಕಿ ರಜನಿ ಗರುಡ. ಈ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತಾರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 30 January 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep95: ಕನ್ನಡ ರಂಗಭೂಮಿ ನಡೆದು ಬಂದ ದಾರಿ - Evolution of Kannada theatre

    Play Episode Listen Later Feb 17, 2022 43:37


    ಭರತ ಮುನಿಯ ನಾಟ್ಯಶಾಸ್ತ್ರದಿಂದ ಹಿಡಿದು, ಇಂದಿನ ಆಧುನಿಕ ರಂಗಭೂಮಿಯವರೆಗೆ ನಾಟಕ ರಂಗ ನಡೆದು ಬಂದ ದಾರಿ ನೇರವಾದುದಲ್ಲ. ಲಿಖಿತ ಇತಿಹಾಸದ ದಾಖಲೆಗಳ ಕೊರತೆಯಿಂದಾಗಿ ನಾವು ರಂಗಭೂಮಿಯ ಉಗಮವನ್ನು ತಿಳಿಯುವುದು ಕಷ್ಟ. ಕರ್ನಾಟಕದಲ್ಲಿ ಜನಿಸಿದ ಯಕ್ಷಗಾನ ದೊಡ್ಡಾಟ, ಸಣ್ಣಾಟಗಳು ಮುಂಬಯಿಯ ಫಾರ್ಸಿ ರಂಗಭೂಮಿಯನ್ನು ಪ್ರಭಾವಿಸಿದ್ದು, ತದನಂತರ ಇಲ್ಲಿನ ಕಂಪೆನಿ ನಾಟಕಗಳು ಫಾರ್ಸಿ ನಾಟಕಗಳ ಪ್ರಭಾವಕ್ಕೆ ಒಳಗಾಗಿದ್ದು, ಆಧುನಿಕ ರಂಗಭೂಮಿ ಪಾಶ್ಚಾತ್ಯ ಪ್ರಭಾವದಲ್ಲಿ ಬೆಳೆದಿದ್ದು ಹೀಗೆ ಅನೇಕ ಒಳಸುಳಿಗಳಿರುವ ಚರ್ಚೆಗೆ ಜೊತೆಯಾದವರು ಧಾರವಾಡದ ಗೊಂಬೆಮನೆ (ಗೊಂಬೆಯಾಟ ಮತ್ತು ರಂಗ ತರಬೇತಿ ಕೇಂದ್ರ)ಯ ಸ್ಥಾಪಕಿ ರಜನಿ ಗರುಡ. ಈ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು ಮೊದಲನೆಯ ಭಾಗ ತೊಂಭತ್ತೈದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 30 January 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep94: ಸ್ಟಾರ್ಟಪ್ ಹಾಗೂ ವೆಂಚರ್ ಕ್ಯಾಪಿಟಲ್ ಜಗತ್ತಿನಲ್ಲೊಂದು ಸುತ್ತು 2/2 - A tour into startups and venture capital world 2/2

    Play Episode Listen Later Feb 7, 2022 45:35


    ಜನವರಿ ೧೬ನ್ನು ರಾಷ್ಟ್ರೀಯ ಸ್ಟಾರ್ಟಪ್ ಗಳ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಹೊಸ ಭಾರತಕ್ಕೆ ಈ ಸ್ಟಾರ್ಟಪ್ಗಳು ಬೆನ್ನೆಲುಬಾಗಲಿ ಎಂದು ಆಶಿಸಿದರು. ಐದು ವರ್ಷಗಳಲ್ಲಿ ಸುಮಾರು ಐನೂರರಿಂದ ಅರವತ್ತು ಸಾವಿರದಷ್ಟು ಸ್ಟಾರ್ಟಪ್ ಗಳು ಭಾರತದಲ್ಲಿ ಹುಟ್ಟಿವೆ. ಅಮೇರಿಕಾ, ಚೀನಾ ನಂತರ ಅತಿ ಹೆಚ್ಚು ಯೂನಿಕಾರ್ನ್ - ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯವುಳ್ಳ ಕಂಪೆನಿಗಳು - ಗಳಿಗೆ ಭಾರತ ಮನೆಯಾಗಿದೆ. ಈ ಸಂದರ್ಭದಲ್ಲಿ ಎಲ್ಲೆಲ್ಲೂ ಸ್ಟಾರ್ಟಪ್ ಕಲ್ಚರ್, ಬಂಡವಾಳ ಹೂಡಿಕೆ, ಸೀಡ್ ಇನ್ವೆಸ್ಟರ್, ವೆಂಚರ್ ಕ್ಯಾಪಿಟಲ್ (ವೀಸಿ) ಹೀಗೆ ಹಲವು ಪಾರಿಭಾಷಿಕ ಪದಗಳನ್ನು ಹರಿದಾಡುವುದನ್ನು ಕೇಳಿರುತ್ತೀರಿ. ಜತೆಗೆ ನಾವು ಅನಾದಿಕಾಲದಿಂದಲೂ ಕಾಣುತ್ತ ಬಂದಿರುವ ಸಣ್ಣ ಉದ್ದಿಮೆಗಳು, ಬೀದಿ ಬದಿಯ ಕಿರಾಣಿ ಅಂಗಡಿ, ಮಲಯಾಳಿ ಬೇಕರಿ, ಬೈಕ್ ಗ್ಯಾರೇಜು ಇವೆಲ್ಲ ಸ್ಟಾರ್ಟಪ್ ಹೌದೇ ಅಲ್ಲವೇ ಎನ್ನುವಂತಹ ಸಂದೇಹಗಳೂ ಇರುತ್ತವೆ. ಇವೆಲ್ಲ ಪ್ರಶ್ನೆಗಳಿಗೆ ಅರಳಿಕಟ್ಟೆಯ ಈ ಚರ್ಚೆಯಲ್ಲಿ ಉತ್ತರಿಸಲು ರಾಜೀವ್ ರಘುನಂದನ್ ನಮ್ಮೊಂದಿಗಿದ್ದಾರೆ. ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದಿರುವ ರಾಜೀವ್ ಅರಳಿ ವೆಂಚರ್ಸ್ ಎಂಬ ಸಂಸ್ಥೆಯ ಮೂಲಕ ಸ್ಟಾರ್ಟಪ್ ಗಳಲ್ಲಿ ಬಂಡವಾಳ ಹೂಡುತ್ತಾರೆ. ಕನ್ನಡದಲ್ಲಿ ಹೆಸರಿಸಿದ ಏಕೈಕ ವಿಸಿ ವೆಂಚರ್ ಎಂಬ ಖ್ಯಾತಿ ಅರಳಿ ವೆಂಚರ್ಸ್ ನದ್ದು. ರಾಜೀವ್ ಜತೆಗಿನ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ನಾಲ್ಕನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 08 January 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep93: ಸ್ಟಾರ್ಟಪ್ ಹಾಗೂ ವೆಂಚರ್ ಕ್ಯಾಪಿಟಲ್ ಜಗತ್ತಿನಲ್ಲೊಂದು ಸುತ್ತು - A tour into startups and venture capital world

    Play Episode Listen Later Jan 28, 2022 64:27


    ಜನವರಿ ೧೬ನ್ನು ರಾಷ್ಟ್ರೀಯ ಸ್ಟಾರ್ಟಪ್ ಗಳ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಹೊಸ ಭಾರತಕ್ಕೆ ಈ ಸ್ಟಾರ್ಟಪ್ಗಳು ಬೆನ್ನೆಲುಬಾಗಲಿ ಎಂದು ಆಶಿಸಿದರು. ಐದು ವರ್ಷಗಳಲ್ಲಿ ಸುಮಾರು ಐನೂರರಿಂದ ಅರವತ್ತು ಸಾವಿರದಷ್ಟು ಸ್ಟಾರ್ಟಪ್ ಗಳು ಭಾರತದಲ್ಲಿ ಹುಟ್ಟಿವೆ. ಅಮೇರಿಕಾ, ಚೀನಾ ನಂತರ ಅತಿ ಹೆಚ್ಚು ಯೂನಿಕಾರ್ನ್ - ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯವುಳ್ಳ ಕಂಪೆನಿಗಳು - ಗಳಿಗೆ ಭಾರತ ಮನೆಯಾಗಿದೆ. ಈ ಸಂದರ್ಭದಲ್ಲಿ ಎಲ್ಲೆಲ್ಲೂ ಸ್ಟಾರ್ಟಪ್ ಕಲ್ಚರ್, ಬಂಡವಾಳ ಹೂಡಿಕೆ, ಸೀಡ್ ಇನ್ವೆಸ್ಟರ್, ವೆಂಚರ್ ಕ್ಯಾಪಿಟಲ್ (ವೀಸಿ) ಹೀಗೆ ಹಲವು ಪಾರಿಭಾಷಿಕ ಪದಗಳನ್ನು ಹರಿದಾಡುವುದನ್ನು ಕೇಳಿರುತ್ತೀರಿ. ಜತೆಗೆ ನಾವು ಅನಾದಿಕಾಲದಿಂದಲೂ ಕಾಣುತ್ತ ಬಂದಿರುವ ಸಣ್ಣ ಉದ್ದಿಮೆಗಳು, ಬೀದಿ ಬದಿಯ ಕಿರಾಣಿ ಅಂಗಡಿ, ಮಲಯಾಳಿ ಬೇಕರಿ, ಬೈಕ್ ಗ್ಯಾರೇಜು ಇವೆಲ್ಲ ಸ್ಟಾರ್ಟಪ್ ಹೌದೇ ಅಲ್ಲವೇ ಎನ್ನುವಂತಹ ಸಂದೇಹಗಳೂ ಇರುತ್ತವೆ. ಇವೆಲ್ಲ ಪ್ರಶ್ನೆಗಳಿಗೆ ಅರಳಿಕಟ್ಟೆಯ ಈ ಚರ್ಚೆಯಲ್ಲಿ ಉತ್ತರಿಸಲು ರಾಜೀವ್ ರಘುನಂದನ್ ನಮ್ಮೊಂದಿಗಿದ್ದಾರೆ. ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದಿರುವ ರಾಜೀವ್ ಅರಳಿ ವೆಂಚರ್ಸ್ ಎಂಬ ಸಂಸ್ಥೆಯ ಮೂಲಕ ಸ್ಟಾರ್ಟಪ್ ಗಳಲ್ಲಿ ಬಂಡವಾಳ ಹೂಡುತ್ತಾರೆ. ರಾಜೀವ್ ಜತೆಗಿನ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ತೊಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. 00:00 - Intro 01:02 - Education and background 01:23 - Ad: Ipaaka Foods 17:28 - Lack of initiatives among Kannadigas 24:23 - Entrepreneurship and startup culture 27:08 - What qualifies as a VC fundable startup 30:21 - Examples for businesses that VC are interested 39:31 - Developing idea in to business 44:24 - Raising money from banks is a no go 48:19 - Big companies vs startups 53:29 - Role of technology in startups 59:41 - Startup culture as a function of environment Show Notes - Israel - A startup nation episode part1: https://www.youtube.com/watch?v=NEkmjYnj0Fc Part2: https://www.youtube.com/watch?v=33Bc3mrpsIA Recording date: 08 January 2022 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep92: ಹಳೇ ಬೆಂಗಳೂರು, ದೇವಮಾನವರು ಹಾಗೂ ಗೌರಿ ಲಂಕೇಶ್ ನೆನಪು (ಭಾಗ ೨) - Old Bangalore, God-men & Gauri Lankesh (2/2)

    Play Episode Listen Later Jan 16, 2022 84:05


    ಅರಳಿಕಟ್ಟೆಯ ತೊಂಭತ್ತೆರಡನೆಯ ಸಂಚಿಕೆಯಲ್ಲಿ ಜೊತೆಯಾಗಿರುವವರು ಚಿದಾನಂದ ರಾಜಘಟ್ಟ. ಪತ್ರಕರ್ತರಾಗಿ ಕೆಲಸಮಾಡುತ್ತಿರುವ ಚಿದು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಐಟಿ ಕ್ರಾಂತಿಯನ್ನು ಅಭ್ಯಸಿಸುವ "The Horse That Flew", ತಮ್ಮ ವಿಚ್ಛೇದಿತ ಪತ್ನಿ ಗೌರಿ ಲಂಕೇಶ್ ಹತ್ಯೆಯ ನಂತರ ಬರೆದ "Illeberal India", ತಮಿಳು ನಾಡು ಮೂಲದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತ "Kamala Harris: Phenomenal Woman" ಸೇರಿದಂತೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೆ ಕ್ರಿಕೆಟ್, ವಿದೇಶಾಂಗ ನೀತಿ , ದೇವಮಾನವರು ಹೀಗೆ ಹಲವಾರು ಆಸಕ್ತಿಯ ವಿಚಾರಗಳ ಕುರಿತು ಬರೆಯುತ್ತಾ ಬಂದಿದ್ದಾರೆ. ಅರಳಿಕಟ್ಟೆಯ ಲೋಕಾಭಿರಾಮದ ಚರ್ಚೆಯಲ್ಲಿ ಚಿದು ತಮ್ಮ ಬಾಲ್ಯ, ಓದು, ಎಚ್ ನರಸಿಂಹಯ್ಯ ಹಾಗೂ ವಿಚಾರವಾದದ ಪ್ರಭಾವದ ಕುರಿತು ತೆರೆದು ಕೊಂಡಿದ್ದಾರೆ. ಪರಮಹಂಸ ಯೋಗಾನಂದ, ಸತ್ಯ ಸಾಯಿ ಬಾಬ, ಜಗ್ಗಿ ವಾಸುದೇವ್, ಮಾತಾ ಅಮೃತಾನಂದ ಮಯಿ ಮೊದಲಾದ ದೇವ ಮಾನವರ ಲೋಕದ ಅವಲೋಕನ, ಭಾರತ ಸಾಫ್ಟವೇರ್ ರಫ್ತು ಮಾಡುವುದಕ್ಕೆ ಶುರು ಮಾಡುವ ಮೊದಲೇ ಜಗತ್ತಿಗೆ ಆಧ್ಯಾತ್ಮವನ್ನು ರಫ್ತು ಮಾಡಲು ಈ ದೇವಮಾನವರ "ಗ್ಲೋಬಲ್ ಅಪ್ರೋಚ್" ಎಷ್ಟರಮಟ್ಟಿಗೆ ಕಾರಣ? ಅಮೇರಿಕಾದ ಕಂಪೆನಿಗಳನ್ನು ನಿರ್ವಹಿಸಲು ಭಾರತೀಯ ಮೂಲ ಸಿಇಓಗಳು ನೇಮಿಸಲ್ಪಟ್ಟಾಗ ಭಾರತೀಯರು ಹಾಗೂ ಇಲ್ಲಿನ ಮಾಧ್ಯಮಗಳು ಸಂಭ್ರಮಿಸುತ್ತವೆ, ಆದರೆ ಅದರ ಜೊತೆಗೇ ಅಮೇರಿಕಾದಲ್ಲಿ ಅಸಹಾಯಕ ವೃದ್ಧರನ್ನು ಪೀಡಿಸಿ ದುಡ್ಡು ಕದಿಯುವ ಜಾಲದ ಮೂಲವೂ ಕೂಡ ಭಾರತವೇ ಆಗಿರುವುದನ್ನು ಭಾರತೀಯರು ಏಕೆ ಎಚ್ಚರದಿಂದ ಕಾಣುತ್ತಿಲ್ಲ? - ಹೀಗೆ ಹಲವು ಕುತೂಹಲ ಪ್ರಶ್ನೆಗಳನ್ನು ಬಳಸಿ ಹರಿಯುವ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ. Recording date: 18 December 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep91: ಹಳೇ ಬೆಂಗಳೂರು, ದೇವಮಾನವರು ಹಾಗೂ ಗೌರಿ ಲಂಕೇಶ್ ನೆನಪು - Old Bangalore, God-men & remembering Gauri Lankesh

    Play Episode Listen Later Jan 9, 2022 64:32


    ಅರಳಿಕಟ್ಟೆಯ ತೊಂಭತ್ತೊಂದನೆಯ ಸಂಚಿಕೆಯಲ್ಲಿ ಜೊತೆಯಾಗಿರುವವರು ಚಿದಾನಂದ ರಾಜಘಟ್ಟ. ಪತ್ರಕರ್ತರಾಗಿ ಕೆಲಸಮಾಡುತ್ತಿರುವ ಚಿದು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಐಟಿ ಕ್ರಾಂತಿಯನ್ನು ಅಭ್ಯಸಿಸುವ "The Horse That Flew", ತಮ್ಮ ವಿಚ್ಛೇದಿತ ಪತ್ನಿ ಗೌರಿ ಲಂಕೇಶ್ ಹತ್ಯೆಯ ನಂತರ ಬರೆದ "Illeberal India", ತಮಿಳು ನಾಡು ಮೂಲದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕುರಿತ "Kamala Harris: Phenomenal Woman" ಸೇರಿದಂತೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೆ ಕ್ರಿಕೆಟ್, ವಿದೇಶಾಂಗ ನೀತಿ , ದೇವಮಾನವರು ಹೀಗೆ ಹಲವಾರು ಆಸಕ್ತಿಯ ವಿಚಾರಗಳ ಕುರಿತು ಬರೆಯುತ್ತಾ ಬಂದಿದ್ದಾರೆ. ಅರಳಿಕಟ್ಟೆಯ ಲೋಕಾಭಿರಾಮದ ಚರ್ಚೆಯ ಮೊದಲ ಭಾಗದಲ್ಲಿ ಚಿದು ತಮ್ಮ ಬಾಲ್ಯ, ಓದು, ಎಚ್ ನರಸಿಂಹಯ್ಯ ಹಾಗೂ ವಿಚಾರವಾದದ ಪ್ರಭಾವದ ಕುರಿತು ತೆರೆದು ಕೊಂಡಿದ್ದಾರೆ. ಪರಮಹಂಸ ಯೋಗಾನಂದ, ಸತ್ಯ ಸಾಯಿ ಬಾಬ, ಜಗ್ಗಿ ವಾಸುದೇವ್, ಮಾತಾ ಅಮೃತಾನಂದ ಮಯಿ ಮೊದಲಾದ ದೇವ ಮಾನವರ ಲೋಕದ ಅವಲೋಕನ, ಭಾರತ ಸಾಫ್ಟವೇರ್ ರಫ್ತು ಮಾಡುವುದಕ್ಕೆ ಶುರು ಮಾಡುವ ಮೊದಲೇ ಜಗತ್ತಿಗೆ ಆಧ್ಯಾತ್ಮವನ್ನು ರಫ್ತು ಮಾಡಲು ಈ ದೇವಮಾನವರ "ಗ್ಲೋಬಲ್ ಅಪ್ರೋಚ್" ಎಷ್ಟರಮಟ್ಟಿಗೆ ಕಾರಣ? ಅಮೇರಿಕಾದ ಕಂಪೆನಿಗಳನ್ನು ನಿರ್ವಹಿಸಲು ಭಾರತೀಯ ಮೂಲ ಸಿಇಓಗಳು ನೇಮಿಸಲ್ಪಟ್ಟಾಗ ಭಾರತೀಯರು ಹಾಗೂ ಇಲ್ಲಿನ ಮಾಧ್ಯಮಗಳು ಸಂಭ್ರಮಿಸುತ್ತವೆ, ಆದರೆ ಅದರ ಜೊತೆಗೇ ಅಮೇರಿಕಾದಲ್ಲಿ ಅಸಹಾಯಕ ವೃದ್ಧರನ್ನು ಪೀಡಿಸಿ ದುಡ್ಡು ಕದಿಯುವ ಜಾಲದ ಮೂಲವೂ ಕೂಡ ಭಾರತವೇ ಆಗಿರುವುದನ್ನು ಭಾರತೀಯರು ಏಕೆ ಎಚ್ಚರದಿಂದ ಕಾಣುತ್ತಿಲ್ಲ? - ಹೀಗೆ ಹಲವು ಕುತೂಹಲ ಪ್ರಶ್ನೆಗಳನ್ನು ಬಳಸಿ ಹರಿಯುವ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. Recording date: 18 December 2021 Credits: Music: Crescents by Ketsa Licensed under creative commons. Icon made by Freepik from www.flaticon.com https://youtu.be/vessSrMIDfA --- Send in a voice message: https://anchor.fm/aralikatte/message

    Ep90: ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ಸಮೂಹ ಸನ್ನಿ (ಭಾಗ ೨), Mass hysteria in the age of social media (Part 2)

    Play Episode Listen Later Dec 30, 2021 67:13


    ಮೆಂಟಲ್ ಮಾಡೆಲ್ ಗಳು, ನಮ್ಮ ಆಲೋಚನಾ ಕ್ರಮಗಳಲ್ಲಿರುವ ದೋಷಗಳು- ಇವೇ ಮೊದಲಾದ ವಿಷಯಗಳನ್ನು ಕುರಿತು ಅರಳಿಕಟ್ಟೆ ಪ್ರಕಟಿಸಿದ ಪಾಡ್ ಕಾಸ್ಟ್ ಗಳು ಜನಪ್ರಿಯವಾಗಿವೆ. ಇದೇ ಪ್ರಯತ್ನವನ್ನು ಮುಂದುವರೆಸಿ ನಾವು ನಮ್ಮ ಸುತ್ತಮುತ್ತಲಿನ ಇತ್ತೀಚಿನ ಕೆಲವು ರಾಜಕೀಯ, ಸಾಂಸ್ಕೃತಿಕ ಪ್ರಕರಣಗಳನ್ನು ಪ್ರಸ್ತಾಪಿಸಿ ನಮ್ಮ ಆಲೋಚನಾ ಕ್ರಮಗಳಲ್ಲಿನ ದೋಷವನ್ನು ತಮ್ಮ ಅನುಕೂಲಕ್ಕೆ ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದೇವೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ನಂದಿತಾ ಪ್ರಕರಣ, ಡಿಕೆ ರವಿ ಆತ್ಮಹತ್ಯೆ, ನಟ ಸುಶಾಂತ್ ಸಿಂಗ್ ಆತ್ಮಹತ್ಯೆ, ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್, ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ - ಇವೆಲ್ಲ ಹೇಗೆ ಸಮೂಹ ಸನ್ನಿಯನ್ನು ಸೃಷ್ಠಿಸುತ್ತವೆ? ಕಾರ್ಯ ಕಾರಣ ಸಂಬಂಧವಿಲ್ಲದ ಸುದ್ದಿಯನ್ನು ಅರ್ಥ ಮಾಡಿಕೊಳ್ಳಲು, ಅದನ್ನು ಅರಗಿಸಿಕೊಳ್ಳಲು ಜನ ಸಮೂಹ ನೆಚ್ಚುವ coping mechanisms ಎಂಥವು? ಇವುಗಳನ್ನು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು, ಈ ಎಲ್ಲವನ್ನೂ ಉದ್ರೇಕಿಸಲು ಅನುಕೂಲ ಮಾಡಿಕೊಡುವ ಸಾಮಾಜಿಕ ಜಾಲತಾಣಗಳು - ಇವೆಲ್ಲವುಗಳನ್ನು ಒಳಗೊಂಡ ಗಹನವಾದ ಚರ್ಚೆಗೆ ನಮ್ಮನ್ನು ಸೇರಿದವರು ದಿ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತರಾಗಿರುವ ಆದಿತ್ಯ ಭಾರದ್ವಜ್ ಹಾಗೂ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಸುಶ್ಮ ಜೈನ್. ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು, ಎರಡನೆಯ ಹಾಗೂ ಅಂತಿಮ ಭಾಗ ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 12 December 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep89: ಸಾಮಾಜಿಕ ಜಾಲತಾಣಗಳ ಸಂದರ್ಭದಲ್ಲಿ ಸಮೂಹ ಸನ್ನಿ, Mass hysteria in the age of social media

    Play Episode Listen Later Dec 22, 2021 65:35


    ಮೆಂಟಲ್ ಮಾಡೆಲ್ ಗಳು, ನಮ್ಮ ಆಲೋಚನಾ ಕ್ರಮಗಳಲ್ಲಿರುವ ದೋಷಗಳು- ಇವೇ ಮೊದಲಾದ ವಿಷಯಗಳನ್ನು ಕುರಿತು ಅರಳಿಕಟ್ಟೆ ಪ್ರಕಟಿಸಿದ ಪಾಡ್ ಕಾಸ್ಟ್ ಗಳು ಜನಪ್ರಿಯವಾಗಿವೆ. ಇದೇ ಪ್ರಯತ್ನವನ್ನು ಮುಂದುವರೆಸಿ ನಾವು ನಮ್ಮ ಸುತ್ತಮುತ್ತಲಿನ ಇತ್ತೀಚಿನ ಕೆಲವು ರಾಜಕೀಯ, ಸಾಂಸ್ಕೃತಿಕ ಪ್ರಕರಣಗಳನ್ನು ಪ್ರಸ್ತಾಪಿಸಿ ನಮ್ಮ ಆಲೋಚನಾ ಕ್ರಮಗಳಲ್ಲಿನ ದೋಷವನ್ನು ತಮ್ಮ ಅನುಕೂಲಕ್ಕೆ ದುರ್ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದೇವೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ನಂದಿತಾ ಪ್ರಕರಣ, ಡಿಕೆ ರವಿ ಆತ್ಮಹತ್ಯೆ, ನಟ ಸುಶಾಂತ್ ಸಿಂಗ್ ಆತ್ಮಹತ್ಯೆ, ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್, ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ - ಇವೆಲ್ಲ ಹೇಗೆ ಸಮೂಹ ಸನ್ನಿಯನ್ನು ಸೃಷ್ಠಿಸುತ್ತವೆ? ಕಾರ್ಯ ಕಾರಣ ಸಂಬಂಧವಿಲ್ಲದ ಸುದ್ದಿಯನ್ನು ಅರ್ಥ ಮಾಡಿಕೊಳ್ಳಲು, ಅದನ್ನು ಅರಗಿಸಿಕೊಳ್ಳಲು ಜನ ಸಮೂಹ ನೆಚ್ಚುವ coping mechanisms ಎಂಥವು? ಇವುಗಳನ್ನು ತಮ್ಮ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳುವ ಪಟ್ಟಭದ್ರ ಹಿತಾಸಕ್ತಿಗಳು, ಈ ಎಲ್ಲವನ್ನೂ ಉದ್ರೇಕಿಸಲು ಅನುಕೂಲ ಮಾಡಿಕೊಡುವ ಸಾಮಾಜಿಕ ಜಾಲತಾಣಗಳು - ಇವೆಲ್ಲವುಗಳನ್ನು ಒಳಗೊಂಡ ಗಹನವಾದ ಚರ್ಚೆಗೆ ನಮ್ಮನ್ನು ಸೇರಿದವರು ದಿ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತರಾಗಿರುವ ಆದಿತ್ಯ ಭಾರದ್ವಜ್ ಹಾಗೂ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿರುವ ಸುಶ್ಮ ಜೈನ್. ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದ್ದು, ಮೊದಲನೆಯ ಭಾಗ ಎಂಭತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 12 December 2021 Credits: Music: Crescents by Ketsa Licensed under creative commons. Icon made by Freepik from www.flaticon.com **Show notes** - The art of conjuring alternate realities - Shivam Shankar Singh - https://www.amazon.in/Art-Conjuring-Alternate-Realities-Information/dp/9354227406 - Soujanya Case : https://www.deccanherald.com/content/596297/soujanya-case-court-slams-cbi.html --- Send in a voice message: https://anchor.fm/aralikatte/message

    Ep88: ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು (2)- Feasibility and challenges of technical education in Kannada (2)

    Play Episode Listen Later Dec 14, 2021 49:41


    ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಅಧ್ಯಕ್ಷರಾದ ಮಹೇಶ್ ಜೋಶಿಯವರು ಸಾಹಿತ್ಯ ಪರಿಷತ್ ಕನ್ನಡದಲ್ಲಿ ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗುವ ಪಠ್ಯಗಳನ್ನು ಸಿದ್ಧ ಪಡಿಸುವುದರಲ್ಲಿ ತೊಡಗುತ್ತದೆ ಎಂದು ಹೇಳಿದ್ದಾರೆ. ಕನ್ನಡದಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳೇನು? ಕನ್ನಡದಲ್ಲಿಯೇ ಎಲ್ಲಾ ಶಿಕ್ಷಣ ದೊರೆಯಬೇಕು ಎನ್ನುವ ನಿಲುವಿಗೂ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಒಮ್ಮೆಗೇ ಇಂಗ್ಲೀಷ್ ಮಾಧ್ಯಮದ ಉನ್ನತ ಶಿಕ್ಷಣಕ್ಕೆ ಜಿಗಿಯಲು ಕೊಂಚ ಮಟ್ಟಿಗಿನ ನೆರವು ನೀಡುವ ಕೆಲಸವನ್ನಷ್ಟೇ ಕನ್ನಡದ ಪಠ್ಯ ಮಾಡಿದರೆ ಸಾಕು ಎನ್ನುವ ನಿಲುವಿಗೂ ಇರುವ ವ್ಯತ್ಯಾಸವೇನು? ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ (Signals, Systems and control) ಎನ್ನುವ ಇಂಜಿನಿಯರಿಂಗ್ ವಿಷಯಕ್ಕೆ ಕನ್ನಡದಲ್ಲಿ ಪಠ್ಯವನ್ನು ಬರೆದು ಪ್ರಕಟಿಸಿರುವ ಡಾ. ಸುದರ್ಶನ್ ಪಾಟೀಲ ಕುಲಕರ್ಣಿ ಅರಳಿಕಟ್ಟೆಯ ಈ ವಾರದ ಅತಿಥಿ. ಇವರೊಂದಿಗೆ ನಾವು ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಹಾಗೂ ಅಂತಿಮ ಭಾಗ ಎಂಭತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 14 November 2021 Credits: Music: Crescents by Ketsa Licensed under creative commons. Icon made by Freepik from www.flaticon.com **Show notes** - ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ: Signals, Systems and Control - https://play.google.com/store/books/details/Dr_Sudarshan_Patilkulkarni_%E0%B2%B8_%E0%B2%95_%E0%B2%A4_%E0%B2%B5_%E0%B2%AF%E0%B2%B5%E0%B2%B8_%E0%B2%A5_%E0%B2%AE%E0%B2%A4_%E0%B2%A4_%E0%B2%A8_%E0%B2%AF?id=wBf-DwAAQBAJ - Stop calling everything AI - Michail Jordan : https://spectrum.ieee.org/stop-calling-everything-ai-machinelearning-pioneer-says - Episode Sponsor : Chewda coffee - order from +91-8073317932 - use promo code AK10 to claim 10% discount --- Send in a voice message: https://anchor.fm/aralikatte/message

    Ep87: ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಸಾಧ್ಯತೆ ಮತ್ತು ಸವಾಲುಗಳು - Feasibility and challenges of technical education in Kannada

    Play Episode Listen Later Dec 7, 2021 46:03


    ಕನ್ನಡ ಸಾಹಿತ್ಯ ಪರಿಷತ್ತಿನ ಹೊಸ ಅಧ್ಯಕ್ಷರಾದ ಮಹೇಶ್ ಜೋಶಿಯವರು ಸಾಹಿತ್ಯ ಪರಿಷತ್ ಕನ್ನಡದಲ್ಲಿ ಕಾನೂನು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಅನುಕೂಲವಾಗುವ ಪಠ್ಯಗಳನ್ನು ಸಿದ್ಧ ಪಡಿಸುವುದರಲ್ಲಿ ತೊಡಗುತ್ತದೆ ಎಂದು ಹೇಳಿದ್ದಾರೆ. ಕನ್ನಡದಲ್ಲಿ ಉನ್ನತ ಶಿಕ್ಷಣದ ಸಾಧ್ಯತೆಗಳೇನು? ಕನ್ನಡದಲ್ಲಿಯೇ ಎಲ್ಲಾ ಶಿಕ್ಷಣ ದೊರೆಯಬೇಕು ಎನ್ನುವ ನಿಲುವಿಗೂ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಒಮ್ಮೆಗೇ ಇಂಗ್ಲೀಷ್ ಮಾಧ್ಯಮದ ಉನ್ನತ ಶಿಕ್ಷಣಕ್ಕೆ ಜಿಗಿಯಲು ಕೊಂಚ ಮಟ್ಟಿಗಿನ ನೆರವು ನೀಡುವ ಕೆಲಸವನ್ನಷ್ಟೇ ಕನ್ನಡದ ಪಠ್ಯ ಮಾಡಿದರೆ ಸಾಕು ಎನ್ನುವ ನಿಲುವಿಗೂ ಇರುವ ವ್ಯತ್ಯಾಸವೇನು? ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ (Signals, Systems and control) ಎನ್ನುವ ಇಂಜಿನಿಯರಿಂಗ್ ವಿಷಯಕ್ಕೆ ಕನ್ನಡದಲ್ಲಿ ಪಠ್ಯವನ್ನು ಬರೆದು ಪ್ರಕಟಿಸಿರುವ ಡಾ. ಸುದರ್ಶನ್ ಪಾಟೀಲ ಕುಲಕರ್ಣಿ ಅರಳಿಕಟ್ಟೆಯ ಈ ವಾರದ ಅತಿಥಿ. ಇವರೊಂದಿಗೆ ನಾವು ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಂಭತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Show notes - ಸಂಕೇತ, ವ್ಯವಸ್ಥೆ ಮತ್ತು ನಿಯಂತ್ರಣ: Signals, Systems and Control - https://play.google.com/store/books/details/Dr_Sudarshan_Patilkulkarni_%E0%B2%B8_%E0%B2%95_%E0%B2%A4_%E0%B2%B5_%E0%B2%AF%E0%B2%B5%E0%B2%B8_%E0%B2%A5_%E0%B2%AE%E0%B2%A4_%E0%B2%A4_%E0%B2%A8_%E0%B2%AF?id=wBf-DwAAQBAJ - Episode Sponsor : Chewda coffee - order from +91-8073317932 - use promo code AK10 to claim 10% discount --- Send in a voice message: https://anchor.fm/aralikatte/message

    Ep86: ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರವೇನು? (ಭಾಗ ೨) - Role of Human Resources in an organization (Part 2)

    Play Episode Listen Later Nov 26, 2021 47:29


    ಸಂಸ್ಥೆಯೊಂದರಲ್ಲಿ ಎಚ್ ಆರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿಗಳು ಮಾಡುವ ಕೆಲಸವೇನು? ಸಂಸ್ಥೆಗಳಲ್ಲಿ ಈ ಹುದ್ದೆಯ ಅಗತ್ಯ ಯಾವಾಗಿನಿಂದ ಶುರುವಾಯಿತು? ರಂಗೋಲಿ ಸ್ಪರ್ಧೆ, ಎಥ್ನಿಕ್ ಡೇ, ಪಾರ್ಟಿಗಳನ್ನು ಆಯೋಜಿಸುವುದಷ್ಟೇ ಈ ವಿಭಾಗದ ಕೆಲಸವೇ? ರಾಜ ಮಹಾರಾಜರು, ಕೈಗಾರಿಕಾ ಕ್ರಾಂತಿಯಿಂದ ಹಿಡಿದು ಈಗಿನ ಗಿಗ್ ಎಕಾನಮಿಯ ಸಮಯದಲ್ಲಿ ಎಚ್ ಆರ್ ಹುದ್ದೆಯ ಜವಾಬ್ದಾರಿಗಳು ಹೇಗೆ ವಿಸ್ತರಿಸುತ್ತಾ, ವಿಕಸಿಸುತ್ತಾ ಬಂದಿವೆ? ಕಾಲೇಜಿನಿಂದ ಹೊರ ಬರುವ ವಿದ್ಯಾರ್ಥಿಗಳು ಉದ್ದಿಮೆಗಳಲ್ಲಿ ತೊಡಗಲು ಏನು ತರಬೇತಿ ಪಡೆಯಬೇಕು? ಎಚ್ ಆರ್ ಗಮನ ಸೆಳೆಯುವಂತಹ ರೆಸ್ಯೂಮೆ ಹೇಗೆ ರೆಡಿ ಮಾಡಬೇಕು? ಇವೇ ಮೊದಲಾದ ಉಪಯುಕ್ತ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ಕೃಪಾ ಎನ್ ಎಸ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಕೃಪಾ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಎಚ್ ಆರ್ ವಿಭಾಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಚರ್ಚೆಯ ಎರಡನೆಯ ಭಾಗ ಎಂಭತ್ತಾರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 30 October 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep85: ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಪಾತ್ರವೇನು? - Role of Human Resources in an organization

    Play Episode Listen Later Nov 17, 2021 45:22


    ಸಂಸ್ಥೆಯೊಂದರಲ್ಲಿ ಎಚ್ ಆರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿಗಳು ಮಾಡುವ ಕೆಲಸವೇನು? ಸಂಸ್ಥೆಗಳಲ್ಲಿ ಈ ಹುದ್ದೆಯ ಅಗತ್ಯ ಯಾವಾಗಿನಿಂದ ಶುರುವಾಯಿತು? ರಂಗೋಲಿ ಸ್ಪರ್ಧೆ, ಎಥ್ನಿಕ್ ಡೇ, ಪಾರ್ಟಿಗಳನ್ನು ಆಯೋಜಿಸುವುದಷ್ಟೇ ಈ ವಿಭಾಗದ ಕೆಲಸವೇ? ರಾಜ ಮಹಾರಾಜರು, ಕೈಗಾರಿಕಾ ಕ್ರಾಂತಿಯಿಂದ ಹಿಡಿದು ಈಗಿನ ಗಿಗ್ ಎಕಾನಮಿಯ ಸಮಯದಲ್ಲಿ ಎಚ್ ಆರ್ ಹುದ್ದೆಯ ಜವಾಬ್ದಾರಿಗಳು ಹೇಗೆ ವಿಸ್ತರಿಸುತ್ತಾ, ವಿಕಸಿಸುತ್ತಾ ಬಂದಿವೆ? ಕಾಲೇಜಿನಿಂದ ಹೊರ ಬರುವ ವಿದ್ಯಾರ್ಥಿಗಳು ಉದ್ದಿಮೆಗಳಲ್ಲಿ ತೊಡಗಲು ಏನು ತರಬೇತಿ ಪಡೆಯಬೇಕು? ಎಚ್ ಆರ್ ಗಮನ ಸೆಳೆಯುವಂತಹ ರೆಸ್ಯೂಮೆ ಹೇಗೆ ರೆಡಿ ಮಾಡಬೇಕು? ಇವೇ ಮೊದಲಾದ ಉಪಯುಕ್ತ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ಕೃಪಾ ಎನ್ ಎಸ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಕೃಪಾ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಎಚ್ ಆರ್ ವಿಭಾಗದಲ್ಲಿ ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಚರ್ಚೆಯ ಮೊದಲ ಭಾಗ ಎಂಭತ್ತೈದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 30 October 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep84: ಇಮೇಜ್ ಕನ್ಸಲ್ಟೆಂಟ್ ಜೊತೆಗೊಂದು ಮಾತುಕತೆ (ಭಾಗ ೨)- A conversation with an image consultant (Part 2)

    Play Episode Listen Later Nov 12, 2021 30:23


    ಕೆಲಸಕ್ಕೆಂದು ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು, ಬಾಳ ಸಂಗಾತಿಯನ್ನು ಅರಸಿ ಡೇಟಿಂಗಿಗೆ ಹೋಗುವ ಯುವಕ ಯುವತಿಯರು, ದೂರದ ದೇಶಕ್ಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಟಿವಿ ಸಂದರ್ಶನದಲ್ಲಿ ಭಾಗವಹಿಸಲು ಹೊರಡುವ ಅತಿಥಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಹೀಗೆ ಹಲವರಿಗೆ ತಾವು ಮತ್ತೊಬ್ಬರ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎನ್ನುವ ಬಯಕೆ ಇರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಯಾವ ರೀತಿಯ ವೇಷಭೂಷಣ ತೊಡಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ತರಬೇತಿಯನ್ನು ನೀಡುವ ವೃತ್ತಿಪರರನ್ನು ಇಮೇಜ್ ಕನ್ಸಲ್ಟೆಂಟ್ಸ್ ಎಂದು ಕರೆಯುತ್ತಾರೆ. ಈ ಬಗೆಯ ಇಮೇಜ್ ಕನ್ಸಲ್ಟಿಂಗ್ ಮಾಡುವ ಕನ್ನಡತಿ ವಿದ್ಯಾ ನಾಗ್ ರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಹಾಗೂ ಅಂತಿಮ ಭಾಗ ಎಂಭತ್ನಾಲ್ಕನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 23 October 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep83: ಇಮೇಜ್ ಕನ್ಸಲ್ಟೆಂಟ್ ಜೊತೆಗೊಂದು ಮಾತುಕತೆ - A conversation with an image consultant

    Play Episode Listen Later Nov 7, 2021 55:17


    ಕೆಲಸಕ್ಕೆಂದು ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು, ಬಾಳ ಸಂಗಾತಿಯನ್ನು ಅರಸಿ ಡೇಟಿಂಗಿಗೆ ಹೋಗುವ ಯುವಕ ಯುವತಿಯರು, ದೂರದ ದೇಶಕ್ಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಟಿವಿ ಸಂದರ್ಶನದಲ್ಲಿ ಭಾಗವಹಿಸಲು ಹೊರಡುವ ಅತಿಥಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಹೀಗೆ ಹಲವರಿಗೆ ತಾವು ಮತ್ತೊಬ್ಬರ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎನ್ನುವ ಬಯಕೆ ಇರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಯಾವ ರೀತಿಯ ವೇಷಭೂಷಣ ತೊಡಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ತರಬೇತಿಯನ್ನು ನೀಡುವ ವೃತ್ತಿಪರರನ್ನು ಇಮೇಜ್ ಕನ್ಸಲ್ಟೆಂಟ್ಸ್ ಎಂದು ಕರೆಯುತ್ತಾರೆ. ಈ ಬಗೆಯ ಇಮೇಜ್ ಕನ್ಸಲ್ಟಿಂಗ್ ಮಾಡುವ ಕನ್ನಡತಿ ವಿದ್ಯಾ ನಾಗ್ ರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 23 October 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep82: ಕಸ ವಿಲೇವಾರಿ ಮಾಡುವವರ ಬಗ್ಗೆ ನಿಮಗೆಷ್ಟು ಗೊತ್ತು? (ಭಾಗ ೨) - What do you know about waste pickers? (Part 2)

    Play Episode Listen Later Nov 2, 2021 38:59


    ಹಸಿ ಕಸ, ಒಣ ಕಸ ಎಂದು ಮನೆಯ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರ ಕೈಗೆ ಕೊಟ್ಟ ನಂತರ ಏನಾಗುತ್ತದೆ? ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಹೊರತು ಪಡಿಸಿ ಕಸ ಆಯುವ ಸಾವಿರಾರು ಕೆಲಸಗಾರರ ಬಗ್ಗೆ ನಿಮಗೆಷ್ಟು ಗೊತ್ತು? ನಾವು ಎಸೆಯುವ ಪ್ಲಾಸ್ಟಿಕ್ ಕಸದಲ್ಲಿ ಶೇಕಡಾ ೪೦ರಷ್ಟು ಕಸ ಪುನರ್ಬಳಕೆಗೆ ಅನರ್ಹವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಎಪ್ಪತ್ತಕ್ಕಿಂತ ಹೆಚ್ಚು ಬಗೆಯ ಪ್ಲಾಸ್ಟಿಕ್ ಕಸದಲ್ಲಿ ಚಿಪ್ಸ್ ಪ್ಯಾಕೆಟ್ ನ ಪ್ಲಾಸ್ಟಿಕ್ ಅತ್ಯಂತ ಮಾರಕವಾದದ್ದು ಏಕೆ? ಬೆಂಗಳೂರಿನ ಕಸ ವಿಲೇವಾರಿಯ ಬಜೆಟ್ ಒಂದು ಸಾವಿರ ಕೋಟಿ ರುಪಾಯಿ ಎಂಬುದು ನಿಮಗೆ ಗೊತ್ತೆ? ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸ್ಯಾಶೆ ಬಳಕೆ ಅತ್ಯಂತ ಉಪಯುಕ್ತವಾದದ್ದು ಆದರೆ ಅದರಿಂದ ಉತ್ಪನ್ನವಾಗುವ ತ್ಯಾಜ್ಯ ನಿರ್ವಹಣೆ ಕಷ್ಟ ಏಕೆ? ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ ಈ ವಾರದ ಅತಿಥಿ ನಳಿನಿ ಶೇಖರ್. ನನ್ನನ್ನು ಮೇಡಂ ಎಂದು ಕರೆದರೆ ಐದು ರುಪಾಯಿ ದಂಡ ತೆರಬೇಕು ಎಂದು ತಾಕೀತು ಮಾಡಿ ಮಾತು ಶುರುಮಾಡಿದ ನಳಿನಿ ಹಸಿರು ದಳ ಎಂಬ ಸಂಸ್ಥೆಯ ಮೂಲಕ ಕಸ ಆಯುವ ಕೆಲಸಗಾರರನ್ನು ಸಂಘಟಿಸುವಲ್ಲಿ ಕೆಲಸಮಾಡುತ್ತಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ. ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ. Recording date: 19 September 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes - Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase. --- Send in a voice message: https://anchor.fm/aralikatte/message

    Ep81: ಕಸ ವಿಲೇವಾರಿ ಮಾಡುವವರ ಬಗ್ಗೆ ನಿಮಗೆಷ್ಟು ಗೊತ್ತು? - What do you know about waste pickers?

    Play Episode Listen Later Nov 1, 2021 53:04


    ಹಸಿ ಕಸ, ಒಣ ಕಸ ಎಂದು ಮನೆಯ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರ ಕೈಗೆ ಕೊಟ್ಟ ನಂತರ ಏನಾಗುತ್ತದೆ? ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಹೊರತು ಪಡಿಸಿ ಕಸ ಆಯುವ ಸಾವಿರಾರು ಕೆಲಸಗಾರರ ಬಗ್ಗೆ ನಿಮಗೆಷ್ಟು ಗೊತ್ತು? ನಾವು ಎಸೆಯುವ ಪ್ಲಾಸ್ಟಿಕ್ ಕಸದಲ್ಲಿ ಶೇಕಡಾ ೪೦ರಷ್ಟು ಕಸ ಪುನರ್ಬಳಕೆಗೆ ಅನರ್ಹವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಎಪ್ಪತ್ತಕ್ಕಿಂತ ಹೆಚ್ಚು ಬಗೆಯ ಪ್ಲಾಸ್ಟಿಕ್ ಕಸದಲ್ಲಿ ಚಿಪ್ಸ್ ಪ್ಯಾಕೆಟ್ ನ ಪ್ಲಾಸ್ಟಿಕ್ ಅತ್ಯಂತ ಮಾರಕವಾದದ್ದು ಏಕೆ? ಬೆಂಗಳೂರಿನ ಕಸ ವಿಲೇವಾರಿಯ ಬಜೆಟ್ ಒಂದು ಸಾವಿರ ಕೋಟಿ ರುಪಾಯಿ ಎಂಬುದು ನಿಮಗೆ ಗೊತ್ತೆ? ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸ್ಯಾಶೆ ಬಳಕೆ ಅತ್ಯಂತ ಉಪಯುಕ್ತವಾದದ್ದು ಆದರೆ ಅದರಿಂದ ಉತ್ಪನ್ನವಾಗುವ ತ್ಯಾಜ್ಯ ನಿರ್ವಹಣೆ ಕಷ್ಟ ಏಕೆ? ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ ಈ ವಾರದ ಅತಿಥಿ ನಳಿನಿ ಶೇಖರ್. ನನ್ನನ್ನು ಮೇಡಂ ಎಂದು ಕರೆದರೆ ಐದು ರುಪಾಯಿ ದಂಡ ತೆರಬೇಕು ಎಂದು ತಾಕೀತು ಮಾಡಿ ಮಾತು ಶುರುಮಾಡಿದ ನಳಿನಿ ಹಸಿರು ದಳ ಎಂಬ ಸಂಸ್ಥೆಯ ಮೂಲಕ ಕಸ ಆಯುವ ಕೆಲಸಗಾರರನ್ನು ಸಂಘಟಿಸುವಲ್ಲಿ ಕೆಲಸಮಾಡುತ್ತಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ. Recording date: 19 September 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes - Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase. --- Send in a voice message: https://anchor.fm/aralikatte/message

    Ep80: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು (ಭಾಗ ೨) - Bengaluru in photographer's eye in the mind (Part 2)

    Play Episode Listen Later Oct 14, 2021 51:14


    ಕೋಡಿಯಾಲ್ ಬೈಲಿನಲ್ಲಿ ಬೀದಿ ಗುಡಿಸುವ ವೃದ್ಧೆ ಲಕ್ಷ್ಮಿ ಅಕ್ಕ, ಬೆಂಗಳೂರಿನ ಜೆ ಪಿ ನಗರದ ಅಪಾರ್ಟ್ಮೆಂಟೊಂದರಿಂದ ಕಸ ವಿಲೇವಾರಿ ಮಾಡುತ್ತಿದ್ದ ಮಲ್ಲಯ್ಯರಂತಹ ಜನಸಾಮಾನ್ಯರ ಭಿತ್ತಿಚಿತ್ರಗಳನ್ನು ಮಹೇಶ್ ಭಟ್ ತೆಗೆದಿದ್ದಾರೆ. ಜೊತೆಗೆ ಖ್ಯಾತನಾಮರಾದ ರಾಮಕೃಷ್ಣ ಹೆಗಡೆ, ಮೈಕೆಲ್ ಜಾಕ್ಸನ್, ಶಂಕರ್ ಹಾಗೂ ಅರುಂಧತಿ ನಾಗ್ ರ ಭಿತ್ತಿಚಿತ್ರಗಳನ್ನೂ ತೆಗೆದಿದ್ದಾರೆ. ಈ ಹರವು ತೆರೆದಿಟ್ಟ ಅನುಭವಗಳು ಎಂಥವು? ಕ್ಷಣಭಂಗುರ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮುಳುಗಿರುವಾಗ ಫೋಟೊಗ್ರಫಿ ಆಧರಿಸಿ ಪುಸ್ತಗಳನ್ನು ಪ್ರಕಟಿಸುವ ಹುಮ್ಮಸ್ಸಿನ ಹಿಂದಿರುವ ನಂಬಿಕೆ ಯಾವುದು? ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ... Recording date: 15 August 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes - Malliah - https://www.facebook.com/photo?fbid=10158040946501171&set=a.10158027842836171 - Project UNSUNG - https://www.unsung.in/ - I am 20 film - https://www.youtube.com/watch?v=fA8h74ZW8Ok - Wishes for a new world - https://www.maheshbhat.com/wishes-for-a-new-world-1/ - Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase. --- Send in a voice message: https://anchor.fm/aralikatte/message

    Ep79: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು - Bengaluru in photographer's eye in the mind

    Play Episode Listen Later Oct 7, 2021 64:23


    ಇವತ್ತು ಪ್ರತಿಯೊಬ್ಬರ ಕಿಸೆಯಲ್ಲಿ ವೃತ್ತಿಪರ ಫೋಟೊಗಳನ್ನು ತೆಗೆಯುವ ಸಾಮರ್ಥ್ಯವಿರುವ ಸ್ಮಾರ್ಟ್ ಫೋನುಗಳಿವೆ ಆದರೆ ಜೀವಂತಿಕೆಯಿರುವ ಫೋಟೊ ತೆಗೆಯುವುದಕ್ಕೆ ಬೇಕಿರುವುದು ಮನಸ್ಸಿನ ಕಣ್ಣು. ಎಂಬತ್ತರ ದಶಕದಲ್ಲಿ ನಿಯಮಿತ ರೀಲುಗಳನ್ನು ಬಳಸಿ ಫೋಟೊ ತೆಗೆಯಲು ಶುರುಮಾಡಿದ ಮಹೇಶ್ ಭಟ್ ಈ ಶಿಸ್ತನ್ನು ಅಳವಡಿಸಿಕೊಂಡದ್ದು ಹೇಗೆ? ಶ್ರೀಲಂಕೆಯ ಯುದ್ಧ ಭೂಮಿಯಲ್ಲಿ ಎಲ್.ಟಿ.ಟಿ.ಇ ಆತ್ಮಹತ್ಯಾ ಬಾಂಬರ್ ಮಹಿಳೆಯನ್ನು ಸಂದರ್ಶಿಸಿದ ಅನುಭವ ಎಂಥದ್ದು? ಯುದ್ಧದಲ್ಲಿ ಮುಳುಗಿರುವವರು, ಅದರಿಂದ ಸಂತ್ರಸ್ತರಾದವರು ಬೇರೊಬ್ಬರ ಕನಸಿನಲ್ಲಿ ಸಿಕ್ಕಿಕೊಂಡವರು ಎನ್ನುವ ಮಹೇಶ್ ಭಟ್ ರಿಗೆ ಅಲ್ಲಿಂದ ಹಿಂತಿರುಗಿದ ಮೇಲೆ ಮತ್ತೆ ಯುದ್ಧ ಭೂಮಿಗೆ ಹೋಗಬೇಕು ಎನ್ನುವ ತವಕ ಏಕೆ ಉಂಟಾಯಿತು? ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ... Recording date: 15 August 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes - Muliya Timmappaiah - https://shastriyakannada.org/DataBase/KannwordHTMLS/CLASSICAL%20KANNADA%20SCHOLARS%20HTML/MULIYA%20TIMMAPPAIAH%20HTML.htm - Ansel Adams' classic book trilogy - https://blog.depositphotos.com/ansel-adams-classic-book-trilogy.html - Chandralekha - https://www.asianage.com/life/more-features/150119/archive-of-a-dancer-who-created-modern-dance-on-its-own-indian-terms.html - Bangalore scenes from an Indian city - https://www.maheshbhat.com/shop/bangalore-scenes-from-an-indian-city/ - Barrage across river Krishna - https://www.maheshbhat.com/they-built-a-barrage-across-river-krishna/ - LTTE female suicide bombers - https://www.maheshbhat.com/speaking-of-conflicts/ - Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase. --- Send in a voice message: https://anchor.fm/aralikatte/message

    Ep78: ನಮ್ಮ ಡೈರಿ ನಂದಿನಿ ಡೈರಿ (ಭಾಗ ೨) - What do you know about Nandini dairy? (Part 2)

    Play Episode Listen Later Oct 2, 2021 57:44


    ಬೆಳಿಗ್ಗೆ ಎದ್ದೊಡನೆಯ ಮನೆಯ ಹೊಸ್ತಿಲೆದುರು ತಣ್ಣಗೆ ಮಲಗಿರುವ ನಂದಿನಿ ಹಾಲಿನ ಪಾಕೆಟ್ ನ ಹಿಂದಿರುವ ದೊಡ್ಡ ಸಹಕಾರಿ ಉದ್ದಿಮೆಯ ಬಗ್ಗೆ ನಿಮಗೆಷ್ಟು ಗೊತ್ತು? ಗುಜರಾತಿನ ಆನಂದ್ ನಲ್ಲಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಶುರುವಾದ ಅಮುಲ್ ಭಾರತದ ಪ್ರಪ್ರಥಮ ಸಹಕಾರಿ ಡೈರಿ. ಇದರಲ್ಲಿ ಹಾಲು ಕರೆಯುವ ರೈತ ಮಹಿಳೆ, ಪುರುಷರೇ ಪಾಲುದಾರರು. ಇಂಥದ್ದೇ ಮಾದರಿಯಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಸಹಕಾರಿ ಡೈರಿಗಳು ಶುರುವಾದರೂ ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಂದಿನಿ ಹಾಲನ್ನು ಉತ್ಪಾದಿಸುವ ಕೆ ಎಂ ಎಫ್ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಪ್ರೇಮ್ ನಾಥ್ . ಏ.ಎಸ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ. Recording date: 22 August 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep77: ನಮ್ಮ ಡೈರಿ ನಂದಿನಿ ಡೈರಿ - What do you know about Nandini dairy?

    Play Episode Listen Later Sep 26, 2021 67:19


    ಬೆಳಿಗ್ಗೆ ಎದ್ದೊಡನೆಯ ಮನೆಯ ಹೊಸ್ತಿಲೆದುರು ತಣ್ಣಗೆ ಮಲಗಿರುವ ನಂದಿನಿ ಹಾಲಿನ ಪಾಕೆಟ್ ನ ಹಿಂದಿರುವ ದೊಡ್ಡ ಸಹಕಾರಿ ಉದ್ದಿಮೆಯ ಬಗ್ಗೆ ನಿಮಗೆಷ್ಟು ಗೊತ್ತು? ಗುಜರಾತಿನ ಆನಂದ್ ನಲ್ಲಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಶುರುವಾದ ಅಮುಲ್ ಭಾರತದ ಪ್ರಪ್ರಥಮ ಸಹಕಾರಿ ಡೈರಿ. ಇದರಲ್ಲಿ ಹಾಲು ಕರೆಯುವ ರೈತ ಮಹಿಳೆ, ಪುರುಷರೇ ಪಾಲುದಾರರು. ಇಂಥದ್ದೇ ಮಾದರಿಯಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಸಹಕಾರಿ ಡೈರಿಗಳು ಶುರುವಾದರೂ ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಂದಿನಿ ಹಾಲನ್ನು ಉತ್ಪಾದಿಸುವ ಕೆ ಎಂ ಎಫ್ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಪ್ರೇಮ್ ನಾಥ್ . ಏ.ಎಸ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗ ನಿಮ್ಮ ಮುಂದಿದೆ. Recording date: 22 August 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep76: ಕಥೆಗಾರ ಪ್ರಕಾಶಕ ವಸುಧೇಂದ್ರರ ಜತೆ ಸ್ವಚ್ಛಂದ ಮಾತುಕತೆ (೨) - A refreshing conversation with Vasudhendra (2)

    Play Episode Listen Later Sep 18, 2021 63:40


    ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ. ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಎರಡನೆಯ ಭಾಗದಲ್ಲಿ ನಾವು ಕನ್ನಡದಲ್ಲಿ ಸಾಹಿತ್ಯೇತರ ಪುಸ್ತಕಗಳ ಪ್ರಕಟಣೆ ಏಕೆ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿಲ್ಲ, ವಸುಧೇಂದ್ರ ತಮ್ಮ ಇತ್ತೀಚಿನ ಪುಸ್ತಕ "ತೇಜೋ ತುಂಗಭದ್ರ"ವನ್ನು ಕುಮಾರವ್ಯಾಸ, ಕನಕದಾಸ, ಪುರಂದರದಾಸರ ಜತೆಗೆ ಇಂಟರ್ನೆಟ್ ಗೆ ಅರ್ಪಿಸಿರುವುದಕ್ಕೆ ಕಾರಣವೇನು? ವರ್ಷವೊಂದಕ್ಕೆ ಐದು-ಆರು ಪುಸ್ತಕಗಳನ್ನಷ್ಟೇ ತಮ್ಮ ಛಂದ ಪ್ರಕಾಶನ ಪ್ರಕಟಿಸುತ್ತದೆ ಎಂಬ ಸ್ವಯಂ ನಿರ್ಬಂಧ ಹಾಕಿಕೊಳ್ಳಲು ಏನು ಕಾರಣ ಹೀಗೆ ಹಲವಾರು ವಿಷಯಗಳನ್ನು ಚರ್ಚಿಸಿದ್ದೇವೆ. Recording date: 28 August 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes Youtube link: https://youtu.be/s_yVCm6HjLk 1. ಕಾವೇರಿ ತೀರದ ಪಯಣ - https://www.navakarnatakaonline.com/kaveri-teerada-payana 2. ಭಾಸ್ಕರ್ ಆನಂದ ಸಾಲೆತೊರೆ - https://en.wikipedia.org/wiki/B._A._Saletore 3. Social and political life in the Vijayanagar empire - https://indianculture.gov.in/social-and-political-life-vijayanagara-empire-ad1346-ad1646-vol-1 4. Archive dot org - https://archive.org/ 4. The Elephant Whisperer - https://www.amazon.in/Elephant-Whisperer-Learning-Remarkable-Elephants/dp/1509838538/ref=sr_1_1 5. The hidden life of Trees: What they feel, how they communicate - https://www.amazon.in/Hidden-Life-Trees-Communicate-Discoveries/dp/0670089346/ref=sr_1_2 6. Chinmay Tambe's The age of pandemics - https://www.amazon.in/Age-Pandemics-1817-1920-shaped-India/dp/9353579457/ref=sr_1_1 7. Robert Sewell - A forgotten empire - https://www.amazon.in/Forgotten-Empire-Vijayanagar-Hampi/dp/8184682905 8. Chanda Pustaka - https://chandapustaka.com/ --- Send in a voice message: https://anchor.fm/aralikatte/message

    Ep75: ಕಥೆಗಾರ ಪ್ರಕಾಶಕ ವಸುಧೇಂದ್ರರ ಜತೆ ಸ್ವಚ್ಛಂದ ಮಾತುಕತೆ - A refreshing conversation with Vasudhendra

    Play Episode Listen Later Sep 9, 2021 53:15


    ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ. ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. Recording date: 28 August 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep74: ಸಸ್ಯ ವಿಜ್ಞಾನಿಯೊಂದಿಗೆ ತಳಿಗಳ ಕುರಿತೊಂದು ಮಾತುಕತೆ (ಭಾಗ ೨) - A conversation with genomics specialist (Part 2)

    Play Episode Listen Later Sep 1, 2021 39:31


    ಮೊಬೈಲ್ ಕೊಳ್ಳಲು ಗ್ರಾಹಕರಾದ ನಮಗೆ ಅನೇಕ ಆಯ್ಕೆಗಳಿವೆ. ದೇಶಭಕ್ತರು ಸ್ವದೇಶಿ ಕಂಪೆನಿಗಳ ಮೊಬೈಲ್ ಖರೀದಿಸಬಹುದು, ಪ್ರೈವೆಸಿ ಮುಖ್ಯವಾದವರು ಐಫೋನ್ ಕೊಳ್ಳಬಹುದು, ಕಡಿಮೆ ಬೆಲೆಯಲ್ಲಿ ಉತ್ತಮವಾದ ಫೋನ್ ಬೇಕಾದವರು ಆಂಡ್ರಾಯ್ಡ್ ಫೋನ್ ಕೊಳ್ಳಬಹುದು, ಬರೀ ಕರೆಗಳಿಗಾಗಿ ಫೋನ್ ಬಳಸುವವರು ಫೀಚರ್ ಫೋನ್ ಕೊಳ್ಳಬಹುದು. ಇದೇ ಆಯ್ಕೆಯನ್ನು ರೈತರು ತಮ್ಮ ಬೀಜಗಳನ್ನು ಕೊಳ್ಳಲು ಏಕೆ ನಿರಾಕರಿಸಬೇಕು? ಸಾವಯವ ಕೃಷಿಯ ಇಳುವರಿಯಿಂದ ಇಡೀ ದೇಶದ ಹಸಿವು ನೀಗಿಸಲು ಸಾಧ್ಯವಾಗುತ್ತದೆ ಎಂದಾದರೆ ಆಧುನಿಕ ಕೃಷಿ ಪದ್ಧತಿ ಜಾರಿಗೆ ತರುವ ಮುನ್ನ ದೇಶದಲ್ಲಿ ಅಪೌಷ್ಟಿಕತೆ, ಹಸಿವು ಏಕೆ ಸರ್ವವ್ಯಾಪಿಯಾಗಿತ್ತು? ಏರುತ್ತಿರುವ ಜನಸಂಖ್ಯೆ ಹಾಗೂ ಇಳಿಯುತ್ತಿರುವ ಕೃಷಿ ಭೂಮಿಯ ಗಾತ್ರಗಳಿಂದ ಸಾವಯವ ಕೃಷಿ ಎಷ್ಟರ ಮಟ್ಟಿಗೆ ಪ್ರಾಯೋಗಿಕ? ಮಾವು, ಸೀತಾಫಲ, ಸೇಬು, ಕಿತ್ತಳೆ, ಟೊಮೆಟೋ ಇವೆಲ್ಲ ದಿನೇದಿನೇ ಗಾತ್ರದಲ್ಲಿ ಹಿಗ್ಗುತ್ತಿದ್ದರೆ ಕುಂಬಳ ಕಾಯಿ, ಕಲ್ಲಂಗಡಿಗಳು ಗಾತ್ರದಲ್ಲಿ ಕುಗ್ಗುತ್ತಿರುವುದರ ಹಿಂದಿರುವ ಮರ್ಮವೇನು? ಹೊಸ ತಂತ್ರಜ್ಞಾನ, ವಿಜ್ಞಾನದ ಹೊಸ ಬೆಳವಣಿಗೆಗಳ ಬಗ್ಗೆ ಜನ ಸಾಮಾನ್ಯರಿಗೆ ಇರುವ ಅಪನಂಬಿಕೆ ಹಾಗೂ ಭಯವನ್ನು ನಿವಾರಿಸುವಲ್ಲಿ ಮಾಧ್ಯಮ, ವಿಜ್ಞಾನಿ ಹಾಗೂ ತಜ್ಞರ ಜವಾಬ್ದಾರಿ ಏನು? ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್ ಕೆ.ವಿಯವರೊಂದಿಗೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಎಪ್ಪತ್ನಾಲ್ಕನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. Recording date: 08 August 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep73: ಸಸ್ಯ ವಿಜ್ಞಾನಿಯೊಂದಿಗೆ ತಳಿಗಳ ಕುರಿತೊಂದು ಮಾತುಕತೆ - A conversation with genomics specialist

    Play Episode Listen Later Aug 26, 2021 44:36


    ಅಲೆಮಾರಿ ಮನುಷ್ಯ ಒಂದೆಡೆ ನೆಲೆನಿಂತು ತನ್ನ ಸುತ್ತಮುತ್ತಲ ಪರಿಸರವನ್ನು ಪಳಗಿಸಿ ತನಗೆ ಬೇಕಾದ ಆಹಾರ ಬೆಳೆಯಲು ಶುರುಮಾಡಿದಾಗಲೇ ವಿಜ್ಞಾನಿಯಾದ. ವೈವಿಧ್ಯಮಯವಾದ ಸಸ್ಯಗಳಲ್ಲಿ ತನಗೆ ಅಗತ್ಯವಾದ ಗುಣಗಳುಳ್ಳ ಸಸ್ಯಗಳನ್ನು ತಳಿ ಮಾಡುವ ವಿದ್ಯೆಯನ್ನು ಸಾವಿರಾರು ವರ್ಷಗಳ ಕಾಲ ಬೆಳೆಸಿಕೊಂಡು ಬಂದ. ಈ ವಿದ್ಯೆಯ ಹಿಂದಿರುವ ತತ್ವವನ್ನು ಅರಿಯುವುದಕ್ಕೆ ನಾವು ಹದಿನೆಂಟನೆಯ ಶತಮಾನದವರೆಗೂ ಕಾಯಬೇಕಾಯ್ತು. ತಳಿ, ಕುಲಾಂತರಿ ಸಸ್ಯಗಳಿಂದ ಮನುಕುಲಕ್ಕೆ ಒದಗುವ ಅನುಕೂಲಗಳೇನು? ಕುಲಾಂತರಿ ಬೆಳೆಗಳ ವಿರುದ್ಧದ ವಾದಗಳು, ಸಾವಯವ ಕೃಷಿಯ ಪ್ರತಿಪಾದನೆ ಕೋಟ್ಯಂತರ ಜನರ ಆಹಾರ ಭದ್ರತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ? ಕೋವಿಡ್ ವೈರಾಣುವನ್ನು ಪತ್ತೆ ಹಚ್ಚುವ ಪಿಸಿಆರ್ ಪರೀಕ್ಷೆಗೂ ಉಪ್ಪಿಟ್ಟಿನಲ್ಲಿ ಹಾಕಿದ ಟೊಮೆಟೋ ರುಚಿಗೂ ಏನು ಸಂಬಂಧ? - ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್.ಕೆ.ವಿ ಯವರೊಂದಿಗೆ ಚರ್ಚಿಸಿದ್ದೇವೆ. ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಅರಳಿಕಟ್ಟೆಯಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 08 August 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep72: ಮಾನಸಿಕ ಆರೋಗ್ಯದ ಕುರಿತೊಂದು ಮುಕ್ತ ಚರ್ಚೆ (ಭಾಗ ೨) - An open discussion on mental health (Part 2)

    Play Episode Listen Later Aug 20, 2021 48:02


    ದೇಹ ಆರೋಗ್ಯ ತಪ್ಪಿದಂತೆಯೇ ಮನಸ್ಸಿನ ಆರೋಗ್ಯವೂ ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಮಾನಸಿಕ ರೋಗದ ಕುರಿತು ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳು ಇಂದಿಗೂ ಇವೆ. ಈ ಪೀಳಿಗೆಯ ಮಕ್ಕಳಲ್ಲಿ ಏಕಾಂಗಿತನ ಹೆಚ್ಚು ಕಾಡುತ್ತದೆಯೇ? ಆತ್ಮಹತ್ಯೆ ಪ್ರಯತ್ನಗಳು ಗಂಡಸರಲ್ಲೇ ಹೆಚ್ಚು ಏಕೆ? ಮಾನಸಿಕ ಆರೋಗ್ಯದ ಕುರಿತು ನೆರವು ಅರಸುವುದರಲ್ಲಿ ಪುರುಷರಿಗೆ ಇರುವ ಅಡೆತಡೆಗಳೇನು? ಸ್ಕಿಜೊಫ್ರೇನಿಯ ಅಂದರೇನು? ಸೋಶಿಯಲ್ ಮೀಡಿಯಾ ವ್ಯಸನದಿಂದ ಮಾನಸಿಕ ಸ್ವಾಸ್ಥ್ಯದ ಮೇಲೆ ಉಂಟಾಗುವ ಪರಿಣಾಮವೇನು? ಇನ್ನೂ ಹಲವು ಆಸಕ್ತಿದಾಯಕ ಹಾಗೂ ಮಾಹಿತಿ ಪೂರ್ಣ ವಿಷಯಗಳ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ! ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಚರ್ಚೆಯ ಎರಡನೆಯ ಭಾಗ ಎಪ್ಪತ್ತೆರಡನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. Recording date: 04 July 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep71: ಮಾನಸಿಕ ಆರೋಗ್ಯದ ಕುರಿತೊಂದು ಮುಕ್ತ ಚರ್ಚೆ - An open discussion on mental health

    Play Episode Listen Later Aug 11, 2021 61:24


    ಮಾನಸಿಕ ರೋಗ ಅನ್ನುವುದರ ಬಗ್ಗೆ ಎಷ್ಟೋ ತಪ್ಪು ಕಲ್ಪನೆಗಳು ಇವತ್ತಿಗೂ ಇದೆ. ಅದರ ಜೊತೆಗೆ ಅದರ ಬಗ್ಗೆ ಮುಕ್ತವಾಗಿ ಮಾತಾಡೋ ವಾತಾವರಣ ನಮ್ಮಲ್ಲಿ ಇನ್ನೂ ಸೃಷ್ಟಿಯಾಗಿ ಇಲ್ಲ. ಮಾನಸಿಕ ಒತ್ತಡ, ಆತಂಕ, ಖಿನ್ನತೆ ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಇದರ ಬಗೆಗಿನ ಒಳನೋಟಗಳು ಬಹಳ ಮುಖ್ಯವಾಗುತ್ತದೆ. ಮಾನಸಿಕ ರೋಗ ಎಲ್ಲರಿಗೂ ಬರಬಹುದಾ? ಅಥವಾ 'ದುರ್ಬಲರು' ಅನ್ನಿಸಿಕೊಂಡವರಿಗೆ ಮಾತ್ರ ಬರುವುದಾ? ಇದು 'ಬೇಡದೆ ಇರುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ' ಒಂದು ದುರಭ್ಯಾಸವಾ? ಅಥವಾ ನಮ್ಮ ನಿಯಂತ್ರಣಕ್ಕೂ ಮೀರಿದ ಜೀನ್ಸ್ ಕೈವಾಡವಿದೆಯಾ? ಇನ್ನೂ ಹತ್ತು ಹಲವಾರು ಆಯಾಮಗಳ ಬಗ್ಗೆ ಒಂದು ಮುಕ್ತ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ! ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಚರ್ಚೆಯ ಮೊದಲ ಭಾಗ ಎಪ್ಪತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. Recording date: 04 July 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep70: ಪಾರಂಪರಿಕ ಬೀಜ ವೈವಿಧ್ಯ (ಭಾಗ ೨) - Traditional seed diversity (Part 2)

    Play Episode Listen Later Aug 6, 2021 56:44


    ಫುಕುವೋಕಾ ಅನ್ನುವ ಜಪಾನಿನ ವಿಜ್ಞಾನಿ ಆರಂಭಿಸಿದ ಸಹಜ ಕೃಷಿ ಎದುರಿಸಿದ ಮೊದಲ ಸವಾಲುಗಳೇನು, ಭಾರತದಲ್ಲಿ ಬೆಳೆದುಬಂದ ಕೃಷಿ ಪ್ರಯೋಗಗಳ ಇತಿಹಾಸ, ಆಧುನಿಕ ಕೃಷಿ ಪದ್ಧತಿಗಳ ಭ್ರಮೆಯನ್ನು ಹೇಗೆ ಸಾವಯವ ಕೃಷಿ ಎದುರಿಸಿತು, ಕುಲಾಂತರಿ ತಳಿಗಳ ಅನಾಹುತಗಳು ಮತ್ತು ಅದರ ಬಗ್ಗೆ ನಡೆದ ಹೋರಾಟ, ಭಾರತದಲ್ಲಿ ಬೀಜಗಳ ಸಂಸ್ಕೃತಿ ಮತ್ತು ಬೀಜಗಳ ವೈವಿಧ್ಯ ಎಂಥದ್ದು, ಬೀಜಗಳು ಹೇಗೆ ಒಂದು ಸಮುದಾಯದ ಸ್ವತ್ತು, ಇವತ್ತು ಸಮುದಾಯ ಬೀಜ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತಿವೆ, ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳು, ಇಂದು ಕಾಣುತ್ತಿರುವ ಆಶಾಕಿರಣ, ಆರ್ಗಾನಿಕ್ ಫಾರ್ಮಿಂಗ್ ವಿಚಾರದಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಪಾತ್ರ - ಮುಂತಾದ ಎಷ್ಟೋ ವಿಚಾರಗಳ ಬಗ್ಗೆ ತಮ್ಮ ಅಮೂಲ್ಯವಾದ ಜೀವನದ ಅನುಭವಗಳನ್ನು 'ಸಹಜ ಸೀಡ್ಸ್' ಸಂಸ್ಥೆಯ ಕೃಷ್ಣ ಪ್ರಸಾದ್ ಮಾತನಾಡಿದ್ದಾರೆ. Recording date: 13 June 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep69: ಪಾರಂಪರಿಕ ಬೀಜ ವೈವಿಧ್ಯ - Traditional seed diversity

    Play Episode Listen Later Jul 30, 2021 64:42


    ಫುಕುವೋಕಾ ಅನ್ನುವ ಜಪಾನಿನ ವಿಜ್ಞಾನಿ ಆರಂಭಿಸಿದ ಸಹಜ ಕೃಷಿ ಎದುರಿಸಿದ ಮೊದಲ ಸವಾಲುಗಳೇನು, ಭಾರತದಲ್ಲಿ ಬೆಳೆದುಬಂದ ಕೃಷಿ ಪ್ರಯೋಗಗಳ ಇತಿಹಾಸ, ಆಧುನಿಕ ಕೃಷಿ ಪದ್ಧತಿಗಳ ಭ್ರಮೆಯನ್ನು ಹೇಗೆ ಸಾವಯವ ಕೃಷಿ ಎದುರಿಸಿತು, ಕುಲಾಂತರಿ ತಳಿಗಳ ಅನಾಹುತಗಳು ಮತ್ತು ಅದರ ಬಗ್ಗೆ ನಡೆದ ಹೋರಾಟ, ಭಾರತದಲ್ಲಿ ಬೀಜಗಳ ಸಂಸ್ಕೃತಿ ಮತ್ತು ಬೀಜಗಳ ವೈವಿಧ್ಯ ಎಂಥದ್ದು, ಬೀಜಗಳು ಹೇಗೆ ಒಂದು ಸಮುದಾಯದ ಸ್ವತ್ತು, ಇವತ್ತು ಸಮುದಾಯ ಬೀಜ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತಿವೆ, ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳು, ಇಂದು ಕಾಣುತ್ತಿರುವ ಆಶಾಕಿರಣ, ಆರ್ಗಾನಿಕ್ ಫಾರ್ಮಿಂಗ್ ವಿಚಾರದಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಪಾತ್ರ - ಮುಂತಾದ ಎಷ್ಟೋ ವಿಚಾರಗಳ ಬಗ್ಗೆ ತಮ್ಮ ಅಮೂಲ್ಯವಾದ ಜೀವನದ ಅನುಭವಗಳನ್ನು 'ಸಹಜ ಸೀಡ್ಸ್' ಸಂಸ್ಥೆಯ ಕೃಷ್ಣ ಪ್ರಸಾದ್ ಮಾತನಾಡಿದ್ದಾರೆ. Recording date: 13 June 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep68: ಬಿಟ್ ಕಾಯಿನ್ ಎಂಬ ನಿಗೂಢ ನಾಣ್ಯ(ಭಾಗ ೨) - Bitcoin and crypto currencies (Part 2)

    Play Episode Listen Later Jul 23, 2021 58:21


    ಬಿಟ್ ಕಾಯಿನ್ ಕಳ್ಳ ಕಾಕರು, ಹ್ಯಾಕರ್ ಗಳು, ಅಪಹರಣಕಾರರು, ಡ್ರಗ್ ಡೀಲರುಗಳ ದುಡ್ಡು ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಹೊಸ ತಂತ್ರಜ್ಞಾನವನ್ನು ಕುರಿತ ಈ ಅಪನಂಬಿಕೆ, ಭಯ ಸಹಜವಾದದ್ದೇ. ಇಂದು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲದ ಪ್ರಾರಂಭದ ದಿನಗಳಲ್ಲಿ ಇದೇ ರೀತಿಯ ಅಪನಂಬಿಕೆ ಜಾರಿಯಲ್ಲಿತ್ತು. ಬಿಟ್ ಕಾಯಿನ್ ಗೂ ಈಗಾಗಲೇ ಬಳಕೆಯಲ್ಲಿರುವ ಡಿಜಿಟಲ್ ಹಣಕ್ಕೂ ಇರುವ ವ್ಯತ್ಯಾಸಗಳೇನು? ಬಿಟ್ ಕಾಯಿನ್ ಬಳಕೆಯನ್ನು ಅನುವು ಮಾಡಿಕೊಡುವ ಬ್ಲಾಕ್ ಚೈನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಆವಿಷ್ಕರಿಸಿದ ಸತೋಷಿ ನಾಕಮೊಟೊ ಎಂಬ ಗುಪ್ತನಾಮದ ಹಿಂದಿರುವ ರಹಸ್ಯವೇನು? ಬಿಟ್ ಕಾಯಿನ್ ಕುರಿತ ಕಾದಂಬರಿ ರೂಪದ ಸೃಜನಶೀಲ ಕೃತಿ "ನಿಗೂಢ ನಾಣ್ಯ"ದ ಲೇಖಕರಾದ ವಿಟ್ಠಲ್ ಶೆಣೈ ನಮ್ಮ ಅತಿಥಿ. ಬಿಟ್ ಕಾಯಿನ್, ಬ್ಲಾಕ್ ಚೈನ್, ಕ್ರಿಪ್ಟೋ ನಾಣ್ಯಗಳ ಕುರಿತು ಅಬ್ಬರದ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಕುರಿತ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಸರಣಿಯ ಎರಡನೆಯ ಹಾಗೂ ಅಂತಿಮ ಭಾಗ ಅರವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 2 May 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Ep67: ಬಿಟ್ ಕಾಯಿನ್ ಎಂಬ ನಿಗೂಢ ನಾಣ್ಯ - Bitcoin and crypto currencies

    Play Episode Listen Later Jul 15, 2021 55:46


    ಬಿಟ್ ಕಾಯಿನ್ ಕಳ್ಳ ಕಾಕರು, ಹ್ಯಾಕರ್ ಗಳು, ಅಪಹರಣಕಾರರು, ಡ್ರಗ್ ಡೀಲರುಗಳ ದುಡ್ಡು ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಹೊಸ ತಂತ್ರಜ್ಞಾನವನ್ನು ಕುರಿತ ಈ ಅಪನಂಬಿಕೆ, ಭಯ ಸಹಜವಾದದ್ದೇ. ಇಂದು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲದ ಪ್ರಾರಂಭದ ದಿನಗಳಲ್ಲಿ ಇದೇ ರೀತಿಯ ಅಪನಂಬಿಕೆ ಜಾರಿಯಲ್ಲಿತ್ತು. ಬಿಟ್ ಕಾಯಿನ್ ಗೂ ಈಗಾಗಲೇ ಬಳಕೆಯಲ್ಲಿರುವ ಡಿಜಿಟಲ್ ಹಣಕ್ಕೂ ಇರುವ ವ್ಯತ್ಯಾಸಗಳೇನು? ಬಿಟ್ ಕಾಯಿನ್ ಬಳಕೆಯನ್ನು ಅನುವು ಮಾಡಿಕೊಡುವ ಬ್ಲಾಕ್ ಚೈನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಆವಿಷ್ಕರಿಸಿದ ಸತೋಷಿ ನಾಕಮೊಟೊ ಎಂಬ ಗುಪ್ತನಾಮದ ಹಿಂದಿರುವ ರಹಸ್ಯವೇನು? ಬಿಟ್ ಕಾಯಿನ್ ಕುರಿತ ಕಾದಂಬರಿ ರೂಪದ ಸೃಜನಶೀಲ ಕೃತಿ "ನಿಗೂಢ ನಾಣ್ಯ"ದ ಲೇಖಕರಾದ ವಿಟ್ಠಲ್ ಶೆಣೈ ನಮ್ಮ ಅತಿಥಿ. ಬಿಟ್ ಕಾಯಿನ್, ಬ್ಲಾಕ್ ಚೈನ್, ಕ್ರಿಪ್ಟೋ ನಾಣ್ಯಗಳ ಕುರಿತು ಅಬ್ಬರದ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಕುರಿತ ಚರ್ಚೆ ಎರಡು ಸಂಚಿಕೆಗಳಲ್ಲಿ ನಿಮ್ಮ ಮುಂದಿದೆ. Recording date: 2 May 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes - TV Anchors musing what is the internet, anyway: https://www.youtube.com/watch?v=UlJku_CSyNg - Bitcoin white paper: https://bitcoin.org/bitcoin.pdf --- Send in a voice message: https://anchor.fm/aralikatte/message

    Ep66: ಅನಿಮೇಶನ್ ಚಿತ್ರಗಳ ಕುರಿತು ನಿಮಗೆಷ್ಟು ಗೊತ್ತು? (ಭಾಗ ೨) - A discussion on Animation films (Part 2)

    Play Episode Listen Later Jul 8, 2021 44:11


    ಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ. ಅನಿಮೇಶನ್, ವಿಶ್ಯುಯಲ್ ಎಫೆಕ್ಟ್ಸ್ ಹಾಗೂ ಚಿತ್ರ ನಿರ್ಮಾಣದ ದಿಕ್ಕನ್ನೇ ಬದಲಿಸುವ ಪರಿಣಾಮಕಾರಿ ತಂತ್ರಜ್ಞಾನಗಳು ಬಳಕೆಯಲ್ಲಿವೆ. ನಟ ಅಥವಾ ನಟಿಯೊಬ್ಬರ ಡಿಜಿಟಲ್ ನಕಲನ್ನು ಬಳಸಿ ನೂರಾರು ವರ್ಷಗಳ ಕಾಲ ಅವರು ನಟಿಸಿದ ಚಿತ್ರಗಳನ್ನು ನಿರ್ಮಿಸಲು ಸಾಧ್ಯ. ನೃತ್ಯ ಬರದ ನಟ ನಾಟ್ಯ ಪಟುವಾಗಬಲ್ಲ, ಈಜಲು ಬಾರದ ನಟಿ ಮೀನಿನಂತೆ ಈಜಬಲ್ಲಳು, ಅಳಲು ಬಾರದ ನಟರು ಪ್ರೇಕ್ಷಕರನ್ನು ಅಳುವ ಕಡಲಲ್ಲಿ ಮುಳುಗಿಸಬಲ್ಲರು. ಇವೆಲ್ಲವನ್ನು ಸಾಧ್ಯವಾಗಿಸುವ ಫೋಟೊ ಗ್ಯಾಮಿಟ್ರಿ ತಂತ್ರಜ್ಞಾನ ನಮ್ಮ ಬೆಂಗಳೂರಿನಲ್ಲೇ ಇರುವುದು ಎಷ್ಟು ಜನರಿಗೆ ತಿಳಿದಿದೆ? ಕೋವಿಡ್ ನಂತರ ಚಿತ್ರ ನಿರ್ಮಾಣವನ್ನು ಆಮೂಲಾಗ್ರವಾಗಿ ಬದಲಿಸಬಲ್ಲ ಮತ್ತೊಂದು ತಂತ್ರಜ್ಞಾನ ವರ್ಚುಯಲ್ ಪ್ರೊಡಕ್ಷನ್. ದೈತ್ಯವಾದ ಅತ್ಯಾಧುನಿಕ ಎಲ್ ಇ ಡಿ ಗೋಡೆ, ತಾರಸಿಗಳನ್ನು ಕಟ್ಟಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಲೋಕೇಶನ್ನನ್ನು ಸ್ಟುಡಿಯೋದಲ್ಲೇ ನಿರ್ಮಿಸಲು ಸಾಧ್ಯ. ಈ ತಂತ್ರಜ್ಞಾನ ಬಳಸಿ ಡಿಸ್ನಿ ದಿ ಮ್ಯಾಂಡಲೋರಿಯನ್ ಸರಣಿಯನ್ನು ನಿರ್ಮಿಸಿದೆ. ಭಾರತದಲ್ಲೂ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಬಳಸಿದ ದೊಡ್ಡ ಬಜೆಟ್ ನ ಚಿತ್ರಗಳು ತೆರೆಕಾಣಲಿವೆ. ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ. ನಿಮ್ಮ ಮುಂದಿರುವ ಅರವತ್ತಾರನೆಯ ಸಂಚಿಕೆ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ. ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್. Recording date: 19 June 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes - Bhimsain Khurana - https://www.dsource.in/course/story-indian-animation/video/bhimsain-khurana - Ram Mohan - https://www.dsource.in/course/story-indian-animation/video/ram-mohan - Cricket flip book - https://www.youtube.com/watch?v=vBxFBgZy8OA - Infobells Govina Haadu - https://www.youtube.com/watch?v=Lix-XLkFuvE - ABAI - https://twitter.com/abai_avgc - AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece --- Send in a voice message: https://anchor.fm/aralikatte/message

    Ep65: ಅನಿಮೇಶನ್ ಚಿತ್ರಗಳ ಕುರಿತು ನಿಮಗೆಷ್ಟು ಗೊತ್ತು? - A discussion on Animation films

    Play Episode Listen Later Jun 30, 2021 63:13


    ಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ. ಜಂಗಲ್ ಬುಕ್, ಲಯನ್ ಕಿಂಗ್, ಲೈಫ್ ಆಫ್ ಪೈ, ಶೇಪ್ ಆಫ್ ವಾಟರ್, ೧೯೧೭ ಈ ಎಲ್ಲಾ ಚಿತ್ರಗಳಿಗೆ ಇರುವ ಸಾಮ್ಯತೆಯೇನು? ಈ ಚಿತ್ರಗಳಲ್ಲಿ ಬಳಕೆಯಾಗಿರುವ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಅನಿಮೇಶನ್ ಕೆಲಸ ನಡೆದಿದ್ದು ಕರ್ನಾಟಕದಲ್ಲಿ. ದೇಶದಲ್ಲೇ ಮೊಟ್ಟ ಮೊದಲ ಅನಿಮೇಶನ್ ಹಾಗೂ ಗ್ರಾಫಿಕ್ಸ್ ಕುರಿತ ಯೋಜನೆ ಜಾರಿಗೆ ಬಂದದ್ದು ಕರ್ನಾಟಕದಲ್ಲಿ. ಐಟಿ ಬಿಟಿ ಕ್ಷೇತ್ರದ ನೆರಳಲ್ಲೇ ಬೆಳೆದ ಅನಿಮೇಶನ್ ತನ್ನದೇ ರೆಕ್ಕೆಗಳನ್ನು ಚಾಚಿ ಹಾರುವ ಹೊಸ್ತಿಲಲ್ಲಿ ಇರುವ ಉದ್ಯಮ. ಇದು ಬೆಳೆದು ಬಂದ ದಾರಿ ಯಾವುದು? ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸುವವರು ಹೇಗೆ ತೊಡಗಿಕೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರಗಳು ಈ ವಾರದ ಸಂಚಿಕೆಯಲ್ಲಿವೆ. ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್. Recording date: 19 June 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes - Bhimsain Khurana - https://www.dsource.in/course/story-indian-animation/video/bhimsain-khurana - Ram Mohan - https://www.dsource.in/course/story-indian-animation/video/ram-mohan - Cricket flip book - https://www.youtube.com/watch?v=vBxFBgZy8OA - Infobells Govina Haadu - https://www.youtube.com/watch?v=Lix-XLkFuvE - ABAI - https://twitter.com/abai_avgc - AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece --- Send in a voice message: https://anchor.fm/aralikatte/message

    Ep64: ಖಾಸಗಿ ಹಕ್ಕುಗಳನ್ನು ಕುರಿತೊಂದು ಸಾರ್ವಜನಿಕ ಚರ್ಚೆ (ಭಾಗ ೨) - A public discussion on privacy rights (Part 2)

    Play Episode Listen Later Jun 22, 2021 48:36


    ಕೆಲವು ಪ್ರಶ್ನೆಗಳಿಗೆ ಕಾನೂನಿನಲ್ಲಿ ಉತ್ತರ ಹುಡುಕುವುದು ತಪ್ಪು, ಬದಲಾಗಿ ರಾಜಕೀಯವನ್ನು ನೆಚ್ಚಬೇಕು. ಆದರೆ ನಮ್ಮ ದೇಶದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಪ್ರತಿಯೊಂದಕ್ಕೂ ನ್ಯಾಯಾಂಗದ ಮೊರೆಹೋಗುತ್ತಾರೆ. ಇದರಿಂದಾಗಿ ನ್ಯಾಯಾಲಯಗಳ ಎದುರು ಇರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡಲು ಇರುವ ಉಪಾಯಗಳೇನು? ತ್ರಿವಳಿ ತಲಾಕ್, ರಾಮ ಮಂದಿರ ನಿರ್ಮಾಣದ ವಿವಾದ, ಶಬರಿಮಲೈ ದೇವಾಲಯ ಪ್ರವೇಶದ ವಿವಾದ ಇವುಗಳಲೆಲ್ಲ ಜನ ಸಮಾನ್ಯರು ಕಾಣದ ಕಾನೂನು, ರಾಜಕೀಯ, ಸಾಂಸ್ಕೃತಿಕ ಅಂಶಗಳ ಪ್ರಭಾವ, ದೇಶದಲ್ಲಿ ನಮ್ಮ ಸರ್ಕಾರವೇ ಅತಿದೊಡ್ಡ ದಾವೆದಾರನಾಗಿರುವ ವಿಪರ್ಯಾಸ. ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರವತ್ನಾಲ್ಕನೆಯ ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್. Recording date: 25 April 2021 Credits: Music: Crescents by Ketsa Licensed under creative commons. Icon made by Freepik from www.flaticon.com --- Send in a voice message: https://anchor.fm/aralikatte/message

    Claim AraliKatte ಅರಳಿಕಟ್ಟೆ

    In order to claim this podcast we'll send an email to with a verification link. Simply click the link and you will be able to edit tags, request a refresh, and other features to take control of your podcast page!

    Claim Cancel