Search for episodes from Balakrishna Maddodi with a specific topic:

Latest episodes from Balakrishna Maddodi

ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ

Play Episode Listen Later Nov 16, 2022 7:39


ಅ. ತೆಂಗಿನಕಾಯಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಹೀಗೆ ಎರಡೂ ರೀತಿಯ ಲಹರಿಗಳು ಸೆಳೆಯಲ್ಪಡುತ್ತವೆ ಅಲ್ಲದೇ, ತೆಂಗಿನಕಾಯಿಯಲ್ಲಿ ರಜ-ತಮಾತ್ಮಕ ಲಹರಿಗಳು ಕಡಿಮೆ ಸಮಯದಲ್ಲಿ ಆಕರ್ಷಿಸುತ್ತವೆ. ತೆಂಗಿನಕಾಯಿಯು ಸಾತ್ತ್ವಿಕವಾಗಿರುವುದರಿಂದ ಬಹಳಷ್ಟು ರಜ-ತಮಾತ್ಮಕ ಲಹರಿಗಳು ಅದರ ಒಳಗೆ ವಿಘಟನೆಯಾಗುತ್ತವೆ. ಆ. ತೆಂಗಿನಕಾಯಿಯಲ್ಲಿ ದೃಷ್ಟಿ ತೆಗೆಯುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚಿರುವುದರಿಂದ, ವ್ಯಕ್ತಿಯ ಸೂಕ್ಷ್ಮದೇಹದಲ್ಲಿರುವ ಕಪ್ಪು ಶಕ್ತಿಯ ಆವರಣವನ್ನು ಸೆಳೆದುಕೊಳ್ಳುವಲ್ಲಿ ಅದು ಶ್ರೇಷ್ಠವಾಗಿದೆ. ಯಾವುದೇ ರೀತಿಯ ದೊಡ್ಡ ದೃಷ್ಟಿಯೂ ಸಹ ತೆಂಗಿನಕಾಯಿಯಿಂದ ಕಡಿಮೆಯಾಗುತ್ತದೆ. ಇ. ತೆಂಗಿನಕಾಯಿಯು ಸರ್ವಸಮಾವೇಶಕವಾಗಿರುವುದರಿಂದ ಅದು ಎಲ್ಲ ವಿಧದ ದೃಷ್ಟಿಯನ್ನು ಅಥವಾ ಮಾಟವನ್ನು ತೆಗೆಯಲು ಉಪಯುಕ್ತವಾಗಿದೆ. ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯುವ ಪದ್ಧತಿ ಅ. ಪ್ರಾರ್ಥನೆ ೧. ದೃಷ್ಟಿ ತಗಲಿರುವ ವ್ಯಕ್ತಿಯು ಮಾರುತಿಗೆ ನಮಸ್ಕರಿಸಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು : ‘ಹೇ ಮಾರುತಿ, ನನ್ನಲ್ಲಿರುವ (ತಮ್ಮ ಹೆಸರನ್ನು ಹೇಳಬೇಕು) ಎಲ್ಲ ತ್ರಾಸದಾಯಕ ಸ್ಪಂದನಗಳನ್ನು ಈ ತೆಂಗಿನಕಾಯಿಯಲ್ಲಿ ಆಕರ್ಷಿಸಿ ನಾಶಗೊಳಿಸು.' ೨. ದೃಷ್ಟಿ ತೆಗೆಯುವ ವ್ಯಕ್ತಿಯು ಮಾರುತಿಗೆ ನಮಸ್ಕರಿಸಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು : ‘ಹೇ ಮಾರುತಿ, ದೃಷ್ಟಿ ತಗಲಿದ ವ್ಯಕ್ತಿಯ (ವ್ಯಕ್ತಿಯ ಹೆಸರನ್ನು ಹೇಳಬೇಕು) ದೇಹದಲ್ಲಿನ ಹಾಗೂ ದೇಹದ ಹೊರಗಿನ ಎಲ್ಲ ತ್ರಾಸದಾಯಕ ಸ್ಪಂದನಗಳನ್ನು ನೀನು ಈ ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ನಾಶಗೊಳಿಸು. ದೃಷ್ಟಿಯನ್ನು ತೆಗೆಯುವಾಗ ನಿನ್ನ ಕೃಪೆಯಿಂದ ನನ್ನ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗಲಿ.' ಆ. ಕೃತಿ ೧. ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು. ೨. ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು. ತೆಂಗಿನಕಾಯಿಯ ಜುಟ್ಟಿನ ತುದಿಯು ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು. ೩. ದೃಷ್ಟಿ ತೆಗೆಸಿಕೊಳ್ಳುವವನು ತೆಂಗಿನಕಾಯಿಯ ಜುಟ್ಟಿನ ಕಡೆಗೆ ನೋಡುತ್ತಿರಬೇಕು. ೪. ದೃಷ್ಟಿ ತಗಲಿದ ವ್ಯಕ್ತಿಯ ಕಾಲಿನಿಂದ ತಲೆಯವರೆಗೆ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತೆಂಗಿನಕಾಯಿಯನ್ನು ವರ್ತುಲಾಕಾರದಲ್ಲಿ ಮೂರು ಸಲ ತಿರುಗಿಸಬೇಕು. ನಂತರ ಆ ವ್ಯಕ್ತಿಯ ಸುತ್ತಲೂ ಮೂರು ಸಲ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ತೆಂಗಿನಕಾಯಿಯ ಜುಟ್ಟು ಸತತವಾಗಿ ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು. (ಎಲ್ಲರನ್ನು ಒಟ್ಟಿಗೆ ಕೂರಿಸಿ ಸಾಮೂಹಿಕ ದೃಷ್ಟಿಯನ್ನೂ ತೆಗೆಯಬಹುದು.)

The word "Hindu" originates from the Sanskrit word for river, sindhu.

Play Episode Listen Later Nov 9, 2022 3:20


The Indus River running through northwest India into Pakistan received its name from the Sanskrit term sindhu. The Persians designated the land around the Indus River as Hindu, a mispronunciation of the Sanskrit sindhu. Sanskrit word for river, sindhu. The Indus River running through northwest India into Pakistan received its name from the Sanskrit term sindhu. The Persians designated the land around the Indus River as Hindu, a mispronunciation of the Sanskrit sindhu. In 1921 archaeologists uncovered evidence of an ancientù civilization along the Indus River, which today is dated to around 3300BC and thought to represent one jùuof the largest centers of human habitation in the ancient world. The Indus Valley Civilization extend quite far from the banks of the Indus River including parts of contemporary Pakistan, Afghanistan, Iran, and India. Scholars believe that the Indus Valley Civilization had begun to decline by 1800BC, possibly due to climate change. Because of its location between the Indian Subcontinent and the Iranian plateau, the area has seen many military invasions including Alexander the Great, the Persian empire, and the Kushan empire. In 712AD, the Muslims invaded the Indus Valley. To distinguish themselves, they called all non-Muslims Hindus; the name of the land became, by default, the name of the people and their religious.

ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?

Play Episode Listen Later Nov 8, 2022 3:05


ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ. tulsi250.jpg ೨. ಲಾಭಗಳು ಅ. ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ. ಆ. ತುಳಸಿಯ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ ಅನ್ನದ ಮೇಲೆ ಬಂದಿರುವ ರಜ-ತಮ ಕಣಗಳ ಆವರಣವು ಕಡಿಮೆಯಾಗುತ್ತದೆ. ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯದ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಇ. ಭಾವಪೂರ್ಣವಾಗಿ ನೈವೇದ್ಯದ ಮೇಲೆ ತುಳಸಿ ಎಲೆಯನ್ನಿಡುವುದರಿಂದ ಅದು ಅದರ ಗುಣಧರ್ಮಕ್ಕನುಸಾರ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ. ಇಂತಹ uqpಸುವುದರಿಂದ ಜೀವಕ್ಕೆ ಚೈತನ್ಯದ ಲಹರಿಗಳು ಸಿಗಲು ಸಹಾಯವಾಗುತ್ತದೆ. – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಸಾಯಂ. ೬.೧೪ ಮತ್ತು ೧೨.೮.೨೦೦೪, ಮಧ್ಯಾಹ್ನ ೪.೨೯)

ತುಳಸಿ ಪೂಜೆಯ ವಿಶೇಷ

Play Episode Listen Later Nov 4, 2022 7:42


ತುಳಸಿ ವಿವಾಹ ಸಮಾರಂಭವು ಯಾವುದೇ ಸಾಂಪ್ರದಾಯಿಕ ಹಿಂದೂ ವಿವಾಹದಂತೆ ಇರುತ್ತದೆ. ವಿವಿಧ ದೇವಾಲಯಗಳಲ್ಲಿ ಆಚರಣೆಗಳು ಕಂಡುಬರುತ್ತವೆ, ಆದರೂ ಒಬ್ಬರು ತಮ್ಮ ಮನೆಯಲ್ಲಿ ಈ ಮದುವೆಯನ್ನು ಸುಲಭವಾಗಿ ಮಾಡಬಹುದು. ತುಳಸಿ ವಿವಾಹವನ್ನು ಮಾಡುವವರು ಈ ದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸವನ್ನು ಮಾಡಬೇಕು. ​ತುಳಸಿ ಅಲಂಕಾರ ಇದರೊಂದಿಗೆ ತುಳಸಿ ಗಿಡದ ಸುತ್ತ ಕಬ್ಬಿನ ಗಿಡವನ್ನು ಇಟ್ಟು ಮಂಟಪವನ್ನು ಮಾಡುತ್ತಾರೆ. ಜೊತೆಗೆ ಬಣ್ಣಬಣ್ಣದ ರಂಗೋಲಿಯಿಂದ ತುಳಸಿಯನ್ನು ಅಲಂಕರಿಸಲಾಗುತ್ತದೆ. ತುಳಸಿ ಸಸ್ಯವು ಭಾರತೀಯ ವಧುವಿನಂತೆಯೇ ಬೆರಗುಗೊಳಿಸುವ ಸೀರೆಗಳು, ಕಿವಿಯೋಲೆಗಳು ಮತ್ತು ಇತರ ಆಭರಣಗಳಿಂದ ಸುಂದರವಾಗಿ ಅಲಂಕರಿಸಲ್ಪಡುತ್ತದೆ. ತುಳಸಿ ಗಿಡಕ್ಕೆ ಸಿಂಧೂರದ ಪುಡಿ ಮತ್ತು ಅರಿಶಿನವನ್ನು ಸಹ ಅನ್ವಯಿಸಲಾಗುತ್ತದೆ. ಕಾಗದದ ಮೇಲೆ ಚಿತ್ರಿಸಿದ ಮುಖವನ್ನು ತುಳಸಿ ಸಸ್ಯಕ್ಕೆ ಅನ್ವಯಿಸಲಾಗುತ್ತದೆ, ಅದಕ್ಕೆ ಮೂಗುತಿ ಮತ್ತು ಹಣೆಗೆ ಸಿಂಧೂರವನ್ನೂ ಹಚ್ಚಲಾಗುತ್ತದೆ. ತುಳಸಿಯ ವಿವಾಹಕ್ಕಾಗಿ ವರನನ್ನು ಕಂಚಿನ ವಿಗ್ರಹವಾಗಿ ಅಥವಾ ವಿಷ್ಣುವಿನ ಚಿತ್ರವನ್ನು ಚಿತ್ರಿಸಲಾಗುತ್ತದೆ. ಕೆಲವೊಮ್ಮೆ ಭಗವಾನ್ ವಿಷ್ಣುವನ್ನು ಸಂಕೇತಿಸುವ 'ಸಾಲಿಗ್ರಾಮ ಕಲ್ಲ'ನ್ನು ಕೂಡ ಪೂಜೆಗೆ ಬಳಸಲ್ಪಡುತ್ತದೆ. ನಂತರ ಶ್ರೀಕೃಷ್ಣ ಅಥವಾ ವಿಷ್ಣುವಿನ ಚಿತ್ರವನ್ನು ಧೋತಿಯಲ್ಲಿ ಮುಚ್ಚಲಾಗುತ್ತದೆ. ಈ ಭವ್ಯವಾದ ಸಂದರ್ಭದಲ್ಲಿ ವಿಶೇಷ ಸಸ್ಯಾಹಾರಿ ಭೋಜನವನ್ನು ತಯಾರಿಸಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ ಅಕ್ಕಿ ಮತ್ತು ಉದ್ದಿನಬೇಳೆ, ಕೆಂಪು ಕುಂಬಳಕಾಯಿ ಕರಿ ಮತ್ತು ರುಚಿಕರವಾದ ಸಿಹಿ ಗೆಣಸು ಖೀರ್ ತಯಾರಿಸಲಾಗುತ್ತದೆ. ಮದುವೆಯ ವಿಧಿವಿಧಾನಗಳು ಮುಗಿದ ನಂತರ, ಸಿದ್ಧಪಡಿಸಿದ ಆಹಾರವನ್ನು 'ಭೋಗ' ನೈವೇದ್ಯಕ್ಕಾಗಿ ಮೀಸಲಿಡಲಾಗುತ್ತದೆ. ಇದರೊಂದಿಗೆ ಪೂಜೆಯ ನಂತರ ತುಳಸಿಗೆ ಆರತಿ ಮಾಡಲಾಗುತ್ತದೆ. ಆರತಿ ಮುಗಿದ ನಂತರ, ಬೇಯಿಸಿದ ಆಹಾರವನ್ನು ಹಣ್ಣುಗಳೊಂದಿಗೆ 'ಭೋಗ' ಎಂದು ನೀಡಲಾಗುತ್ತದೆ. ನಂತರ ಕುಟುಂಬ ಸದಸ್ಯರು ಮತ್ತು ಇತರ ಅತಿಥಿಗಳೊಂದಿಗೆ ಪ್ರಸಾದವನ್ನು ಸೇವಿಸಲಾಗುತ್ತದೆ.

ಬಲಿಂದ್ರ ಪೂಜೆ* ದೀಪಾವಳಿಯಂದು ಬಲೀಂದ್ರ ಪೂಜೆಯನ್ನು ಯಾಕೆ ಮಾಡುತ್ತಾರೆ? ರೈತರು ಹೇಗೆ ಬಲಿಯನ್ನು ಸ್ವಾಗತಿಸುತ್ತ

Play Episode Listen Later Oct 25, 2022 6:04


ಮೂರನೆಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ, ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ. ಕರ್ನಾಟಕದಲ್ಲಿ ದೀಪಾವಳಿಯನ್ನು ಸಾಮಾನ್ಯವಾಗಿ ಮೂರು ದಿನ ಆಚರಿಸುತ್ತಾರೆ, ನರಕಚತುರ್ದಶಿ, ಅಮಾವಾಸ್ಯೆ ಹಾಗೂ ಮೂರನೇ ದಿನವೇ ಬಲಿಪಾಡ್ಯಮಿ, ಈ ಬಲಿಪಾಡ್ಯಮಿಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವಾಗಿದೆ.

ಅಡಿಕೆ ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು.

Play Episode Listen Later Oct 24, 2022 5:58


ಅಡಿಕೆ ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು. ಅಡಿಕೆಯನ್ನು ಬಳಸಿ ಸಾಕಷ್ಟು ಅನಾರೋಗ್ಯಗಳನ್ನು ಗುಣಪಡಿಸಬಹುದು. ಇತ್ತೀಚೆಗೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಬಹುದು ಎನ್ನುವುದನ್ನು ಸಂಶೋಧಿಸಲಾಗಿದೆ. ಅಡಿಕೆಯಿಂದ ಚಹಾ ತಯಾರಿಸಿ ಕುಡಿಯಬಹುದು. ಅದು ಸಹ ಆರೋಗ್ಯಕ್ಕೆ ಉತ್ತಮ ಔಷಧಿ. ಸಾಮಾನ್ಯವಾಗಿ ಊಟ ಆದ ಬಳಿಕ ವೀಳ್ಯದೆಲೆ -ಅಡಿಕೆ ತಿನ್ನುತ್ತಾರೆ. ಆದರೆ ಬಹುತೇಕರು ಇದೊಂದು ಸಂಪ್ರದಾಯ ಎಂದು ನಂಬಿಕೊಂಡು ಇದನ್ನು ಸೇವಿಸುತ್ತಾ ಬಂದಿದ್ದಾರೆ. ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಊಟ ಆದ ಬಳಿಕ ಎಲೆ, ಅಡಿಕೆ, ಸುಣ್ಣ ತುಂಬಿದ ಹರಿವಾಣವು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಮಧ್ಯಾಹ್ನ ಊಟ ಆದ ಬಳಿಕ ಎಲ್ಲರೂ ಕುಳಿತುಕೊಂಡು ಅಡಿಕೆ ಮತ್ತು ಎಲೆಗೆ ಕೊಂಚ ಸುಣ್ಣ ಬೆರೆಸಿ ಸೇವಿಸುತ್ತಾರೆ. ಅಂದಹಾಗೆಯೇ ಇದು ಒಗ್ಗಟ್ಟಿನ ಸಂಕೇತವೂ ಆಗಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. ಇಲ್ಲಿ ಅಡಿಕೆ ಬಹಳ ಪ್ರಸಿದ್ಧವಾದ ಉತ್ತಮ ತಳಿ ಹಾಗೂ ಅಧಿಕ ಇಳುವರಿ ಬರುವ ಮರಗಳು ಇಲ್ಲಿವೆ.ಮಲೆನಾಡು ಅಡಿಕೆ ಗೆ ಸಾಟಿ ಮಲೆನಾಡಿನ ಅಡಿಕೆಯೇ.ಇದು ನಮ್ಮ ಕ್ಷೇತ್ರ ಇದು ನಮ್ಮ ಹೆಮ್ಮೆ. 1)ಮಧುಮೇಹ ಇರುವವರಲ್ಲಿ ಆಗಾಗ ಬಾಯಿ ಒಣಗುವುದು, ಬಾಯಲ್ಲಿ ಅತಿಯಾದ ದುರ್ಗಂಧ ಮತ್ತು ಕೆಟ್ಟ ಉಸಿರು ಉಂಟಾಗುವುದು. ಇಂತಹ ಸಮಸ್ಯೆಗಳಿಗೆ ಅಡಿಕೆ ಉತ್ತಮ ಪರಿಹಾರ ನೀಡುವುದು. ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಳ್ಳುವುದು ಅಥವಾ ಅಗೆಯುತ್ತಿರುವುದರಿಂದ ಅಧಿಕ ಲಾಲಾರಸ ಉತ್ಪತ್ತಿ ಆಗುವುದು. ಜೊತೆಗೆ ಬಾಯಿಂದ ಬರುವ ವಾಸನೆಯನ್ನು ತಡೆಯುವುದು. ಅಡಿಕೆಯಿಂದ ಬಾಯಿಗೆ ಸಂಬಂಧಿಸಿದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಸಹ ತಡೆಯಬಹುದು. 2)ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ರಕ್ತ ಹೀನತೆ ಉಂಟಾಗುವುದು. ಅಪೌಷ್ಟಿಕ ಹಾಗೂ ಅಸಮತೋಲನದಿಂದ ಕೂಡಿರುವ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದು. ಅಡಿಕೆಯನ್ನು ಸೇವಿಸುವುದರಿಂದ ರಕ್ತ ಹೀನತೆ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದನ್ನು ಸುಲಭವಾಗಿ ತಡೆಯಬಹುದು. 3)ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿರಬೇಕು. ಇದರಿಂದ ಅಜೀರ್ಣ ಸಮಸ್ಯೆಯು ಸುಧಾರಣೆ ಕಾಣುವುದು. ಸುಧಾರಿತ ಜೀರ್ಣ ಕ್ರಿಯೆಯು ಮಲಬದ್ಧತೆ ಉಂಟಾಗುವುದನ್ನು ತಡೆಯುವುದು 4)ಪುಡಿ ಅಥವಾ ಸುಟ್ಟ ಭಸ್ಮ ದಲ್ಲಿ ಹಲ್ಲುಗಳನ್ನು ಮಸಾಜ್ ಮಾಡುವುದರಿಂದ ಹಲ್ಲಿನ ರೋಗಗಳು ವಾಸಿಯಾಗುತ್ತವೆ ಮತ್ತು ನೋವು ಕೂಡ ವಾಸಿಯಾಗುತ್ತದೆ. 5)ಹಸಿರು ಅಡಿಕೆ ಬೇಯಿಸಿ, ನಂತರ ಅಡಿಕೆಯನ್ನು ಕತ್ತರಿಸಿ ತಿನ್ನಿರಿ. ಇದರಿಂದ ಅತಿಸಾರದ ಸಮಸ್ಯೆ ದೂರವಾಗುತ್ತದೆ. 6)ಕಷಾಯವನ್ನು ಕುಡಿಯುವುದರಿಂದ ಅಥವಾ ಅಡಿಕೆ ಪುಡಿಗೆ ಬೆಣ್ಣೆಯನ್ನು ಸೇರಿಸಿ ತಿನ್ನುವುದರಿಂದ ಹೊಟ್ಟೆಯಲ್ಲಿ ಯಾವುದೇ ಹುಳುಗಳು ಸೃಷ್ಟಿಯಾಗುವುದಿಲ್ಲ. 7)ಅಡಿಕೆ ಪುಡಿಯನ್ನು ಅರಿಶಿನ ಬೆಲ್ಲ ಸೇರಿಸಿ ತಿನ್ನುವುದರಿಂದ ವಾಂತಿ ನಿಲ್ಲುತ್ತದೆ. 8)ಅಡಿಕೆ ಬೇಯಿಸಿದ ನೀರು (ಚೊಗರು) ಹತ್ತಿಯಲ್ಲಿ ನೆನೆಸಿ ಲೇಪಿಸುವುದರಿಂದ ಸರ್ಪಸುತ್ತು ಗುಣವಾಗುತ್ತದೆ. 9)ಅಡಿಕೆ ಸುಟ್ಟು ಭಸ್ಮ ವನ್ನು ಎಳ್ಳೆಣ್ಣೆ ಅಥವಾ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ ಹಚ್ಚಿದರೆ ಕಜ್ಜಿ ತುರಿ ಗುಣವಾಗುತ್ತದೆ. 10) ಕೆಲವರಿಗೆ ಅಡಿಕೆ ತಿಂದರೆ ಮದ ಬರುತ್ತದೆ. ಇದಕ್ಕೆ ಬೆಲ್ಲ ತಿಂದು ನೀರು ಕುಡಿಯುವುದರಿಂದ ಗುಣವಾಗುತ್ತದೆ. 11) ಅಡಿಕೆ ಹಿಂಗಾರದಿಂದ ಮಾಡಿದ ಲೇಹ್ಯ ಆರೋಗ್ಯಕ್ಕೆ ಒಳ್ಳೆಯದು. 11)ಪ್ರತಿದಿನ ಅಡಿಕೆ ಒಂದನ್ನೆ ಅಂದರೆ ವಿಳ್ಯದೆಲೆ ಇಲ್ಲದೆ ತಿನ್ನುವುದರಿಂದ ತುಟಿ ಬಿಳಿಚುತ್ತದೆ ಮತ್ತು ಕಾಮಾಲೆ ಗೆ ಕಾರಣ ವಾಗುತ್ತದೆ. 12) ಸ್ನಾನದ ಸೋಪಿನಲ್ಲಿ ಅಡಿಕೆ ಪುಡಿಯನ್ನೂ ಉಪಯೋಗಿಸಿರುತರೆ

ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ್ರಧಾನ ಕಾರಣಗಳು* ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ

Play Episode Listen Later Oct 10, 2022 7:40


ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ್ರಧಾನ ಕಾರಣಗಳು* . *೧* .ಅತಿಯಾದ ಬುದ್ಧಿವಂತಿಕೆ. *೨* .ಚಿಕ್ಕದಾದ ತಪ್ಪುಗಳನ್ನು ಕೂಡ ಭರಿಸುವ ಶಕ್ತಿ ಸಹನೆ ಇಲ್ಲದಿರುವುದು . *೩* .ಎಲ್ಲರೂ ಸಮಾನರು ಎನ್ನುವ ವಿಚಿತ್ರ ಭಾವನೆ ಬೆಳೆಯುತ್ತಿರುವುದು(ಡೆಮಾಕ್ರಸಿ). *೪* .ಮನೆಯ ಸದಸ್ಯರು, ಮಕ್ಕಳು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಾತನಾಡದೆ ಇರುವುದು. *೫* .ಯಾವಾಗಲೂ ಮನೋರಂಜನೆ ಕಾರ್ಯಕ್ರಮಗಳಲ್ಲಿ ಮುಳುಗಿರುವುದು. ಎಲ್ಲೋ ಇರುವ ಸಿನಿಮಾ ನಟರು ಈ ದಿನ ಬೆಳಿಗ್ಗೆ ಏನು ಮಾಡಿದ್ದಾರೆ ಎಂದು ಹೇಳುವ ಜನರು, ಮನೆಯವರು ಹೇಗಿದ್ದಾರೆ ಯಾವಾಗ ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳದೆ ಇರುವ ದುಸ್ಥಿತಿ ಬಂದುಬಿಟ್ಟಿದೆ. *೬* .ಚಿಕ್ಕ ವಿಷಯಕ್ಕೆ ಮುನಿಸಿಕೊಂಡು ಹತ್ತಿರದವರನ್ನು ದೂರ ಮಾಡಿಕೊಳ್ಳುತ್ತಿದ್ದಾರೆ . *೭* .ಬೇರೆಯವರ ಕೆಟ್ಟ ಮಾತುಗಳಿಂದ ಇಡೀ ಕುಟುಂಬವೇ ಒಡೆದುಹೋಗುವುದಕ್ಕೆ ಕಾರಣವಾಗುತ್ತಿರುವುದು. *೮* .ಆರ್ಥಿಕ ಸಮಸ್ಯೆಗಳಿಂದಾಗಿ ಮನೆಯ ಹಿರಿಯ ಸದಸ್ಯರು ದೃಢವಾಗಿ, ಬಲವಾಗಿ ಮತ್ತು ಸರಿಯಾಗಿ ಕುಟುಂಬ ನಿರ್ವಹಣೆ ಮಾಡದೆ ಇರುವುದು ಕೂಡ ಕಾರಣವಾಗಿದೆ. *೯* .ಮನೆಯಲ್ಲಿ ಗಂಡ -ಹೆಂಡತಿ (ತಂದೆ-ತಾಯಿ) ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳುತ್ತಿರುವುದರಿಂದ ಮನೆಯ ಸದಸ್ಯರಿಗೆ ಆತಂಕ ಉಂಟುಮಾಡಿದೆ. ಎಲ್ಲ ಕುಟುಂಬಗಳಲ್ಲಿ ಜಗಳ ಹೊಡೆದಾಟ,ಬಡಿದಾಟಗಳನ್ನು ನೋಡಿ ಕುಟುಂಬವೆಂದರೆ ಜಿಗುಪ್ಸೆ ಎನ್ನುತ್ತಿರುವುದು. ಅನ್ಯೋನ್ಯವಾಗಿ, ಸಹಬಾಳ್ವೆಯಿಂದ, ಪ್ರೀತಿ ಪ್ರೇಮಗಳಿಂದ, ಇರುವ ಕುಟುಂಬಗಳು ಕಂಡುಬರದೇ ಇರುವುದು, ಈ ಕೌಟುಂಬಿಕ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಾಗಿದೆ. ಇದರಿಂದಾಗಿ, ಯುವಜನ ಮದುವೆ ಮಾಡಿಕೊಳ್ಳುವುದೇ ಇರುವುದು. ಮೂವತ್ತೊಂದು ದಾಟಿದರೂ ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡುವುದೇ ಇಲ್ಲ. ಕಳೆದ 30-40 ವರ್ಷಗಳಿಂದ ಸಂಸಾರವನ್ನು ನಿರ್ವಹಣೆ ಮಾಡಿದ ಕೆಲ ಹಿರಿಯರು ಕುಟುಂಬದ ಜಂಜಾಟಗಳಿಂದ ಬೇಸತ್ತು,ಈ ಕುಟುಂಬ ವ್ಯವಸ್ಥೆಯೇ ಸಾಕಪ್ಪಾ ಸಾಕು, ಎಂದು ನೇರವಾಗಿ ಮಕ್ಕಳಿಗೆ ಹೇಳುತ್ತಿದ್ದಾರೆ. *೧೦* .ಆರ್ಥಿಕತೆಯ ಅವಸರ ಮತ್ತು ವ್ಯತ್ಯಾಸಗಳನ್ನು ಪರಸ್ಪರ ಹೋಲಿಸಿಕೊಳ್ಳುವುದರಿಂದ ಕುಟುಂಬ ವ್ಯವಸ್ಥೆ ನಿಲ್ಲದಾಗಿದೆ. *೧೧* .ಮನುಷ್ಯರಿಗೆ ಬೆಲೆಯೇ ಇಲ್ಲದಾಗಿದೆ.ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕಂಡರೆ ಬೇಜಾರು ಮಾಡಿಕೊಳ್ಳುತ್ತಿದ್ದಾನೆ . *೧೨* .ಮಧ್ಯಸ್ಥಿಕೆ ವಹಿಸುವಂತಹ ಹಿರಿಯರು ಇಲ್ಲದಾಗಿದ್ದಾರೆ. ಇದರಿಂದಾಗಿ ಅವರಿಗೆ ಬೇಕಾದಂತೆ ಬದುಕುತ್ತಿದ್ದಾರೆ. *೧೩* .ಕುಟುಂಬ ನಿರ್ವಹಣೆಯೂ 1 ಕಲೆಯಾಗಿದೆ. ಆ ಕಲೆಯು ಎಲ್ಲರಿಗೂ ಇಲ್ಲದಿರುವುದರಿಂದ ಕೂಡ ಈ ವ್ಯವಸ್ಥೆ ತಲೆಕೆಳಗಾಗಲು ಕಾರಣವಾಗಿದೆ. *೧೪* .ಮಾನವನ ಪ್ರವರ್ತನೆಯು ಕನಿಷ್ಠ ಅವಗಾಹನೆ ಇಲ್ಲದ ದುಸ್ಥಿತಿಗೆ ತಲುಪಿದೆ.ಮಾನವನು ಒರಟಾಗಿ ಪ್ರವರ್ತಿಸುತ್ತಿದ್ದಾನೆ. ನಾನು, ನನ್ನ ಹೆಂಡತಿ/ಗಂಡ ಎನ್ನುವ ಸಿದ್ಧಾಂತ ಹೋಗಿ,*"ನಾನೇ ನಾನು" "ನಾನು ನಾನೇ"* ಎನ್ನುವ ಪಾಲಿಸಿ ಬಂದಿದೆ. ಮಕ್ಕಳಿಗೆ ಮದುವೆ ಆಗುತ್ತಿದ್ದಂತೆ ಬೇರೆ ಹಾಕುವುದು ಆಚಾರವಾಗಿ ಬಿಟ್ಟಿದೆ. ಮನೆಯಲ್ಲಿ ಇಟ್ಟುಕೊಳ್ಳಲು ಭಯಪಡುತ್ತಿದ್ದಾರೆ. ಆಮೇಲೆ ನಿಷ್ಟೂರವಾಗುವುದಕ್ಕಿಂತ ಈವಾಗಲೇ ನಿಷ್ಟೂರವಾಗುವುದು ಮೇಲೂ ಎನ್ನುತ್ತಿದ್ದಾರೆ. ಕೌಟುಂಬಿಕ ಮೌಲ್ಯಗಳು ಕಟ್ಟುಪಾಡುಗಳು ಇನ್ನು ಮುಂದೆ ಇರುವುದಿಲ್ಲ. ಇಷ್ಟ ಬಂದಂತೆ ಬದುಕುವ ದಿನಗಳು ಬಂದಾಗಿದೆ. ಅಣ್ಣ- ತಮ್ಮ, ಅಣ್ಣ- ತಂಗಿ,ಅಕ್ಕ-ತಮ್ಮ, ಗಂಡ-ಹೆಂಡತಿ ಮಧ್ಯೆ ಬಲವಾದ ಸಂಬಂಧಗಳು ಇಲ್ಲದಾಗಿದೆ. ಕಥೆಯೇ ಮುಗಿದು ಹೋಗುತ್ತಿದೆ . ಪ್ರಸ್ತುತ ನಡೆಯುತ್ತಿರುವುದು ನಾಟಕ. ಈ ನಾಟಕ ಕೂಡ ಇನ್ನೂ ಕೆಲವು ದಿನಗಳ ನಂತರ ಪೂರ್ತಿಯಾಗಿ ಇರಲಾರದು. *೧೫* .ಡಿಜಿಟಲ್ ಪ್ಲಾಟ್ ಫಾರಂ ಮೇಲೆ ಇರುವಂತಹ ಸಂಬಂಧ, ಬಾಂಧವ್ಯಗಳೇ ನಿಜವಾದವು ಎಂದು ತಪ್ಪು ಕಲ್ಪನೆಯಲ್ಲಿ ಬದುಕುತ್ತಿರುವ ಜನ. ಯಾರಾದರೂ ತೀರಿಕೊಂಡರೆ 1ಆಕರ್ಷಣೀಯ ಮೆಸೇಜ್ ಇಲ್ಲ RIP ಎಂದು ಹಾಕಿ ಅಲ್ಲಿಗೆ ಬಿಟ್ಟುಬಿಡುತ್ತಾರೆ. ಶವ ಸಾಗಿಸಲು ಕೂಡ 4ಜನ ಬರದ ಪರಿಸ್ಥಿತಿ ಇರುತ್ತದೆ. ಈ ದಿನಗಳಿಗೆ ಎಲ್ಲರೂ, ಎಲ್ಲವೂ ಕಾರಣವಾಗಿದೆ. *ಮಾನವರಿಗೆ ಮಾನವೀಯತೆಯ ಪಾಠ ಹೇಳಿಕೊಡುವಂತಹ ದುಸ್ಥಿತಿ ಬಂದೊದಗಿದೆ.* ಸಮಾಜದಲ್ಲಿ ನಂಬಿಕೆ, ನೈತಿಕತೆ ಎನ್ನುವ ಹಸಿರನ್ನು ಮಾನವ ಹೃದಯದಲ್ಲಿ ಬಿತ್ತಬೇಕಾಗಿದೆ. ಛಿದ್ರ ಛಿದ್ರವಾಗುತ್ತಿರುವ ಕೌಟುಂಬಿಕ ಮೌಲ್ಯಗಳನ್ನು, ಕಟ್ಟುಪಾಡುಗಳನ್ನು ಒಟ್ಟುಗೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. *ಇಲ್ಲವಾದಲ್ಲಿ, ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ* ,ಭವ್ಯ ಭಾರತದ ಸಂಸ್ಕೃತಿಯನ್ನು ಅಳಿಸಿ ಹಾಕಿದಂತೆ. ದಯಮಾಡಿ ಆಲೋಚಿಸಿ. ಪ್ರತಿಯೊಬ್ಬರಿಗೂ ಶೇರ್ ಮಾಡಿ ……

ವಾಲ್ಮೀಕಿ ಮಹರ್ಷಿಗಳ ರಾಮಾಯಣ

Play Episode Listen Later Oct 9, 2022 9:46


ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೇ ಇಲ್ಲ. ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಹಣೆಯ ಕಸುಬೂ ಆಗಿಹೋಗಿತ್ತು. ಒಂದು ದಿನ ರತ್ನಾಕರನ ಎದುರಿಗೆ ನಡೆದು ಬಂದವರು ದೇವಋಷಿ ನಾರದರು. ರತ್ನಾಕರ ನಾರದರಿಗೆ ಹೇಳಿದನು – “ನಿನ್ನಲ್ಲಿ ಇದ್ದುದೆಲ್ಲವನ್ನು ನನಗೆ ಕೊಟ್ಟುಬಿಡು. ಇಲ್ಲದಿದ್ದರೆ ಪ್ರಾಣವನ್ನು ಕಳೆದುಕೊಳ್ಳುತ್ತೀಯ!” ನಾರದರು ನುಡಿದರು – “ನನ್ನ ಬಳಿ ಈ ವೀಣೆ ಮತ್ತು ತೊಟ್ಟ ವಸ್ತ್ರಗಳ ಹೊರತಾಗಿ ಇನ್ನೇನೂ ಇಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಳ್ಳಬಹುದು. ಆದರೆ ನೀನು ಇಂತಹ ಕ್ರೂರಕರ್ಮವನ್ನು ಮಾಡಿ ಭಯಂಕರವಾದ ಪಾಪವನ್ನು ಏಕೆ ಮಾಡುತ್ತಿರುವೆ?”. ದೇವರ್ಷಿಗಳ ಕೋಮಲವಾದ ಮಾತಿನಲ್ಲಿ ಅದೆಂತಹದ್ದೋ ಮೋಡಿಯಿತ್ತು. ರತ್ನಾಕರನಾದರೋ ಇಂತಹ ಸುಮನೋಹರ ಧ್ವನಿಯನ್ನು ಎಂದೂ ಕೇಳಿದ್ದೇ ಇಲ್ಲ! ಆತನ ಕಠೋರ ಹೃದಯ ಕರಗಿತು. ಅವನು “ಸ್ವಾಮಿ! ಪಾಪ ಎಂದರೇನು? ನನಗೆ ಜೀವನಕ್ಕೆ ಇದೇ ಸಾಧನೆಯಾಗಿದೆ. ಇದರಿಂದಲೇ ನಾನು ನನ್ನ ಪರಿವಾರವನ್ನು ಸಾಕುತ್ತಿರುವುದು”. ನಾರದರು ಹೇಳಿದರು – “ನೀನು ಮೊದಲಿಗೆ ಮನೆಗೆ ಹೋಗಿ ‘ನಿನ್ನ ಪರಿವಾರದವರು ಕೇವಲ ನಿನ್ನ ದುಡಿಮೆಯ ಪಾಲು ಬಯಸುತ್ತಾರೆಯೋ, ಅಥವಾ ನಿನ್ನ ಪಾಪದಲ್ಲಿಯೂ ಸಹಭಾಗಿಗಳಾಗಿರುವರೋ' ಎಂದು ಕೇಳಿ ಬಾ, ನೀನು ಮರಳಿ ಬರುವವರೆಗೆ ನಾನು ಇಲ್ಲೇ ಇರುವೆನು. ಎಲ್ಲಿಗೂ ಹೋಗುವುದಿಲ್ಲ. ನಿನಗೆ ನಂಬಿಕೆ ಇಲ್ಲದಿದ್ದರೆ ನನ್ನನ್ನು ಒಂದು ಮರಕ್ಕೆ ಕಟ್ಟಿಹಾಕು”. ರತ್ನಾಕರನು ನಾರದರನ್ನು ಕಟ್ಟಿಹಾಕಿ ತನ್ನ ಮನೆಗೆ ಹೋದನು. ಅವನು ತನ್ನ ಕುಟುಂಬದವರನ್ನೆಲ್ಲಾ ಕೇಳಿದನು – “ನೀವೆಲ್ಲರೂ ನನ್ನ ಪಾಪದಲ್ಲಿ ಭಾಗಿಗಳಾಗುವಿರೋ, ಅಥವಾ ಕೇವಲ ನನ್ನ ಸಂಪತ್ತಿಗೆ ಪಾಲುದಾರರೋ?” ಅವರೆಲ್ಲರೂ ಹೇಳಿದ್ದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿತ್ತು – “ಒಡಲ ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು”. ‘ನೀನು ಯಾವ ರೀತಿಯಿಂದ ಧನವನ್ನು ತರುವೆಯೋ ಅದು ನಿನಗೆ ಗೊತ್ತು. ನಾವು ನಿನ್ನ ಪಾಪದಲ್ಲಿ ಹೇಗೆ ತಾನೇ ಪಾಲುದಾರರಾದೇವು'!

೧೨ ವರ್ಷದ ಅವಿವಾಹಿತ ಕನ್ಯೆಗೆ ಕುಮಾರಿ ಎನ್ನುತ್ತಾರೆ.

Play Episode Listen Later Sep 30, 2022 8:59


ಎನ್ನುತ್ತಾರೆ. ಅವಳ ಸ್ಮೃತ್ಯುಕ್ತ ಲಕ್ಷಣಗಳು ಹೀಗಿವೆ – ಅಷ್ಟವರ್ಷಾ ಭವೇದ್ ಗೌರಿ ದಷವರ್ಷಾ ಚ ಕನ್ಯಕಾ| ಸಂಪ್ರಾಪ್ತೇ ದ್ವಾದಶೇ ವರ್ಷೇ ಕುಮಾರೀತ್ಯಭಿದೀ ಯತೇ|| ಅರ್ಥ: ಹುಡುಗಿಗೆ ೮ನೇ ವರ್ಷದಲ್ಲಿ ‘ಗೌರಿ', ೧೦ನೇ ವರ್ಷದಲ್ಲಿ ‘ಕನ್ಯಾ' ಮತ್ತು ೧೨ನೇ ವರ್ಷವು ಪ್ರಾರಂಭವಾದಾಗ ‘ಕುಮಾರಿ' ಎನ್ನುತ್ತಾರೆ. ಪ್ರಾಚೀನ ಕಾಲದಲ್ಲಿ ಕೆಲವು ಸ್ತ್ರೀಯರು ಆಜನ್ಮ ಅವಿವಾಹಿತರಾಗಿರುತ್ತಿದ್ದರು. ಅವರ ಪ್ರೌಢ ಅಥವಾ ವೃದ್ಧ ವಯಸ್ಸಿನಲ್ಲಿಯೂ ಅವರನ್ನು ಕುಮಾರಿ ಎಂದೇ ಕರೆಯುತ್ತಿದ್ದರು; ಇದು ಅಷ್ಟಾಧ್ಯಾಯಿಯಿಂದ ತಿಳಿಯುತ್ತದೆ, ಉದಾ. ವೃದ್ಧ ಕುಮಾರಿ, ಜರತ್ಕುಮಾರಿ. (ಅಷ್ಟಾಧ್ಯಾಯಿ, ೬.೨.೯೫) ಕುಮಾರಿಪೂಜೆ ಏಕೆ ಮಾಡುತ್ತಾರೆ ? ಮುತ್ತೈದೆಯರು ದೇವಿಯ ಪ್ರಕಟ ಶಕ್ತಿಯ ಪ್ರತೀಕವಾಗಿದ್ದು ಕುಮಾರಿಯರು ದೇವಿಯ ಅಪ್ರಕಟ ಶಕ್ತಿಯ ಪ್ರತೀಕವಾಗಿದ್ದಾರೆ. ಪ್ರಕಟ ಶಕ್ತಿಯಲ್ಲಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಅಪವ್ಯಯವಾಗುವುದರಿಂದ ಮುತ್ತೈದೆಯರ ಬದಲು ಕುಮಾರಿಯರಲ್ಲಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಕುಮಾರಿಪೂಜೆ ಹೇಗೆ ಮಾಡಬೇಕು ? ನವರಾತ್ರಿಯಲ್ಲಿ ಒಂಬತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಬತ್ತನೇ ದಿನ ಒಂಬತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ. ‘ಅವಳು ನಿರ್ದೋಷ, ನಿರೋಗಿ ಮತ್ತು ಅವ್ಯಂಗಳಾಗಿರಬೇಕು' ಎಂದೂ ಹೇಳಲಾಗಿದೆ. ದೇವೀಪೂಜೆಯಾದ ನಂತರ ಕುಮಾರಿಯ ಪೂಜೆಯನ್ನು ಮಾಡುತ್ತಾರೆ. ಮೊದಲು ಮುಂದಿನ ಮಂತ್ರದಿಂದ ಅವಳ ಆವಾಹನೆಯನ್ನು ಮಾಡುತ್ತಾರೆ. ಮಂತ್ರಾಕ್ಷರಮಯೀಂ ಲಕ್ಷ್ಮೀಂ ಮಾತೃಣಾಂ ರೂಪ ಧಾರಿಣೀಮ್| ನವದುರ್ಗಾತ್ಮಿಕಾಂ ಸಾಕ್ಷಾತ್ ಕನ್ಯಾಮಾವಾಹ ಯಾಮ್ಯಹಮ್|| ಅರ್ಥ: ಮಂತ್ರಾಕ್ಷರಮಯ, ಲಕ್ಷ್ಮೀ ಸ್ವರೂಪ, ಮಾತೃಕೆಗಳ ರೂಪವನ್ನು ಧರಿಸುವ ಹಾಗೂ ಸಾಕ್ಷಾತ್ ನವ ದುರ್ಗಾತ್ಮಿಕೆಯಾಗಿರುವಂತಹ ಕನ್ಯೆಯನ್ನು ನಾನು ಆವಾಹನೆ ಮಾಡುತ್ತೇನೆ. ಮೊದಲು ಕುಮಾರಿಯ ಕಾಲುಗಳನ್ನು ತೊಳೆಯುತ್ತಾರೆ, ಅವಳನ್ನು ಸುಶೋಭಿತ ಚೌರಂಗದ ಮೇಲೆ (ಎತ್ತರವಾದ ಮರದ ಮಣೆಯ ಮೇಲೆ) ಕೂರಿಸುತ್ತಾರೆ, ಗಂಧ, ಪುಷ್ಪ, ಲಂಗ-ರವಿಕೆ ಕೊಡುತ್ತಾರೆ ಮತ್ತು ಅವಳ ಕೊರಳಿನಲ್ಲಿ ಹೂಮಾಲೆಯನ್ನು ಹಾಕುತ್ತಾರೆ. ಅವಳಿಗೆ ಪಂಚಾಮೃತ ಮತ್ತು ಮೃಷ್ಠಾನ್ನವನ್ನು ಸಮರ್ಪಿಸುತ್ತಾರೆ. ನಂತರ ಅವಳಿಗೆ ನಮಸ್ಕಾರ ಮಾಡುತ್ತಾರೆ.' ಶಾಕ್ತ ತಂತ್ರದಲ್ಲಿ ಕುಮಾರಿಪೂಜೆಗೆ ವಿಶೇಷ ಮಹತ್ವವಿದೆ.

ಮೊದಲ ನವರಾತ್ರಿಯಲ್ಲಿ ಹೊಸ್ತ್ ನ ಸಂಭ್ರಮ ಆಚರಣೆ ಹಳೆಯದಾದರೂ ಇದಕ್ಕೆ ಹೇಳುವುದು ಹೊಸ್ತ್..!!

Play Episode Listen Later Sep 26, 2022 6:57


ನವರಾತ್ರಿಯ ಮೊದಲನೇ ದಿನ ಅಥವಾ ಅನಂತ ಚತುರ್ದಶಿಯಂದು ಕೃಷಿಕ ಸಮುದಾಯದ ಜನ ಆಗತಾನೆ ಬೆಳೆಯುತ್ತಿರುವ ಪೈರನ್ನು (ಕದಿರು) ಕೊಯ್ದು, ಪೂಜಿಸಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ಹೊಸ್ತು. ಮನೆಯ ಪರಿಸರ ಮುಂತಾದವುಗಳನ್ನು ಸ್ವಚ್ಛವಾಗಿಸಿಕೊಳ್ಳುವ, ನಿತ್ಯದ ಬದುಕಿಗೊಂದು ಹೊಸ ಆಯಾಮವನ್ನು ನೀಡಿ ವರ್ಷದ ಹೊಸ ಬೆಳೆಯನ್ನು ಸಂಭ್ರಮದಿಂದ ಒಳಕರೆದುಕೊಳ್ಳುವ ಪ್ರಕ್ರಿಯೆ. ಐದು ಹಿಡಿ ಕದಿರನ್ನು ಕೊಯ್ದಿಟ್ಟು ಹಾಲೆರೆದು ನಮಸ್ಕರಿಸಿ ಪೂಜಿಸಿದ ಬಳಿಕ ಪಕ್ಕದ ಐದು ಗದ್ದೆಗಳಿಂದ ಸ್ವಲ್ಪವೇ ಕದಿರನ್ನು ಕೊಯ್ದು ತಲೆಯ ಮೇಲೆ ಹೊತ್ತುಕೊಂಡು ಎಲ್ಲರೂ ಹಿಂತಿರುಗಿ ನೋಡದೆ ಜಾಗಟೆಯ ಸದ್ದಿನೊಂದಿಗೆ ಮನೆಯತ್ತ ಧಾವಿಸುವ ರೀತಿ; ಮನೆಯಂಗಳಕ್ಕೆ ಬರುತ್ತಿದ್ದಂತೆಯೇ ಮನೆಯೊಡತಿ ಕದಿರು ಹೊತ್ತು ತಂದವರ ಕಾಲು ತೊಳೆದು, ಆರತಿ ಬೆಳಗಿ ಬರಮಾಡಿಕೊಳ್ಳುವ ಸೊಬಗು; ಹೊತ್ತು ತಂದ ಕದಿರನ್ನು ಮೇಟಿ ಕಂಬದ ಬಳಿ ಇರಿಸಿ ಪೂಜಿಸಿ ಹಲಸಿನ ಎಲೆ, ಮಾವಿನ ಎಲೆ, ತುಂಬಿ ಹೂ ಹಾಗೂ ಕದಿರನ್ನು ಸೇರಿಸಿ ನಾರಿನಿಂದ ಬಿಗಿದು ಮೇಟಿಗೆ ಕಟ್ಟಿದ ಬಳಿಕ ತುಳಸಿ, ಬಾಗಿಲು, ನೇಗಿಲು, ಮರ, ಅನ್ನದ ಪಾತ್ರೆ ಮುಂತಾದ ವಸ್ತುಗಳಿಗೂ ಕದಿರನ್ನು ಕಟ್ಟುವ ಪರಿ ಇವೆಲ್ಲವೂ ಕೃಷಿಕನೊರ್ವನ ಪ್ರಕೃತಿ ಹಾಗೂ ತಾನು ಬಳಸುವ ಪರಿಕರಗಳೊಂದಿಗಿನ ನಂಟನ್ನು ಏಳೆ ಏಳೆಯಾಗಿ ತೆರೆದಿಡುತ್ತದೆ. ಹೊಸ್ತು ಊಟಮಾಡುವೆನೆಂದು ಹೇಳಿ ಊಟ ಮಾಡುವುದು ಈ ದಿನದ ವಿಶೇಷಗಳಲ್ಲೊಂದು. ಮುಳ್ಳುಸೌತೆ, ತೆಂಗಿನಕಾಯಿಗಳನ್ನು ತುರಿದು ಅದಕ್ಕೆ ಇಪ್ಪತ್ತೊಂದು ಹೊಸ ಭತ್ತದ ಕಾಳುಗಳನ್ನು ಸುಲಿದು ಹಾಕಿ, ಸಕ್ಕರೆ, ಬಾಳೆಹಣ್ಣು, ಮೊಸರಿನೊಂದಿಗೆ ಕಲಿಸಿದ ಖಾದ್ಯವನ್ನು ಅರಶಿಣದ ಎಲೆಯಲ್ಲಿಟ್ಟು ದೇವರಿಗೆ ಅರ್ಪಿಸಿದ ಬಳಿಕ ಮನೆಮಂದಿಯಲ್ಲಿ ಒಟ್ಟು ಕುಳಿತು ಕಿರಿಯರಿಂದ ಹಿರಿಯರವರೆಗೂ ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನು ಕರೆದು ಹೊಸ್ತು ಊಟಮಾಡುತ್ತೇನೆಂದು ಹೇಳಿಯೇ ಊಟ ಮಾಡುತ್ತಾರೆ. ಬಳಿಕ ಎಲೆಯಡಿಕೆ ತಿಂದು ಬಾಯಿ ಕೆಂಪಾಗಿಸಿಕೊಳ್ಳುವುದು ವಾಡಿಕೆ. ಹೀಗೆ ನಿಸರ್ಗದಿಂದ ದೊರೆಯುವ ಆಹಾರ ವಸ್ತುಗಳನ್ನು ಪೂಜಿಸಿ ಸ್ವಾಗತಿಸಿಕೊಳ್ಳುವ ಈ ಹಬ್ಬಕ್ಕೆ ಸಾಂಪ್ರದಾಯಿಕ ನೆಲಗಟ್ಟಿದೆ. ಸಂಬಂಧಗಳನ್ನು ಬಲ ಪಡಿಸುವ ಸಾಮಾಜಿಕ ಕಳಕಳಿಯು ಬೆರೆತಿದೆ. ಖಂಡಿತವಾಗಿಯೂ ಹೊಸ್ತು ಬದುಕಿನಲ್ಲೊಂದು ಹೊಸತನವನ್ನು ತುಂಬಲಿದೆ ಎನ್ನುವುದು ದಿಟ. ಅಂದಾಂಗೆ ನಾನ್ ಹೊಸ್ತ್ ಉಣ್ತೆ ಅಕಾ..

*ಶಿಕ್ಷಕರ ದಿನಾಚರಣೆ 2022: ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ 18 ಸ್ಪೂರ್ತಿದಾಯಕ ವಾಕ್ಯಗಳು.*

Play Episode Listen Later Sep 4, 2022 7:13


Hಡಾ,ಸರ್ವಪಲ್ಲಿ ರಾಧಾಕೃಷ್ಣನ್ ಕುರಿತಾದ ಆಸಕ್ತಿದಾಯಕ ಸಂಗತಿಗಳು Teachers Day 2022 : ಡಾ,ಸರ್ವಪಲ್ಲಿ ರಾಧಾಕೃಷ್ಣನ್ ಕುರಿತಾದ ಆಸಕ್ತಿದಾಯಕ ಸಂಗತಿಗಳು By Kavya Updated: Friday, September 2, 2022, 12:52 [IST] Advertisement ಡಾ ಸರ್ವಪಲ್ಲಿ ರಾಧಾಕೃಷ್ಣನ್: 1954 ರಲ್ಲಿ ಭಾರತ ಸರ್ಕಾರವು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ನೀಡಿ ಗೌರವಿಸಿತು. 1963 ರಲ್ಲಿ ಆರ್ಡರ್ ಆಫ್ ಮೆರಿಟ್ ಮತ್ತು 1975 ರಲ್ಲಿ ಟೆಂಪಲ್ಟನ್ ಪ್ರಶಸ್ತಿಯನ್ನು ಪಡೆದರು. ಸ್ವಾತಂತ್ರ್ಯ ಪಡೆಯುವ ಮೊದಲು ಅವರನ್ನು ಸರ್ ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಸಂಬೋಧಿಸಲಾಗುತ್ತಿತ್ತು ಮತ್ತು ಸ್ವಾತಂತ್ರ್ಯದ ನಂತರ ಅವರನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಕರೆಯಲಾಯಿತು. Teachers Day : Interesting Facts About Dr Sarvepalli Radhakrishnan In Kannada "ನಮಗೆ ತಿಳಿದಿದೆ ಎಂದು ನಾವು ಭಾವಿಸಿದಾಗ, ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ" ಎಂಬ ಪ್ರಸಿದ್ಧ ಮಾತನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಈ ರೀತಿಯ ಪದಗಳು ಯಾವಾಗಲೂ ಜೀವನದ ಪ್ರತಿಯೊಂದು ಹಂತದಲ್ಲೂ ಉನ್ನತ ಕಲಿಕೆಯನ್ನು ಮಾಡಲು ನಮ್ಮನ್ನು ಪ್ರೇರೇಪಿಸುತ್ತವೆ, ಏಕೆಂದರೆ ಕಲಿಕೆಯು ಜೀವಿತಾವಧಿಯ ಪ್ರಕ್ರಿಯೆಯಾಗಿದೆ. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರಂತಹ ಸರ್ವಶ್ರೇಷ್ಠ ಶಿಕ್ಷಕರಿದ್ದರೆ ನಮ್ಮೊಳಗಿನ ವಿದ್ಯಾರ್ಥಿ ಎಂದಿಗೂ ಸೋಲುವುದಿಲ್ಲ.

*ಗಣೇಶ ಚತುರ್ಥಿಯ ಹಬ್ಬದ ಆಧ್ಯಾತ್ಹ್ಮಿಕ ರಹಸ್ಯವೇನು*

Play Episode Listen Later Aug 31, 2022 11:46


ಇಂದು ಭಾರತ ದೇಶದಲ್ಲಿ ಗಣೇಶ ಚತುರ್ಥಿಯ ಹಬ್ಬ್ಬವನ್ನು ಬಹಳ ವಿಜೃಂಭಣೆಯಿಂದ ಮತ್ತು ಹರ್ಷೋಲ್ಲಾಸದಿಂದ ಆಚರಣೆ  ಮಾಡುತ್ತಾರೆ ಪ್ರತಿಯೊಂದು ಊರಿನಲ್ಲೂ ಪ್ರತಿಯೊಂದು ಮನೆಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ .ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕೂಡ ಆಚರಣೆ  ಮಾಡುತ್ತಾರೆ. ಆದರೆ ಈ ಎನ್ನುವ ವಿಷಯವನ್ನು ತಿಳಿಯುವ ಅವಶ್ಯಕತೆ ಇದೆ . ಗಣೇಶನಿಗೆ ಬುದ್ದಿಯ ದೇವತೆ ಎಂದು ಹೇಳಲಾಗುತ್ತದೆ ಅರ್ಥತ್ ಯಾರ ಹತ್ತಿರ ಆಧ್ಯಾತ್ಹ್ಮಿಕ ಶಕ್ತಿಯಿದೆ. ಅದಕ್ಕೊಸ್ಕರನೇ ಕಥೆಗಳಲ್ಲಿ ಹೇಳಲಾಗಿದೆ  ಮಹರ್ಷಿ ವೇದ ವ್ಯಾಸರು ಯಾವಾಗ ಮಹಾಭಾರತ ಗ್ರಂಥವನ್ನು ಬರೆಯಬೇಕಾಯಿತು   ಆಗ ಗಣೇಶನ ಆಹ್ವಾನ ಮಾಡಿದರು ಎಂದು .ಮಹಾಭಾರತ  ಗ್ರಂಥದ ಒಂದು ಶ್ಲೋಕದಲ್ಲಿ  ಬರೆಯಲಾಗಿದೆ ಹೇ ಗಣನಾಯಕನೇ ನೀವು ನನ್ನ್ನ ಲೇಖಕರಾಗಿ ಈ ಗ್ರಂಥವನ್ನು ನಾನು  ನನ್ನ ಮನಸ್ಸಿನ ಅತ್ಯುನ್ನತ ಸ್ಥಿತಿ ,ಸಮಾಧಿ ಸ್ಥಿತಿಯಲ್ಲಿ ಪ್ರಾಪ್ತವಾಗಿರುವಂಥಹ ಮಾತುಗಳನ್ನು ಪ್ರಕಟ ಮಾಡುತ್ತೇನೆ .ಅದು ನನ್ನ ಮನಸ್ಸಿನ ಕಲ್ಪನೆಯಾಗಿದೆ .ಯಾವಾಗ ಅವರು ಗಣೇಶನ ಆಹ್ವಾನ ಮಾಡುತ್ತಾರೆ ಅವರಿಗೆ ತಿಳಿದಿದೆ ಇವರಂತಹ ಉತ್ತಮ ಲೇಖಕರು ಮತ್ತೊಬ್ಬರಿಲ್ಲ .ಏಕೆಂದರೆ ತನ್ನ ಮನಸ್ಸಿನ ಪ್ರತಿಯೊಂದು ಭಾವಾರ್ಥವನ್ನು ಅರಿತು ಈ ಗ್ರಂಥವನ್ನು ಬರೆಯಬೇಕಾಗಿದೆ .ನಿರ್ವಿಗ್ನ ಸ್ಥಿತಿಯಲ್ಲಿದ್ದು ಈ ಕಾರ್ಯವನ್ನು ಮಾಡಬೇಕಾಗಿದೆ .ವ್ಯಾಸರು ಸ್ಪಷ್ಟ್ವವಾಗಿ ಹೇಳುತ್ತಾರೆ ಈ ಮಹಾಭಾರತ ಗ್ರಂಥವು ನನ್ನ ಮನಸ್ಸಿನ ಕಲ್ಪನೆಯಾ ಮುಖಾಂತರ ತಿಳಿಸಲು ಪ್ರಯತ್ನಿಸುತ್ತೇನೆ ಎಂದು.ಅರ್ಥತ್ ಯಾವುದೇ ಒಂದು ಮಗುವಿಗೆ ಶಿಕ್ಷಣವನ್ನು ಕೊಡಬೇಕಾದರೆ ಜೀವನದಲ್ಲಿ ಸುಳ್ಳು ಹೇಳಬಾರದು ಸತ್ಯವನ್ನೇ ಹೇಳಬೇಕು ಇದರ ಜ್ಞಾನ ಇದೆ ಆಗಿದೆ ಒಂದು ವೇಳೆ  ಇದನ್ನುಸಹಜವಾಗಿ ಉಪದೇಶ ಮಾಡಿದಲ್ಲಿ ಇದು ಮಗುವಿಗೆ ಅರ್ಥ ಆಗದೆ ಇರಬಹುದು ಆದರೆ ಒಂದು ವೇಳೆ ಮನಸ್ಸಿನ ಕಲ್ಪನೆಯಿಂದ ಕಥೆಯ ರೀತಿಯಲ್ಲಿ ತಿಳಿಸಿ ಅದರಲ್ಲಿ ಒಂದು ಸತ್ಯತೆಯ ಪಾತ್ರ ,ಒಂದು ಸುಳ್ಳಿನ ಪಾತ್ರ ಇದ್ದಾಗ ಇದರ ಮೂಲಕ ಮೌಲ್ಯವನ್ನು ತಿಳಿಸಿದಾಗ ಅರ್ಥತ್  ಅದು ಸಹಜವಾಗಿ ಅರ್ಥವಾಗಲು ಸಾಧ್ಯವಿದೆ ಅರ್ಥಾತ್ ಸತ್ಯತೆಯ ವಿಷಯದಲ್ಲಿ ಎಷ್ಟೇ ದೊಡ್ಡ ವಿಗ್ನಗಳು ಬಂದರು ಕೂಡ ಅಂತಿಮದಲ್ಲಿ ಸತ್ಯತೆಯ ವಿಜಯವಾಗಿ ಸುಳ್ಳಿನ ಸೋಲಾಗುತ್ತದೆ ,ಸುಳ್ಳು ನೋಡುವುದಕ್ಕೆ ಸರಳವಾಗಿ ಕಂಡರೂ ಸುಳ್ಳಿನ ವಿಜಯವಾಗಲು ಎಂದಿಗೂ ಸಾಧ್ಯವಿಲ್ಲ. ಸತ್ಯತೆಯ ಆ ಸಂಧರ್ಭದಲ್ಲಿ ಆನೇಕ ವಿಗ್ನಗಳು ಕೂಡಿರುವತೆ ಕಂಡರೂ ಅಂತಿಮದಲ್ಲಿ ಸತ್ಯತೆಯ ವಿಜಯ ನಿಶ್ಚಿತವಾಗಿದೆ .ಇದಕ್ಕೆ ಹೇಳಲಾಗುತ್ತದೆ ಸ್ಸಥ್ಯತೆಯ ದೋಣಿ ಅಲುಗಾಡಬಹುದು ಆದರೆ ಮುಳುಗಲು ಸಾಧ್ಯವಿಲ್ಲ ಎಂದು. ಗಣೇಶನಿಗೆ ಕೇವಲಪೂಜೆ ಮಾಡುವುದರಿಂದ ವಿಗ್ನಗಳು ವಿನಾಶವಾಗಲು ಸಾಧ್ಯವಿಲ್ಲ ವಿಗ್ನಗಳಿಗೆ ನಮ್ಮಲ್ಲಿ ಅಡಗಿರುವ ಮನೋವಿಕಾರಗಳೇ ಕಾರಣ ಇದಕ್ಕಾಗಿ ನಾವು ಗಣೇಶನ ಜೀವನದ ಅನೇಕ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವುದರ ಅವಶ್ಯಕತೆ ಇದೆ . ಗಣೇಶನಿಗೆ ಮೊದಲ ಪೂಜೆ ಇದರ ಅರ್ಥ ಯಾವುದೇ ಕೆಲಸವನ್ನು ನಾವು ಶ್ರೇಷ್ಠ ವಿಚಾರಗಳಿಂದ್ ಮತ್ತು ಸಾಕಾರರಾತ್ಮಕ ಚಿಂತನೆಯಿಂದ ,ಆದಿ ಮದ್ಯ ಅಂತ್ಯ ಮೂರು ಕಾಲದ ಜ್ಞಾನದ ಅರಿವಿನಿಂದ ಮಾಡಿದಲ್ಲಿ ಯಾವುದೇ ಕೆಲಸದಲ್ಲಿ ಸಫಲತೆಯನ್ನು ಪಡೆಯಲು ಸಾಧ್ಯವಿದೆ .ಇದಕ್ಕೆ ಭಗವದ್ಗೀತೆಯಲ್ಲಿ "ಏನು ಆಯಿತು ಒಳ್ಳೆಯದೇ ಆಯಿತು,ಏನು ಆಗತ್ತದೆ ಒಳ್ಳೆಯದೇ ,ಯಾವುದಾಗುವುದಿದೆ ಒಳ್ಳೆಯದೇ" , ಗಣೇಶನ ಬಗ್ಗೆ ಶಾಸ್ತ್ರಗಲ್ಲಿ ನಾವು ಅನೇಕ ಕಥೆಗಳನ್ನು ಕೇಳುತ್ತಾ ಬಂದಿದ್ದೇವೆ ಆದರೇ ಗಣೇಶ ಚತುರ್ಥಿಯ ಇಂದು  ನಿಜವಾದ ಆಧ್ಯಾತ್ಹ್ಮಿಕ ರಹಸ್ಯವನ್ನು ತಿಳಿಯುವುದರ ಅವಶ್ಯಕತೆಯಿದೆ .ಗಣೇಶನಿಗೆ ಆನೆಯ ತಲೆ,ಕಿವಿ,ಸೊಂಡಿಲು,ದಂಥ ಇತ್ಯಾದಿ ತೋರಿಸಿದ್ದಾರೆ ಇದರ ಹಿಂದಿನ ರಹಸ್ಯವನ್ನು ತಿಳಿತಲ್ಲಿ ನಾವು ಕೂಡ ನಮ್ಮ ಜೀವನದಲ್ಲಿ  ಗಣೇಶನ ರೀತಿಯಲ್ಲಿ ನಿರ್ವಿಘ್ನವಾಗಿ ಸಫಲತೆಯನ್ನು ಪಡೆಯಲು ಸಾಧ್ಯವಿದೆ.ನಾವು ಸಾಮಾನ್ಯವಾಗಿ ನೋಡುವುದಾದರೆ ಒಂದು ಮಗುವಿನ ಜನ್ಮ ಕೈ,ಕಾಲುಗಳಿಲ್ಲದೆ ,ಕಣ್ಣಿಲ್ಲದೆ ಅಥವಾ ಎರಡು ತಲೆ ಇತ್ಯಾದಿ ರೀತಿಯಲ್ಲಿ ಆದಲ್ಲಿ ಇದನ್ನು ಅಬ್ನಾರ್ಮಲ್ ಅಂತ ಹೇಳಲಾಗುತ್ತದೆ ಅಂದ ಮೇಲೆ ಗಣೇಶನಿಗೆ ಈ ರೀತಿ ತೋರಿಸಿರುವುದರ ರಹಸ್ಯವೇನು ಇದನ್ನು ತಿಳಿಯೋಣ ಗಣೇಶನ ಜನ್ಮ; ಹೇಳಲಾಗುತ್ತದೆ ಪಾರ್ವತಿಯು ತನ್ನ ತಪಸ್ಸಿನ ಬಲದಿಂದ ತನ್ನ ಶರೀರದ ಮೈಲಿಗೆಯಿಂದ ಗಣೇಶನಿಗೆ ಜನ್ಮವನ್ನು ನೀಡಿದಳು ಎಂದು ಮತ್ತು ತಾನು ಸ್ನಾನಗ್ರಹಕ್ಕೆ ಹೋಗುವಾಗ ದ್ವಾರದಲ್ಲಿ ನಿಲ್ಲಿಸಿ ಹೋಗುತ್ತಾಳೆ ಎಂದು ಇದರ ಅರ್ಥ ಇದೆ ಆಗಿದೆ ಕಲಿಯುಗದ ಅಂತಿಮದಲ್ಲಿ ಪ್ರತಿಯೊಬ್ಬ ಮನುಷ್ಯಾತ್ಮನು ಅನೇಕ ಮನೋವಿಕಾರಗಳಿಂದ ಕೂಡಿರುವರು ಮತ್ತು ತನ್ನನ್ನು ತಾನು ಶರೀರ ಎನ್ನುವ ಅಭಿಮಾನದಲ್ಲಿ ಬಂದು  ಅದರಿಂದ ತನ್ನ ದುಃಖ ಅಶಾಂತಿಗೆ ಸ್ವಯಂ ಕಾರಣ ಕರ್ತನಾಗಿರುವನು ಮತ್ತು ಇಲ್ಲಿ ಶರೀರ ಎಂದರೆ ಮಣ್ಣು ಅರ್ಥತ್ ಪಂಚಬೂತ ತತ್ವಗಳಿಂದ ಮಾಡಿರುವಂತಹದ್ದ್ದುಮತ್ತು ಕೊನೆಯಲ್ಲಿ ಆದರಲ್ಲೇ ವಿಲೀನವಾಗುವಂಥಹದ್ದು . ಈಗ ಪರಮಾತ್ಮ ಬಂದು ಅಭಿಮಾನದ ತಲೆಯನ್ನು ತುಂಡರಿಸಿ ಸತ್ಯವಾದ ಜ್ಞಾನವನ್ನು ನೀಡಿ ಅರ್ಥತ್ ಆನೆಯ ತಲೆ  ಅರ್ಥಾತ್ ಇಲ್ಲಿ ಆನೆಯನ್ನು ಸಾಯಿಸುವುದಲ್ಲ ಬದಲಿಗೆ ತಿಳುವಳಿಕೆಯ ,ಸತ್ಯತೆಯ ಜ್ಞಾನವನ್ನು ನೀಡುವುದಾಗಿದೆ ,ಆನೆಗೆ ಬುದ್ದಿ ಜೀವಿ ಎಂದು ಹೇಳಲಾಗುತ್ತದೆ. ಕಣ್ಣು ; ಹೇಳಲಾಗುತ್ತದೆ ಗಣೇಶನ ಕಣ್ಣು ಬಹಳ ಸಣ್ಣದಿರುತ್ತದೆ ಮತ್ತು ಬಹಳ ತೀಕ್ಷ್ಣವಾಗಿರುತ್ಹ್ಹದೆ ಎಂದು ಅರ್ಥತ್ ಬಹಳ ದೂರದ ತನಕ ನೋಡುವ ಶಕ್ತಿಯಿದೆ ಪರಮಾತ್ಮ ನಮಗೆ ಇದೆ ವರದಾನವನ್ನು ಕೊಡುತ್ತಾರೆ ನಾವು ಕೂಡ ಗಣೇಶನ ರೀತಿಯಲ್ಲಿ ಬಹಳ ದೂರಾದ್ರಿಷ್ಟಿಯಿಂದ ಕೆಲಸ ಮಾಡಿದಾಗ ಸಫಲತೆಯನ್ನು ಪಡೆಯಬಹುದು ಕಿವಿ ;  ಕಿವಿ ನೋಡಲು ನಮಗೆ ಸೂಪ್ ನ ರೀತಿಯಲ್ಲಿ ಕಾಣುತ್ತದೆ ಅರ್ಥ ಇದೆ ಆಗಿದೆ ಸೂಪ್ ನಿಂದ ನಾವು ಭೆಳೆ ಕಾಳೂ ಗಳಿಂದ ಕಸ ಕಡ್ಡಿಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತೇವೆ ಅದೇ ರೀತಿಯಲ್ಲಿ ನಾವು ಕೂಡ ನಮ್ಮ ಜೀವನದಲ್ಲಿ ನಮಗೆ ಅನೇಕರಿಂಧಾ  ಅನೇಕ ,ವಿಚಾರಗಳು,ಮಾತುಗಳು ಕೇಳಲು ಬರಬಹುದು ಆದರೆ ನಾವು ಇದರಿಂದ ನಮ್ಮ ಜೀವನಕ್ಕೆ ಬೇಕಾಗಿರುವ ವಿಚಾರಗಳನ

ವರ ಮಹಾಲಕ್ಷ್ಮೀ ಹಬ್ಬದ ವ್ರತ ಕಥೆ ಓದಿ ಸಂಪೂರ್ಣ ಮಾಡಿ ಶ್ರೀ ಮಹಾಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಿ

Play Episode Listen Later Aug 5, 2022 9:28


ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು ಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿ. ನೀವು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳಿ ಎಂದು ಕೇಳಿಕೊಂಡರು. ಋಷಿ ಶ್ರೇಷ್ಠರ ಮಾತನ್ನು ಮೆಚ್ಚಿದ ಸೂತಮಹಾಮುನಿಗಳು ಕಥೆಯೊಂದನ್ನು ಹೇಳಿದರು... ಋಷಿ ಶ್ರೇಷ್ಠರೇ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದಿದೆ. ನಿಮಗಾಗಿ ಆ ವ್ರತದ ಕಥೆ ಹೇಳುವೆ ಕೇಳಿ ಎಂದರು. ಕೈಲಾಸಪರ್ವತವು ದೇವನದಿಗಳಿಂದ ಪೂರ್ಣವಾಗಿ ಫಲಭರಿತವಾದ ನಾನಾಬಗೆಯ ವೃಕ್ಷಸಮೂಹದಿಂದ ಕೂಡಿ ಕಾಮಧೇನು ಕಲ್ಪವೃಕ್ಷ ಸೇರಿದಂತೆ ಸಕಲ ಸುಖಗಳಿಗೂ ಆವಾಸಸ್ಥಾನವಾಗಿರುವುದು. ಆದ ಕಾರಣ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು. ಒಂದಾನೊಂದು ಕಾಲದಲ್ಲಿ ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿರುವಾಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, ಮಹಾದೇವಾ ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು? ಅದನ್ನು ನನಗೆ ಹೇಳು ಎಂದು ಕೇಳಿಕೊಂಡಳು. ಆಗ ಪರಮೇಶ್ವರನು ಪಾರ್ವತಿಯೇ ಕೇಳು, ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತ ಎಂಬುದುಂಟು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು" ಎಂದು ಹೇಳಿದನು. ಸಂತೋಷಗೊಂಡ ಪಾರ್ವತಿ, ಸ್ವಾಮಿ ವರಲಕ್ಷ್ಮೀ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?" ಎಂದು ಕೇಳಿದಳು. ಆಗ ಪರಮೇಶ್ವರನು, 'ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. ಆ ರೀತಿ ವ್ರತ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುದು. ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ಹೇಳುತ್ತೇನೆ ಕೇಳು ಎಂದು ಪಾರ್ವತಿಗೆ ಕಥೆಯನ್ನು ಹೇಳಲು ಮುಂದಾದನು ಪರಮೇಶ್ವರನು. ವಿದರ್ಭದೇಶಕ್ಕೆ ರಾಜಧಾನಿಯಾದ ಕುಂಡಿನನಗರದಲ್ಲಿ ಚಾರುಮತಿ ಎಂಬ ಸ್ತೀ ಇದ್ದಳು. ಈ ಚಾರುಮತಿ ದರಿದ್ರಳಾದರೂ ಸದಾಚಾರ ಸಂಪನ್ನಳು, ಪತಿ ಶುಶ್ರೂಷೆಯೆ ಮುಖ್ಯವೆಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ಉಳ್ಳವಳಾಗಿದ್ದಳು. ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- ' ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನಗೆ ನಿನ್ನ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ಪ್ರಾಪ್ತಿಯಾಗುತ್ತದೆ. ಯಾರು ನನ್ನನ್ನು ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ. ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು ! ಅವರೇ ಶೂರರು ! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು" ಎಂದು ನಿದ್ರೆಯಲ್ಲಿ ಉಪದೇಶಿಸಿದ ಮಹಾಲಕ್ಷ್ಮಿಯು ಕಣ್ಮರೆಯಾದಳು. ಆಗ ಚಾರುಮತಿಯು ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿದಳು. ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು. ಆದರೆ, ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು. ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು. ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು ಎಂದು ಹೇಳಿ ಪರಮೇಶ್ವರನು ಕಥೆ ಮುಗಿಸಿದನು. ಕಥೆ ಕೇಳಿದ ಪಾರ್ವತಿಯು, ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು. ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು- ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳ ಸ್ನಾನದ ನಂತರ ಶುಭವಸ್ತ್ರಗಳನ್ನು ಧರಿಸಬೇಕು. ಮನೆಯಲ್ಲಿ ರಂಗೋಲಿಯಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲ

*

Play Episode Listen Later Aug 4, 2022 6:28


ಇಂಗ್ಲಿಷ್ ನಲ್ಲಿ ನುಗ್ಗೆ ಗಿಡ ಹಾಗೂ ನುಗ್ಗೆ ಕಾಯಿಯನ್ನು ಕ್ರಮವಾಗಿ moringa, drumstick ಎಂದು ಕರೆಯುತ್ತಾರೆ. ಶತಶತಮಾನಗಳಿಂದಲೂ ನುಗ್ಗೆ ಕಾಯಿ, ನುಗ್ಗೆ ಹೂವುಗಳು ಹಾಗೂ ನುಗ್ಗೆ ಸೊಪ್ಪನ್ನು ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಖಾದ್ಯಗಳಲ್ಲಿ ಬಳಸಲಾಗುತ್ತಿದೆ. ನುಗ್ಗೆ ಕಾಯಿ ಹಲವರಿಗೆ ಅಪ್ರಿಯವಾದ ತರಕಾರಿಯಾದರೂ, ಇದರ ಬಳಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪಿನ ಸೇವನೆಯಿಂದ ಅನೇಕ ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು. ನುಗ್ಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದು ಸುಮಾರು 300 ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಪುರುಷರಲ್ಲಿ ಬಂಜೆತನ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಫಲವತ್ತತೆ ಪ್ರಾಸ್ಟೇಟ್ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ನುಗ್ಗೆ ಕಾಯಿ, ನುಗ್ಗೆ ಸೊಪ್ಪನ್ನು ಬಳಸುವುದರಿಂದ ತೂಕ ನಷ್ಟ, ಮಧುಮೇಹ, ಅಧಿಕ ರಕ್ತದೊತ್ತಡ, ಶಿಲೀಂದ್ರದ ಸೋಂಕುಗಳು, ಕೀಲು ನೋವು, ಹೃದಯದ ಸಮಸ್ಯೆ ಹಾಗೂ ಕ್ಯಾನ್ಸರ್ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಕಂಡು ಬರುತ್ತವೆ. ನುಗ್ಗೆ ಎಲೆಗಳು ಕಿತ್ತಳೆಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಬಾಳೆಹಣ್ಣುಗಳಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ ಮತ್ತು ಅಮೈನೋ ಆಮ್ಲಗಳನ್ನು ಸಹ ಹೊಂದಿದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. *ಮೂಳೆಗಳನ್ನು ಬಲಪಡಿಸಲು:-* ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ನುಗ್ಗೆ ಕಾಯಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಇವು ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ. ಅದರಲ್ಲೂ ವಯಸ್ಸಾದವರಲ್ಲಿ ಕಂಡು ಬರುವ ಅಸ್ಥಿ ರಂಧ್ರತೆ ಹಾಗೂ ಸಂಧಿವಾತ, ಗಂಟು ನೋವಿನಂತಹ ಸಮಸ್ಯೆಯನ್ನು ನುಗ್ಗೇಕಾಯಿ ಸೇವನೆ ದೂರ ಮಾಡುತ್ತದೆ. *ಮಧುಮೇಹ ನಿಯಂತ್ರಣ:-* ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಟೈಪ್-2 ಡಯಾಬಿಟಿಸ್ ಹೆಚ್ಚು ಸಾಮಾನ್ಯವಾಗಿದೆ. ನುಗ್ಗೆ ಎಲೆಗಳು ಇನ್ಸುಲಿನ್ ತರಹದ ಪ್ರೋಟೀನ್‌ಗಳನ್ನು ಒಳಗೊಂಡಿರುತ್ತವೆ. ಅದು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. *ಕ್ಯಾನ್ಸರ್ ನಿಯಂತ್ರಣ:-* ನುಗ್ಗೆ ಸೊಪ್ಪಿನ ಎಲೆಗಳ ಸಾರಗಳು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುವಲ್ಲಿ ಸಹಕಾರಿ ಆಗಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಗಳು ಕಂಡು ಹಿಡಿದಿವೆ. *ಹೃದಯದ ಆರೋಗ್ಯಕ್ಕೆ ಉತ್ತಮ:-* ನುಗ್ಗೆ ಎಲೆಗಳು ಹೃದಯವನ್ನು ರಕ್ಷಿಸುತ್ತವೆ ಮತ್ತು ಹೃದಯದ ರಕ್ತನಾಳದ ವ್ಯವಸ್ಥೆಯನ್ನು ಬೆಂಬಲಿಸುತ್ತವೆ ಎಂದು ಹೇಳಲಾಗುತ್ತದೆ. *ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ:-* ನುಗ್ಗೆ ಸೊಪ್ಪು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಎನ್ನಲಾಗುತ್ತದೆ. *ಕೀಲು ನೋವು ಶಮನ:-* ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಪ್ರೋಟೀನ್‌ ಸಮೃದ್ಧವಾಗಿವೆ. ಇದು ಆರೋಗ್ಯಕರ ಮೂಳೆಗೆ ಕೊಡುಗೆ ನೀಡುವುದು ಮಾತ್ರವಲ್ಲ, ಕೀಲು ನೋವಿಗೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ. ನುಗ್ಗೆಯು ಉರಿಯೂತದ ಗುಣಲಕ್ಷಣಗಳನ್ನು ಶಮನಗೊಳಿಸುತ್ತದೆ. ಇದು ಸಂಧಿವಾತ ಮತ್ತು ಬೆನ್ನು ನೋವನ್ನು ಗುಣಪಡಿಸುತ್ತದೆ. *ಕೂದಲ ಆರೋಗ್ಯಕ್ಕೆ ಅತ್ಯುತ್ತಮ:* ನುಗ್ಗೆ ಕಾಯಿಯಲ್ಲಿರುವ ಸಂಪೂರ್ಣ ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ನಿಮ್ಮ ಕೂದಲನ್ನು ಪೋಷಿಸಲು ಕಾರಣವಾಗಿವೆ. ನುಗ್ಗೆಯಲ್ಲಿರುವ ವಿಟಮಿನ್ ಎ ದೇಹದ ಅಂಗಾಂಶಗಳು ಮತ್ತು ಕೋಶಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ವಿಟಮಿನ್ ಬಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ನಿಮ್ಮ ನೆತ್ತಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ವಾಹಕಗಳಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಆರೋಗ್ಯಕರ ಮತ್ತು ದೃಢವಾದ ಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. *ಪುರುಷರಿಗೆ ನುಗ್ಗೆಯ ಬಳಕೆಯ ಪ್ರಯೋಜನಗಳು:-* ನುಗ್ಗೆ ಕಾಯಿ ಅಥವಾ ನುಗ್ಗೆ ಸೊಪ್ಪನ್ನು ಪುರುಷರಿಗೆ ಅದ್ಭುತವಾದ ಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಪುರುಷರು ಹೆಚ್ಚು ನುಗ್ಗೆ ಕಾಯಿ, ಸೊಪ್ಪು ತಿನ್ನಲು ಸಲಹೆ ನೀಡಲಾಗುತ್ತದೆ. ನುಗ್ಗೆ ಕಾಯಿ ಕೇವಲದ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲ, ಇನ್ನೂ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಫ್ರಿಕನ್ ಪುರುಷರು ಸಹ ತಮ್ಮ ಆಹಾರದಲ್ಲಿ ನುಗ್ಗೆ ಸಸ್ಯವನ್ನು ಸಂಪೂರ್ಣವಾಗಿ ನಿರ್ಣಾಯಕವೆಂದು ಪರಿಗಣಿಸುತ್ತಾರೆ. ಈ ಸಸ್ಯದ ಕಾಂಡಗಳು, ಬೇರುಗಳು ಮತ್ತು ಎಲೆಗಳು ಸೇರಿದಂತೆ ಪ್ರತಿಯೊಂದು ಭಾಗವು ಪುರುಷರಿಗೆ ಪ್ರಯೋಜನಕಾರಿಯಾಗಿವೆ. ● *ಪ್ರಾಸ್ಟೇಟ್ ಆರೋಗ್ಯವನ್ನು ಉತ್ತೇಜಿಸುತ್ತದೆ:* ನುಗ್ಗೆ ಸೊಪ್ಪು ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ. ನುಗ್ಗೆ ಎಲೆಗಳು ಸಲ್ಫರ್ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಇದು ಪುರುಷರಲ್ಲಿ ಸಾಮಾನ್ಯವಾದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸಹಾಯಕವಾಗಬಹುದು. ನುಗ್ಗೆ ಮರದ ತೊಗಟೆ ಮತ್ತು ಬೀಜಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ● *ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಔಷಧಿ:* ನುಗ್ಗೆ ಕಾಯಿ ಬೀಜಗಳು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ಶಿಶ್ನಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮತ್ತು ನಿಮಿರುವಿಕೆಗೆ ಸಹಾಯ ಮಾಡುವ ವಿವಿಧ ಜೀವಸತ್ವಗಳು ಮತ್ತು ಖನಿಜಗಳ

ಜೀವನವೆಂಬ ಪ್ರಯಾಣದಲ್ಲಿ...ಕೆಲವೊಮ್ಮೆ ಸತ್ಯ ಕಹಿ ಅನಿಸುತ್ತದೆ.

Play Episode Listen Later Jul 31, 2022 4:45


ಮನಃಸಾಕ್ಷಿ ಇಲ್ಲದವರು ತಮ್ಮ ತಪ್ಪು ಒಪ್ಪುವುದಿಲ್ಲ . ಅವರಿಗೆ ತಮ್ಮದು ತಪ್ಪು ಅಂತಾ ಅನಿಸೋದು ಇಲ್ಲ. ಮನಃಸಾಕ್ಷಿ ಅಂತಾ ಇದ್ದವರಿಗೆ ಎಲ್ಲೋ ಮನಸ್ಸಿನ ಒಂದು ಮೂಲೆಯಲ್ಲಿ ಅದು ಮುಳ್ಳಿನಂತೆ ಚುಚ್ಚುತ್ತದೆ... life is short make it sweet

*ಶಿಕ್ಷಣವು ಹೇಗಿರಬೇಕು ?*

Play Episode Listen Later Jul 31, 2022 7:31


 Menu ಬಾಲಸಂಸ್ಕಾರ > ಶಿಕ್ಷಕರು > ಶಿಕ್ಷಣ ಹೇಗಿರಬೇಕು? > ಶಿಕ್ಷಣವು ಹೇಗಿರಬೇಕು ? ಶಿಕ್ಷಣವು ಹೇಗಿರಬೇಕು ? ಕ್ಷಾತ್ರ ಹಾಗೂ ಬ್ರಾಹ್ಮ ತೇಜವನ್ನು ನಿರ್ಮಿಸುವ ಶಿಕ್ಷಣವೇ ನಿಜವಾದ ಶಿಕ್ಷಣ ತರುಣರಿಗೆ ಕಡ್ಡಾಯವಾಗಿ ಸೈನ್ಯದ ತರಬೇತಿಯೊಂದಿಗೆ ಸಂತರ, ದೇಶಭಕ್ತರ ಹಾಗೂ ಕ್ರಾಂತಿಕಾರರ ಜೀವನ ಚರಿತ್ರೆಗಳನ್ನು ಅಧ್ಯಯನಕ್ಕಾಗಿ ನೀಡಿದಲ್ಲಿ ಅವರಿಗೆ ದೇಶಕ್ಕಾಗಿ ಜೀವಿಸಲು ಹಾಗೂ ಪ್ರಾಣಾರ್ಪಣೆ ಮಾಡಲು ಸ್ಪೂರ್ತಿ ದೊರೆಯುತ್ತದೆ.ಶಿಕ್ಷಣವು ಹೇಗಿರಬೇಕು ಎಂಬುದರ ವಿಚಾರ ಹಾಗೂ ಪೂರಕ ಕೃತಿ ಅವಶ್ಯಕವಾಗಿದೆ. ಭಾರತದಲ್ಲಿ ಆಗಿಹೋದ ಕ್ರಾಂತಿಕಾರರು, ಸಂತರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಹುತಾತ್ಮರಾದ ದೇಶಭಕ್ತರು, ಶಾಸ್ತ್ರಜ್ಞರು, ಸಮಾಜೋದ್ಧಾರಕರು, ಸಮಾಜದ ಉತ್ಥಾನಕ್ಕಾಗಿ ಸಂಘಟನೆಯನ್ನು ನಿರ್ಮಿಸಲು ತಮ್ಮ ಜೀವನವನ್ನು ಸವೆಸಿದವರು, ಇವರೆಲ್ಲರ ಜೀವನ ಚರಿತ್ರೆಯು ಯುವಪೀಳಿಗೆಯ ಹಾಗೂ ಮಕ್ಕಳ ಪಠ್ಯಕ್ರಮದ ಭಾಗವಾಗಲೇಬೇಕು. ಮಕ್ಕಳಿಗೆ ಕಡ್ಡಾಯವಾಗಿ ೨ ವರ್ಷಗಳ ಸೈನ್ಯದ ತರಬೇತಿ ಇರಬೇಕು. ಸಂತರು ರಚಿಸಿದ ಗ್ರಂಥಗಳನ್ನು ಮಕ್ಕಳ ಅಧ್ಯಯನದಲ್ಲಿ ಸೇರಿಸಬೇಕು. ತರುಣರಿಗೆ ಭಗತಸಿಂಗ, ರಾಜಗುರು, ಸುಖದೇವ, ವಾಸುದೇವ ಬಲವಂತ ಫಡಕೆ ಹಾಗೂ ಸ್ವಾ. ಸಾವರಕರರ ಎಲ್ಲ ಕಥೆಗಳು ತಿಳಿದಿರಬೇಕು

Paper Bag alternative for single use plastic *PROMOTE PAPER BAG*

Play Episode Listen Later Jul 13, 2022 6:25


ವಿಶ್ವ ಕಾಗದ ಚೀಲ ದಿನ.* ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಅದ್ಭುತ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದು ಸಮುದ್ರವನ್ನು ಪರಿಗಣಿಸಲಾಗುತ್ತದೆ. ಆದರೆ ಮಾನವನ ನಿರಂತರ ಮಧ್ಯಸ್ಥಿಕೆಯಿಂದಾಗಿ ಅದು ಈಗ ಸಂತ್ರಸ್ಥಗೊಂಡಿದೆ.  ಇಂದು ವಿಶ್ವ ಸಾಗರ ದಿನ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ ಬಗ್ಗೆ ಸ್ಮರಿಸಿಕೊಳ್ಳಬೇಕಾದಂತಹ ದಿನ. ಸಾಗರಗಳು ಭೂಮಿಯ ಮೇಲ್ಮೈಯ ಮುಕ್ಕಾಲು ಭಾಗವನ್ನು ಒಳಗೊಂಡಿದೆ, ಭೂಮಿಯ ನೀರಿನ ಶೇ.97% ರಷ್ಟು ಭಾಗವನ್ನು ಇದು ಹೊಂದಿದೆ ಮತ್ತು ಭೂಮಿಯ ಮೇಲೆ ವಾಸಿಸುವ ಶೇ.99 ರಷ್ಟು ಜಾಗವನ್ನು ಪ್ರತಿನಿಧಿಸುತ್ತವೆ. ಫೈಟೊಪ್ಲಾಂಕ್ಟನ್, ಹವಳದ ಬಂಡೆಗಳು ಮತ್ತು ಇತರ ಲಕ್ಷಾಂತರ ಸಮುದ್ರ ಸಸ್ಯಗಳು ಒಟ್ಟಾರೆ ಆಮ್ಲಜನಕದ 50% ರಷ್ಟನ್ನು ಒದಗಿಸುತ್ತದೆ. ಸಾಗರಗಳು ಮನುಷ್ಯರು ಉತ್ಪಾದಿಸುವ ಸುಮಾರು ಶೇ.30ರಷ್ಟು  ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತವೆ, ಜಾಗತಿಕ ತಾಪಮಾನ ಏರಿಕೆಯ ಪ್ರಭಾವವನ್ನು ಕುಗ್ಗಿಸುತ್ತದೆ. 2.6 ಶತಕೋಟಿ ಜನರು ತಮ್ಮ ಪ್ರಾಥಮಿಕ ಪ್ರೋಟೀನ್­ಗಾಗಿ ಸಮುದ್ರಗಳನ್ನು ಮೂಲವಾಗಿ ಅವಲಂಬಿಸಿರುತ್ತಾರೆ. ಸಾಗರ ಮೀನುಗಾರಿಕೆ ನೇರವಾಗಿ ಅಥವಾ ಪರೋಕ್ಷವಾಗಿ 200 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ.

ಮಕ್ಕಳಿಗೆ ಈ ಓಂಕಾರದ ಮಂತ್ರದ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಯಲ್ಲಿ ನೆನಪಿನ ಶಕ್

Play Episode Listen Later Jun 27, 2022 6:45


*"ಓಂ"* ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ ಹಿಂದೂ ಧರ್ಮದ ಅನುಸಾರ *ಓಂ* ಗೆ ತನ್ನದೇ ಆದ ಮಹತ್ವ ಇದೆ. *ಓಂ* ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ *ಓಂ* ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು..? ಆದರೆ *'ಓಂ'*ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.? ಇಂದು ನಾವು ನಿಮಗೆ *'ಓಂ'* ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ. *'ಓಂ'* ಮತ್ತು *ಥೈರಾಯ್ಡ್‌*: 'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್‌ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ. *ಓಂ* ಮತ್ತು *ಭಯ* : ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ. *ಓಂ* ಮತ್ತು *ಒತ್ತಡ* : ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ. ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. *ಓಂ* ಮತ್ತು *ರಕ್ತ ಸಂಚಾರ* : ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. *ಓಂ* ಮತ್ತು *ಪಚನ ಕ್ರಿಯೆ* : ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ. *'ಓಂ'* ಮತ್ತು *ಸ್ಫೂರ್ತಿ* : ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ. *ಓಂ* ಮತ್ತು *ಸುಸ್ತು* : ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು. *ಓಂ* ಮತ್ತು *ನಿದ್ರೆ* : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ. *ಓಂ* ಮತ್ತು *ಶ್ವಾಸಕೋಶ* : 'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ. *ಓಂ* ಮತ್ತು *ಬೆನ್ನೆಲುಬು* : 'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ.. "ಓಂ" ಕಾರ ಎಂಬ ಮಂತ್ರದ ಹಿಂದಿರುವ " ವಿಜ್ಞಾನ " ಭಾರತೀಯ ವೇದ ಪರಂಪರೆಗೆ ಬಹುದೊಡ್ಡ ಇತಿಹಾಸ ಇದೆ.ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ವೇದ ಮಂತ್ರಗಳು ಮನುಷ್ಯನನ್ನು ಆರೋಗ್ಯಕರವಾದ ಮಾರ್ಗದಲ್ಲಿ ಮುನ್ನಡೆಸಲು ಸಹಕಾರಿಯಾಗಿದೆ ಈ ಮಾರ್ಗದಲ್ಲಿ ಪ್ರಥಮವಾಗಿ ನಿಲ್ಲುವುದೇ "ಓಂ" ಕಾರದ ಮಂತ್ರ ಈ "ಓಂ" ಕಾರವನ್ನು ಮಹಿಳೆಯರು - ಪುರುಷರು ಯಾರೇ ಆಗಲಿ "ಸ್ವರ ಕ್ರಮ" ವನ್ನು ಅನುಸರಿಸಿ ಉಚ್ಚರಿಸಿದರೆ ದೇಹ ಮತ್ತು ಆತ್ಮದ ಸಾಕ್ಷಾತ್ಕಾರವನ್ನು ಅನುಭವಿಸಬಹುದು "ಓಂ" ಎನ್ನುವ ಮಂತ್ರ "ಅ ಉ ಮ " ಎಂಬ ಮೂರು ಶಬ್ದಗಳನ್ನು ಒಳಗೊಂಡಿದೆ.ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಸೂರ್ಯೋದಯದ ಸಮಯದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಏಕಾಂತದಲ್ಲಿ ಕುಳಿತು ಓಂಕಾರ ಮಂತ್ರವನ್ನು ಜಪಿಸಿದರೆ ನಿಮ್ಮ ಇಡೀ ದೇಹ ( ಮೆದುಳಿನಿಂದ ಪಾದದವರೆಗೂ ) ಕಂಪಿಸುತ್ತದೆ .ಪರಿಣಾಮ ದೇಹದ ಜೊತೆಯಲ್ಲಿ ಆತ್ಮ ವೂ ಜಾಗೃತವಾಗುವುದರಿಂದ ದೇಹದ ನರ ನಾಡಿಗಳು ಚೈತನ್ಯಪೂರ್ವಕವಾಗಿ ಕೆಲಸ ಮಾಡುತ್ತದೆ ಓಂಕಾರವನ್ನು ಕಣ್ಣುಗಳನ್ನು ಮುಚ್ಚಿಕೊಂಡು ಹೀಗೆ ಜಪಿಸಬೇಕು.... ಆರಂಭದ ಓ..ಎನ್ನುವ ಶಬ್ದವನ್ನು ಜೋರಾಗಿ ಕನಿಷ್ಟ ಪಕ್ಷ 10 ಸೆಕೆಂಡುಗಳು ಹೇಳುತ್ತಾ ತುಟಿಗಳನ್ನು ತೆರೆದು ಉಚ್ಚರಿಸಿ ಅಂ ಎನ್ನುವ ಶಬ್ಧ ಬಂದಾಗ ತುಟಿಗಳನ್ನು ಮುಚ್ಚಿಕೊಂಡು" ಮ್" ಎಂದು ಹತ್ತು ಸೆಕೆಂಡುಗಳು ಉಚ್ಚರಿಸಿ ಹೀಗೆ ತುಟಿಗಳನ್ನು ಮುಚ್ಚಿಕೊಂಡು "ಮ್" ಶಬ್ದವನ್ನು ನೀವು ಉಚ್ಚರಿಸುವಾಗ ನಿಮ್ಮ ಮೆದುಳಿನ ನರಗಳು ಅಲುಗಾಡುವ ಅದ್ಭುತವಾದ ಅನುಭವ ನಿಮಗಾಗುತ್ತದೆ ಹೀಗೆ ಈ ಕ್ರಮವನ್ನು ಅನುಸರಿಸಿ ಪ್ರತಿನಿತ್ಯ "ಓಂ" ಕಾರ ಮಂತ್ರವನ್ನು 100 ಸಲ ಜಪಿಸುತ್ತಾ ಬಂದರೆ ಮಾನಸಿಕ ಖಾಯಿಲೆಗಳು ದೈಹಿಕ ಖಾಯಿಲೆಗಳಾದ ಸುಸ್ತು..ತಲೆನೋವು ..ಹೃದಯ ಸಂಬಂಧಿ ಖಾಯಿಲೆಗಳು ರಕ್ತದೊತ್ತಡ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. *ಮಕ್ಕಳಿಗೆ ಈ ಓಂಕಾರದ ಮಂತ್ರದ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಯಲ್ಲಿ ನೆನಪಿನ ಶಕ್ತಿಯೂ ಹೆಚ್ಚುತ್ತದೆ!*

ರಾಮಕ್ಷತ್ರಿಯ ಭಜನಾ ಮಾಧುರ್ಯ

Play Episode Listen Later Jun 14, 2022 3:26


ಉಡುಪಿ ರಾಮಕ್ಷತ್ರಿಯ ಸಂಘವು ಜುಲೈ 3, 2022 ರಂದು ರಾಮಕ್ಷತ್ರಿಯ ಭಜನಾ ಮಾಧುರ್ಯ ವನ್ನು ಆಯೋಜಿಸುತ್ತದೆ.... ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ

National movement and plant 10 crore trees GREENATHON

Play Episode Listen Later May 1, 2022 5:55


*SAVE NATURE* : Max Temperatures recorded in some Indian cities: ☀Lucknow 47 degrees ☀Delhi 47 degrees ☀Agra 45 degrees ☀Nagpur 49 degrees ☀Kota 48 degrees ☀Hyderabad 45 degrees ☀Pune 42 degrees ☀Ahmedabad 46 degrees ☀ Mumbai 42 degrees ☀ Nashik 40 degrees ☀Bangalore 40 degrees ☀ Chennai 45 degrees ☀Rajkot 45 degrees Next years these cities will cross 50 degrees. Even AC or fan will not save us in summer.. Why is it so hot ??? In last 10 years over 10 crore trees were cut for widening roads and highways. But not more than a lakh trees have been planted by govt. or public. How to make India cool ??? Please do not wait for government to plant trees. Sowing seeds or planting trees does not cost much. Just collect seeds of Shatavari, Bel, Peeple, Tulsi, Mango, Lemon, Jamun, Neem, Custard Apple, Jack fruit, etc. Then dig two-three inch hole on open spaces, roadside, footpaths, highways, gardens and also in your society or bungalow. Bury these seeds in each hole with soil and then water them every two days in summer. In rainy season no need to water them. After 15 to 30 days small plants will be born. Let us make this a National movement and plant 10 crore trees all over India. We should stop temperature from crossing 50 degrees..... Please plant maximum trees and forward this message to everyone. Lets distribute saplings as return gifts during functions, birthdays etc. *1 person - 1 plant* We will easily reach 10 crore plants

ಕಾಶೀಯಾತ್ರೆ (Kashi Yatre), ಕನ್ಯಾದಾನ (Kanya adhana) ಮತ್ತು ವರದಕ್ಷಿಣೆ (Varadakshine).

Play Episode Listen Later Apr 29, 2022 11:55


ಕಾಶಿಯಾತ್ರೆ: ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ ಭಾವೀ ಅಳಿಯನಿಗೆ ಕಾಲು ತೊಳೆಯುವುದು ಹಾಗೂ ಕಾಶಿಗೆ ಹೋಗದಂತೆ ತಡೆದು ತನ್ನ ಮಗಳನ್ನು ಕೊಡುತ್ತೇನೆಂದು ಪ್ರಲೋಭಿಸುವುದು- ಇದು ನಾವು ತಿಳಿದುಕೊಂಡಿರುವುದು ಮತ್ತು ಆಚರಿಸುತ್ತಿರುವುದು. ಆದರೆ ಇದು ಖಂಡಿತ ಹಾಗಲ್ಲ. ಇದಕ್ಕೆ ಬೇರೆಯೇ ಅರ್ಥವಿದೆ!

*ನಾವು ಯಾವುದನ್ನು ತುಂಬಿಸುತ್ತೇವೋ, ಅದೇ ಹೊರಗೆ ಬರುತ್ತದೆ*

Play Episode Listen Later Apr 29, 2022 6:30


ಐದು ವರ್ಷದ ಪುಟ್ಟ ಹುಡುಗನೊಬ್ಬ ತನ್ನ ಮೂರು ವರ್ಷದ ಪುಟಾಣಿ ತಂಗಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮುಂದೆ ಮುಂದೆ ಹೋಗುತ್ತಿದ್ದ ಹುಡುಗನಿಗೆ ತಂಗಿಯ ಹೆಜ್ಜೆ ನಿಧಾನವಾಗಿದ್ದು ಗೊತ್ತಾಯಿತು. ಆತ ತಿರುಗಿ ನೋಡಿದ. ತಂಗಿ ಯಾವುದೋ ಅಂಗಡಿ ಮುಂದೆ ನಿಂತು ಏನನ್ನೋ ತದೇಕವಾಗಿ ನೋಡುತ್ತಿದ್ದಳು. ಆತ ಹಿಂದಕ್ಕೆ ಬಂದು ನೋಡಿದ. ಅದೊಂದು ಗೊಂಬೆಗಳ ಅಂಗಡಿ. ‘ನಿಂಗೇನು ಬೇಕು?' ಎಂದು ಅಣ್ಣ ಕೇಳಿದ. ಆ ಪುಟ್ಟ ಹುಡುಗಿ ಅಂಗಡಿಯಲ್ಲಿದ್ದ ದೊಡ್ಡ ಗೊಂಬೆಯತ್ತ ಬೊಟ್ಟು ಮಾಡಿ ತೋರಿಸಿ ‘ಅದು ಬೇಕು' ಎಂದಳು. ಹುಡುಗ ಒಬ್ಬ ಜವಾಬ್ದಾರಿಯುತ ದೊಡ್ಡಣ್ಣನಂತೆ ಆಕೆಯ ಕೈ ಹಿಡಿದುಕೊಂಡು ಅಂಗಡಿಯತ್ತ ನಡೆದು ಆ ಗೊಂಬೆಯನ್ನೆತ್ತಿ ಅವಳ ಕೈಯಲ್ಲಿಟ್ಟ. ಖುಷಿಗೆ ಆಕೆಯ ಕಣ್ಣುಗಳರಳಿದವು. ಅಂಗಡಿಯ ಮಾಲೀಕ ಇವೆಲ್ಲವನ್ನು ಅಚ್ಚರಿಯಿಂದ ನೋಡುತ್ತಿದ್ದ. ಆ ಹುಡುಗ ಕೌಂಟರ್‌ಗೆ ಬಂದು 'ಈ ಗೊಂಬೆಗೆ ಎಷ್ಟು ದುಡ್ಡಾಗುತ್ತದೆ?' ಎಂದು ಮಾಲೀಕನನ್ನು ಕೇಳಿದ. ಅಂಗಡಿಯಾತ ವಿಶಾಲ ಹೃದಯದವನಷ್ಟೇ ಅಲ್ಲದೇ, ದುಡ್ಡಿನ ಬೆಲೆ ಏನೆಂದು ಅರಿತವನಾಗಿದ್ದ. ಈ ಚಿಕ್ಕ ಹುಡುಗನ ಬಳಿ ಗೊಂಬೆ ಕೊಳ್ಳುವಷ್ಟು ಹಣವಿಲ್ಲವೆಂದು ಅವನಿಗೂ ಗೊತ್ತಿತ್ತು. ಆದರೂ ಆತ ಸಿಡುಕದೆ ‘ಮಗು, ಗೊಂಬೆಯ ಬದಲಾಗಿ ನೀನು ನನಗೇನು ಕೊಡಬಲ್ಲೆ? ನಿನ್ನ ಬಳಿ ಏನಿದೆ?' ಎಂದು ಪ್ರೀತಿಯಿಂದ ಕೇಳಿದ. ಆಗ ಹುಡುಗ, ಸಮುದ್ರತೀರದಿಂದ ಸಂಗ್ರಹಿಸಿಕೊಂಡು ಬಂದಿದ್ದ ಕಪ್ಪೆಚಿಪ್ಪುಗಳನ್ನು ಹಣದಷ್ಟೇ ಜೋಪಾನವಾಗಿ ಜೇಬಿನಿಂದ ತೆಗೆದು ಅಂಗಡಿಯವನಿಗೆ ನೀಡಿದ. ಕಪ್ಪೆಚಿಪ್ಪುಗಳನ್ನು ನೋಡಿ ಮಾಲೀಕನ ಮುಖದಲ್ಲಿ ನಗು ಮೂಡಿತು. ಆತನೂ ಅದನ್ನು ಹಣವನ್ನೆಣಿಸುವಂತೆಯೇ ಎಣಿಸ ತೊಡಗಿದ. ಎಲ್ಲವನ್ನೂ ಎಣಿಸಿ ಮುಗಿಸಿ ತಲೆಯೆತ್ತಿ ಹುಡುಗನ ಕಡೆ ನೋಡಿದ. ಹುಡುಗನಿಗೆ ಆತಂಕವಾಯಿತು, ‘ಯಾಕೆ? ಗೊಂಬೆಯ ಬೆಲೆ ಇದಕ್ಕಿಂತಲೂ ಜಾಸ್ತಿಯಾಗುತ್ತದಾ?' ಎಂದು ಮುಗ್ಧವಾಗಿ ಕೇಳಿದ. ‘ಇಲ್ಲ, ಇಲ್ಲ. ನೀನು ಕೊಟ್ಟಿದ್ದು ಜಾಸ್ತಿಯಾಗಿದೆ. ನಾನೇ ನಿನಗೆ ಕೆಲವನ್ನು ವಾಪಸ್ಸು ಕೊಡಬೇಕು' ಎಂದು ಹೇಳಿ, ನಾಲ್ಕು ಕಪ್ಪೆಚಿಪ್ಪುಗಳನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ವಾಪಸ್ಸು ಮಾಡಿದ. ಹುಡುಗನಿಗೆ ಬಹಳ ಸಂತೋಷವಾಯಿತು. ಗೊಂಬೆಯನ್ನು ತಂಗಿಯ ಕೈಗೆ ಕೊಟ್ಟು, ತಲೆ ಸವರಿ, ಆಕೆಯ ಹೆಗಲ ಮೇಲೆ ಕೈ ಹಾಕಿಕೊಂಡು ನಡೆದು ಹೋದ. ಅಂಗಡಿಯಲ್ಲಿದ್ದ ಕೆಲಸಗಾರನೊಬ್ಬ ಇವೆಲ್ಲವನ್ನು ನೋಡುತ್ತಿದ್ದ. ಮಾಲೀಕ ನಾಲ್ಕೇ ನಾಲ್ಕು ಕಪ್ಪೆಚಿಪ್ಪಿಗೆ ದೊಡ್ಡ ಗೊಂಬೆಯನ್ನು ನೀಡಿದ್ದು ಅವನಲ್ಲಿ ಆಶ್ಚರ್ಯ ಮೂಡಿಸಿತ್ತು. ಕೊನೆಗೂ ಆತ ಕೇಳಿಯೇ ಬಿಟ್ಟ 'ಸರ್ 4 ಕಪ್ಪೆಚಿಪ್ಪಿಗೆ ಬದಲಾಗಿ ದುಬಾರಿ ಗೊಂಬೆಯನ್ನು ಕೊಟ್ಟಿದ್ದೇಕೆ?' ಅಂಗಡಿಯವ ನಸುನಕ್ಕು ಹೇಳಿದ- 'ಹೌದು ನನ್ನ-ನಿನ್ನ ಕಣ್ಣಿಗೆ ಅವು ಕೇವಲ ಕಪ್ಪೆಚಿಪ್ಪುಗಳು. ಅವುಗಳ ಬೆಲೆ ಶೂನ್ಯ. ಆದರೆ ಆ ಹುಡುಗನಿಗೆ ಅದೇ ಸರ್ವಸ್ವ. ಅವನ ಲೆಕ್ಕದಲ್ಲಿ ಆ ಚಿಪ್ಪುಗಳಿಗೂ ಹಣದಷ್ಟೇ ಬೆಲೆಯಿದೆ. ಈ ವಯಸ್ಸಿನಲ್ಲಿ ಹಣ ಎಂದರೇನು ? ಹಣದ ಮಹತ್ವವೇನು ? ಎಂಬುದು ಅವನಿಗೆ ಅರ್ಥವಾಗುವುದಿಲ್ಲ. ಮಕ್ಕಳಿರುವುದೇ ಹಾಗೆ, ದೇವರಂತೆ. ಆದರೆ ದೊಡ್ಡವನಾದ ಮೇಲೆ ಅವನಿಗೆಲ್ಲ ಅರ್ಥವಾಗುತ್ತದೆ. ಕಪ್ಪೆಚಿಪ್ಪುಗಳಿಗೆ ಬದಲಾಗಿ ಗೊಂಬೆ ಖರೀದಿಸಿದ್ದು ನೆನಪಾದಾಗ ಆತ ನನ್ನನ್ನು ನೆನಪಿಸಿಕೊಳ್ಳುತ್ತಾನೆ, ಅಂದು ತಂಗಿಯ ಕಣ್ಣಲ್ಲಿ ಮಿಂಚಿದ ಬೆಳಕನ್ನು ನೆನಪಿಸಿಕೊಳ್ಳುತ್ತಾನೆ. ಈ ಜಗತ್ತು ಒಳ್ಳೆಯ ವ್ಯಕ್ತಿಗಳಿಂದ ತುಂಬಿಕೊಂಡಿದೆ ಎಂದು ಆತ ನಂಬುತ್ತಾನೆ. ಅಂಥ ನಂಬಿಕೆ ಮನುಷ್ಯನಿಗೆ ಬೇಕು. ಆಗ ಮಾತ್ರ ಬದುಕು ಸಹ್ಯವಾಗುತ್ತದೆ. ಈ ಘಟನೆ ಅವನಲ್ಲಿ ಒಳ್ಳೆಯತನವನ್ನು ಮೂಡಿಸುತ್ತದೆ. ಮುಂದೆ ಆತ ಕೂಡ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ, ಜನರ ಬದುಕಿನಲ್ಲಿ ನಗು ಮೂಡಿಸಲು ಯತ್ನಿಸುತ್ತಾನೆ. ನಾನಿವತ್ತು ದುಡ್ಡಿನಾಸೆಗಾಗಿ ಹುಡುಗನನ್ನು ಬರಿಕೈಯಲ್ಲಿ ಕಳುಹಿಸಬಹುದಿತ್ತು. ಹಾಗೆ ಮಾಡಿದ್ದರೆ ಆ ಹುಡುಗ ಹತ್ತರಲ್ಲಿ ಹನ್ನೊಂದನೆಯ ಗಿರಾಕಿಯೆನಿಸಿಕೊಳ್ಳುತ್ತಿದ್ದ. ಆದರೆ ಈಗಾತ ಒಬ್ಬ ಜವಾಬ್ದಾರಿಯುತ ಅಣ್ಣನಾಗಿ ನನ್ನ ಮನಸ್ಸಿನಲ್ಲಿ ಯಾವತ್ತೂ ಉಳಿದುಕೊಳ್ಳುತ್ತಾನೆ' ಎಂದ. ಅಂಗಡಿಯ ಮಾಲೀಕ ಒಂದು ಗೊಂಬೆಯ ಬೆಲೆಯಲ್ಲಿ ಜಗತ್ತಿಗೆ ಒಳ್ಳೆಯತನವನ್ನು ಹಂಚಿದ್ದ. ನೀವು ಯಾವ ಭಾವನೆಗಳನ್ನು ಜಗತ್ತಿಗೆ ತುಂಬಿಸುತ್ತೀರೋ ಅದು ಹರಡುತ್ತದೆ. ನೀವು ಒಳ್ಳೆಯ ಕೆಲಸಗಳನ್ನು ಮಾಡಿದರೆ, ಜಗತ್ತಿನಲ್ಲಿ ಒಳ್ಳೆಯತನ ಪಸರಿಸುತ್ತದೆ. ಕೆಟ್ಟ ಕೆಲಸಗಳನ್ನು ಮಾಡಿದರೆ ಕೆಟ್ಟತನ ಜಗತ್ತನ್ನು ಆವರಿಸುತ್ತದೆ. Realise you are a very powerful Source of Energy. ನಮಗೆ, ನಮ್ಮಿಂದಾಗಬಹುದಾದ ಒಂದು ಸಣ್ಣ ಸತ್ಕಾರ್ಯಕ್ಕೆ ಇಡೀ ಜಗತ್ತನ್ನು ಬದಲಿಸುವ ಶಕ್ತಿಯಿದೆ. ನಮ್ಮ ಶಕ್ತಿಯ ಬಗ್ಗೆ ನಮಗೆ ಅಪನಂಬಿಕೆ ಬೇಡ. ನಾವಿಂದು ಮಾಡಿದ ಒಳ್ಳೆಯ ಕೆಲಸ ಇನ್ನೆಂದೋ ನಮಗೆ ಒಳ್ಳೆಯದು ಮಾಡುತ್ತದೆ. ನಾವು ಬಯಸಿದ ರೀತಿಯಲ್ಲಿ, ನಮಗೆ ಅರ್ಥವಾಗುವ ರೀತಿಯಲ್ಲಿ ಅಲ್ಲದಿದ್ದರೂ ಯಾವುದೋ ಒಂದು ವಿಧದಲ್ಲಿ ನಮ್ಮ ಒಳ್ಳೆಯತನ ನಮ್ಮನ್ನು ಸದಾ ಕಾಪಾಡುತ್ತದೆ. ಹಾಗಾಗಿ ನಿಮ್ಮ ಪರಿಸರದಲ್ಲಿ ಒಳ್ಳೆಯತನವನ್ನು ಹರಡಿಸಿ.

ರಕ್ತದಾನದ ಪ್ರಯೋಜನ ಏನು ಗೊತ್ತೇ

Play Episode Listen Later Apr 24, 2022 3:53


ರಕ್ತಕ್ಕೆ 'ರಕ್ತ'ವೇ ಪರಾರ‍ಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ ರಕ್ತಕ್ಕೆ 'ರಕ್ತ'ವೇ ಪರಾರ‍ಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು.

ದಶರಥನ ಮಗ #ರಾಮ...ಸರ್ವಜನ ಸುಖಿನೋಭವತು ಕೃಷ್ಣಾರ್ಪಣಮಸ್ತು ಧನ್ಯವಾದಗಳು

Play Episode Listen Later Apr 10, 2022 7:20


• ಬ್ರಹ್ಮನ ಮಗ ಮರೀಚಿ • ಮರೀಚಿಯ ಮಗ ಕಾಶ್ಯಪ • ಕಾಶ್ಯಪರ ಮಗ ಸೂರ್ಯ • ಸೂರ್ಯನ ಮಗ ಮನು • ಮನುವಿನ ಮಗ ಇಕ್ಷ್ವಾಕು • ಇಕ್ಷ್ವಾಕುವಿನ ಮಗ ಕುಕ್ಷಿ • ಕುಕ್ಷಿಯ ಮಗ ವಿಕುಕ್ಷಿ • ವಿಕುಕ್ಷಿಯ ಮಗ ಬಾಣ • ಬಾಣನ ಮಗ ಅನರಣ್ಯ • ಅನರಣ್ಯನ ಮಗ ಪೃಥು • ಪೃಥುವಿನ ಮಗ ತ್ರಿಶಂಕು • ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ) • ದುಂಧುಮಾರುವಿನ ಮಗ ಮಾಂಧಾತ • ಮಾಂಧಾತುವಿನ ಮಗ ಸುಸಂಧಿ • ಸುಸಂಧಿಯ ಮಗ ಧೃವಸಂಧಿ • ಧೃವಸಂಧಿಯ ಮಗ ಭರತ • ಭರತನ ಮಗ ಅಶೀತಿ • అಶೀತಿಯ ಮಗ ಸಗರ • ಸಗರನ ಮಗ ಅಸಮಂಜಸ* • ಅಸಮಂಜಸನ ಮಗ ಅಂಶುಮಂತ • ಅಂಶುಮಂತನ ಮಗ ದಿಲೀಪ • ದಿಲೀಪನ ಮಗ ಭಗೀರಥ • ಭಗೀರಥನ ಮಗ ಕಕುತ್ಸು • ಕಕುತ್ಸುವಿನ ಮಗ ರಘು • ರಘುವಿನ ಮಗ ಪ್ರವುರ್ಧ • ಪ್ರವುರ್ಧನ ಮಗ ಶಂಖನು • ಶಂಖನುವಿನ ಮಗ ಸುದರ್ಶನ • ಸುದರ್ಶನನ ಮಗ ಅಗ್ನಿವರ್ಣ • ಅಗ್ನಿವರ್ಣನ ಮಗ ಶೀಘ್ರವೇದ • ಶೀಘ್ರವೇದನ ಮಗ ಮರು • ಮರುವಿನ ಮಗ ಪ್ರಶಿಷ್ಯಕ • ಪ್ರಶಿಷ್ಯಕನ ಮಗ ಅಂಬರೀಶ • ಅಂಬರೀಶನ ಮಗ ನಹುಶ • ನಹುಶನ ಮಗ ಯಯಾತಿ • ಯಯಾತಿಯ ಮಗ ನಾಭಾಗ • ನಾಭಾಗನ ಮಗ ಅಜನ • ಅಜನ ಮಗ ದಶರಥ* ದಶರಥನ ಮಗ #ರಾಮ... ರಾಮನಿಗೆ ಲವ-ಕುಶರೀರ್ವರು ಮಕ್ಕಳು.. • ಭರತನಿಗೆ ತಕ್ಷ-ಪುಷ್ಕಲರು.. • ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು.. • ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು.. • ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ.. • ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು.. • ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ. • ಅವನಿಂದ ನಿಷಧ • ನಭ • ಪುಂಡರೀಕ • ಕ್ಷೇಮಧನ್ವಾ • ದೇವಾನೀಕ • ಅನೀಹ • ಪಾರಿಯಾತ್ರ • ಬಲಸ್ಥಲ • ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ. • ಇವನ ಮಗ ಖಗಣ • ವಿಧೃತಿ • ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ. • ಹಿರಣ್ಯನಾಭನ ಮಗ ಪುಷ್ಯ • ಧ್ರುವಸಂಧಿ • ಸುದರ್ಶನ • ಅಗ್ನಿವರ್ಣ • ಶೀಘ್ರ • ಮರು.ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ. • ಮರುವಿನ ಮಗ ಪ್ರಸುಶ್ರುತ • ಸಂಧಿ • ಅಮರ್ಷಣ • ಮಹಸ್ವಂತ • ವಿಶ್ವಸಾಹ್ವ • ಪ್ರಸೇನಜಿತ್ • ತಕ್ಷಕ • ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ. • ಬೃಹದ್ಬಲನ ಮಗ ಬೃಹದ್ರಣ • ಉರುಕ್ರಿ • ವತ್ಸವೃದ್ಧ • ಪ್ರತಿವ್ಯೋಮ • ಭಾನು • ದಿವಾಕ • ಸಹದೇವ • ಬೃಹದಶ್ವ • ಭಾನುಮಂತ • ಪ್ರತೀಕಾಶ್ವ • ಸುಪ್ರತೀಕ • ಮರುದೇವ • ಸುನಕ್ಷತ್ರ • ಪುಷ್ಕರ • ಅಂತರಿಕ್ಷ • ಸುತಪಸ • ಅಮಿತ್ರಜಿತ್ • ಬೃಹದ್ರಾಜ • ಬರ್ಹಿ • ಕೃತಂಜಯ • ರಣಂಜಯ • ಸಂಜಯ • ಶಾಕ್ಯ • ಶುದ್ಧೋದ • ಲಾಂಗಲ • ಪ್ರಸೇನಜಿತ್ • ಕ್ಷುದ್ರಕ • ರಣಕ • ಸುರಥ.. ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು. ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು. ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು. ******ಅಮೂಲ್ಯ_ಮಾಹಿತಿ 1. ರಾಮನಾಮಕ್ಕೆ ಸಮನಾದ ನಾಮ ಇನ್ನೊಂದಿಲ್ಲ. 2. ಗೌರೀಶಿಖರಕ್ಕೆ ಸಮನಾದ ಶಿಖರ ಇನ್ನೊಂದಿಲ್ಲ. 3. ಸುಳ್ಳಿಗೆ ಸಮನಾದ ಪಾಪ ಇನ್ನೊಂದಿಲ್ಲ. 4. ಭಾಗೀರಥಿಗೆ ಸಮನಾದ ತೀರ್ಥ ಇನ್ನೊಂದಿಲ್ಲ. 5. ತಾಯಿತಂದೆಯರಿಗೆ ಸಮನಾದ ದೇವರಿಲ್ಲ. 6. ಭಾಗವತಕ್ಕೆ ಸಮನಾದ ಪುರಾಣರತ್ನ ಇನ್ನೊಂದಿಲ್ಲ. 7. ಪತ್ನಿಗೆ ಸಮಳಾದ ಸ್ನೇಹಿತೆ ಇನ್ನೊಬ್ಬಳ್ಳಿಲ್ಲ. 8. ಭಾರತಕ್ಕೆ ಸಮನಾದ ದೇಶ ಇನ್ನೊಂದಿಲ್ಲ. 9. ಗೋವಿಗೆ ಸಮಳಾದ ಮಾತೆ ಇನ್ನೊಬ್ಬಳಿಲ್ಲ . 10. ಗೃಹಸ್ಥಾಶ್ರಮಕ್ಕೆ ಸಮನಾದ ಆಶ್ರಮ ಇನ್ನೊಂದಿಲ್ಲ. 11. ಗೀತೆಗೆ ಸಮನಾದ ಗ್ರಂಥ ಇನ್ನೊಂದಿಲ್ಲ. 12. ಗಾಯತ್ರಿಗೆ ಸಮನಾದ ಮಂತ್ರ ಇನ್ನೊಂದಿಲ್ಲ. 13. ಧ್ಯಾನಕ್ಕೆ ಸಮನಾದ ಆನಂದ ಇನ್ನೊಂದಿಲ್ಲ. 14. ಗುರು ಹಿರಿಯರ ಆಶೀರ್ವಾದಕ್ಕೆ ಸಮನಾದ ಭಾಗ್ಯ ಇನ್ನೊಂದಿಲ್ಲ. ▬▬▬▬▬ஜ۩۞۩ஜ▬▬▬▬▬ ▬▬▬▬▬▬ஜ۩۞۩ஜ▬▬▬▬▬▬

ಬದಲಾವಣೆ ಯಾವಾಗಲೂ ಸಣ್ಣದರಿಂದನೇ ಆರಂಭವಾಗುತ್ತದೆ. ಆದರೆ ಆ ಬದಲಾವಣೆ ನಿಷ್ಕಲ್ಮಷ ಹೃದಯದ ಮನಸ್ಸಿನಿಂದ ಆರಂಭವಾ

Play Episode Listen Later Mar 29, 2022 6:26


ಪಟ್ ಅಂತ ಬಡಿದು ಅರ್ಧಕ್ಕೆ ನಿಂತ ಶಾಯಿಯನ್ನು ಮುಂದೋಡಿಸುವುದು, ತೆಂಗಿನ ಎಣ್ಣೆ ಕಡ್ಡಿಯ ಹಿಂದೆ ತುಂಬಿ ಸ್ವಲ್ಪನೂ ಶಾಯಿ ಉಳಿಸದೇ ಹಿಂಡಿ ತೆಗೆಯೋದು ಇಂತಹವೆಲ್ಲಾ ಪ್ರಯೋಗಗಳು ಹಣದ ಬೆಲೆ ತಿಳಿಸುವುದರ ಜೊತೆ ವಸ್ತುವನ್ನು ಪರಿಪೂರ್ಣವಾಗಿ ಬಳಸುವ ಪಾಠವನ್ನೂ ಕಲಿಸುತ್ತಿದ್ದವು.. ಈಗ?? ಕಾಲ ಬದಲಾಗಿದೆ. ರಿಫಿಲ್ ಬದಲಾಯಿಸುವುದಿರಲಿ, ಸ್ವಲ್ಪ ಹಿಡಿಯದ ಪೆನ್ ಇದ್ದರೂ ಮಗು ಬಿಸಾಡಿ ಬಿಡುತ್ತೆ.. ಮಕ್ಕಳ ತಪ್ಪು ಅನ್ನುವುದಕ್ಕಿಂತ ಆ ಪೆನ್ನಿನ ವಾಸ್ತವ ಬೆಲೆ ಅವನಿಗೆ ಅರಿವಿಲ್ಲದಿರುವುದು ಕಾರಣ ಇರಬಹುದು. ಆದರೆ ಯಾವುದೇ ವಸ್ತುವಿನ ಬಳಕೆಯ ಪ್ರಮಾಣ ಹೆಚ್ಚಿದಂತೆ ಭೂಮಿ ತಾಯಿ ಹೊರುವ ಕಸದ ಪ್ರಮಾಣವೂ ಏರಿಕೆಯಾಗುವ ಗಂಭೀರ ಪರಿಣಾಮ ಇದ್ದದ್ದೆ... ..

ಜಲ ಸಂರಕ್ಷಣೆಯ ಪ್ರಾಮುಖ್ಯತೆ, ಜಲ ಸಂರಕ್ಷಣೆಯ ತಂತ್ರಗಳು, ಮಳೆ ನೀರು ಸಂಗ್ರಹಣೆ, ಅಂತರ್ಜಲ ಸಂರಕ್ಷಣೆ ದೈನಂದಿನ ಕೆ

Play Episode Listen Later Mar 24, 2022 9:41


Home  ಲೇಖನ ಲೇಖನ ನೀರನ್ನು ಉಳಿಸುವುದು ಹೇಗೆ?How to save water? By  Jana Mana  - April 5, 2021 0 1048  ನೀರನ್ನು ಹೇಗೆ ಉಳಿಸುವುದು, ವಿಧಾನಗಳು, ಕ್ರಮಗಳು, ನೀರಿನ ಸಂರಕ್ಷಣೆಯ ಮಹತ್ವ.. ಪರಿವಿಡಿ ನೀರನ್ನು ಹೇಗೆ ಉಳಿಸುವುದು, ವಿಧಾನಗಳು, ಕ್ರಮಗಳು, ನೀರಿನ ಸಂರಕ್ಷಣೆಯ ಮಹತ್ವ.. ನೀರಿನ ಪ್ರಾಮುಖ್ಯತೆ ನೀರನ್ನು ಹೇಗೆ ಉಳಿಸುವುದು ಮತ್ತು ಉಳಿಸುವ ಮಾರ್ಗಗಳು. ನೀರನ್ನು ಉಳಿಸುವ ಅವಶ್ಯಕತೆ ಏಕೆ ಇದೆ? ಹಣ ಉಳಿಸಲು ವಿದ್ಯುತ್ ಉಳಿಸಲು ನೀರನ್ನುಉಳಿಸುವುದು ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ. ನೀರಿಲ್ಲ, ಜೀವವಿಲ್ಲ. ನೀವು ನೀರನ್ನು ಸಂರಕ್ಷಿಸಿದರೆ, ಆಗ ಜೀವ ರಕ್ಷಣೆ ಇರುತ್ತದೆ. ನೀರು ನೀರು, ನಮ್ಮ ಜೀವನವೆಲ್ಲವೂ ನೀರಿಲ್ಲದಿದ್ದರೆ ನಮ್ಮ ದೌರ್ಭಾಗ್ಯ. ನೀರು ಇದ್ದರೆ ಜೀವನವಿದೆ ಕೃಷಿಯಲ್ಲಿ ನೀರು ಉಳಿತಾಯ ಇಂದು ಅಗತ್ಯವಿದೆ ನಾವು ನೀರನ್ನು ಏಕೆ ಉಳಿಸಬೇಕು? ನೀರಿನ ಸ್ವಚ್ ತೆಯು ಇಂದು ನೀರಿನ ಅವಶ್ಯಕತೆಯಾಗಿದೆ. FAQ ನೀರಿನ ಪ್ರಾಮುಖ್ಯತೆ ನೀರು ಜೀವನ, ನಾವು ಅದನ್ನು ಯಾವಾಗಲೂ ಕೇಳುತ್ತೇವೆ, ಆದರೆ ಎಷ್ಟು ನಂಬುತ್ತೇವೆ? ನಾವು ಮನುಷ್ಯರಂತೆ ನೀರನ್ನು ರಕ್ಷಿಸುತ್ತೇವೆಯೇ?. ಯಾವುದೇ ಮಾನವನ ಜೀವನದಷ್ಟು ನಾವು ನೀರಿಗೆ ಮಹತ್ವ ವನ್ನು ನೀಡುತ್ತೇವೆಯೇ? ಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿರುತ್ತಾರೆ. ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇನ್ನೂ ನಾವು ಅದನ್ನು ವ್ಯರ್ಥವಾಗಿ ಖರ್ಚು ಮಾಡುತ್ತೇವೆ. ನಮ್ಮ ಭೂಮಿಯ 70% ನೀರಿನಿಂದ ಮುಳುಗಿದೆ ಆದರೆ 1-2% ಮಾತ್ರ ಬಳಸಲು ಯೋಗ್ಯವಾಗಿದೆ. ನಾವು ನೀರನ್ನು ಸಾಕಷ್ಟು ಉಳಿಸಬೇಕಾಗಿದೆ, ಇಲ್ಲದಿದ್ದರೆ ನಾವು ಪ್ರತಿ ಹನಿಯನ್ನೂ ಹಂಬಲಿಸುವ ದಿನ ದೂರವಿರುವುದಿಲ್ಲ. ನೀರು ಎಂತಹ ಸಂಪತ್ತು ಎಂದರೆ ಅದನ್ನು ನಾವು ಉಳಿಸುತ್ತೇವೆ ಆಗ ಮಾತ್ರ ನಮ್ಮ ಭವಿಷ್ಯದ ಪೀಳಿಗೆಗೆ ಅದನ್ನು ಬಳಸಲು ಸಾಧ್ಯವಾಗುತ್ತದೆ. ನೀರು ಇದ್ದರೆ ಭವಿಷ್ಯವಿದೆ. ನೀರು ವ್ಯರ್ಥವಾಗುವುದನ್ನು ತಡೆಯಲು, ನಾವು ನಮ್ಮ ಮನೆಯಿಂದ ಪ್ರಾರಂಭಿಸಬಹುದು. ಸ್ವಲ್ಪ ತಿಳುವಳಿಕೆ ಮತ್ತು ಒಂದು ಹೆಜ್ಜೆಯೊಂದಿಗೆ, ನಾವು ಈ ಉಡುಗೊರೆಯನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಬಹುದು. ನೀರನ್ನು ಹೇಗೆ ಉಳಿಸುವುದು ಮತ್ತು ಉಳಿಸುವ ಮಾರ್ಗಗಳು. ಟ್ಯಾಪ್ ಅನ್ನು ಮುಕ್ತವಾಗಿ ಬಿಡಬೇಡಿ – ನೀವು ಬ್ರಷ್ ಮಾಡುವಾಗ, ಕ್ಷೌರ ಮಾಡುವಾಗ, ಸಿಂಕ್‌ನಲ್ಲಿ ಭಕ್ಷ್ಯಗಳನ್ನು ತೊಳೆಯುವಾಗ, ಅಗತ್ಯವಿಲ್ಲದಿದ್ದಾಗ ಟ್ಯಾಪ್ ಅನ್ನು ಮುಚ್ಚಿಡಿ, ನೀರನ್ನು ವ್ಯರ್ಥ ಮಾಡಬೇಡಿ. ಇದನ್ನು ಮಾಡುವುದರಿಂದ, ನಾವು ಪ್ರತಿ ನಿಮಿಷಕ್ಕೆ 6 ಲೀಟರ್‌ನಲ್ಲಿ ನೀರನ್ನು ಉಳಿಸಬಹುದು. ಸ್ನಾನ ಮಾಡುವಾಗಲೂ ಬಕೆಟ್‌ನಿಂದ ನೀರನ್ನು ವ್ಯರ್ಥ ಮಾಡಬೇಡಿ. ಸ್ನಾನ ಮಾಡಲು ಶವರ್ ಬದಲಿಗೆ ಬಕೆಟ್ ಬಳಸಿ. ನೀವು ಶವರ್ ಬಳಸುತ್ತಿದ್ದರೂ, ಸಣ್ಣದನ್ನು ಅನ್ವಯಿಸಿ, ಅದು ನೀರಿನ ಬಳಕೆಯನ್ನು ಕಡಿಮೆ ಮಾಡುತ್ತದೆ. ಶವರ್ ಬಳಸದೆ, ನಾವು ಪ್ರತಿ 1 ನಿಮಿಷಕ್ಕೆ 40-45 ಲೀಟರ್ ನೀರನ್ನು ಉಳಿಸಬಹುದು. ಸೋರಿಕೆಯಾದಲ್ಲೆಲ್ಲಾ ಅದನ್ನು ತಕ್ಷಣ ಸರಿಪಡಿಸಿ. ಇಲ್ಲದಿದ್ದರೆ, ಅದರ ಕೆಳಗೆ ಒಂದು ಬಕೆಟ್ ಅಥವಾ ಬೌಲ್ ಇರಿಸಿ ನಂತರ ಆ ನೀರನ್ನು ಬಳಸಿ. ಕಡಿಮೆ ವಿದ್ಯುತ್ ತೊಳೆಯುವ ಯಂತ್ರವನ್ನು ಬಳಸಿ, ಇದು ನೀರನ್ನು ಉಳಿಸುತ್ತದೆ ಮತ್ತು ವಿದ್ಯುತ್ ಕಡಿಮೆ ಮಾಡುತ್ತದೆ. ತೊಳೆಯುವ ಯಂತ್ರದಲ್ಲಿ ಕೆಲವು ಬಟ್ಟೆಗಳನ್ನು ತೊಳೆಯುವ ಬದಲು, ಪ್ರತಿದಿನ ಅವುಗಳನ್ನು ತೊಳೆಯಿರಿ. ಸಸ್ಯಗಳಲ್ಲಿನ ನೀರಿನ ಕೊಳವೆಗಳಿಗೆ ಬದಲಾಗಿ, ಅದನ್ನು ನೀರಿನ ಕ್ಯಾನ್ನಿಂದ ಬದಲಾಯಿಸಿ, ಅದು ತುಂಬಾ ಕಡಿಮೆ ನೀರನ್ನು ಬಳಸುತ್ತದೆ. ಪೈಪ್ನಿಂದ 1 ಗಂಟೆಯಲ್ಲಿ 1000 ಲೀಟರ್ ನೀರನ್ನು ಬಳಸಲಾಗುತ್ತದೆ, ಇದು ಸಂಪೂರ್ಣ ನೀರಿನ ನಷ್ಟವಾಗಿದೆ. ಸಾಧ್ಯವಾದರೆ, ತೊಳೆಯುವ ನೀರನ್ನು ಬೀಜಕೋಶಗಳ ಮೇಲೆ ಸುರಿಯಿರಿ. ಮನೆಯಲ್ಲಿ ನೀರಿನ ಮೀಟರ್ ಪಡೆಯಿರಿ. ನೀವು ಬಳಸುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಅದರ ಬಿಲ್ ಬರುತ್ತದೆ. ಬಿಲ್ ನೀಡುವಾಗ, ನೀವು ಎಷ್ಟು ವ್ಯರ್ಥ ಮಾಡಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಮತ್ತು ನಂತರ ಮುಂಭಾಗದಿಂದ ನೋಡಿಕೊಳ್ಳಿ. ಗೀಸರ್‌ನಿಂದ ಬಿಸಿನೀರನ್ನು ಹೊರತೆಗೆಯುವಾಗ, ಮೊದಲು ಅದರಲ್ಲಿ ತಣ್ಣೀರು ಬರುತ್ತದೆ, ಅದನ್ನು ನಾವು ಎಸೆಯುತ್ತೇವೆ. ಇದನ್ನು ಮಾಡಬೇಡಿ, ತಣ್ಣೀರನ್ನು ಪ್ರತ್ಯೇಕ ಬಕೆಟ್‌ನಲ್ಲಿ ತುಂಬಿಸಿ, ನಂತರ ಇನ್ನೊಂದರಲ್ಲಿ ಬಿಸಿನೀರನ್ನು ತುಂಬಿಸಿ. ನೀವು ಈ ನೀರನ್ನು ಬೇರೆಡೆ ಬಳಸಬಹುದು. ಫ್ಲಶ್‌ನಲ್ಲಿ ಹೆಚ್ಚು ನೀರನ್ನು ಬಳಸಲಾಗುತ್ತದೆ, ಆದ್ದರಿಂದ ಕಡಿಮೆ ಪ್ರೆಷರ್ ಇರುವ ಫ್ಲಶ್ ಪಡೆಯಿರಿ ಇದರಲ್ಲಿ ನೀರಿನ ಬಲ ಕಡಿಮೆ ಇರುತ್ತದೆ. ಚರಂಡಿಗಳನ್ನು ಯಾವಾಗಲೂ ಸ್ವಚ್ ವಾಗಿರಿಸಿಕೊಳ್ಳಿ, ಏಕೆಂದರೆ ಅದು ಉಸಿರುಗಟ್ಟಿದಾಗ ಅದನ್ನು ಸ್ವಚ್ ಗೊಳಿಸಲು ಸಾಕಷ್ಟು ನೀರು ಸುರಿಯಲಾಗುತ್ತದೆ. ಆದ್ದರಿಂದ ಮೊದಲೇ ಸ್ವಚ್ ಗೊಳಿಸಿ. ಮರಗಳನ್ನು ನೆಡುವುದರಿಂದ ಅದು ಚೆನ್ನಾಗಿ ಮಳೆಯಾಗುತ್ತದೆ ಮತ್ತು ನದಿಯ ಚರಂಡಿಗಳನ್ನು ತುಂಬುತ್ತದೆ. ನೀರನ್ನು ಉಳಿಸುವ ಅವಶ್ಯಕತೆ ಏಕೆ ಇದೆ? ಹಣ ಉಳಿಸಲು ವಿದ್ಯುತ್ ಉಳಿಸಲು ನೀರನ್ನುಉಳಿಸುವುದು ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ. ಯಾವಾಗಲೂ ನೀರನ್ನು ರಕ್ಷಿಸಿ, ಮತ್ತು ಇತರರನ್ನು ಹಾಗೆ ಮಾಡಲು ಪ್ರೇರೇಪಿಸಿ. ನಾವು ಮಾಡಿದಾಗ ಮಾತ್ರ, ನಮ್ಮ ಪುಟ್ಟ ಮಕ್ಕಳು ನಮ್ಮಿಂದ ಕಲಿಯುತ್ತಾರೆ. ದಾರಿಯಲ್ಲಿ ಎಲ್ಲಿಯಾದರೂ ಟ್ಯಾಪ್ ತೆರೆದಿದ್ದರೆ, ಅದನ್ನು ಮುಚ್ಚಿ, ಪೈಪ್‌ಲೈನ್ ಮುರಿದಿದ್ದರೆ ದೂರು ನೀಡಿ. ಇತ್ತೀಚಿನ ದಿನಗಳಲ್ಲಿ, ನಮ್ಮ ಮನೆಗೆ ನೀರು ಬರುತ್ತದೆ, ನೀರಿನ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಜನರು 4-5 ಕಿ.ಮೀ ನಡೆದ ನಂತರ ನೀರು ತುಂಬಲು ಹೋಗುತ್ತಾರೆ. ಅವರು 1-2 ಬಕೆಟ್ಗಳಿಗೆ ಸಾಲಿನಲ್ಲಿ ನಿಲ್ಲಬೇಕು. ನಾವು ಅವರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಕನಿಷ್ಠ ನೀರನ್ನು ಉಳಿಸಿ, ಇದರಿಂದ ಅದು ಅವರಿಗೆ ತಲುಪುತ್ತದೆ. ನಿಮ್ಮ ಮನೆಯಿಂದ ಇಂದಿನಿಂದ, ನಾವೆಲ್ಲರೂ ಒಟ್ಟಾಗಿ ತೆಗೆದುಕೊಳ್ಳಬೇಕಾದ

ಆನೆಗುಡ್ಡೆ ಶ್ರೀ ವಿನಾಯಕ

Play Episode Listen Later Mar 21, 2022 5:34


ದ್ವಾಪರ ಯುಗದ ಸಮಯವದು. ಕರ್ನಾಟಕ ಸಮುದ್ರ ತೀರದಲ್ಲಿರುವ ಕಾಡಿನೊಳಗೆ ನಾಗಚಲಂ ಎಂಬ ಒಂದು ಗುಡ್ಡದ ಸಮೀಪ ಗೌತಮ ಮಹರ್ಷಿಯ ಆಶ್ರಮವಿತ್ತು. ಅವರು ಯಾಗವನ್ನು ಮಾಡಿ ಲೋಕದಲ್ಲಿ ನ್ಯಾಯಧರ್ಮಗಳನ್ನು ನೆಲೆನಿಲ್ಲಿಸಿಕೊಂಡಿದ್ದರು. ಅವರೊಂದಿಗೆ ಅಗಸ್ತ್ಯ ಋಷಿಗಳೂ, ಇನ್ನು ಹಲವಾರು ಋಷಿಗಳು ಅಲ್ಲಿ ವಾಸವಾಗಿದ್ದು ತಪಸ್ಸು ಮಾಡಿಕೊಂಡಿದ್ದರು. ವರವನ್ನು ಪಡೆದ ಕುಂಭಾ ಎಂಬ ರಾಕ್ಷಸ ಕುಂಭಾ ಎನ್ನುವ ಒಬ್ಬ ರಾಕ್ಷಸ, ಶಿವಭಕ್ತನು ಕೂಡ. ಕಠಿಣ ತಪಸ್ಸುಗಳನ್ನಾಚರಿಸಿ ಕೈಲಾಸನಾಥನಿಂದ ಹಲವು ವರಗಳನ್ನು ಪಡೆದುಕೊಂಡನು. ಆ ರಾಕ್ಷಸನು ಧಾರ್ಮಿಕವಾಗಿ ನಡೆಸುವ ಯಾಗಗಳನ್ನೆಲ್ಲಾ ಕೆಡಿಸಿ ಅವರಿಗೆ ತುಂಬಾ ತೊಂದರೆ ಕೊಡುತ್ತಿದ್ದನು. ಋಷಿಗಳಿಂದ ಅವನನ್ನು ಏನೂ ಮಾಡಲು ಆಗಲಿಲ್ಲ. ಆ ರಾಕ್ಷಸನನ್ನು ಅಳಿಸುವ ಯಾವ ಉಪಾಯವೂ ಹೊಳೆಯಲಿಲ್ಲ. ಆ ಸಮಯದಲ್ಲಿ ವನವಾಸದಲ್ಲಿದ್ದ ಪಂಚಪಾಂಡವರು ಗೌತಮರ ಆಶ್ರಮಕ್ಕೆ ಬಂದರು. ಗೌತಮರು ಅತಿಥಿಗಳಿಗೆ ಆಹಾರ ಮಾತ್ರವಲ್ಲ ಆಶೀರ್ವಾದವನ್ನೂ ನೀಡಿದರು. ನಂತರ ಗೌತಮರು ಕುಂಭಾ ಕೊಡುವ ತೊಂದರೆಗಳು ಕುರಿತು ಧರ್ಮರಾಜನ ಹತ್ತಿರ ಹೇಳಿದರು. ಅವನ ಆರ್ಭಟವನ್ನು ನಿಲ್ಲಿಸಬೇಕೆಂದು ಕೇಳಿಕೊಂಡರು. ರಾಕ್ಷಸರೊಂದಿಗೆ ಯುದ್ಧ ಮಾಡುವುದೆಂದರೆ ಭೀಮನಿಗೆ ತುಂಬ ಪ್ರಿಯವಾದ ವಿಷಯ, ಅದ್ದರಿಂದ ಧರ್ಮರಾಯನು ಭೀಮನನ್ನು ಕರೆದು ಆ ರಾಕ್ಷಸನನ್ನು ವಧಿಸಿ ಬಾ ಎಂದು ಆಜ್ಞೆ ಇಟ್ಟ ಕ್ಷಣ ಕುಂಭಾ ಇರುವ ಜಾಗಕ್ಕೆ ಹೋಗಿ ಆ ರಾಕ್ಷಸನನ್ನು ಯುದ್ಧಕ್ಕೆ ಆಹ್ವಾನಿಸಿದನು. ವೀರಾವೇಷದಿಂದ ಕುಂಭಾ ಯುದ್ಧಕ್ಕೆ ಬಂದ. ಕುಂಭನಿಗೂ ಭೀಮನಿಗೂ ಮಹಾಭಯಂಕರ ಯುದ್ಧ ನಡೆಯಿತು. ಆದರೆ ಹಲವಾರು ವರಗಳನ್ನು ಪಡೆದು ಶಕ್ತಿಶಾಲಿಯಾದ ಕುಂಭಾನಿಗೆ ದಿನಪೂರ್ತಿ ಯುದ್ಧ ಮಾಡಿಯೂ ಗೆಲ್ಲಲಾಗಲಿಲ್ಲ.

ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು ಆಕೆಗೆ....ಒಂದು..ನಮನ....ಅಂತಾರಾಷ್ಟ್ರೀಯ ಮಹಿಳಾ ದಿನ 2022

Play Episode Listen Later Mar 8, 2022 7:58


ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ.. ರಾಮನಿಗೆ➖ಸೀತೆ ಕೃಷ್ಣನಿಗೆ➖ರಾಧೆ ಶಿವನಿಗೆ➖ಪಾರ್ವತಿ ನಾರಾಯಣನಿಗೆ➖ಲಕ್ಷ್ಮೀ ಮಂತ್ರ ಪಠಣದಲ್ಲಿ➖ಗಾಯತ್ರಿ ಗ್ರಂಥ ಪಠಣದಲ್ಲಿ➖ಗೀತಾ ದೇವರೆದುರಿಗೆ➖ವಂದನ, ಅರ್ಚನ, ಪೂಜಾ, ಆರತಿ, ಆರಾಧನಾ.. ಇವರ ಜೊತೆಗೆ ಶ್ರದ್ಧಾ.

ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.....

Play Episode Listen Later Feb 27, 2022 5:16


ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ !!! ಹೆತ್ತ ತಂದೆತಾಯಿ ಇರುವವರೆಗೆ ಮಾತ್ರ ಊರು ಒಡಹುಟ್ಟಿದವರು ಬಂಧು ಮಿತ್ರರು ಎಂಬ ಕೊಂಡಿ ಬೆಸೆದುಕೊಂಡಿರುತ್ತದೆ, ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ದೂರಾಗುತ್ತಲೇ ಹೋಗುತ್ತಾರೆ. ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ. ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು. ಅಂತಹ ಕ್ಷಣವನ್ನು ಧೈರ್ಯದಿಂದ ಎದುರಿಸಲು ಈಗಿನಿಂದಲೇ ತಯಾರಿ ನಡೆಸಿದರೆ ಉತ್ತಮ. ಏಕೆಂದರೆ ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ, ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, ಸಂಬಂಧಗಳೇನಿದ್ದರೂ ತಂದೆತಾಯಿ ಒಡಹುಟ್ಟಿದವರೊಂದಿಗೆ ಬೆಸೆದುಕೊಂಡಿರುತ್ತದೆ. ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣತಮ್ಮಂದಿರೊಂದಿಗೆ ಹಾಗೂ ಅಕ್ಕತಂಗಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ. ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ನಿದರ್ಶನಗಳು ನೋಡಲು ಸಿಗುತ್ತದೆ. ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ ಪ್ರತ್ಯೇಕ ಸಂಸಾರಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು ಹಾಗೂ ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಇಂತಹ ಒಂದು ಮನಸ್ಥಿತಿ ಅನೇಕ ಕುಟುಂಬಗಳನ್ನು ಒಡೆದು ಪರದೇಶಿ ಬದುಕುಬಾಳುವಂತೆ ಮಾಡುವುದು ಮಾತ್ರ ನಿಶ್ಚಿತ. ತಮ್ಮ ಮಕ್ಕಳನ್ನು ಕುಟುಂಬದ ಇತರ ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವುಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಹಸ್ತಕ್ಷೇಪ ಮಾಡಿ ದ್ವೇಷದ ಕಿಡಿ ಬಿತ್ತುವುದು, ಮುಂದೆ ಅವರಿಗೂ ಕುಟುಂಬದ ಸದಸ್ಯರ ಬಗ್ಗೆ ಅಸಮಾಧಾನವಾಗುವಂತೆ ಪ್ರಚೋದಿಸುವುದು ಸಾಮಾನ್ಯ ವಾಗಿಬಿಟ್ಟಿದೆ. ತಮಗೆ ಸಂಬಂಧವಿಲ್ಲದ ಅನೇಕ ವಿಷಯಗಳಲ್ಲಿ ಅನಾವಶ್ಯಕ ಮೂಗುತೂರಿಸಿ ಇಲ್ಲಸಲ್ಲದ ಪಿತೂರಿ ನಡೆಸುವವರ ಹಾಗೂ ಇನ್ನೊಬ್ಬರ ಭಾವನೆಗಳಿಗೆ ವಿಕೃತವಾಗಿ ಸ್ಪಂದಿಸಿ ಅಪಹಾಸ್ಯಮಾಡುವ ಪ್ರವೃತ್ತಿಯವರು ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಇಂತಹ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನಮ್ಮವರೊಂದಿಗೇ ಅಪರಿಚಿತರಾಗುತ್ತಿರುವ ಸಂಶಯ ಮನಸ್ಸಿನಲ್ಲಿ ಮೂಡುವುದು ನಿಜವಲ್ಲವೇ ಸ್ನೇಹಿತರೆ. ಹೆತ್ತವರು ಬದುಕಿರುವವರೆಗೂ ಕುಟುಂಬದಲ್ಲಿ ಒಂದು ಭದ್ರತೆ ಇರುತ್ತದೆ, ಯಾವುದೇ ವಿಚಾರವಾದರೂ ಸಮಯೋಚಿತವಾಗಿ ಯೋಚಿಸಿ ಬುದ್ದಿಹೇಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳನ್ನು ಆಗಾಗ ನೋಡಬೇಕೆಂಬ ಹಂಬಲದಿಂದ ಎಷ್ಟೇ ದೂರವಿದ್ದರೂ ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಬ್ಬಹರಿದಿನಗಳೆಂದರೆ ಎಲ್ಲರೂ ಜೊತೆಯಾಗಿಯೇ ಆಚರಿಸಿಕೊಳ್ಳಬೇಕೆನ್ನುವ ಅಪೇಕ್ಷೆಯಂತೆ ಸಾಧ್ಯವಾದಷ್ಟು ಕುಟುಂಬದ ಐಕ್ಯತೆಯನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಇದನ್ನು ಎಲ್ಲರೂ ತಮ್ಮ ಕಾಲಾನಂತವೂ ನಡೆಸಿಕೊಂಡು ಹೋಗಬೇಕೆನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಅದರೆ ಇಂದಿನ ಜೀವನ ಶೈಲಿ ಈ ತಲೆಮಾರಿನ ತೋರಿಕೆಯ ಪ್ರೀತಿ ವಿಶ್ವಾಸ ಇಂತಹ ಒಂದು ಬಾಂಧವ್ಯದ ಕೊಂಡಿಬೆಸೆಯುವಲ್ಲಿ ವಿಫಲವಾಗಿದೆ ಎನ್ನಬಹುದು. ಬಹಳಷ್ಟು ಕುಟುಂಬಗಳು ಹಂಚಿಹರಡಿ ಪ್ರತ್ಯೇಕ ಸಂಸಾರಗಳಾಗಿ ಅಷ್ಟಕ್ಕೇ ಸೀಮಿತಗೊಂಡಿವೆ ಅವರ ಆಚರಣೆ ಹಾಗೂ ಬಾಂಧವ್ಯ...ತವರಿನ ಸಂಪರ್ಕಕಳೆದುಕೊಂಡು ಮನಸ್ಸಿನಲ್ಲೇ ದುಃಖಿಸುತ್ತಿರುವ ಎಷ್ಟೋ ಜನರನ್ನು ನಾವು ನೋಡುತ್ತಿದ್ದೇವೆ... ಇವತ್ತಿಗೂ ಜನಮಾನಸದಲ್ಲಿ ಉಳಿದಿರುವುದು ಮಾತ್ರ ತಂದೆತಾಯಿಗಳು ಬದುಕಿರುವವರೆಗೆ ಅನುಭವಿಸಿದ ಸಂಭ್ರಮದ ದಿನಗಳು ಹಾಗೂ ಆದರಾಥಿತ್ಯದ ಪ್ರೀತಿ ವಿಶ್ವಾಸದಿಂದ ಒಡಹುಟ್ಟಿದವರೊಂದಿಗೆ ನಕ್ಕುನಲಿದ ಕ್ಷಣಗಳು. ಎಲ್ಲಾ ಸದಸ್ಯರನ್ನೂ ಸಮಾನವಾಗಿ ಕಾಣುವ ಮನಸ್ಸು ಇರಬೇಕು ..‌ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು....., ಕೃಷ್ಣಾರ್ಪಣಮಸ್ತು (ಸತ್ಸಂಗ ಸಂಗ್ರಹ)

ಬೈಂದೂರು: ಶಿವಲಿಂಗ ಸ್ಪರ್ಶಪೂಜೆಯ ವಿಶಿಷ್ಟ ಕ್ಷೇತ್ರ ವಣಕೊಡ್ಲು

Play Episode Listen Later Feb 26, 2022 7:19


ಕುಂದಾಪ್ರ ಡಾಟ್ ಕಾಂ ಲೇಖನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಜರುತ್ತಲಿದೆ. ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಮಾರ್ಚ್ 7ರಂದು ಬೆಳಿಗ್ಗೆ 8 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮಾರ್ಚ್ 8ರಂದು ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಯಕ್ಷಗಾನ ಬಯಲಾಟ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪ್ರ ಡಾಟ್ ಕಾಂ ಲೇಖನ ಹಲವು ಗಣ್ಯ ಮಹನೀಯರು ಮಹಾಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಅಣ್ಣಪ್ಪ ಶೆಟ್ಟಿ ಯಡ್ತರೆ, ಡಾ. ಮಿಥುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ ಮೊದಲಾದವರು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಬೈಂದೂರು ಪೋಲಿಸರು ಶಿಸ್ತು ವ್ಯವಸ್ಥೆಯನ್ನು ಕೈಗೊಂಡಿದ್ದರು. ಸ್ಥಳೀಯ ಉತ್ಸಾಹೀ ಯುವಕರು ಸ್ವಯಂಸೇವಕರಾಗಿ ಉತ್ಸವದ ಯಶಸ್ಸಿಗೆ ಸಹಕರಿಸಿದರು. ವಿಶಿಷ್ಟ ಕ್ಷೇತ್ರ:ಕ್ರಿ. ಶ. 958ನೇ ಇಸವಿಯಲ್ಲಿ ರಾಜಾಶ್ರಯವನ್ನು ಪಡೆದಿದ್ದ ದೇಗುಲವೆನ್ನಲಾದ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಶಿವಲಿಂಗ ಸ್ಪರ್ಶ ಪೂಜೆಯ ವಿಶಿಷ್ಟ ಕ್ಷೇತ್ರವೆನಿಸಿದೆ. ಮಹಾಶಿವರಾತ್ರಿ ದಿನವನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಅರ್ಚಕರಿಂದ ದೇಗುಲದಲ್ಲಿ ಪೂಜೆ ನಡೆಯುತ್ತದೆ. ಮಹಾಶಿವರಾತ್ರಿಯಂದು ಈ ದೇಗುಲಕ್ಕೆ ಹರಿದು ಬರುವ ಭಕ್ತ ಜನಸಾಗರವು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ಮುಟ್ಟಿ ಪೂಜಿಸಿ ಪುಲಕಿತರಾಗುವ ಪುಣ್ಯಾವಕಾಶವನ್ನು ಪಡೆಯುತ್ತಾರೆ. ಆದ್ದರಿಂದ ಈ ಕ್ಷೇತ್ರ ಎರಡನೆಯ ಗೋಕರ್ಣ ಎಂದೂ ಕರೆಯಲ್ಪಟ್ಟಿದೆ. ಕುಂದಾಪ್ರ ಡಾಟ್ ಕಾಂ ಲೇಖನ. ದೇವಸ್ಥಾನದ ಮುಂಭಾಗದಲ್ಲಿರುವ ವಿಶಾಲವಾದ ಪುಷ್ಕರಿಣಿಯ ಪವಿತ್ರ ಜಲವು ಗಂಗಾ ನದಿಯಿಂದ ಹರಿದು ಬರುವ ಒರತೆ ಎಂಬ ಪ್ರತೀತಿಯಿದೆ. ಗಂಗೆಯ ನಾಳ ಹರಿದು ಬರುವುದರಿಂದ ಈ ಪ್ರದೇಶವು ಗಂಗಾನಾಡು ಎಂದು ಕರೆಯಲ್ಪಟ್ಟಿದೆ ಎನ್ನಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಲೇಖನ ಶಿವಸಾನ್ನಿಧ್ಯ: ಪುರಾತನವಾದ ಈ ದೇವಸ್ಥಾನದಲ್ಲಿ ಪಾರ್ವತಿ, ಗಣಪತಿ ಸಹಿತ ಶಿವ ಸಾನ್ನಿಧ್ಯವಿದೆ. ದೇಗುಲದ ಹೊರಭಾಗದಲ್ಲಿ ನಾಗದೇವರ ಸಾನ್ನಿಧ್ಯವಿದೆ. ಪುಷ್ಕರಿಣಿ, ಬಲಿಕಲ್ಲು, ಧ್ವಜಪೀಠ ಮೊದಲಾದುವುಗಳಿವೆ. ಶಿವರಾತ್ರಿ ಉತ್ಸವವು ಇಲ್ಲಿನ ಅತ್ಯಂತ ಸಂಭ್ರಮದ ಆಚರಣೆಯಾಗಿ ಖ್ಯಾತವಾಗಿದೆ. ನವರಾತ್ರಿ ಉತ್ಸವ, ದೀಪದ ಅಮಾವಾಸ್ಯೆಯನ್ನು ಇಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.  *ಕುಂದಾಪ್ರ ಡಾಟ್ ಕಾಂ ಲೇಖನ* ಅಭಿವೃದ್ಧಿಯ ಹಾದಿಯಲ್ಲಿ: ರಾಜಾಶ್ರಯ ತಪ್ಪಿದ ಬಳಿಕ ಸ್ವಲ್ಪಮಟ್ಟಿಗೆ ಕಳಾಹೀನವಾದ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಸ್ಥಳೀಯ ಯಡ್ತರೆ ಮನೆತನದವರು ಹಂತ ಹಂತವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸಿದ್ದಾರೆ. ಈ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಯಡ್ತರೆ ಅಣ್ಣಪ್ಪ ಶೆಟ್ಟಿ ಮತ್ತು ಅವರ ಪುತ್ರರು ದೇವಸ್ಥಾನದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಶ್ರೀದೇವರ ಅಷ್ಟಬಂಧ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಗಳು ನಡೆದಿದೆ.  https://kundapraa-com.cdn.ampproject.org/v/s/kundapraa.com/ganganadu-vanakodlu-mahalingeshwara-temple-byndoor/?

ರುದ್ರಾಕ್ಷಿ

Play Episode Listen Later Feb 24, 2022 6:23


ರುದ್ರಾಕ್ಷಿಯನ್ನು ಪರಶಿವನ ಕಣ್ಣೀರು ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯಲ್ಲಿ ಒಂದು ಏಕ ಮುಖಿ ರುದ್ರಾಕ್ಷಿಯಿಂದ ಹಿಡಿದು 14 ಮುಖಿ ರುದ್ರಾಕ್ಷಿಯವರೆಗೆ ಧರಿಸಬಹುದು. ಆದರೆ ಧರಿಸಲು ಕೆಲವೊಂದು ನಿಯಮಗಳಿವೆ. ರುದ್ರಾಕ್ಷಿಯನ್ನು ಧರಿಸುವುದು ಹೇಗೆ..? ಯಾವ ಸಮಸ್ಯೆಗೆ ಯಾವ ರುದ್ರಾಕ್ಷಿ ಧರಿಸಬೇಕು..? ರುದ್ರಾಕ್ಷಿ ಧರಿಸುವುದರ ಪ್ರಯೋಜನವೇನು..?

*ಹಿಂದೂ ಧರ್ಮ ಮತ್ತು ಹಿಂದೂಗಳು ಒಂದು ದಿನ ಈ ಜಗತ್ತನ್ನು ಆಳುತ್ತಾರೆ*

Play Episode Listen Later Feb 16, 2022 4:48


_*ನೀವು ಪಾಶ್ಚಾತ್ಯ ಮೇಧಾವಿಗಳ ಈ ಸಾಲುಗಳನ್ನು ಓದಿದ್ದೀರಾ❓*_ *1. ಲಿಯೋ ಟಾಲ್‌ಸ್ಟಾಯ್ (1828-1910)* "ಹಿಂದೂ ಧರ್ಮ ಮತ್ತು ಹಿಂದೂಗಳು ಒಂದು ದಿನ ಈ ಜಗತ್ತನ್ನು ಆಳುತ್ತಾರೆ ಏಕೆಂದರೆ ಅದು ಜ್ಞಾನ ಮತ್ತು ಬುದ್ಧಿವಂತಿಕೆಯ ಮಿಶ್ರಣವಾಗಿದೆ." *2. ಹರ್ಬರ್ಟ್ ವೆಲ್ಸ್ (1846-1946)* "ಹಿಂದೂ ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರೆಗೆ ಎಷ್ಟು ತಲೆಮಾರುಗಳು ದೌರ್ಜನ್ಯಗಳು ಮತ್ತು ಕೊಲೆಗಳನ್ನು ಎದುರಿಸಬೇಕಾಗುತ್ತದೆ ಆದರೆ ಜಗತ್ತು ಮುಂದೊಂದು ದಿನ ಹಿಂದುತ್ವದಿಂದ ಪ್ರೇರಿತವಾಗುತ್ತದೆ. ಆ ದಿನದಂದು ಮಾತ್ರ ಜಗತ್ತು ಮನುಷ್ಯರಿಗೆ ನೆಲೆಸಲು ಮತ್ತು ವಾಸಿಸಲು ಸ್ಥಳವಾಗುತ್ತದೆ. *3. ಆಲ್ಬರ್ಟ್ ಐನ್ಸ್ಟೈನ್ (1879-1955)* "ಅವನು (?) ಯಹೂದಿಗಳು ಮಾಡಲಾಗದದನ್ನು ಮಾಡುತ್ತಾನೆ. ಅವನು ಅದನ್ನು ಜ್ಞಾನ ಮತ್ತು ಶಕ್ತಿಯಿಂದ ಮಾಡಿದನು." "ಆದರೆ ಹಿಂದೂ ಧರ್ಮಕ್ಕೆ ಮಾತ್ರ ಶಾಂತಿಯನ್ನು ಮುನ್ನಡೆಸುವ ಶಕ್ತಿ ಇದೆ". *4. ಹೂಸ್ಟನ್ ಸ್ಮಿತ್ (1919)* “ಹಿಂದುತ್ವವು ನಮ್ಮ ಮೇಲೆ ನಮಗಿರುವ ನಂಬಿಕೆಗಿಂತ ಹೆಚ್ಚು ನಂಬಿಕೆಯಿಲ್ಲ. ನಾವು ನಮ್ಮ ಆಲೋಚನೆಗಳನ್ನು ಮತ್ತು ಹೃದಯಗಳನ್ನು ಹಿಂದುತ್ವದ ಕಡೆಗೆ ತಿರುಗಿಸಲು ಸಾಧ್ಯವಾದರೆ, ಅದು ನಮಗೆ ಪ್ರಯೋಜನವನ್ನು ನೀಡುತ್ತದೆ. *5. ಮೈಕೆಲ್ ನಾಸ್ಟ್ರಾಡಾಮಸ್ (1503-1566)* "ಹಿಂದೂ ಧರ್ಮವು ಯುರೋಪಿನ ಆಡಳಿತ ಧರ್ಮವಾಗಲಿದೆ. ಯುರೋಪಿನ ಪ್ರಸಿದ್ಧ ಮಹಾನಗರವು ಹಿಂದೂ ರಾಜಧಾನಿಯಾಗಿದೆ". *6. ಬರ್ಟ್ರಾಂಡ್ ರಸ್ಸೆಲ್ (1872-1970)* "ನಾನು ಹಿಂದೂ ಧರ್ಮದ ಬಗ್ಗೆ ಓದಿದ್ದೇನೆ. ಇದು ಪ್ರಪಂಚದಾದ್ಯಂತ ಮನುಕುಲದ ಧರ್ಮ ಎಂದು ನಾನು ಭಾವಿಸುತ್ತೇನೆ. ಹಿಂದೂ ಧರ್ಮ ಯುರೋಪಿನಾದ್ಯಂತ ಹರಡಿತು. ಹಿಂದೂ ಧರ್ಮವನ್ನು ಅಧ್ಯಯನ ಮಾಡುವ ಅನೇಕ ವಿದ್ವಾಂಸರು ಯುರೋಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಂದೊಂದು ದಿನ ಹಿಂದೂಗಳು ಮಾತ್ರ ಜಗತ್ತನ್ನು ಮುನ್ನಡೆಸುವ ಪರಿಸ್ಥಿತಿ ಬೆಳೆಯುತ್ತದೆ". *7. ಕೋಸ್ಟಾ ಲೋಬನ್ (1841-1931)* "ಹಿಂದೂಗಳು ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಾನು ಕ್ರೈಸ್ತರನ್ನು ಹೊಗಳಲು, ಬದಲಾಯಿಸಲು ಮತ್ತು ನಂಬಲು ಆಹ್ವಾನಿಸುತ್ತೇನೆ". *8. ಬರ್ನಾರ್ಡ್ ಶಾ (1856-1950)* ಮುಂದೊಂದು ದಿನ ಈ ಜಗತ್ತು ಹಿಂದೂ ಧರ್ಮವನ್ನು ಒಪ್ಪಿಕೊಳ್ಳುತ್ತದೆ. ಹಿಂದೂ ಧರ್ಮದ ನಿಜವಾದ ಹೆಸರನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಅದರ ತತ್ವಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಒಂದು ದಿನ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದು ಖಚಿತ. ಕಲಿತವರ ಧರ್ಮವು ಹಿಂದೂ ಧರ್ಮಕ್ಕೆ ಸಮಾನವಾಗಿದೆ. *9. ಜೋಹಾನ್ ಕೀತ್ (1749-1832)* ಇವತ್ತಲ್ಲದಿದ್ದರೆ ಮುಂದೊಂದು ದಿನ ಹಿಂದೂ ಧರ್ಮವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದೇ ನಿಜವಾದ ಧರ್ಮ". *ದಯವಿಟ್ಟು ನಿಮ್ಮ ಎಲ್ಲಾ ಸಂಪರ್ಕಗಳಿಗೆ ಹಂಚಿಕೊಳ್ಳಿ*

*ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ*

Play Episode Listen Later Feb 5, 2022 6:08


ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಅವರಿಗೆ ಇಂದು ಮುಂಜಾನೆ ಹೃದಯಘಾತವಾಗಿತ್ತು ಎನ್ನಲಾಗಿದೆ. ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (ಹುಟ್ಟು-10 ಮೇ 1940) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡುತ್ತಿರುವ ತತ್ವಪದಕಾರರು ಮತ್ತು ಪ್ರವಚನಕಾರರು ಇವರಿಗೆ 2018ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ. ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಇಬ್ರಾಹೀಮ ಎನ್. ಸುತಾರ ಅವರು ದಿನಾಂಕ 10-05-1940 ರಲ್ಲಿ ಮಹಾಲಿಂಗಪುರದ ಬಡಕುಟುಂಬದಲ್ಲಿ ಜನಿಸಿದರು. 1970 ರಲ್ಲಿ 'ಭಾವೈಕ್ಯ ಜನಪದ ಸಂಗೀತ ಮೇಳ' ವನ್ನು ಸ್ಥಾಪಿಸಿದರು. ಕಳೆದ 44 ವರ್ಷಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರುತ್ತ ಬಂದಿರುತ್ತಾರೆ. ಪ್ರತಿವರ್ಷ ನೂರಾರು ಕಾರ್ಯ ಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಢಿದ್ದರು. ತಂದೆ-ತಾಯಿ: ತಂದೆ ನಬೀಸಾಹೇಬ, ತಾಯಿ ಆಮೀನಾಬಿ ಜನನ: ೧೦-೦೫-೧೯೪೦ ಬಡಕುಟುಂಬದಲ್ಲಿ ಜನಿಸಿದ ಸ್ಥಳ: ಮಹಾಲಿಂಗಪುರ ಮನೆತನದ ಮೂಲ ಹೆಸರು : ಬಿಸ್ತಿ ಶಿಕ್ಷಣ : ಉರ್ದು ೩ನೇ ತರಗತಿ ತಂದೆಯವರ ಕಾಯಕ : ಬಡಿಗತನ ಬದಲಾದ ಅಡ್ಡ ಹೆಸರು : ಸುತಾರ (ಬಡಿಗೇರ) ರಂಜಾನ್ ಜಾಗರಣಿ ಸಂಘ : ಬಾಲ್ಯ ಸ್ನೇಹಿತರೊಂದಿಗೆ(೧೯೬೦ರಲ್ಲಿ) ಗುರು ದೀಕ್ಷೆ: ಸೂಫಿ ಸಂತರಾದ ಹಜರತ್ ಶೇಖುಲ್ ಮಷಾಯಿಕ ಅಬ್ಭಾಸ್‌ಅಲಿ ಜುನ್ನೇದಿ ಸಾ|| ಕುಡಚಿ ಇವರೊಂದಿಗೆ ಧರ್ಮ ಪತ್ನಿ : ಮರೇoಬಿ ಮಕ್ಕಳು : ಕೌಸರಬಾನು, ರಿಜವಾನಾ, ಹುಮಾಯೂನ. ಮೂಲ ಕಾಯಕ : ನೇಕಾರಿಕೆ ಪ್ರಭಾವ ಬೀರಿದ ಪದ್ಯ : ಮಾತು ಮಾತಿಗೆ ಶಂಕರಾ (ಶ್ರೀ ಶಂಕರಾನಂದ ಯೋಗಿ ವಿರಚಿತ ಕೈವಲ್ಯ ನವನೀತ ಗ್ರಂಥ) ಜಿಜ್ಞಾಸೆ : ಎಲ್ಲ ಧರ್ಮ ಗಳ ತತ್ವ ಅರಿಯಬೇಕೆಂಬುವುದು ಎಲ್ಲ ಸಿದ್ಧಾಂತಗಳ ಗುರಿ ಮತ್ತು ಸಾರ ತಿಳಿಯಬೇಕೆಂಬುವುದು ಜೀವನದ ಮಹತ್ವದ ತಿರುವು : ಪ್ರವಚನ ಮತ್ತು ಭಜನೆಯ ಆಯ್ಕೆ ಭಜನೆ ಕಲಿಸಿದವರು : ಶ್ರೀ ಬಸಪ್ಪಣ್ಣ ಹಣಗಿಕಟ್ಟಿ, ಹುಲ್ಯಾಳ ಶ್ರೀ ಗುರುಪಾದಪ್ಪ ಕಕಮರಿ, ಮಹಾಲಿಂಗಪುರ ಶ್ರೀ ಭವರುದ್ದೀನ್ ಪೆಂಡಾರಿ, ಮಹಾಲಿಂಗಪುರ ಶ್ರೀ ಮಲ್ಲಪ್ಪ ಕಲಾದಗಿ, ಮಹಾಲಿಂಗಪುರ ಪ್ರಥಮದಲ್ಲಿ ಭಜನೆ ಪ್ರಾರಂಭಿಸಿದ ಸ್ಥಳ : ಶ್ರೀ ಗುರು ಸಾಧು ನಿರಂಜನಾವಧೂತರ ಗುಡಿ, ಮಹಾಲಿಂಗಪುರ ಭಜನೆಗೆ ತುಂಬಾ ಪ್ರೋತ್ಸಾಹ ನೀಡಿದವರು : ಶ್ರೀ ಚನ್ನಪ್ಪಣ್ಣ ಕಿರಗಟಗಿ ಶ್ರೀ ಪಾತ್ರೋಟ ಬಂಧುಗಳು ೧೯೭೦ರಲ್ಲಿ : 'ಶ್ರೀ ಗುರು ಸಾಧು ನಿರಂಜನಾವಧೂತರು ಭಾವೈಕ್ಯ ಜನಪದ ಸಂಗೀತ ಮೇಳ' ಸ್ಥಾಪನೆ ಸಂವಾದರೂಪ ಭಜನೆಯ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾದವರು : ಶ್ರೀ ಮಲ್ಲಪ್ಪಣ್ಣ ಶಿರೋಳ ವಿನೂತನ ಕಲಾ ಪ್ರಕಾರ : ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆ ನೀಡುವ ಕಾರ್ಯಕ್ರಮಗಳು ಹೆಸರು : ಭಾವೈಕ್ಯ ಭಕ್ತಿ ರಸಮಂಜರಿ ಗೀತ ಸಂವಾದ ತರಂಗಿಣಿ ಆಧ್ಯಾತ್ಮ ಸಂವಾದ ತರಂಗಿಣಿ ಕಾರ್ಯಕ್ರಮದ ವಿಶೇಷತೆ : ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆಯ ಸಂದೇಶ ಸಾರುವುದು ಮಾತುಗಾರಿಕೆಗೆ ಸ್ಪೂರ್ತಿ : ಶ್ರೀ ಗುರುಪಾದಪ್ಪ ಕಕಮರಿ ಭಜನಾ ಸಂಘದ ವತಿಯಿಂದ ಜನಪರ ಕಾರ್ಯಕ್ರಮಗಳು : ಯೋಗಾಸನ ಶಿಬಿರಗಳು ಸಾಕ್ಷರತಾ ಶಿಬಿರಗಳು ಕುಡಿಯುವ ನೀರಿನ್ ಟ್ಯಾಂಕ್ ಬೋರವೆಲ್ ವ್ಯವಸ್ಥೆ ಶಾಲಾ ಕೊಠಡಿಗಳ ನಿರ್ಮಾಣ ಶ್ರೀ ಗುರು ಸಾಧು ನಿರಂಜನಾವಧೂತ ಬ್ರಹ್ಮ ವಿದ್ಯಾಶ್ರಮ ೧೯೮೪ರಲ್ಲಿ : 'ಶ್ರೀ ಗುರು ಸಾಧು ನಿರಂಜನಾವಧೂತರು ಕಮೀಟಿ ಹಾಗೂ ಭಜನಾ ಮಂಡಳಿ' ಟ್ರಸ್ಟ್ ಸ್ಥಾಪನೆ ವೇದಾಂತದಲ್ಲಿ ಪ್ರವೃತ್ತಿಗೆ ಕಾರಣರಾದವರು : ಶ್ರೀ ಶಿವಾನಂದ ಸ್ವಾಮಿಗಳು, ರಕ್ಷಿ ಶಿರಗಾಂವ ಶಾಸ್ತ್ರಭ್ಯಾಸ : ಪ್ರಕರಣ ಪ್ರವೀಣ ಶ್ರೀ ಬಸವಾನಂದರ ಬಳಗ ಮಹಾಲಿಂಗಪುರದಲ್ಲಿ ಶಾಸ್ತ್ರಭ್ಯಾಸ ಮಾಡಿಸಿದ ಪೂಜ್ಯರು : ಶ್ರೋ. ಬ್ರ. ಶ್ರೀ ರಾಮಚಂದ್ರ ಶೇಡಜಿ ಶಾಸ್ತ್ರಿಗಳು, ಸಿದ್ಧಾಪೂರ ಶ್ರೋ. ಬ್ರ. ಶ್ರೀ ಸಿದ್ಧಯ್ಯಪ್ಪ ಮಹಾರಾಜರು, ಸೋಲಾಪುರ ಶ್ರೋ. ಬ್ರ. ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ ಶ್ರೋ. ಬ್ರ. ಶ್ರೀ ಶಾಂತಾನಂದ ಸ್ವಾಮಿಗಳು, ಮೇರಾಪುರಹಟ್ಟಿ ಶ್ರೋ. ಬ್ರ. ಶ್ರೀ ಸಹಜಾನಂದ ಸ್ವಾಮಿಗಳು, ಮಹಾಲಿಂಗಪುರ ಆಧ್ಯಾತ್ಮಿಕ ವಿಶ್ವವಿದ್ಯಾಲಯ : ಶ್ರೀ ಮಲ್ಲೇಶಪ್ಪ ಕಟಗಿಯವರ ಮನೆ ಆಧ್ಯಾತ್ಮ ಚಿಂತನೆಗೆ ಆಶ್ರಯ ನೀಡಿದವರು : ಶ್ರೀ ಮಲಕಾಜಪ್ಪ ಕಟಗಿ ಮತ್ತು ಶ್ರೀಮತಿ ಭಾಗೀರಥಿ ಮ . ಕಟಗಿ ಶರಣ ದಂಪತಿಗಳು ಶ್ರೀ ಮಹಾಲಿಂಗಪ್ಪಣ್ಣ ಎಂ. ಢಪಳಾಪೂರ ಪ್ರವಚನ ಕ್ಷೇತ್ರಕ್ಕೆ ನೂಕಿದವರು : ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ ಹೊಸ ಪರಿಕಲ್ಪನೆ : ಶ್ರಾವಣಕ್ಕೊಂದು ಸಮಾಜಸೇವೆ ಶ್ರಾವಣಕ್ಕೊಂದು ಸಮಾಜಸೇವೆಗೆ ಪ್ರೇರಣೆ : ವೇದಾಂತ ಕೇಸರಿ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿಜಯಪುರ ಶ್ರಾವಣಕ್ಕೊಂದು ಸಮಾಜಸೇವೆಗಳು : ೧೯೮೮ರಲ್ಲಿ ಶೇಗುಣಸಿ- ತೇರದಾಳ ಮಧ್ಯೆ ೯ ಕಿ.ಮೀ. ಶ್ರಮದಾನದಿಂದ ರಸ್ತೆ ನಿರ್ಮಾಣ ೨೦೦೨ರಲ್ಲಿ ಢವಲೇಶ್ವರಲ್ಲಿ 'ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆ' ಯ ನಿರ್ಮಾಣ ೨೦೦೯ರಲ್ಲಿ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ 'ಕಲ್ಯಾಣ ಮಂಟಪ' ನಿರ್ಮಾಣ ೨೦೧೧ರಲ್ಲಿ ಅರಳಿಮಟ್ಟಿಯಲ್ಲಿ 'ಶ್ರೀ ಬಸವೇಶ್ವರ ಯಾತ್ರಿ ನಿವಾಸ' ಪುತ್ರನ ವಿವಾಹ ವಿಶೇಷತೆ: ಕಲ್ಯಾಣ ಮಹೋತ್ಸವದ ನಿಮಿತ್ಯ 'ಶರಣರ - ಸಂತರ - ಸೂಫಿಗಳ ಭಾವೈಕ್ಯ ಸಂಗಮ ಕಾರ್ಯಕ್ರಮ ಭಾವೈಕ್ಯ ಜನಪದ ಸಂಗೀತ ಮೇಳದ ಪ್ರಸ್ತುತ ಕಲಾವಿದರು: ಶ್ರೀ ಶ್ರೀಮಂತಪ್ಪ ಕಣಬೂರ ಶ್ರೀ ರಾಜೇಸಾಬ ಹಳಿಂಗಳಿ ಶ್ರೀ ಈಶ್ವರಪ್ಪ ಮುಂಡಗನೂರ ಶ್ರೀ ಮೆಹಬೂಬ ಸನದಿ ಶ್ರೀ ಮಹಾದೇವಪ್ಪ ಕರಡಿ ಶ್ರೀ ಶ್ರೀಶೈಲ ಜಕ್ಕಪ್ಪ್ನವರ ಶ್ರೀ ಮಹಾದೇವಪ್ಪ ಕೌಜಲಗಿ ಹೊರರಾಜ್ಯಗಳಲ್ಲಿ ಕಾರ

Play Episode Listen Later Feb 4, 2022 3:41


ಮಾಘ ಶುಕ್ಲ ಪಕ್ಷ ಚತುರ್ಥಿಯಂದು ಗಣೇಶ ಲಹರಿಗಳು ಪ್ರಪ್ರಥಮವಾಗಿ ಪೃಥ್ವಿಯನ್ನು ತಲುಪಿದವು (ಅಂದರೆ ಗಣೇಶ ಜನಿಸಿದ ದಿನ). ಆ ಸಮಯದಿಂದ ಶ್ರೀ ಗಣೇಶ ಮತ್ತು ಚತುರ್ಥಿಯು ಅವಿಭಾಜ್ಯವಾಗಿವೆ. 'ಮಾಘ ಶುಕ್ಲ ಚತುರ್ಥಿಯನ್ನು' ಶ್ರೀ ಗಣೇಶ ಜಯಂತಿ' ಎಂದು ಆಚರಿಸಲಾಗುತ್ತದೆ. ಇತರ ದಿನಗಳ ತುಲನೆಯಲ್ಲಿ ಈ ದಿನದಂದು ಶ್ರೀ ಗಣೇಶ ತತ್ತ್ವವು ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಅನೇಶ್ ಮಹಾನ್ ಗಣೇಶ ಭಕ್ತರು ಕೂಡ ಇದೆ ದಿನದಂದು ಪೃಥ್ವಿಯ ಮೇಲೆ ಜನಿಸಿದ ದಿನವೂ ಹೌದು. ಗಣೇಶ ಜಯಂತಿಯಂದು ಮಾಡಬೇಕಾದ ಉಪಾಸನೆ ಈ ದಿನದಂದು ೩ ರಿಂದ ೯ ಮಾಲೆ ಶ್ರೀ ಗಣಪತಿಯ ನಾಮವನ್ನು ಭಾವಪೂರ್ಣವಾಗಿ ಜಪಿಸಲು ಪ್ರಯತ್ನಿಸಬೇಕು. ಅದೇ ರೀತಿ ಗಣಪತಿಯ ಪ್ರತಿಮೆ ಅಥವಾ ಮೂರ್ತಿಯ ಪೂಜೆ ಮಾಡಿದಲ್ಲಿ, ಗಣಪತಿಯ ಶಕ್ತಿ ಮತ್ತು ಚೈತನ್ಯದ ಅಧಿಕ ಪಡೆಯಬಹುದು. ಶ್ರೀ ಗಣಪತಿ ಅಥರ್ವಶೀರ್ಷ ಪಠಿಸಿದರೆ ಕೂಡ ಈ ಲಾಭವನ್ನು ಪಡೆಯಬಹುದು. ಶುಭಕಾರ್ಯಗಳಲ್ಲಿ ಗಣೇಶನನ್ನು ಏಕೆ ಪ್ರಥಮ ಪೂಜೆಯನ್ನು ಸಲ್ಲಿಸುತ್ತಾರೆ? ಗಣಪತಿಯು ದಿಕ್ಕುಗಳ ಅಧಿಪತಿ. ಗಣೇಶ ಪೂಜೆಯಿಂದ, ನಾವು ಆಹ್ವಾನಿಸುವ ದೇವತೆಯು ಪೂಜೆಯ ಸ್ಥಳಕ್ಕೆ ಆಗಮಿಸಲು ಆಯಾ ದಿಕ್ಕು ಮುಕ್ತವಾಗುತ್ತದೆ. ಅಲ್ಲದೆ, ಮನುಷ್ಯರು ಮಾತನಾಡುವ (ನಾದ) ಭಾಷೆಯನ್ನು ದೇವತೆಗಳ (ಪ್ರಕಾಶ) ಭಾಷೆಗೆ ರೂಪಾಂತರಿಸಿ, ಗಣಪತಿಯು ನಮ್ಮ ಪ್ರಾರ್ಥನೆಯನ್ನು ಅವರಿಗೆ ತಲುಪಿಸುತ್ತಾನೆ. ಗಣಪತಿಯನ್ನು ವಿಘ್ನಹರ್ತಾ ಎಂದು ಕೂಡ ಕರೆಯುತ್ತಾರೆ. ಗಣಪತಿಯ ವಾಹನ ವೃ – ವಹ ಈ ಶಬ್ದದಿಂದ ವಾಹನ ಎಂಬ ಶದದ ಉತ್ಪತ್ತಿ ಆಯಿತು. ದೇವತೆಗಳ ವಾಹನಗಳು ಸಮಯ ಮತ್ತು ಕಾರ್ಯಕ್ಕನುಸಾರ ಬದಲಾಗುತ್ತವೆ. 'ಮೂಷಿಕ' ಗಣಪತಿಯ ನಿತ್ಯ ವಾಹನ. ಆದರೆ ಗಣಪತಿಗೆ ಇತರ ವಾಹನಗಳು ಕೂಡ ಇವೆ. ಉದಾಹರಣೆಗೆ, ಹೇರಂಬ ಗಣಪತಿಯ ವಾಹನ ಸಿಂಹವಾದರೆ (ಯುದ್ಧಕಾಲದಲ್ಲಿ ಕೂಡ ಇದೇ ವಾಹನವಾಗಿದೆ), ಮಯೂರೇಶ್ವರ ಗಣಪತಿಯ ವಾಹನ ಒಂದು ನವಿಲು. ವಿದ್ಯಾರ್ಥಿ ಮಿತ್ರರೇ, ಗಣಪತಿಯ ಶಕ್ತಿ ದೊರೆಯಲು ಪ್ರತಿದಿನ ಇವುಗಳನ್ನು ಮಾಡಿ ! ೧. ಅಥರ್ವಶೀರ್ಷ ಪಠಿಸಿ : ಮಿತ್ರರೇ, ನಿಮ್ಮ ಮಾತಿನಲ್ಲಿ ಚೈತನ್ಯವಿದ್ದರೆ, ನೀವು ಮಾತನಾಡುವಾಗ ಇತರರಿಗೆ ಮುದವೆನಿಸುತ್ತದೆ. ಅಥರ್ವಶೀರ್ಷ ಪಠಿಸುವುದರಿಂದ ನಿಮ್ಮ ಉಚ್ಚಾರ ಸ್ಪಷ್ಟವಾಗುತ್ತದೆ. ಆದುದರಿಂದ ಅಥರ್ವಶೀರ್ಷ ಪಠಿಸಿ. ೨. ಅಧಿಕಾಧಿಕ ಪ್ರಾರ್ಥನೆಗಳನ್ನು ಮಾಡಿ : ನಾವು ಉಪಯೋಗಿಸುವ ಭಾಷೆಯನ್ನು ನಾದಭಾಷೆ ಎಂದು ಕರೆಯುತ್ತಾರೆ. ಇತರ ದೇವತೆಗಳ ತುಲನೆಯಲ್ಲಿ ಶ್ರೀ ಗಣೇಶನಿಗೆ ನಮ್ಮ ಭಾಷೆಯು ಅರ್ಥವಾಗುತ್ತದೆ, ಆದುದರಿಂದ ಅವನ ಕೃಪೆಯನ್ನು ಸಂಪಾದಿಸಲು ಶ್ರೀ ಗಣೇಶನ ಪ್ರಾರ್ಥನೆಯನ್ನು ಆದಷ್ಟು ಹೆಚ್ಚು ಮಾಡೋಣ. ೩. ಮಾನಸಪೂಜೆ : ಮನಸ್ಸಿನಲ್ಲಿಯೇ ಮಾಡುವ ಪೂಜೆಯನ್ನು ಮಾನಸ ಪೂಜೆ ಎನ್ನುತ್ತಾರೆ. ಈ ರೀತಿ ಮಾಡುವ ಪೂಜೆಗೆ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ಮಾನಸ ಪೂಜೆಯಿಂದ ಮನಸ್ಸಿನ ಉತ್ಸಾಹ ವೃದ್ಧಿಸುತ್ತದೆ. ಈ ಪೂಜೆಯಲ್ಲಿ ನಮಗೆ ಇಷ್ಟವಿರುವ ವಸ್ತು, ವಿಷಯಗಳನ್ನು ಅರ್ಪಿಸಬಹುದು. ಮನಸ್ಸಿನಲ್ಲಿ ಸತತವಾಗಿ ಶ್ರೀ ಗಣಪತಿಯ ಅನುಸಂಧಾನದಲ್ಲಿದ್ದು ಆನಂದವನ್ನು ಅನುಭವಿಸಬಹುದು.

*ಮಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ. ರಾಣಿ ಸೋಯಾಮೊಯ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ* ...

Play Episode Listen Later Jan 31, 2022 7:08


#Female ಜಿಲ್ಲಾಧಿಕಾರಿ ಯಾಕೆ ಮೇಕಪ್ ಹಾಕಿಲ್ಲ...? ಮಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ. ರಾಣಿ ಸೋಯಾಮೊಯ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ... .......................................... ಕೇರಳ ರಾಜ್ಯದ ಜಿಲ್ಲಾಧಿಕಾರಿ ಕೈಗಡಿಯಾರವನ್ನು ಹೊರತುಪಡಿಸಿ ಬೇರೆ ಯಾವುದೇ ಆಭರಣವನ್ನು ಧರಿಸಿರಲಿಲ್ಲ. ಬಹುತೇಕ ಮಕ್ಕಳಿಗೆ ಅಚ್ಚರಿಯ ವಿಷಯವೆಂದರೆ ಅವರು ಮುಖಕ್ಕೆ ಪೌಡರ್ ಕೂಡ ಬಳಸಿರಲಿಲ್ಲ. ಮಕ್ಕಳು ಜಿಲ್ಲಾಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಪ್ರ: ನಿಮ್ಮ ಹೆಸರೇನು? ನನ್ನ ಹೆಸರು ರಾಣಿ. ಸೋಯಾಮೊಯ್ ನನ್ನ ಕುಟುಂಬದ ಹೆಸರು. ನಾನು ಜಾರ್ಖಂಡ್ ಮೂಲದವಳು. ಒಬ್ಬ ತೆಳ್ಳಗಿನ ಹುಡುಗಿ ಪ್ರೇಕ್ಷಕರಿಂದ ಎದ್ದು ನಿಂತಳು. "ಮೇಡಂ, ನಿಮ್ಮ ಮುಖಕ್ಕೆ ಮೇಕಪ್ ಏಕೆ ಬಳಸಬಾರದು?" ಡಿಸ್ಟ್ರಿಕ್ಟ್ ಕಲೆಕ್ಟರ್ ಮುಖ ಇದ್ದಕ್ಕಿದ್ದಂತೆ ವಿವರ್ಣವಾಯಿತು. ತೆಳುವಾದ ಹಣೆಯ ಮೇಲೆ ಬೆವರು ಹರಿಯಿತು. ಮುಖದಲ್ಲಿನ ನಗು ಮರೆಯಾಯಿತು. ಸಭಿಕರು ಇದ್ದಕ್ಕಿದ್ದಂತೆ ಮೌನವಾದರು. ಟೇಬಲ್ ಮೇಲಿದ್ದ ನೀರಿನ ಬಾಟಲಿಯನ್ನು ತೆರೆದು ಸ್ವಲ್ಪ ಕುಡಿದು, ಮಗುವಿಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು . ನಂತರ ನಿಧಾನವಾಗಿ ಮಾತನಾಡತೊಡಗಿದರು. ನಾನು ಹುಟ್ಟಿದ್ದು ಜಾರ್ಖಂಡ್‌ ರಾಜ್ಯದ ಬುಡಕಟ್ಟು ಪ್ರದೇಶದಲ್ಲಿ. ನಾನು ಹುಟ್ಟಿದ್ದು ಕೊಡೆರ್ಮಾ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ "ಮೈಕಾ" ಗಣಿಗಳಿಂದ ತುಂಬಿದ ಸಣ್ಣ ಗುಡಿಸಲಿನಲ್ಲಿ. ನನ್ನ ತಂದೆ ಮತ್ತು ತಾಯಿ ಗಣಿಗಾರರಾಗಿದ್ದರು. ನನಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು. ಮಳೆ ಬಂದರೆ ಸೋರುವ ಪುಟ್ಟ ಗುಡಿಸಲಿನಲ್ಲಿ ವಾಸ. ಬೇರೆ ಕೆಲಸ ಸಿಗದ ಕಾರಣ ನನ್ನ ತಂದೆ-ತಾಯಿ ಗಣಿಗಳಲ್ಲಿ ಅತ್ಯಲ್ಪ ಸಂಬಳಕ್ಕೆ ದುಡಿಯುತ್ತಿದ್ದರು. ಇದು ತುಂಬಾ ಗೊಂದಲಮಯ ಕೆಲಸವಾಗಿತ್ತು. ನಾನು ನಾಲ್ಕು ವರ್ಷದವಳಾಗಿದ್ದಾಗ, ನನ್ನ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ವಿವಿಧ ಕಾಯಿಲೆಗಳಿಂದ ಹಾಸಿಗೆ ಹಿಡಿದರು. ಗಣಿಗಳಲ್ಲಿನ ಮಾರಣಾಂತಿಕ ಮೈಕಾ ಧೂಳನ್ನು ಆಘ್ರಾಣಿಸುವ ಮೂಲಕ ಈ ರೋಗವು ಉಂಟಾಗುತ್ತದೆ ಎಂದು ಅವರು ಆ ಸಮಯದಲ್ಲಿ ತಿಳಿದಿರಲಿಲ್ಲ. ನಾನು ಐದು ವರ್ಷದವಳಾಗಿದ್ದಾಗ, ನನ್ನ ಸಹೋದರರು ಅನಾರೋಗ್ಯದಿಂದ ನಿಧನರಾದರು. ಒಂದು ಸಣ್ಣ ನಿಟ್ಟುಸಿರಿನೊಂದಿಗೆ ಕಲೆಕ್ಟರ್ ಮಾತು ನಿಲ್ಲಿಸಿ ಕಣ್ಣೀರಿನಿಂದ ತುಂಬಿದ ಕಣ್ಣುಗಳನ್ನು ಮುಚ್ಚಿದರು. ಹೆಚ್ಚಿನ ದಿನಗಳಲ್ಲಿ ನಮ್ಮ ಆಹಾರ ನೀರು ಮತ್ತು ಒಂದು ಅಥವಾ ಎರಡು ಬ್ರೆಡ್ ಅನ್ನು ಒಳಗೊಂಡಿತ್ತು. ನನ್ನ ಸಹೋದರರಿಬ್ಬರೂ ತೀವ್ರ ಅನಾರೋಗ್ಯ ಮತ್ತು ಹಸಿವಿನಿಂದ ಇಹಲೋಕ ತ್ಯಜಿಸಿದರು. ನನ್ನ ಹಳ್ಳಿಯಲ್ಲಿ ವೈದ್ಯರ ಬಳಿಗೆ ಅಥವಾ ಶಾಲೆಗೆ ಹೋಗುವವರು ಇರಲಿಲ್ಲ. ಶಾಲೆ, ಆಸ್ಪತ್ರೆ, ವಿದ್ಯುತ್ ಅಥವಾ ಶೌಚಾಲಯ ಇಲ್ಲದ ಗ್ರಾಮವನ್ನು ನೀವು ಊಹಿಸಬಲ್ಲಿರಾ? ಒಂದು ದಿನ ನಾನು ಹಸಿದಿದ್ದಾಗ, ನನ್ನ ತಂದೆ ನನ್ನನ್ನು, ಎಲ್ಲಾ ಚರ್ಮ ಮತ್ತು ಮೂಳೆಗಳನ್ನು ಹಿಡಿದು ಎಳೆದ ಕಬ್ಬಿಣದ ಹಾಳೆಗಳಿಂದ ಮುಚ್ಚಿದ ದೊಡ್ಡ ಗಣಿ ಬಳಿಗೆ ಎಳೆದೊಯ್ದರು. ಕಾಲಾಂತರದಲ್ಲಿ ಕುಖ್ಯಾತಿ ಗಳಿಸಿದ್ದ ಮೈಕಾ ಗಣಿ ಅದು. ಇದು ಪುರಾತನ ಗಣಿಯಾಗಿದ್ದು, ಭೂಗತ ಲೋಕವನ್ನು ಅಗೆದು ಹಾಕಲಾಯಿತು. ನನ್ನ ಕೆಲಸವು ಕೆಳಭಾಗದಲ್ಲಿರುವ ಸಣ್ಣ ಗುಹೆಗಳ ಮೂಲಕ ತೆವಳುತ್ತಾ ಮೈಕಾ ಅದಿರುಗಳನ್ನು ಸಂಗ್ರಹಿಸುವುದು. ಹತ್ತು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಇದು ಸಾಧ್ಯವಿತ್ತು. ನನ್ನ ಜೀವನದಲ್ಲಿ ಮೊದಲ ಬಾರಿಗೆ, ನಾನು ಹೊಟ್ಟೆ ತುಂಬಾ ಬ್ರೆಡ್ ತಿಂದೆ. ಆದರೆ ಆ ದಿನ ನಾನು ವಾಂತಿ ಮಾಡಿಕೊಂಡೆ. ನಾನು ಒಂದನೇ ತರಗತಿಯಲ್ಲಿದ್ದಾಗ, ನಾನು ವಿಷಪೂರಿತ ಧೂಳನ್ನು ಉಸಿರಾಡುವ ಕತ್ತಲೆಯ ಕೋಣೆಗಳ ಮೂಲಕ ಮೈಕಾವನ್ನು ನುಂಗುತ್ತಿದ್ದೆ. ಸಾಂದರ್ಭಿಕ ಭೂಕುಸಿತದಲ್ಲಿ ದುರದೃಷ್ಟಕರ ಮಕ್ಕಳು ಸಾಯುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಮತ್ತು ಕೆಲವರು ಮಾರಣಾಂತಿಕ ಕಾಯಿಲೆಗೆ ತುತ್ತಾಗುತಿದ್ದರು. ದಿನಕ್ಕೆ ಎಂಟು ಗಂಟೆ ಕೆಲಸ ಮಾಡಿದರೆ ಕನಿಷ್ಠ ಒಂದು ರೊಟ್ಟಿಯಾದರೂ ಸಿಗುತ್ತದೆ. ಹಸಿವು ಮತ್ತು ಹಸಿವಿನಿಂದ ನಾನು ಪ್ರತಿದಿನ ತೆಳ್ಳಗೆ ಮತ್ತು ನಿರ್ಜಲೀಕರಣಗೊಂಡಿದ್ದೆ. ಒಂದು ವರ್ಷದ ನಂತರ ನನ್ನ ತಂಗಿಯೂ ಗಣಿ ಕೆಲಸಕ್ಕೆ ಹೋಗತೊಡಗಿದಳು. ಸ್ವಲ್ಪ ಚೇತರಿಸಿಕೊಂಡ ತಕ್ಷಣ ನಾನು ಅಪ್ಪ, ಅಮ್ಮ, ತಂಗಿ ಸೇರಿ ದುಡಿದು ಕೊಂಚ ಬದುಕುವ ಹಂತಕ್ಕೆ ಬಂದೆವು. ಆದರೆ ವಿಧಿ ಇನ್ನೊಂದು ರೂಪದಲ್ಲಿ ನಮ್ಮನ್ನು ಕಾಡಲಾರಂಭಿಸಿತ್ತು. ಒಂದು ದಿನ ನಾನು ವಿಪರೀತ ಜ್ವರದಿಂದ ಕೆಲಸಕ್ಕೆ ಹೋಗದೆ ಇದ್ದಾಗ ಇದ್ದಕ್ಕಿದ್ದಂತೆ ಮಳೆ ಬಂತು. ಗಣಿ ತಳದಲ್ಲಿ ಕಾರ್ಮಿಕರ ಮುಂದೆ ಗಣಿ ಕುಸಿದು ನೂರಾರು ಜನರು ಸತ್ತರು. ಅವರಲ್ಲಿ ನನ್ನ ತಂದೆ, ತಾಯಿ ಮತ್ತು ಸಹೋದರಿ ಕೂಡಾ. ಸಭಿಕರೆಲ್ಲರೂ ಉಸಿರಾಡುವುದನ್ನೂ ಮರೆತರು. ಹಲವರ ಕಣ್ಣಲ್ಲಿ ನೀರು ತುಂಬಿತ್ತು. ನನಗೆ ಕೇವಲ ಆರು ವರ್ಷ ಎಂದು ನಾನು ನೆನಪಿಸಿಕೊಳ್ಳಬೇಕು. ಕೊನೆಗೆ ನಾನು ಸರ್ಕಾರಿ ಮಂದಿರಕ್ಕೆ ಬಂದೆ. ಅಲ್ಲಿ ನಾನು ಶಿಕ್ಷಣ ಪಡೆದೆ. ನನ್ನ ಹಳ್ಳಿಯಿಂದ ವರ್ಣಮಾಲೆ ಕಲಿತ ಮೊದಲಿಗಳು ನಾನು. ಅಂತಿಮವಾಗಿ ಇಲ್ಲಿ ನಿಮ್ಮ ಮುಂದೆ ಜಿಲ್ಲಾಧಿಕಾರಿ ಆಗದ್ದೇನೆ. ನಾನು ಮೇಕಪ್ ಮಾಡದಿರುವುದಕ್ಕೂ ಇದಕ್ಕೂ ಏನು ಸಂಬಂಧ ಎಂದು ನೀವು ಆಶ್ಚರ್ಯ ಪಡಬಹುದು. ಆ ದಿನಗಳಲ್ಲಿ ಕತ್ತಲೆಯಲ್ಲಿ ತೆವಳುತ್ತಾ ನಾನು ಸಂಗ್ರಹಿಸಿದ ಸಂಪೂರ್ಣ ಮೈಕಾವನ್ನು ಮೇಕಪ್ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ ಎಂದು ನನಗೆ ಆಗ ಅರಿವಾಯಿತು. ಮೈಕಾ ಫ್ಲೋರೋಸೆಂಟ್ ಸಿಲಿಕೇಟ್ ಖನಿಜದ ಮೊದಲ ವಿಧವಾಗಿದೆ. ಅನೇಕ ದೊಡ್ಡ ಕಾಸ್ಮೆಟಿಕ್ ಕಂಪನಿಗಳು ನೀಡುವ ಖನಿಜ ಮೇಕಪ್ ಗಳಲ್ಲಿ, ಬಹು-ಬಣ್ಣದ ಮೈಕಾ ಅತ್ಯಂತ ವರ್ಣರಂಜಿತವಾಗಿದೆ, ಅದು ನಿಮ್ಮ ತ್ವಚೆಯನ್ನು 20,000 ಚಿಕ್ಕ ಮಕ್ಕಳ ಪ್ರಾಣವನ್ನು ಪಣಕ್ಕಿಡುವಂತೆ ಮಾಡುತ್ತದೆ. ಗುಲಾಬಿಯ ಮೃದುತ್ವವು ನಿಮ್ಮ ಕೆನ್ನೆಗಳ ಮೇಲೆ ಅವರ ಸುಟ್ಟ ಕನಸುಗಳು, ಅವರ ಛಿದ್ರಗೊಂಡ ಜೀವನ ಮತ್ತು ಕಲ್ಲುಗಳ ನಡುವೆ ಪುಡಿಮಾಡಿದ ಮಾಂಸ ಮತ್ತು ರಕ್ತದೊಂದಿಗೆ ಹರಡುತ್ತದೆ. ಲಕ್ಷಾಂತರ ಡಾಲರ್ ಮೌಲ್ಯದ ಮೈಕಾವನ್ನು ಇನ್ನೂ ಮಗುವಿನ ಕೈ

ಭಾರತ ಮಾತೆಯ ಶ್ರೇಷ್ಟವಾದ ವರಪುತ್ರನಿಗೆ ನಮ್ಮ ಕೋಟಿ ನಮನಗಳು. ಕ್ರಾಂತಿಯ ಕಿಡಿ *ನೇತಾಜಿ ಸುಭಾಸ್ ಚಂದ್ರ ಬೋಸ್*

Play Episode Listen Later Jan 23, 2022 10:16


ಅವರ ಜನ್ಮ ಜಯಂತಿಯ 126ನೆಯ ವರ್ಧಂತಿಗೆ ಇಡೀ ದೇಶವು ಸಜ್ಜುಗೊಂಡಿದೆ. ಕಳೆದ ವರ್ಷದಿಂದ ನೇತಾಜಿ ಅವರ ಜನ್ಮ ದಿನವನ್ನು ( ಜನವರಿ 23) ಪ್ರತೀ ವರ್ಷವೂ ಪರಾಕ್ರಮ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರವು ನಿರ್ಧಾರ ಮಾಡಿತ್ತು. ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು. ನೇತಾಜಿ ಸುಭಾಸರನ್ನು ಇಂದಿನ ತಲೆಮಾರಿನ ಜನರು ನಿರಂತರವಾಗಿ ನೆನಪಿಸಿಕೊಳ್ಳಬೇಕು. 2004ರಲ್ಲಿ ಶಾಮ್ ಬೆನೆಗಲ್ ನಿರ್ದೇಶನ ಮಾಡಿದ ಶ್ರೇಷ್ಠ ಸಿನೆಮಾ 'ನೇತಾಜಿ ಸುಭಾಸ್ ಚಂದ್ರ ಬೋಸ್ - ದ ಫಾರ್ಗೊಟನ್ ಹೀರೋ' ನೋಡಿ ನಾನು ಧಾರೆಯಾಗಿ ಕಣ್ಣೀರು ಸುರಿಸಿದ್ದೆ. ಅವರು ಬದುಕಿದ ರೀತಿಯೇ ಹಾಗಿತ್ತು! ಸಾವನ್ನು ಎದುರಿಸುವ ಧೈರ್ಯವು ಅವರಿಗೆ ರಕ್ತಗತವಾಗಿ ಬಂದಿತ್ತು. ಕಟಕ ನಗರದ ಅತ್ಯಂತ ಶ್ರೀಮಂತ ವಕೀಲನ ಮಗನಾಗಿ ಜನಿಸಿದ (1897 ಜನವರಿ 23) ಸುಭಾಷರು ತನ್ನ ಹೆತ್ತವರ ಆಸೆಯಂತೆ ಲಂಡನ್ನಿಗೆ ಹೋಗಿ ಕೇಂಬ್ರಿಜ್ ವಿವಿಯಲ್ಲಿ ನಾಲ್ಕನೇ ರಾಂಕ್ ಪಡೆದು ಐಸಿಎಸ್ ಪರೀಕ್ಷೆಯನ್ನು ಪಾಸ್ ಆಗಿದ್ದರು! ಅವರ ಪದವಿಗೆ ಅನುಗುಣವಾಗಿ ಬ್ರಿಟಿಷ್ ಸರಕಾರವು ಅವರಿಗೆ ಅತ್ಯಂತ ದೊಡ್ಡ ಹುದ್ದೆಯ ಆಫರ್ ನೀಡಿತ್ತು. ಆದರೆ ಆಗಲೇ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹರಡಿತ್ತು. ಭಾರತ ಅವರನ್ನು ಕೈ ಬೀಸಿ ಕರೆದಾಗ ಅವರು ಐಸಿಎಸ್ ಪದವಿಯನ್ನು ತ್ಯಜಿಸಿ ಭಾರತಕ್ಕೆ ಬಂದರು. ಬಾಲ್ಯದಲ್ಲಿ ಅವರ ಮೇಲೆ ವಿವೇಕಾನಂದರ ದಟ್ಟ ಪ್ರಭಾವ ಆಗಿತ್ತು. ರಾಷ್ಟ್ರಪ್ರೇಮದ ಬೆಂಕಿಯು ಮೊದಲೇ ಅವರ ಒಳಗಿತ್ತು. ಭಾರತಕ್ಕೆ ಬಂದಾಗ ಅವರ ಮೇಲೆ ಆರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಭಾವವು ಆಗಿತ್ತು. ಆದರೆ ಮುಂದೆ ಕಲ್ಕತ್ತಾದಲ್ಲಿ ಸ್ವರಾಜ್ ಎಂಬ ಪತ್ರಿಕೆಗೆ ಅವರು ಅಗ್ರ ಲೇಖನಗಳನ್ನು ಬರೆಯಲು ತೊಡಗಿದಾಗ ಮಹಾನ್ ಕ್ರಾಂತಿಕಾರಿ ಚಿತ್ತರಂಜನ ದಾಸ್ ಅವರ ಪರಿಚಯವು ಆಯಿತು. ಅದು ಅವರ ಜೀವನದ ಮೇಜರ್ ಟರ್ನಿಂಗ್ ಪಾಯಿಂಟ್ ಆಯಿತು. ಅಲ್ಲಿಂದ ಅವರು ಮಹಾ ಕ್ರಾಂತಿಕಾರಿ ಆದರು. ಮಹಾತ್ಮ ಗಾಂಧಿಯವರ ಪ್ರಭಾವ ಕಡಿಮೆ ಆಯಿತು. ಅವರ ಬೆಂಕಿ ಉಗುಳುವ ಭಾಷಣಗಳು ಇನ್ನಷ್ಟು ಪ್ರಖರ ಆದವು. 'ನನಗೆ ಗಾಂಧೀಜಿ ಮೇಲೆ ಗೌರವ ಇದೆ. ಆದರೆ ತಕಲಿಯನ್ನು ನೂಲುವುದರಿಂದ, ಉಪವಾಸ ಕೂರುವುದರಿಂದ ಭಾರತಕ್ಕೆ ಸ್ವಾತಂತ್ರ್ಯವು ಖಂಡಿತವಾಗಿ ದೊರೆಯಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯವು ಭಿಕ್ಷೆ ಅಲ್ಲ! ಅದಕ್ಕೆ ಅಪ್ರತಿಮ ತ್ಯಾಗ ಮತ್ತು ಹೋರಾಟದ ಅಗತ್ಯ ಇದೆ ' ಎಂದು ಅವರು ಹೇಳಿದ್ದರು. ಕಲ್ಕತ್ತಾದಲ್ಲಿ ಸರಣಿ ಕ್ರಾಂತಿಕಾರೀ ಚಟುವಟಿಕೆ, ರಾಲಿಗಳು, ಅಸಹಕಾರ ಚಳುವಳಿಗಳು ನಿರಂತರ ನಡೆದಾಗ ಬ್ರಿಟಿಷ್ ಸರಕಾರ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಿತು. ಆಗಲೂ ಗಾಂಧೀಜಿಯವರು ಸುಭಾಸ್ ಬೋಸ್ ಅವರನ್ನು ಕರೆದು ಪ್ರೀತಿಯಿಂದ ಮಾತಾಡಿಸಿದರು. ಆಗ ಕೂಡಾ ಬೋಸರು ಹೇಳಿದ್ದು - ಮಹಾತ್ಮ, ನಿಮ್ಮ ದಾರಿ ನಿಮಗೆ. ನನ್ನ ದಾರಿ ನನಗೆ. ನನಗೆ ನಿಮ್ಮ ಬಗ್ಗೆ ಗೌರವವಿದೆ. ನಮ್ಮಿಬ್ಬರ ಗುರಿಯೂ ಒಂದೇ. ಆದರೆ ದಾರಿ ಬೇರೆ ಬೇರೆ! ಗಾಂಧೀಜಿಯವರದು ಸಿದ್ಧಾಂತ ವಾದ ಆದರೆ ನೇತಾಜಿಯವರದು ಕ್ರಿಯಾ ವಾದ. ಇಬ್ಬರ ದೇಶಭಕ್ತಿಯೂ ಪ್ರಶ್ನಾತೀತವೇ ಆಗಿತ್ತು. ಮುಂದೆ ಸುಭಾಸರು ಕೋಲ್ಕತ್ತಾ ನಗರದ ಮೇಯರ್ ಆಗಿ ಆಯ್ಕೆ ಆದರು. 1923ರಲ್ಲೀ ಅಖಿಲ ಭಾರತ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಆಯ್ಕೆಆದರು. ಆಗೆಲ್ಲವೂ ಸುಭಾಷರನ್ನು ಬ್ರಿಟಿಷ್ ಸರಕಾರವು ಬಂಧಿಸಿ ಹಲವು ಬಾರಿ ಸೆರೆಮನೆಗೆ ಹಾಕಿತು. ಒಮ್ಮೆಯಂತು ಕ್ಷಯ ರೋಗ ಉಲ್ಬಣಿಸಿ ಬದುಕಿದ್ದೆ ಒಂದು ಪವಾಡ! 1930ರಲ್ಲೀ ಯುರೋಪ್ ಖಂಡದ ಪ್ರವಾಸ ಮಾಡಿ ಅಲ್ಲಿನ ಭಾರತೀಯರನ್ನು ಸಂಘಟನೆ ಮಾಡಿ ಬಂದರು. ಅದೇ ಸಂದರ್ಭದಲ್ಲಿ ವರ್ಚಸ್ವೀ ನಾಯಕ ಮುಸೊಲಿನಿಯ ಭೇಟಿ ಮಾಡಿದರು. ಸುಭಾಸರ ವರ್ಚಸ್ವಿ ವ್ಯಕ್ತಿತ್ವ ಮತ್ತು ನೇರಾ ನೇರವಾದ ಮಾತುಗಳು ಅವರಿಗೆ ಯುರೋಪನಲ್ಲಿ ಭಾರೀ ಹೆಸರು, ಕೀರ್ತಿ ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟವು. 1938ರಲ್ಲೀ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅವರು ಆಯ್ಕೆ ಆದರು. ಆಗ ಅವರಿಗೆ ಕೇವಲ 41 ವರ್ಷ ಪ್ರಾಯ ಆಗಿತ್ತು! ಆಗ ಅವರು ತುರುಸಿನ ಚುನಾವಣೆಯಲ್ಲಿ ಸೋಲಿಸಿದ್ದು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಪಟ್ಟಾಭಿ ಸೀತಾರಾಮಯ್ಯ ಅವರನ್ನು! ಅಂದು ಬೋಸರು ಮಾಡಿದ ಚಾರಿತ್ರಿಕ ಭಾಷಣ ಹೀಗಿತ್ತು. ನನ್ನ ಭಾರತಕ್ಕೆ ಸ್ವಾತಂತ್ರ್ಯವು ಕ್ರಾಂತಿ ಮತ್ತು ಸಂಘರ್ಷದ ಮೂಲಕವೇ ಬರುತ್ತದೆ. ಅದನ್ನು ಯಾವ ಪ್ರಬಲ ಶಕ್ತಿಯೂ ತಡೆಯಲು ಸಾಧ್ಯವೇ ಇಲ್ಲ. ಆದರೆ ನಮ್ಮಲ್ಲಿ ಈಗಲೇ ತುಷ್ಟೀಕರಣ ನೀತಿಯು ನುಸುಳಲು ಆರಂಭ ಆಗಿದೆ. ಮುಂದೆ ಭಾರತವು ಸ್ವಾತಂತ್ರ್ಯ ಪಡೆಯುವಾಗ ವಿಭಜನೆ ಆಗುವ ಸಾಧ್ಯತೆ ಇದೆ! ಎಂದಿದ್ದರು. ಮುಂದೆ ಅವರ ಮಾತು ಎಷ್ಟೊಂದು ನಿಜ ಆಯ್ತು ನೋಡಿ! ರಾಷ್ಟ್ರೀಯ ಅಧ್ಯಕ್ಷರಾದರೂ ಅವರಿಗೆ ಆಂತರಿಕ ಕಿರುಕುಳ ತಪ್ಪಲಿಲ್ಲ. ಅದರಿಂದ ತುಂಬಾ ನೊಂದುಕೊಂಡ ಬೋಸರು ತಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ ಹುದ್ದೆಗೆ ರಾಜೀನಾಮೆ ನೀಡಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಕಟ್ಟಿದರು. ಬಂಗಾಳದ ಮೂಲೆ ಮೂಲೆಯಲ್ಲಿ ಬಿಸಿ ರಕ್ತದ ಯುವಕ ಯುವತಿಯರನ್ನು ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡಿ ಹೋರಾಟಕ್ಕೆ ಸಜ್ಜು ಗೊಳಿಸಿದರು. ಬ್ರಿಟಿಷ್ ಸರಕಾರವು ಈ ಬಾರಿ ಅವರನ್ನು ಗೃಹ ಬಂಧನ ಮಾಡಿತು. ಆದರೆ ಸಿಂಹವನ್ನು ಗುಹೆಯಲ್ಲಿ ಬಂಧಿಸಿ ಇಡಲು ಸಾಧ್ಯವೇ ಇರಲಿಲ್ಲ! 1941ರಲ್ಲೀ ಅವರು ತನ್ನ ವೇಷವನ್ನು ಮರೆಸಿಕೊಂಡು ಮನೆಯಿಂದ ಹೊರಬಂದರು. ರಶಿಯಾ ಮೂಲಕ ಜರ್ಮನಿಗೆ ಬಂದು ತಲುಪಿದರು. ಹಿಟ್ಲರನನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹಿಟ್ಲರ್ ಸುಭಾಸರ ವ್ಯಕ್ತಿತ್ವಕ್ಕೆ ಮಾರು ಹೋದರು. ಬ್ರಿಟಿಷ್ ವಿರೋಧಿಗಳನ್ನು ಒಗ್ಗೂಡಿಸುವ ಅವರ ಪ್ರಯತ್ನಕ್ಕೆ ಭಾರೀ ಬೆಂಬಲ ದೊರೆಯಿತು. ಜರ್ಮನಿಯ ಬರ್ಲಿನನಲ್ಲಿ 4,500 ದೇಶಭಕ್ತ ಸೈನಿಕರ ಬಹಳ ದೊಡ್ಡದಾದ ಪಡೆಯನ್ನು ಕಟ್ಟಲು ಅವರಿಗೆ ಸಾಧ್ಯವಾಯಿತು. ಮುಂದೆ ಸುಭಾಸರು ಸಿಂಗಾಪುರ್, ಬರ್ಮಾ, ಜಪಾನ್ ದೇಶಗಳನ್ನು ತಿರುಗಿದರು. ಅಲ್ಲೆಲ್ಲ ಅವರು ಮಾಡಿದ ಐತಿಹಾಸಿಕ ಭಾಷಣದ ಕೊನೆಯ ವಾಕ್ಯ JI

*50 ರ ಸಮಯದಲ್ಲಿ ಅನಾರೋಗ್ಯ* ಯಾರು ನಿಮ್ಮೊಂದಿಗೆ ಬರುತ್ತಾರೆ

Play Episode Listen Later Jan 22, 2022 4:22


ಬೆಲೆ ಇಲ್ಲದ, ಭರವಸೆ ಇಲ್ಲದ ನಿಸ್ಸಹಾಯಕ ಭಾವನೆ. ಚಕ್ಕಪುಟ್ಟ ವಿಷಯಗಳಿಗೂ ಅಪರಾಧಿ ಭಾವನೆ. ಸಾವು ಮತ್ತು ಆತ್ಮಹತ್ಯೆಯ ಬಗ್ಗೆ ಅಸಹಜ ಯೋಚನೆ. ಬಹುತೇಕ ಎಲ್ಲ ವಿಷಯಗಳ್ಲೂ ನಿರಾಸಕ್ತಿ ಮತ್ತು ಅಸಂತೋಷ. ಸಾಮರ್ಥ್ಯ,ನಿಪುಣತೆ, ಶ್ರೀಮಂತಿಕೆ ಮತ್ತು ರೂಪ-ಇವುಗಳ ಕುರಿತು ಅತಿ ವಿಶ್ವಾಸ ಮತ್ತು ಉಡಾಫೆ. ಅತೀವ ಸಾಮರ್ಥ್ಯ ಮತ್ತು ಕಡಿಮೆ ನಿದ್ರೆಯ ಅಗತ್ಯ. ಶೀಘ್ರ ಕಿರಿಕಿರಿ ಮತ್ತು ಕೋಪಗೊಳ್ಳುವುದು. ಯಾವುದೇ ಪ್ರಚೋದನೆ ಇಲ್ಲದೆ ತೀವ್ರ ಭಾವೋದ್ವೇಗ. ಅತಿ ವಿಶ್ವಾಸ ಮತ್ತು ಇತರರಿಗೆ ಹಾನಿ ಮಾಡುವುದು ಬಹುತೇಕ ಸಮಯ ಅತಿ ಜಾಗ್ರತೆ ಮತ್ತು ಎಚ್ಚರಿಕೆ. ದೈನಂದಿನ ಘಟನೆಗಳ ಬಗ್ಗೆ ಭಯ, ಚಿಂತೆ ಮತ್ತು ಯೋಚನೆ ಭಯದಿಂದ ಸಾಮಾನ್ಯ ಚಟುವಟಿಕೆಗಳನ್ನೂ ಮಾಡದಿರುವುದು ( ಬಸ್ಸು ಹಿಡಿಯುವುದು, ಕಿರಾಣಿ ಖರೀದಿ, ಇತ್ಯಾದಿ). ಜನರೊಡನೆ ಆರಾಮಾಗಿ ಇರದೆ ಇರುವುದು. ಕಡ್ಡಾಯವಾದ ಆಚರಣೆಗಳು ಅಥವಾ ಪುನರಾವರ್ತಿತ ವರ್ತನೆಗಳು. ಹಳೆಯ ಘಟನೆಗಳ ಅಸಂಬದ್ಧ ನೆನಪುಗಳು ಅಥವಾ ದುಃಸ್ವಪ್ನಗಳು..

ಆ ಹಿಡಿತದಲ್ಲಿ ಸ್ನೇಹ, ನಂಬಿಕೆ, ಆಶ್ರಯ, ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಅಡಗಿತ್ತು....

Play Episode Listen Later Jan 14, 2022 9:33


*

ಸೂರ್ಯದೇವನು ಉತ್ತರಾಯಣದತ್ತ

Play Episode Listen Later Jan 13, 2022 7:50


ನಮ್ಮ ದೇಶದಲ್ಲಿ ಸೂರ್ಯದೇವನ ಆರಾಧನೆಗೆ ತುಂಬಾ ಮಹತ್ವವಿದೆ. ಹೀಗಾಗಿ ಸೂರ್ಯದೇವನ ಆರಾಧನೆಗೆ ಸಂಬಂಧಿಸಿದ ಹಬ್ಬಗಳನ್ನು ಅತ್ಯಂತ ಶ್ರದ್ದೆ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಹಬ್ಬಗಳಲ್ಲಿ ಮಕರ ಸಂಕ್ರಾತಿ ಕೂಡ ಒಂದಾಗಿದೆ. ಆದರೆ ಈ ವರ್ಷ ಮಕರ ಸಂಕ್ರಾತಿ ಹಬ್ಬದ ದಿನಾಂಕ ಗೊಂದಲವನ್ನು ಸೃಷ್ಟಿ ಮಾಡಿದೆ. ಕೆಲವರು ಈ ವರ್ಷ ಜನವರಿ 14ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ ಎಂದರೆ ಇನ್ನೂ ಕೆಲವರು ಜನವರಿ 15 ರಂದು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಹಬ್ಬವನ್ನು ಯಾವ ದಿನದಂದು ಆಚರಿಸಬೇಕು ಎನ್ನುವ ಗೊಂದಲ ಮೂಡಿದೆ. ಈ ಗೊಂದಲಕ್ಕೆ ಪರಿಹಾರ ಇಲ್ಲಿದೆ. 29 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ, ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ ಈ ದಿನದಿಂದ ಸೂರ್ಯದೇವನು ಉತ್ತರಾಯಣದತ್ತ ತನ್ನ ಸಂಚಾರವನ್ನು ಪ್ರಾರಂಭಿಸುತ್ತಾನೆ. ಈ ದಿನದಿಂದ ವಾತಾವರಣದಲ್ಲಿ ತಂಪು ಕಡಿಮೆಯಾಗಿ ಬಿಸಿಲು ಹೆಚ್ಚಾಗಲು ಪ್ರಾರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮಕರ ಸಂಕ್ರಾಂತಿಯಂದು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನ ಸ್ನಾನ, ದಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯಿಂದ ಕರ್ಮಗಳ ಅಂತ್ಯವಾಗುವುದು ಎಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನದಿಂದ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಮಕರ ಸಂಕ್ರಾಂತಿ ಆಚರಣೆ ದಿನ ಜ್ಯೋತಿಷಿಗಳ ಪ್ರಕಾರ ಎರಡೂ ದಿನಗಳು ಆಚರಣೆಗೆ ಒಳ್ಳೆಯ ಸಮಯವಾಗಿದೆ. ದೃಗ್ ಪಂಚಾಂಗದ ಪ್ರಕಾರ, ಮಕರ ಸಂಕ್ರಾಂತಿ ಆಚರಣೆಯು ಜನವರಿ 14 ರಂದು ನಡೆಯಲಿದೆ. ಆದಾಗ್ಯೂ ಕೆಲವು ಸ್ಥಳಗಳಲ್ಲಿ ಇದು ಜನವರಿ 15 ರಂದು ಮುಂದುವರೆಯುತ್ತದೆ. ಜ್ಯೋತಿಷಿಯ ಪ್ರಕಾರ ಜನವರಿ 14 ರ ಶುಕ್ರವಾರದಂದು ಸೂರ್ಯ ರಾತ್ರಿ 08:49 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಿರುವುದರಿಂದ ಮಕರ ಸಂಕ್ರಾಂತಿಯ ಪುಣ್ಯಕಾಲವು ಜನವರಿ 15 ರ ಶನಿವಾರ ಮಧ್ಯಾಹ್ನ 12:49 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಮಕರ ಸಂಕ್ರಾಂತಿ ಜನವರಿ 15 ರಂದು ಆಚರಿಸಲಾಗುತ್ತದೆ.

ಶಿಕ್ಷಿತರೆಲ್ಲ ಚಾರಿತ್ರ್ಯವಂತರೂ ಶೀಲವಂತರೂ ಆಗಬೇಕಲ್ಲವೆ?

Play Episode Listen Later Jan 12, 2022 9:19


ವಿವೇಕಾನಂದರ ಬೋಧನೆಯ ಬೆಳಕಿನಲ್ಲಿ ಇಂದಿನ ಶಿಕ್ಷಣ ಮತ್ತು ಯುವಜನತೆ. ಯುವಜನರನ್ನು ಮೇಲೆತ್ತಬೇಕಾದರೆ ಅದು ವಿವೇಕಾನಂದರ ಕಲ್ಪನೆಯ ಶಿಕ್ಷಣ ಪ್ರಯೋಗಗಳಿಂದ ಸಾಧ್ಯ. ವಿಚಿತ್ರವೆಂದರೆ ನಮ್ಮ ಸೆಕ್ಯುಲರ್‌ ಶಿಕ್ಷಣಕ್ಕೆ ಮೌಲ್ಯಗಳ ರೂಪದಲ್ಲಿ ಏನನ್ನಾದರೂ ಕೊಡುವ ಪ್ರಸ್ತಾಪವೇ ಅಹಿತವಾಗಿ ಕಾಣುತ್ತದೆ.

ಸಂಬಂಧವಿಲ್ಲ ಯಾವುದೇ ಸಂಬಂಧವಿಲ್ಲದ ಸಂಬಂಧ

Play Episode Listen Later Jan 11, 2022 6:02


ಪ್ರತಿ ಸಂಬಂಧದಲ್ಲೂ ನೋವು ಇದ್ದೇ ಇದೆ ಎಂಬುದನ್ನು ದಿನವೂ ನಾವು ಎದುರಿ–ಸುವ ಹಲವು ಘಟನೆಗಳಿಂದ ನಮ್ಮ ಅನುಭವಕ್ಕೆ ಬಂದಿದೆ. ಯಾವುದೇ ಸಂಬಂಧ–ದಲ್ಲಿ ಸಂಘರ್ಷ, ಉದ್ವಿಗ್ನತೆ, ತುಮುಲಗಳು ಇಲ್ಲದಿದ್ದರೆ ಅದು ಸಂಬಂಧವಾಗಿ ಉಳಿದಿರುವುದಿಲ್ಲ. ಆಗ ಅದೊಂದು ಸುಖ ನಿದ್ರೆಯಂತೆ, ಅದೊಂದು ಬಗೆಯ ಅಮಲಿನಂತೆ ಇರುತ್ತದೆ. ಆದರೆ ಅನೇಕರು ತಮ್ಮ ಸಂಬಂಧಗಳು ಹೀಗೇ ಇರಲಿ ಎಂದೇ ಬಯಸುತ್ತಾರೆ. ನೆಮ್ಮದಿಯ ಬಯಕೆ ಮತ್ತು ವಾಸ್ತವ, ಭ್ರಮೆ ಮತ್ತು ಸತ್ಯಗಳ ನಡುವೆ ಯಾವಾಗಲೂ ತಾಕಲಾಟ, ಸಂಘರ್ಷಗಳು ಇದ್ದೇ ಇರುತ್ತದೆ. ನೀವು ಭ್ರಮೆ ಎಂದರೇನು ಎಂಬುದನ್ನು ಮೊದಲು ಅರ್ಥ ಮಾಡಿಕೊಂಡರೆ ಆಗ ಅದರ ಪರದೆಯನ್ನು ಪಕ್ಕಕ್ಕೆ ಸರಿಸಿ ಸಂಬಂಧದ ನಿಜವಾದ ಆಳ-ಹರವುಗಳು, ಅದರ ಹೂರಣವನ್ನು ಅರ್ಥ ಮಾಡಿಕೊಳ್ಳುವತ್ತ ನಿಮ್ಮ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಆದರೆ, ನೀವು ಸುಭದ್ರತೆಯ ಭಾವವನ್ನು ಹೊಂದುವ ಸಲುವಾ–ಗಿಯೇ ಸಂಬಂಧದ ಬಂಧನಕ್ಕಾಗಿ ತುಡಿಯುತ್ತಿದ್ದೀರಿ ಎನ್ನು–ವು–ದಾದರೆ, ಆಗ ನೀವು ಹಾತೊರೆಯುವುದು ನೆಮ್ಮದಿಗಾಗಿ ಹೂಡಿದ ಬಂಡವಾಳ–ವಾಗುತ್ತದೆ, ಅದೂ ಒಂದು ಭ್ರಮೆಯೇ. ಸಂಬಂಧದ ಮಹತ್ವ ಮತ್ತು ಹಿರಿಮೆ ಇರುವುದೇ ಅದರ ಅಸ್ಥಿರತೆಯಲ್ಲಿ, ಅನಿಶ್ಚಿತತೆಯಲ್ಲಿ ಮತ್ತು ಅಭದ್ರತೆಯಲ್ಲಿ. ಅಂಥದ್ದರಲ್ಲಿ ನೀವು ಸುರ–ಕ್ಷಿತ ಸಂಬಂಧದ ಹುಡುಕಾಟದಲ್ಲಿ uತೊಡಗಿ ಅದಕ್ಕಾಗಿ ಹಾತೊರೆಯುವ ಮೂಲಕ ಸಂಬಂಧದ ಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತೀರಿ. ಇದರಿಂದ ಬೇರೆಯದೇ ರೀತಿಯ ಪ್ರತಿಕ್ರಿಯೆಗಳು, ಪ್ರತಿಸ್ಪಂದನೆಗಳು, ದುಃಖಗಳು ಹುಟ್ಟುತ್ತವೆ.

*Life is like a train. Everyone is in the "train of life"*

Play Episode Listen Later Jan 9, 2022 3:17


Life is like a train. Everyone is in the ""train of life"" which goes from station to station, allowing people to get in and out. One is fast and quickly comes to an end, while the other makes a longer trip. The train is "controlled" by a "driver" who guides people to their proper destination.....but it is also filled with comfort, hope, love and trust. . .

ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ.

Play Episode Listen Later Jan 8, 2022 5:41


ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನ. ಏಕಾದಶಿ ಅಂದರೆ ಹನ್ನೊಂದು ಎಂಬ ಅರ್ಥವಿದೆ

" ನಾರಾಯಣೀಯಂ " ಸಾಮ ಮಂತ್ರದ ಉಪಾಸನೆ ಮಾಡಿರಿ.

Play Episode Listen Later Jan 7, 2022 4:16


ಈ ಜಗತ್ ಎಂಬುದು ಮೂಲದಲ್ಲಿ ಸೂರ್ಯ ಹಾಗೂ ಆತ್ಮದ ಸಂಯೋಜನೆಯಿಂದ ಪ್ರಕಟಗೊಂಡಿತು. ಈ ಜಗತ್ತಿನ ಮೂಲದಲ್ಲಿ ಓಂಕಾರ ನಾದದ ತರಂಗ ಮಾತ್ರವೇ ಹೊಮ್ಮುತ್ತಿತ್ತು. ಇದುವೇ 'ಪ್ರಣವ'. ಈ ನಾದ ತರಂಗಗಳಿಂದ ' ತ್ರಿಗುಣ' ಗಳು ಉಂಟಾದವು. ಈ ತ್ರಿಗುಣಗಳಿಂದ ಮೊದಲು 'ವಾಯು', ವಾಯುವಿನಿಂದ 'ಅಗ್ನಿ' ಅಗ್ನಿಯಿಂದ ' ಜಲ', ಜಲದಿಂದ ' ಪೃಥ್ವಿ', ಪೃಥ್ವಿಯಿಂದ ಸಂಕರ್ಷಣ ಮೊದಲಾದ ತತ್ವಗಳು , ಅಂದರೆ 'ಪ್ರಕಟಪ್ರಪಂಚ ' ಸೃಷ್ಟಿ ಆಯಿತು. ಇದುವೇ "ನಾರಾಯಣ" ಎಲ್ಲವೂ ನಾರಾಯಣಮಯ ಆಗಿರುವ ಈ "ಪ್ರಕಟ ಪ್ರಪಂಚವನ್ನು" ಅರಿಯುವುದು ಮಾನವನಿಗೆ ಕಷ್ಟಸಾಧ್ಯ. ಆಧಾರ " ಸಾಮವೇದ ಭಾಷ್ಯ ಸಂಹಿತಾ " - ಬ್ರಹ್ಮ ಋಷಿ ಶ್ರೀ K.S. ನಿತ್ಯಾನಂದ ಸ್ವಾಮೀಜಿ

*ಸೇತುಬಂಧ ರಾಮೇಶ್ವರ ಮಹಾತ್ಮೆ*

Play Episode Listen Later Jan 5, 2022 7:15


ಉತ್ತರ ಭಾರತದಲ್ಲಿ ಕಾಶಿ ಕ್ಷೇತ್ರಕ್ಕೆ ಧಾರ್ಮಿಕ ಮಹತ್ವವಿರುವಂತೆ, ದಕ್ಷಿಣ ಭಾರತದಲ್ಲಿ ರಾಮೇಶ್ವರಂ ಕ್ಷೇತ್ರಕ್ಕೆ ಮಹತ್ವವಿದೆ. ಧರ್ಮಗ್ರಂಥಕ್ಕನುಸಾರ ಕಾಶಿಯ ತೀರ್ಥಯಾತ್ರೆಯು ಬಂಗಾಳದ ಉಪಸಾಗರ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದ ಬಳಿಯಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿದ ನಂತರ ಮತ್ತು ಬಳಿಕ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಪೂರ್ಣವಾಗುತ್ತದೆ. ರಾಮೇಶ್ವರಂ ಹಿಂದೂಗಳ ಪವಿತ್ರ ಚಾರ್‌ಧಾಮ ಯಾತ್ರೆಗಳಲ್ಲಿನ ದಕ್ಷಿಣಧಾಮವಾಗಿದೆ.ರಾಮೇಶ್ವರವು ಭಾರತದಲ್ಲಿರುವ ೧೨ ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದು ಜ್ಯೋತಿರ್ಲಿಂಗವಾಗಿದೆ.

Happy and Unhappy - we have Nothing to lose......

Play Episode Listen Later Jan 5, 2022 3:39


ಒಬ್ಬ ವ್ಯಕ್ತಿಯು ಹೇಳಿದಾಗ, "ನಾನು ಸಂತೋಷವಾಗಿದ್ದೇನೆ! ನಾನು ಸಂತೋಷವಾಗಿದ್ದೇನೆ!" - ಈ ಮೂಲಕ ಅವನು ತನ್ನ ಆತ್ಮದ ಉತ್ತಮ, ಸಕಾರಾತ್ಮಕ ಅಥವಾ ಎತ್ತರದ ಆಂತರಿಕ ಸ್ಥಿತಿಯನ್ನು ವ್ಯಕ್ತಪಡಿಸುತ್ತಾನೆ. ಹಾಗಾದರೆ ಸಂತೋಷ ಎಂದರೇನು? ಒಬ್ಬ ವ್ಯಕ್ತಿಯು ಹೇಗೆ ಸಂತೋಷವಾಗಿರಬಹುದು? ಖರೀದಿಸಲು, ದಾನ ಮಾಡಲು ಅಥವಾ, ಉದಾಹರಣೆಗೆ, ಸಂತೋಷವನ್ನು ಕಂಡುಕೊಳ್ಳಲು ಅಥವಾ ಕಳೆದುಕೊಳ್ಳಲು ಸಾಧ್ಯವೇ? ಒಬ್ಬ ವ್ಯಕ್ತಿಯು ಕಾರನ್ನು ಖರೀದಿಸಿದ ನಂತರ ಅವನು ಸಂತೋಷವಾಗಿರುತ್ತಾನೆ ಎಂದು ಭಾವಿಸುತ್ತಾನೆ. ಇನ್ನೊಬ್ಬರು ಸಂತೋಷವು ಕುಟುಂಬ ಎಂದು ಭಾವಿಸುತ್ತಾರೆ, ಮೂರನೆಯದು ಸಂತೋಷವು ಪ್ರೀತಿಪಾತ್ರರೊಡನೆ ಇರುವುದು, ಮತ್ತು ನಾಲ್ಕನೆಯದು ಅವರು ಬೆಕ್ಕು ಅಥವಾ ನಾಯಿಯನ್ನು ಹೊಂದಿದ್ದಾರೆ. ಒಬ್ಬ ವ್ಯಕ್ತಿಯು ಸಂತೋಷವಾಗಿದ್ದರೆ, ಅವನ ಸಂತೋಷವು ಎಷ್ಟು ಕಾಲ ಉಳಿಯುತ್ತದೆ, ಅವನು ತನ್ನ ಸಂತೋಷವನ್ನು ಹೇಗೆ ಉಳಿಸಿಕೊಳ್ಳಬಹುದು ಮತ್ತು ಅದನ್ನು ಉಳಿಸಿಕೊಳ್ಳಲು ಸಾಧ್ಯವೇ? ಅಥವಾ ಒಬ್ಬ ವ್ಯಕ್ತಿಯು ತಾನು ಸಂತೋಷವಾಗಿದ್ದೇನೆ ಎಂದು ಭಾವಿಸುತ್ತಾನೆ, ಏಕೆಂದರೆ ಅವನು ಬೇರೆ ಏನನ್ನೂ ನೋಡಲಿಲ್ಲ ಮತ್ತು ಅವನಿಗೆ ಹೋಲಿಸಲು ಏನೂ ಇಲ್ಲ ಅಥವಾ ಯಾರೂ ಇಲ್ಲ. ಕೆಲವೊಮ್ಮೆ ಸಂತೋಷವು ಎಲ್ಲೋ ಹತ್ತಿರದಲ್ಲಿ ಕಾಯುತ್ತಿದೆ, ಮತ್ತು ಕೆಲವೊಮ್ಮೆ ನಿಮ್ಮ ಸಂತೋಷವನ್ನು ಕಂಡುಹಿಡಿಯಲು ನೀವು ಸಾವಿರಾರು ಕಿಲೋಮೀಟರ್‌ಗಳನ್ನು ಜಯಿಸಬೇಕಾಗುತ್ತದೆ. ಶ್ರೇಷ್ಠ ಮತ್ತು ಪ್ರಸಿದ್ಧ ವ್ಯಕ್ತಿಗಳು ಈ ವಿಷಯದ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಆಲೋಚನೆಗಳನ್ನು ಸಂತೋಷದ ಬಗ್ಗೆ ಉಲ್ಲೇಖಗಳು, ನುಡಿಗಟ್ಟುಗಳು, ಪೌರುಷಗಳು ಮತ್ತು ಕವಿತೆಗಳು

ಹೊಸ ವರ್ಷವನ್ನು ಯುಗಾದಿಯಂದು ಆಚರಿಸಿ ಹಿಂದೂ ಸಂಸ್ಕೃತಿಯನ್ನು ಆಚರಿಸುವ

Play Episode Listen Later Dec 31, 2021 4:41


*ಹೊಸ ವರ್ಷವನ್ನು ಡಿಸೆಂಬರ್ ೩೧ರಂದು ಆಚರಿಸದೆ, ಯುಗಾದಿಯಂದು ಆಚರಿಸಿ ಹಿಂದೂ ಸಂಸ್ಕೃತಿಯನ್ನು ಜೋಪಾನ ಮಾಡೋಣ !* ಯಾವುದೇ ಕೃತಿಯನ್ನು ಮಾಡುವ ಮೊದಲು ಅದನ್ನು ಏಕೆ ಮಾಡಬೇಕು? ಅದರ ಹಿಂದಿನ ಶಾಸ್ತ್ರ, ಇತಿಹಾಸ ಏನು ಎಂದು ನಾವು ನೋಡುತ್ತೇವೆ. ಹಾಗಿದ್ದರೆ ಈಗ ಎಲ್ಲರೂ ಡಿಸೆಂಬರ್ ೩೧ ರಂದು ಯಾಕೆ ಹೊಸ ವರ್ಷ ಆಚರಿಸುತ್ತಾರೆ? ನಮ್ಮ ಹಿಂದೂ ಸಂಸ್ಕೃತಿಯನುಸಾರ ನಾವು ಯುಗಾದಿಯಂದು ಏಕೆ ಹೊಸವರ್ಷ ಆಚರಿಸುತ್ತೇವೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣ ಬ್ರಹ್ಮದೇವರು ಇದೇ ದಿನದಂದು ಈ ಸೃಷ್ಟಿಯನ್ನು ನಿರ್ಮಿಸಿದರು. ಇತಿಹಾಸ ನೋಡಿದರೆ ಶ್ರೀರಾಮಚಂದ್ರನು ಇದೇ ದಿನದಂದು ವಾಲಿಯನ್ನುವಧಿಸಿದನು. ಜನರೂ ಸಹ ಈ ಶುಭದಿನವನ್ನು ಹೊಸವರ್ಷವೆಂದು ಮನೆಯ ಮುಂದೆ ಧ್ವಜವನ್ನು ಹಾರಿಸಿದರು. ಆದ್ದರಿಂದ ನಾವು ಈ ದಿನವನ್ನು ಹೊಸ ವರ್ಷವೆಂದು ಆಚರಿಸುತ್ತೇವೆ.

*ಪ್ರೀತಿ ಮತ್ತು ವಿಶ್ವಾಸ ಕಡಿಮೆಯಾಗುತ್ತಿದೆ*

Play Episode Listen Later Dec 29, 2021 7:43


ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ, ಪರಸ್ಪರ ಗೌರವದ ಮೇಲೆ ಪ್ರೀತಿ ಭದ್ರವಾಗಿ ಬೇರೂರುತ್ತದೆ. ಇಲ್ಲವಾದರೆ ಪ್ರೀತಿಯ ಗೋಪುರ ಕುಸಿದು ಬೀಳುತ್ತದೆ. ಪ್ರೀತಿಯ ಜೀವನಕ್ಕೂ, ಗ್ರಹಗಳ ಸ್ಥಾನಗಳಿಗೂ ಇರುವ ಸಂಬಂಧವೇನು, ಗ್ರಹಗಳ ಬದಲಾವಣೆ ಪ್ರೀತಿಯ ಮೇಲೂ ಪರಿಣಾಮ ಬೀರುತ್ತವೆಯೇ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ. ಜೀವನದಲ್ಲಿ ಅನುಭವಿಸುವ ಸುಂದರವಾದ ಅನುಭವವೇ ಪ್ರೀತಿ. ಪ್ರೇಮದಲ್ಲಿ ಬಿದ್ದಾಗ ಜಗತ್ತು ಸುಂದರವಾಗಿ ಕಾಣುತ್ತದೆ. ವಾಸ್ತವವಾಗಿ ಪ್ರೀತಿಯು ಹೃದಯಗಳ ಸಂಪರ್ಕವಾಗಿದ್ದು, ನೀವಂದುಕೊಂಡಂತೆ ನಡೆಯದಿದ್ದರೂ ಆತ್ಮದಲ್ಲಿ ಅದು ಜೀವಂತವಾಗಿರುತ್ತದೆ. ಕೆಲವರು ಪ್ರೀತಿಸಿ, ದಾಂಪತ್ಯ ಜೀವನವನ್ನು ಯಶಸ್ವಿಯಾಗಿ ಮುಂದುವರಿಸುವುದನ್ನು ಕಾಣುತ್ತೇವೆ. ಕೆಲವರು ಕಾರಣಾಂತರಗಳಿಂದ ದೂರವಾಗುತ್ತಾರೆ. ಪ್ರೀತಿ ಎನ್ನುವ ಪದ ಎರಡಕ್ಷರದ ಸರಳ ಪದವಾದರೂ, ಮುಂದುವರಿಯಬೇಕೆಂದರೆ ಸವಾಲುಗಳು ಎದುರಾಗುತ್ತದೆ. ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ, ಪರಸ್ಪರ ಗೌರವದ ಮೇಲೆ ಪ್ರೀತಿ ಭದ್ರವಾಗಿ ಬೇರೂರುತ್ತದೆ. ಇಲ್ಲವಾದರೆ ಪ್ರೀತಿಯ ಗೋಪುರ ಕುಸಿದು ಬೀಳುತ್ತದೆ. ಪ್ರೀತಿಯ ಜೀವನಕ್ಕೂ, ಜ್ಯೋತಿಷ್ಯಕ್ಕೂ ಇರುವ ನಂಟೇನು? ಪ್ರೀತಿಯ ಜೀವನ ಸಂತೋಷಕರವಾಗಿರಲು ಯಾವ ಟಿಪ್ಸ್ ಪಾಲಿಸಬೇಕು ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ.

ಹಾಸಿಗೆಯಿಂದ ಎದ್ದ ತಕ್ಷಣ ಅಂಗೈಯನ್ನು ನೋಡುವುದೇಕೆ? ಇದರ ಹಿಂದೆ ಅಡಗಿದೆ ಶುಭ-ಫಲಗಳ ಸತ್ಯ

Play Episode Listen Later Dec 28, 2021 6:36


ಅಂಗೈ ನೋಡುವ ಹಿಂದಿರುವ ಧಾರ್ಮಿಕ ನಂಬಿಕೆ ‘ಕರಾಗ್ರೇ ವಸತೇ ಲಕ್ಷ್ಮಿ, ಕರ್ಮಧೇ ಸರಸ್ವತಿ, ಕರ್ಮೂಲೇ ತು ಗೋವಿಂದಾಃ ಪ್ರಭಾತೇ ಕರದರ್ಶನಂ' ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಎಂದರೆ ನನ್ನ ಕೈಗಳ ಮುಂಭಾಗದಲ್ಲಿ ಸಂಪತ್ತಿನ ದೇವತೆ, ಮಧ್ಯದಲ್ಲಿ ಜ್ಞಾನವನ್ನು ನೀಡುವ ತಾಯಿ ಸರಸ್ವತಿ ನೆಲೆಸಿದ್ದಾಳೆ. ಮತ್ತು ಗೋವಿಂದ ಅಂದರೆ ಭಗವಾನ್ ವಿಷ್ಣುವು ಮೂಲದಲ್ಲಿ ನೆಲೆಸಿದ್ದಾನೆ. ತಾಯಿ ಸರಸ್ವತಿಯನ್ನು ಬುದ್ಧಿವಂತಿಕೆಯ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವತೆ ಸಂಪತ್ತಿನ ದೇವತೆ ಮತ್ತು ಭಗವಾನ್ ವಿಷ್ಣುವು ಜಗತ್ತನ್ನು ಕಾಪಾಡುವವನು, ಆದ್ದರಿಂದ ಬೆಳಿಗ್ಗೆ ಅಂಗೈ ನೋಡುವ ಮೂಲಕ ಈ ಮೂವರು ದೇವತೆಗಳ ದರ್ಶನ ಮಾಡಿ ಅವರ ಅನುಗ್ರಹವನ್ನು ಪಡೆಯಬಹುದು. ಇದರಿಂದ ಜೀವನದಲ್ಲಿ ಸುಖ, ಸಮೃದ್ಧಿ, ಕೌಶಲ್ಯ, ಕೀರ್ತಿ ಇತ್ಯಾದಿ ಯಾವುದಕ್ಕೂ ಕೊರತೆ ಇರುವುದಿಲ್ಲ. ತೀರ್ಥಯಾತ್ರೆಗಳ ಸ್ಥಳವನ್ನು ಎರಡೂ ಕೈಗಳ ಅಂಗೈಗಳಲ್ಲಿ ಪರಿಗಣಿಸಲಾಗುತ್ತದೆ. ನಮ್ಮ ಕೈಗಳ ನಾಲ್ಕು ಬೆರಳುಗಳ ಮುಂಭಾಗದಲ್ಲಿ ದೇವತೀರ್ಥಗಳಿವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತೋರುಬೆರಳಿನ ಮೂಲ ಭಾಗದಲ್ಲಿ ‘ಪಿತೀರ್ಥ', ಕಿರುಬೆರಳಿನ ಮೂಲ ಭಾಗದಲ್ಲಿ ‘ಪ್ರಜಾಪತಿತೀರ್ಥ' ಮತ್ತು ಹೆಬ್ಬೆರಳಿನ ಮೂಲ ಭಾಗದಲ್ಲಿ ‘ಬ್ರಹ್ಮತೀರ್ಥ' ಎಂದು ಪರಿಗಣಿಸಲಾಗುತ್ತದೆ. ಬಲಗೈಯ ಮಧ್ಯದಲ್ಲಿ ‘ಅಗ್ನಿತೀರ್ಥ' ಮತ್ತು ಎಡಗೈಯ ಮಧ್ಯದಲ್ಲಿ ‘ಸೋಮತೀರ್ಥ' ಮತ್ತು ಎಲ್ಲಾ ಬೆರಳುಗಳ ಕೀಲುಗಳಲ್ಲಿ ‘ಋಷಿತೀರ್ಥ' ಇರುತ್ತದೆ. ಈ ರೀತಿಯಾಗಿ, ನಾವು ಬೆಳಿಗ್ಗೆ ಎದ್ದು ನಮ್ಮ ಅಂಗೈಯನ್ನು ನೋಡಿದಾಗ, ದೇವರೊಂದಿಗೆ ಈ ತೀರ್ಥಯಾತ್ರೆಗಳ ಪುಣ್ಯವೂ ಪ್ರಾಪ್ತಿಯಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬಾರದು? -ಬೆಳಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಹರಡಿಕೊಂಡ ಹೆಂಡತಿಯನ್ನು ನೋಡಬಾರದು. -ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು. -ಪ್ರಾಣಿಗಳು ಅದರಲ್ಲೂ ಕ್ರೂರ ಪ್ರಾಣಿಗಳ ಫೋಟೋವನ್ನು ನೋಡಲೇಬಾರದು. -ಚಪ್ಪಲಿ, ಪೊರಕೆಯನ್ನು ನೋಡಬಾರದು. ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು? -ಗೋವಿನಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗೇ ಮುಂಜಾನೆ ನಾವು ಎದ್ದ ಕೂಡಲೇ ಗೋವಿನ ಮುಖ ನೋಡಿದ್ರೆ ಬಹಳ ಉತ್ತಮ. -ಗೋವನ್ನು ನೋಡೋದ್ರಿಂದ ಸಕಲ ದೇವರ ದರ್ಶನ ಮಾಡಿದ ಪುಣ್ಯ ದೊರೆಯುತ್ತೆ ಎನ್ನಲಾಗುತ್ತೆ. -ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸೂರ್ಯ. ಸೂರ್ಯನ ದರ್ಶನದಿಂದ ದಿನವಿಡೀ ನವಚೈತನ್ಯವಿರುತ್ತೆ. -ದೇವರುಗಳ ಫೋಟೋ, ನರಿ, ಕುದುರೆ, ತೆಂಗಿನಮರ, ಬಾಳೆಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ನೀರು, ಮರಗಳನ್ನು ನೋಡಬಹುದು.

ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯನ್ನು ಹೀಗೆ ಮಾಡಿದರೆ ಶ್ರೇಷ್ಠ..!*

Play Episode Listen Later Dec 13, 2021 8:10


*ಧನುರ್ಮಾಸವೆಂದರೆ ಎಲ್ಲಾ ದೇವಾಲಯಗಳಲ್ಲೂ ಬ್ರಾಹ್ಮೀ ಮುಹೂರ್ತದಲ್ಲೇ ಪೂಜೆ ನಡೆಯುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯ, ಹಾಗಾದರೆ ಧನುರ್ಮಾಸದ ವಿಶೇಷತೆ ಏನು, ಮಹತ್ವವೇನು? ಈ ಲೇಖನದಲ್ಲಿದೆ ಮಾಹಿತಿ. ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ತಿಂಗಳುಗಳು ಕೂಡಾ ಅತ್ಯಂತ ಮಹತ್ವವನ್ನು ಪಡೆದಿದೆ. ಆಯಾಯ ತಿಂಗಳಿಗೆ ಅನುಸಾರವಾಗಿ ಆಚರಣೆಗಳು, ಸಂಪ್ರದಾಯಗಳು, ದೇವರ ಪೂಜಾ ವಿಧಾನಗಳ ಮೂಲಕ ಜೀವನವನ್ನು ಹೇಗೆ ನಡೆಸಬೇಕೆನ್ನುವುದರ ಸಾರವನ್ನು ತಿಳಿಸಿಕೊಡುತ್ತದೆ. ಮಾಸಗಳು ಬದಲಾದಂತೆ ವಾತಾವರಣವೂ ಬದಲಾಗುತ್ತದೆ ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹವೂ ಒಗ್ಗಿಕೊಳ್ಳಬೇಕೆನ್ನುವ ವೈಜ್ಞಾನಿಕ ಹಿನ್ನೆಲೆಯೂ ಮಾಸಗಳಲ್ಲಿ ಬರುವ ಆಚರಣೆಗಳ ಹಿಂದಿದೆ. ದೇವಸ್ಥಾನದಲ್ಲಿ ಘಂಟೆ ಬಾರಿಸುವುದರ ಹಿಂದಿರುವ ಕುತೂಹಲಕಾರಿ ಸಂಗತಿಗಳೇನು ಗೊತ್ತಾ? ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ ಒಂದು ತಿಂಗಳು. ಡಿಸೆಂಬರ್‌ 16ರಂದು ಸೂರ್ಯನು ಧನುರಾಶಿಯನ್ನು ಪ್ರವೇಶಿಸಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ 'ಧನುರ್ಮಾಸ' ಎಂದು ಕರೆಯುತ್ತಾರೆ. ಈ ಮಾಸವು ಶುಭಕರವಲ್ಲವೆಂದು ಮದುವೆ, ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳನ್ನೂ ಮಾಡುವುದಿಲ್ಲ. ಬದಲಾಗಿ ಈ ಮಾಸ ಪೂರ್ತಿ ವಿಷ್ಣುವಿನ ಆರಾಧನೆಯಲ್ಲೇ ಕಳೆಯುತ್ತಾರೆ. ಉತ್ಥಾನ ದ್ವಾದಶಿಯಂದು ಯೋಗ ನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲವೆಂದು ಹೇಳಲಾಗುತ್ತದೆ. ಹಾಗಾಗಿ ಧನುರ್ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲವೆನಿಸಿಕೊಂಡಿದೆ. ಶೈವ ಆರಾಧಕರು ಧನುರ್ಮಾಸದಲ್ಲಿ ಶಿವನ ಆರಾಧನೆಯನ್ನೂ ಮಾಡುತ್ತಾರೆ ಧನುರ್ಮಾಸದ ಮಹತ್ವ ಬ್ರಾಹ್ಮೀ ಮುಹೂರ್ತದಲ್ಲಿ ಚುಮುಚುಮು ಚಳಿಯಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. ಇದರ ಹಿಂದೆ ಕಾರಣವೂ ಇದೆ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ ಅಥವಾ ನಾರಾಯಣ ಉಪನಿಷತ್ತನ್ನು ಪಠಣ ಮಾಡಲಾಗುತ್ತದೆ. ಕೆಲವರು ಮಹಾವಿಷ್ಣುವಿನೊಂದಿಗೆ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ, ಹೀಗೆ ಪೂಜಿಸುವುದರಿಂದ ಸಂಪತ್ತು ಒಲಿಯುವುದೆಂದು ಹೇಳಲಾಗುತ್ತದೆ. ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ. ಯಾವ ಬೆರಳಿನಿಂದ ಹಣೆಗೆ ತಿಲಕವನ್ನಿಟ್ಟರೆ ಒಳ್ಳೆಯದು ಗೊತ್ತಾ? ಧನುರ್ಮಾಸದ ಆಚರಣೆ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ. ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ಅರ್ಪಿಸಬೇಕು. ಪಾರಾಯಣವನ್ನು ನೈವೇದ್ಯ ಅರ್ಪಣೆಯ ನಂತರವೂ ಮಾಡಬಹುದು. ಸಂಧ್ಯಾವಂದನೆ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ಯಾವುದೇ ದೋಷವಿರುವುದಿಲ್ಲ. ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು. ಕಾತ್ಯಾಯಿನಿ ವ್ರತ ಭಾಗವತ ಪುರಾಣದಲ್ಲಿ ಧನುರ್ಮಾಸದ ಮುಂಜಾನೆ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧದ ಫಲಗಳನ್ನು ನೀಡುತ್ತದೆ ಎನ್ನುವ ಉಲ್ಲೇಖವಿದೆ. ನಂದಗೋಪನ ಮಗನಾದ ಶ್ರೀಕೃಷ್ಣನನ್ನು ಪತಿಯಾಗಿ ವರಿಸಲು ಗೋಪಿಯರೆಲ್ಲ ಸೇರಿ ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನನ್ನೇ ದೊರಕಿಸಿಕೊಡುವ ಪುಣ್ಯ ಮಾಸವಾದ್ದರಿಂದ ಧನು ಮಾಸದಲ್ಲಿ ಶೈವ, ವೈಷ್ಣವ, ಶಾಕ್ತರೆಲ್ಲರೂ ದೇಗುಲಗಳಲ್ಲಿ ಧನುರ್ಮಾಸದ ಆಚರಣೆಯನ್ನು ಮಾಡುತ್ತಾರೆ ಹುಗ್ಗಿಯ ಪ್ರಾಮುಖ್ಯತೆ ಪಾಂಡವರು ರಾಜ್ಯವನ್ನು ಕಳೆದುಕೊಂಡು ವನವಾಸದಲ್ಲಿರಬೇಕಾದರೆ ಧರ್ಮರಾಯನು ನಾರದನನ್ನು ' ರಾಜ್ಯ, ಕೋಶಗಳನ್ನೆಲ್ಲಾ ಕಳೆದುಕೊಂಡಿದ್ದೇವೆ, ಸದ್ಯದಲ್ಲೇ ಕೌರವರೊಂದಿಗೆ ಯುದ್ಧವೂ ನಡೆಯಲಿದೆ. ಹಾಗಾಗಿ ಯುದ್ಧದಲ್ಲಿ ಜಯಶಾಲಿಯಾಗುವುದೋ? ಕಳೆದುಕೊಂಡ ರಾಜ್ಯ ಮರಳಿ ದೊರೆಯುವುದೋ' ಎಂದು ಪ್ರಶ್ನಿಸುತ್ತಾನೆ. ಆಗ ನಾರದರು ' ಬ್ರಾಹ್ಮೀ ಮುಹೂರ್ತದಲ್ಲಿ ಹರಿಯನ್ನು ಪೂಜಿಸಿ, ಯಾರು ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವನು ಕ್ಷಣ ಮಾತ್ರದಲ್ಲಿ ಶತ್ರುಗಳನ್ನು ಜಯಿಸುತ್ತಾನೆ. ಹಿಂದೆ ಇಂದ್ರನೂ ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯನ್ನು ವಿಷ್ಣುವಿಗೆ ಸಮರ್ಪಿಸಿದುದೂ, ಶ್ರೀಹರಿಯ ಅನುಗ್ರಹದಿಂದ ರಾಜ್ಯವನ್ನು ಮರಳಿ ಪಡೆದುದಾಗಿಯೂ' ಯುಧಿಷ್ಟಿರನಿಗೆ ತಿಳಿಸುತ್ತಾರೆ. ' ಧನುರ್ಮಾಸದಲ್ಲಿ ಪ್ರತಿನಿತ್ಯ ಉ‍ಷಾಃಕಾಲದಲ್ಲಿ ಶ್ರೀಹರಿಗೆ ಹುಗ್ಗಿಯನ್ನು ಸಮರ್ಪಿಸಿ, ಪೂಜಿಸಿದರೆ ಯುದ್ಧದಲ್ಲಿ ಜಯಶೀಲರಾಗುವಿರೆಂದು ತಿಳಿಸಿದರು. ಇದರಂತೆ ಪಾಂಡವರು ಶ್ರೀಕೃಷ್ಣನಿಗೆ ಧನುರ್ಮಾಸದ ಪೂಜೆಯನ್ನು ಮಾಡಿ ಅನುಗ್ರಹವನ್ನು ಪಡೆದು ಮಹಾಭಾರತ ಯುದ್ಧವನ್ನು ಜಯಿಸಿದರೆಂದು ಹೇಳಲಾಗುತ್ತದೆ.ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ದ್ರೌಪದಿಯು ಪ್ರತಿನಿತ್ಯ ಬೆಳಗ್ಗೆ ಬೇಗ ಹುಗ್ಗ

for future generations, India needs 1000s of new corporations which create 1000s of high paying jobs

Play Episode Listen Later Dec 6, 2021 5:32


Everytime a person of Indian origin become a Global CEO, we either embark on Self loathing or feel as is we now control the American corporate and the person will focus on Indian Interest! FACT is from Pepsi to Google to Microsoft to Twitter CEOs first KRA is their respective corporate Interest and the ugly truth, they are of Indian origin only.... NOT INDIAN None has Indian Citizenship. They surrendered it long back So grow up and feel proud of folks in India or who carries Indian Passport Indians love to take pride in CEOs of Indian Origin based in other countries. But the same tribe is most hated by folks in India? Ambani, Adani, Tata, Birla.... They stayed in India and created Indian products, companies for Indian people, created huge shareholder wealth for the common man, revolutionized the digital space, renewable energy sector, O&G, food supply chain, clothing, telecommunication so cheap so that headless chickens can abuse them free of cost, defense backbone, Shipping, etc etc FACT IS, We Indians are just bunch of Emotional fools. Nothing else. Ambani-Adani have generated more Wealth & Jobs for the Nation than - 20 Nadella's, 200 Pichai's & 1000 Parag's multiplied by 10 times, yet Ambani-Adani only get Hate in India from.... We are a Nation that Worries about Brain Drain & Abuse the Wealth Creators in the Nation... It's not US and China anymore, India is becoming the world's fastest-growing startup ecosystem with over 70 Unicorn ( A startup company with valuation of more than 1 billion dollars) Startups, 40 in 2021 !!!

Claim Balakrishna Maddodi

In order to claim this podcast we'll send an email to with a verification link. Simply click the link and you will be able to edit tags, request a refresh, and other features to take control of your podcast page!

Claim Cancel